ಜಸ್ಟೀಸ್ ಇಂದು ಮಲ್ಹೋತ್ರಾ, ಶಬರಿಮಲೆಗೆ ಮಹಿಳೆಯ ಪ್ರವೇಶಕ್ಕೆ ಅನುವು ಮಾಡುವ ಕುರಿತಾದ ತೀರ್ಪಿನಲ್ಲಿ ದೀಪಕ್ ಮಿಶ್ರಾ ನೇತೃತ್ವದ ಪಂಚ ಸದಸ್ಯ ಪೀಠದಲ್ಲಿದ್ದ ಏಕೈಕ ಮಹಿಳಾ ನ್ಯಾಯಾಧೀಶೆ. ಭಾರತದ ಮಹಿಳಾ ಸಮಾನತೆಯ ಪರವಾಗಿ ಹೊರಬಿದ್ದಿರುವ ತೀರ್ಪು ದೇಶದ ಜನತೆಯ ಮೇಲೆ ದೀರ್ಘಕಾಲಿಕ ಪರಿಣಾಮ ಬೀರಲಿದ್ದು, ಇಂದು ಮಲ್ಹೋತ್ರಾ ಅಭಿಪ್ರಾಯ ಹಾಗೂ ದೃಷ್ಟಿಕೋನ ಭಿನ್ನ ಆಯಾಮವನ್ನು ನೀಡಿದೆ.
ಒಂದು ಧರ್ಮದ ವ್ಯಕ್ತಿ ಅದರಿಂದ ದುಃಖಿತನಾಗದ ಹೊರತು ಕೋರ್ಟ್ ಮಧ್ಯಪ್ರವೇಶ ಮಾಡಬಾರದು. ಸತಿ ಪದ್ಧತಿಯ ಹೊರತಾಗಿ ಇತರ ಯಾವುದೇ ಧಾರ್ಮಿಕ ಆಚರಣೆಗಳನ್ನು ಕೋರ್ಟ್ ನಿರ್ಧರಿಸಬಾರದು. ಇವತ್ತಿನ ತೀರ್ಪು ಕೇವಲ ಶಬರಿಮಲೆಗೆ ಸೀಮಿತವಾಗುವುದಿಲ್ಲ, ಇದರ ವ್ಯಾಪ್ತಿ ದೊಡ್ಡದಿದೆ ಎಂದು ಮಲ್ಹೋತ್ರಾ ತಮ್ಮ ನಿಲುವು ಪ್ರಕಟಿಸಿದ್ದಾರೆ.
ಪಂಚಸದಸ್ಯ ಪೀಠದಲ್ಲಿ ನಾಲ್ಕು ಮಂದಿ ನ್ಯಾಯಾಧೀಶರು ಮಹಿಳೆಯರಿಗೆ ಅವಕಾಶ ನೀಡುವ ಕುರಿತಾಗಿ ಅಭಿಪ್ರಾಯ ವ್ಯಕ್ತಪಡಿಸಿದ ಕಾರಣ ಇಂದು ಮಲ್ಹೋತ್ರಾ ಅಭಿಪ್ರಾಯಕ್ಕೆ ಮನ್ನಣೆ ದೊರೆಯಲಿಲ್ಲ.
Telegram Link https://t.me/joinchat/AAAAAE9lq2X6z4BbgUUCnw Friends, If you like this post,kindly comment below the post and do share your Response, (Thanks for Reading....)
No comments:
Post a Comment