ಉತ್ತರ ಪ್ರದೇಶ: ರೈಲು ಹಳಿತಪ್ಪಿ 31ಮಂದಿ ಸಾವು
* ಡೆಹ್ರಡೂನ್-ವಾರಾಣಸಿ ಜನತಾ ಎಕ್ಸ್ಪ್ರೆಸ್ ರೈಲಿನ ಎಂಜಿನ್ ಹಾಗೂ 2 ಬೋಗಿಗಳು ಹಳಿ ತಪ್ಪಿ ಸುಮಾರು 31 ಮಂದಿ ಸಾವನ್ನಪ್ಪಿದ್ದು,150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
* ಉತ್ತರಪ್ರದೇಶದ ರಾಯ್ಬರೇಲಿ ಜಿಲ್ಲೆಯ ಬಚ್ರಾವನ್ ರೈಲ್ವೆ ನಿಲ್ದಾಣದ ಹತ್ತಿರ ಶುಕ್ರವಾರ ಈ ದುರ್ಘಟನೆ ಸಂಭವಿಸಿದೆ.
* 'ರೈಲು ನಿಲ್ಲುವ ಸೂಚನೆಯಿದ್ದರು ಚಾಲಕ ರೈಲಿಗೆ ಚಾಲನೆ ನೀಡಿದ ಕಾರಣ ಎಂಜಿನ್ ಹಾಗೂ 2 ಬೋಗಿಗಳು ಹಳಿತಪ್ಪಿದವು' ಎಂದು ರೈಲ್ವೆ ವಕ್ತಾರ ಅನಿಲ್ ಸಕ್ಸೇನ ದೆಹಲಿಯಲ್ಲಿ ತಿಳಿಸಿದರು.
* ಬಚ್ರಾವನ್ ರೈಲ್ವೆ ನಿಲ್ದಾಣದ ಹತ್ತಿರ ಈ ಅಪಘಾತವು ಶುಕ್ರವಾರ ಬೆಳಿಗ್ಗೆ 9.30ಕ್ಕೆ ಸಂಭವಿಸಿದ್ದು, ಈ ದುರ್ಘಟನೆಯಿಂದ 31ಮಂದಿ ಸಾವನ್ನಪ್ಪಿ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಲಖನೌ ವಿಭಾಗೀಯ ಆಯುಕ್ತ ಮಹೇಶ್ ಗುಪ್ತಾ ತಿಳಿಸಿದ್ದಾರೆ.
ನಿರ್ವಹಣಾ ಸಾಮರ್ಥ್ಯ: ಮೋದಿಗೆ ಮೊದಲ ಸ್ಥಾನ
* ದೇಶೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ವ್ಯವಹಾರಗಳನ್ನು ನಿರ್ವಹಿಸುವುದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನದಲ್ಲಿದ್ದಾರೆ.
* ಜಾಗತಿಕ ಮಟ್ಟದ ಸಮೀಕ್ಷೆಯೊಂದರಲ್ಲಿ ಈ ಅಂಶ ಬೆಳಕಿಗೆ ಬಂದಿದೆ.
* ಸಮೀಕ್ಷೆಯ ವರದಿಯನ್ನು ಬೀಜಿಂಗ್ನಲ್ಲಿ ಬಿಡುಗಡೆ ಮಾಡಲಾಗಿದೆ.
ಅಮೆರಿಕ,
ಇಂಗ್ಲೆಂಡ್,
ಆಸ್ಟ್ರೇಲಿಯಾ,
ಜಪಾನ್,
ದಕ್ಷಿಣ ಆಫ್ರಿಕಾ,
ಭಾರತ,
ರಷ್ಯಾ,
ಬ್ರೆಜಿಲ್ ಮತ್ತು
ಚೀನಾ ದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. 4,500 ಜನರ ಅಭಿಪ್ರಾಯ ಪಡೆಯಲಾಗಿದೆ. ದೇಶ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ವ್ಯವಹಾರಗಳನ್ನು ನಿರ್ವಹಿಸುವುದರಲ್ಲಿ ಮೋದಿ ಅವರಿಗೆ ಮೊದಲ ರ್್ಯಾಂಕ್ ಇದ್ದರೆ ಕ್ಸಿ ಜಿನ್ಪಿಂಗ್ ಅವರಿಗೆ ಎರಡನೇ ಸ್ಥಾನ.
* ವಿಶ್ವದಲ್ಲೇ ಎರಡನೇ ದೊಡ್ಡ ಅರ್ಥವ್ಯವಸ್ಥೆ ಹೊಂದಿರುವ ಚೀನಾವನ್ನು ಜಾಗತಿಕ ಸಮುದಾಯ ಈಗ ಗುರುತಿಸಲಾರಂಭಿಸಿದೆ ಎಂದೂ ಸಮೀಕ್ಷೆ ಹೇ
ಸೀಶೆಲ್ಸ್ನೊಂದಿಗೆ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿದ ಮೋದಿ
ವಿಕ್ಟೋರಿಯಾ : 5 ದಿನಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಹಿಂದೂ ಮಹಾಸಾಗರದಲ್ಲಿನ ರಾಷ್ಟ್ರ ಸೀಶೆಲ್ನೊಂದಿಗೆ ನಾಲ್ಕು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
ಭಾರತದ ಭದ್ರತೆ ಮತ್ತು ಸಾಗರೋತ್ತರ ವ್ಯವಹಾರಗಳ ಪ್ರಗತಿಯ ದೃಷ್ಟಿಯಿಂದ ನಾಲ್ಕು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಜಲ ಮಾರ್ಗ ಸಮೀಕ್ಷಾ ಒಪ್ಪಂದ, ನವೀಕರಿಸಬಹುದಾದ ಇಂಧನ ಶಕ್ತಿ, ಮೂಲಸೌಕರ್ಯ ಅಭಿವೃದ್ದಿ ಮತ್ತು ಸಮುದ್ರಯಾನದ ವಿಚಾರಕ್ಕೆ ಸಂಬಂಧಿಸಿ ನಾಲ್ಕು ಒಪ್ಪಂದಗಳಿಗೆ ಸಹಿ ಹಾಗಲಾಗಿದೆ.
ಈ ವೇಳೆ ಪ್ರಧಾನಿ ಮೋದಿ ಸೀಶೆಲ್ಸ್ ಅಧ್ಯಕ್ಷ ಜೇಮ್ಸ್ ಮೈಕಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಸಿಶೇಲ್ಸ್ಗೆ ಇನ್ನೊಂದು ಡ್ರೋನ್ ವಿಮಾನವನ್ನು ನೀಡುವ ಭರವಸೆ ನೀಡಿದ್ದಾಗಿ ತಿಳಿಸಿದ್ದಾರೆ.
ಸಾಗರದ ಕಣ್ಗಾವಲಿಗಾಗಿ ರಡಾರ್ ವ್ಯವಸ್ಥೆ ಕೈಗೊಳ್ಳಲು ಸಹಕಾರ ನೀಡುವುದು ಸೇರಿದಂತೆ ಪ್ರಮುಖವಾಗಿ ಭದ್ರತಾ ವಿಚಾರಗಳಿಗೆ ಸಂಬಂಧಿಸಿ ಒಪ್ಪಂದ ಮಾಡಿಕೊಳ್ಳಲಾಗಿದೆ.
ಸೀಶೆಲ್ಸ್ ಭಾರತದ ನಂಬಿಕಸ್ಥ ಮಿತ್ರ ರಾಷ್ಟ್ರವಾಗಿದ್ದು ಭದ್ರತಾ ವಿಚಾರದಲ್ಲಿ ಉಭಯ ರಾಷ್ಟ್ರಗಳು ಕೈಜೊಡಿಸಿ ಕೆಲಸ ಮಾಡಲಿವೆ ಎಂದಿದ್ದಾರೆ.
ಇದೇ ವೇಳೆ ಸಿಶೇಲ್ಸ್ ನಾಗರೀಕರಿಗೆ 3 ತಿಂಗಳ ಕಾಲ ಭಾರತದ ವೀಸಾವನ್ನು ಉಚಿತವಾಗಿ ನೀಡುವುದಾಗಿ ತಿಳಿಸಿದ್ದಾರೆ.
33 ವರ್ಷಗಳ ಬಳಿಕ ಸೀಶೆಲ್ಗೆ ಭೇಟಿ ನಿಡಿರುವ ಭಾರತದ ಮೊದಲ ಪ್ರಧಾನಿ ಮೋದಿ ಆಗಿದ್ದಾರೆ. ಸೀಶೆಲ್ಗೆ 1981ರಲ್ಲಿ ಇಂದಿರಾ ಗಾಂದಿ ಭೇಟಿ ನೀಡಿದ ಬಳಿಕ ಮೋದಿ ಭೇಟಿ ನೀಡುತ್ತಿದ್ದು,ಎರಡೂ ದೇಶಗಳ ಸಂಬಂಧ ವೃದ್ದಿಗೆ ಭೇಟಿ ಅಂತ್ಯಂತ ಮಹತ್ವ ಪಡೆದಿದೆ.
ಸೀಶೆಲ್ ಭೇಟಿಯ ಬಳಿಕ ಮೋದಿ,ಮಾರಿಷಸ್ಗೆ ತೆರಳಲಿದ್ದು, ಮಾ.12 ರಂದು ನಡೆಯಲಿರುವ ಸ್ವಾತಂತ್ರೊéತ್ಸವದ ಮುಖ್ಯಅತಿಥಿಯಾಗಲಿದ್ದಾರೆ. ಆನಂತರ ಶ್ರೀಲಂಕಾಕ್ಕೆ ಭೇಟಿ ನೀಡಲಿ ದ್ದಾರೆ
ಸೀಶೆಲ್ ಭೇಟಿಯ ಬಳಿಕ ಮೋದಿ,ಮಾರಿಷಸ್ಗೆ ತೆರಳಲಿದ್ದು, ಮಾ.12 ರಂದು ನಡೆಯಲಿರುವ ಸ್ವಾತಂತ್ರೊéತ್ಸವದ ಮುಖ್ಯಅತಿಥಿಯಾಗಲಿದ್ದಾರೆ. ಆನಂತರ ಶ್ರೀಲಂಕಾಕ್ಕೆ ಭೇಟಿ ನೀಡಲಿ ದ್ದಾರೆ
No comments:
Post a Comment