ಇಂದು ಸಾಮಾಜಿಕ ವಲಯದಲ್ಲಿ ಮೇಷ್ಟ್ರುಗಳು ಟೀಕೆಗೆ ಒಳಗಾದಷ್ಟು ಬೇರೆ ಯಾರೂ ಆಗಿರಲಾರರು. `ನಮ್ ಕಾಲದಲ್ಲಿ ಮೇಷ್ಟ್ರು ಹೇಗಿದ್ರು, ಈಗ ಬರೀ ಬಿಲ್ಲು-ಬೆಲ್ಲು ನೋಡ್ತಾರೆ' ಎಂದೋ; `ಪಾಪ ಮೇಷ್ಟ್ರು ಅವನಿಗೇನು ಗೊತ್ತು' ಎಂದೋ; `ಮೇಷ್ಟ್ರ ಕೆಲಸ ಆರಾಮಪ್ಪ, ಯಾವಾಗ ನೋಡಿದ್ರೂ ರಜೆ. ಪಾಠ ಮಾಡಿದ್ರೆ ಮಾಡಿದ್ರು, ಇಲ್ಲಾಂದ್ರೆ ಇಲ್ಲ.
ಹೇಳೋರೂ ಇಲ್ಲ, ಕೇಳೋರೂ ಇಲ್ಲ' ಎಂದೋ; `ಮೇಷ್ಟ್ರಂತೆ ಮೇಷ್ಟ್ರು, ಅವನೇನು ಹೇಳೋದು, ನಮಗೆ ಗೊತ್ತಿಲ್ವಾ?' ಎಂದೋ ಹೀಗೆ ಹತ್ತಾರು ವಿಧದಲ್ಲಿ ನಿಂದೆಗೆ, ನಿರ್ಲಕ್ಷ್ಯಕ್ಕೆ ತುತ್ತಾಗಿ ಬದುಕುತ್ತಿರುವವರು ಇಂದಿನ ಶಿಕ್ಷಕರು. ಅದರಲ್ಲೂ ಸರ್ಕಾರಿ ಶಾಲಾ ಶಿಕ್ಷಕರೆಂದರೆ ಏನೂ ಗೊತ್ತಿರದ, ಏನೂ ಕೆಲಸ ಮಾಡದ ವೇಸ್ಟ್ ಬಾಡಿಗಳೆಂದೇ ಬಿಂಬಿಸಲಾಗುತ್ತಿದೆ.
ಬಾಲ್ಯದಲ್ಲಿ ನನ್ನ ಮೇಲೆ ಗಾಢ ಪ್ರಭಾವ ಬೀರಿದವರು ನನ್ನ ಶಿಕ್ಷಕರು. ಶಾಲೆಯೇ ಪ್ರಪಂಚವಾಗಿದ್ದ ಆ ದಿನಗಳಲ್ಲಿ ನಮ್ಮ ಮೇಷ್ಟ್ರೇ ನಮಗೆ ಆದರ್ಶ. ಅವರಂತೆ ನಾವೂ ಮೇಷ್ಟ್ರರಾಗಬೇಕು ಎಂಬುದೇ ಭವಿಷ್ಯದ ಧ್ಯೇಯ. ಅಷ್ಟು ದಟ್ಟವಾಗಿತ್ತು ಆ ಪ್ರಭಾವ. ಇಂದು ಆ ಗುರಿಯನ್ನು ಸೇರಿಯಾಗಿದೆ. ಆದರೆ, ನನ್ನೊಳಗಿನ ಆ ಆದರ್ಶ ಶಿಕ್ಷಕತನ ಎಲ್ಲೋ ಕಳೆದುಹೋದ ಅನುಭವ. ನಮ್ಮ ಗುರುಗಳ ಬಗ್ಗೆ ನಮಗಿದ್ದ ಭಯ, ಪ್ರೀತಿ, ಗೌರವಗಳು ನಮ್ಮ ವಿದ್ಯಾರ್ಥಿಗಳಿಗೆ ನಮ್ಮಲ್ಲಿ ಯಾಕಿಲ್ಲ? ಅಂದು ಶಿಕ್ಷಕರಿಗೆ ಸಿಗುತ್ತಿದ್ದ ಸಾಮಾಜಿಕ ಮನ್ನಣೆ ಇಂದು ನಮಗೇಕೆ ಸಿಗುತ್ತಿಲ್ಲ? ಇದಕ್ಕೆ ನಾವೆಷ್ಟು ಕಾರಣ ಎಂಬುದು ಇಂದಿನ ಬಹಳಷ್ಟು ಶಿಕ್ಷಕರ ಮುಂದಿರುವ ಪ್ರಶ್ನೆ.
ಅಂದು ಕಲಿಯುವ ಆಸಕ್ತಿ ಇರುವ ಮಕ್ಕಳು ಮಾತ್ರ ಶಾಲೆಗೆ ಬರುತ್ತಿದ್ದರು. ಆದರೆ ಇಂದು, ಹುಟ್ಟಿದ ಎಲ್ಲ ಮಕ್ಕಳನ್ನೂ ಶಾಲೆಗೆ ಎಳೆದುಕೊಂಡು ಬಂದು ಕಲಿಸಬೇಕಾದ ಅನಿವಾರ್ಯ ಸ್ಥಿತಿ ಶಿಕ್ಷಕರದ್ದು. ವಿದ್ಯೆ ಅಭ್ಯಾಸಿಯ ವಶ. ವಿದ್ಯಾರ್ಥಿಯ ಲಕ್ಷಣವೇ ಇಲ್ಲದವರಿಗೆ (ವಿದ್ಯೆಯ ಅರ್ಥಿ ಎಂದರೆ ವಿದ್ಯೆಯನ್ನು ಯಾಚಿಸುವವನು, ಬೇಡುವವನು ಎಂದರ್ಥ) ಕಲಿಸುವುದು ಹೇಗೆ? ಇದು ಇಂದಿನ ಸರ್ಕಾರಿ ಶಾಲಾ ಶಿಕ್ಷಕರ ಮುಂದಿರುವ ದೊಡ್ಡ ಸವಾಲು. ತೀವ್ರ ನಿರಾಸಕ್ತಿ ಇರಲಿ, ಬುದ್ಧಿ ಮಂದವೇ ಆಗಿರಲಿ ಕಲಿಸಬೇಕಾದ ಹೊಣೆ ಅವರದ್ದು.
ಅದಕ್ಕಾಗಿ ಶಿಕ್ಷಕರ ಶ್ರಮ, ಸಮಯ, ಜ್ಞಾನವೆಲ್ಲ ವ್ಯರ್ಥವಾಗುತ್ತಿದೆ. ಆದರೂ `ವರ್ಷವೆಲ್ಲ ಏನು ಮಾಡಿದಿರಿ?' ಎಂಬ ಪ್ರಶ್ನೆ. ವಿದ್ಯಾರ್ಥಿಯಲ್ಲಿ ಏನೇ ನ್ಯೂನತೆ ಇದ್ದರೂ ವೈಫಲ್ಯಕ್ಕೆ ಕಾರಣ ಶಿಕ್ಷಕರು ಎನ್ನಲಾಗುತ್ತಿದೆ. ಇದು ಶಿಕ್ಷಕರ ಪಾಲಿಗೆ ಎಷ್ಟು ಒತ್ತಡ, ಎಂಥಾ ನಿರಾಶಾದಾಯಕ ವಾತಾವರಣವನ್ನು ತಂದೊಡ್ಡುತ್ತಿದೆ ಎಂಬುದರ ಅರಿವು ಬಹುತೇಕರಿಗೆ ಇಲ್ಲ.
ಇಂದಿನ ಸರ್ಕಾರಿ ಶಿಕ್ಷಕರಿಗಂತೂ ಬೋಧಿಸುವುದಷ್ಟೇ ಕೆಲಸವಲ್ಲ. ಶಾಲೆಗೆ ಹೋಗುವಾಗಲೇ ಅಂದಿನ ಬಿಸಿಯೂಟಕ್ಕೆ ಬೇಕಾಗುವ ತರಕಾರಿ, ಉಪ್ಪು, ಬೇಳೆಯನ್ನೆಲ್ಲ ಹೊತ್ತುಕೊಂಡು ಹೋಗಬೇಕು. ಅಲ್ಲಿ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಬೇಕು. ದಿನದಿನದ ಲೆಕ್ಕ ಬರೆದಿಡಬೇಕು. ಜೊತೆಗೆ ಇಲಾಖೆ ದಿಢೀರನೆ ಕೇಳುವ ಮಾಹಿತಿಯನ್ನು ಒದಗಿಸಬೇಕು. ಎಲ್ಲೆಡೆ ಶಿಕ್ಷಕರ ಕೊರತೆ. ಹೀಗೆ ಬದಲಾಗಿರುವ ವ್ಯವಸ್ಥೆಯಲ್ಲಿ ಶಿಕ್ಷಕ ಕೇವಲ ಬೋಧಕ ಮಾತ್ರ ಆಗಿಲ್ಲ. ಹಲವು ಕೆಲಸಗಳ ಮೇಲುಸ್ತುವಾರಿ ಅವರದು.
ತರಗತಿಗೆ ಹೋಗಿ ಮಕ್ಕಳ ಮುಖ ನೋಡಲಾಗದೆ ಇತರ ಕೆಲಸಗಳಲ್ಲೇ ಕಳೆದುಹೋಗುವ ದಿನಗಳು ಹಲವು. ಆದ್ದರಿಂದ ಬೋಧನೆಯ ಹಂಬಲ ಹೊತ್ತು ಬಂದ ಶಿಕ್ಷಕರು `ಯಾಕಪ್ಪಾ ಈ ಕೆಲಸಕ್ಕೆ ಬಂದೆವು' ಎಂದು ನಿಟ್ಟುಸಿರು ಬಿಡುವಂತಾಗಿದೆ. ಜೊತೆಗೆ `ಮೇಷ್ಟ್ರು ಪಾಠಾನೇ ಮಾಡಲ್ಲ, ಯಾವಾಗ್ಲೂ ಅಡ್ಡಾಡ್ತಾ ಇರತಾರೆ' ಎಂಬ ಆರೋಪ ಬೇರೆ. ಇದಕ್ಕೆ ಶಿಕ್ಷಕರು ಎಷ್ಟರ ಮಟ್ಟಿಗೆ ಕಾರಣ?
ಹಿಂದೆ ಖಾಸಗಿ ಶಾಲೆ, ಸರ್ಕಾರಿ ಶಾಲೆ ಎಂಬ ಭೇದವಾಗಲೀ, ಕನ್ನಡ ಮಾಧ್ಯಮ, ಆಂಗ್ಲ ಮಾಧ್ಯಮ ಎಂಬ ಪೈಪೋಟಿಯಾಗಲೀ ಇರಲಿಲ್ಲ.
ಹಿಂದೆ ಖಾಸಗಿ ಶಾಲೆ, ಸರ್ಕಾರಿ ಶಾಲೆ ಎಂಬ ಭೇದವಾಗಲೀ, ಕನ್ನಡ ಮಾಧ್ಯಮ, ಆಂಗ್ಲ ಮಾಧ್ಯಮ ಎಂಬ ಪೈಪೋಟಿಯಾಗಲೀ ಇರಲಿಲ್ಲ.
ಆದರೆ ಇಂದು ಖಾಸಗಿ ಶಾಲಾ ಮಕ್ಕಳೊಂದಿಗೆ ಸರ್ಕಾರಿ ಶಾಲಾ ಮಕ್ಕಳ ಪ್ರಗತಿಯನ್ನು ಹೋಲಿಸಲಾಗುತ್ತಿದೆ. ಖಾಸಗಿ ಶಾಲಾ ಮಕ್ಕಳ ಬುದ್ಧಿಮಟ್ಟ, ಆರ್ಥಿಕ ಪರಿಸ್ಥಿತಿ, ಪೋಷಕರ ಕಲಿಕಾ ಮಟ್ಟ, ಅವರ ಸಹಕಾರ ಉತ್ತಮವಾಗಿದ್ದು, ಅವು ಕಲಿಕೆಯ ಮೇಲೆ ಪರಿಣಾಮ ಬೀರುತ್ತವೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೂ ಅದನ್ನೆಲ್ಲ ಕಡೆಗಣಿಸಿ, ಶಿಕ್ಷಕರೇ ಸರಿಯಾಗಿ ಕಲಿಸುತ್ತಿಲ್ಲ, ಹಾಗಾಗಿ ಸರ್ಕಾರಿ ಶಾಲಾ ಮಕ್ಕಳು ಕಲಿಯುವುದಿಲ್ಲ ಎಂಬ ಧೋರಣೆ ವ್ಯಕ್ತಪಡಿಸುವುದು ಶಿಕ್ಷಕರಿಗೆ ನೋವು ಉಂಟು ಮಾಡುತ್ತಿದೆ.
ಒಂದು ಕಾಲದಲ್ಲಿ ಅನಕ್ಷರಸ್ಥರ ಸಂಖ್ಯೆ ಅಧಿಕವಾಗಿತ್ತು. ಅಂದಿನ ಪೋಷಕರು, ಅಕ್ಷರ ಕಲಿಸುವ ಗುರುವೆಂದರೆ ದೇವರ ಸಮಾನ ಎಂಬಂತಹ ಕಲ್ಪನೆಯನ್ನು ತಮ್ಮ ಮಕ್ಕಳಲ್ಲಿ ಕಲ್ಪಿಸಿಕೊಟ್ಟಿದ್ದರು. ಇಂದು ಎಲ್ಲರೂ ಅಕ್ಷರಸ್ಥರೇ. ಜ್ಞಾನದ ಮೂಲ ಶಾಲೆ ಮಾತ್ರ ಆಗಿಲ್ಲ. ದೂರದರ್ಶನ, ಕಂಪ್ಯೂಟರ್, ಮೊಬೈಲ್ ಮೊದಲಾದ ಮಾಧ್ಯಮಗಳಿಂದ ವಿಪುಲ ಮಾಹಿತಿ ಗ್ರಹಿಸುವ ವಿದ್ಯಾರ್ಥಿಗೆ/ ಪೋಷಕರಿಗೆ ತಮ್ಮಂತೆಯೇ ಓದಿದ ಅಥವಾ ತಮಗಿಂತ ಸ್ವಲ್ಪ ಹೆಚ್ಚು ಓದಿದ ಮೇಷ್ಟ್ರು ಅದ್ಭುತ ಎನಿಸುತ್ತಿಲ್ಲ.
ಪರಿಣಾಮವಾಗಿ ಶಿಕ್ಷಕರನ್ನು ಎಲ್ಲರಂತೆಯೇ ಸಾಮಾನ್ಯ ವ್ಯಕ್ತಿಗಳು ಎಂದು ಅವರು ಪರಿಗಣಿಸುತ್ತಾರೆ. `ಗುರುವೇ ನಮಃ' ಎಂಬ ಕಾಲ ಹೋಗಿ `ಗುರುವೇನು ಮಹಾ' ಎಂಬ ಕಾಲ ಬಂದಿದೆ. ಇದು ಶಿಕ್ಷಕರ ವರ್ತನೆಯ ವೈಪರೀತ್ಯಗಳಿಂದಲ್ಲ; ಬದಲಾದ ಸಾಮಾಜಿಕ ವಾತಾವರಣದ ಪ್ರಭಾವದಿಂದ. ರಕ್ತ ಸಂಬಂಧಗಳೇ ಅಲ್ಲಾಡುತ್ತಿರುವ ಈ ದಿನಗಳಲ್ಲಿ ಗುರು-ಶಿಷ್ಯ ಸಂಬಂಧದ ಪೂಜ್ಯ ಭಾವನೆಗೆ ಧಕ್ಕೆ ಬಂದಿದ್ದರೆ ಆಶ್ಚರ್ಯವೇನಿಲ್ಲ.
ಇಂದಿನ ಶಿಕ್ಷಕರು ಮಗುವನ್ನು ಕೇವಲ ಪಠ್ಯ ವಿಷಯಗಳಿಗಷ್ಟೇ ಸಿದ್ಧಗೊಳಿಸುತ್ತಿಲ್ಲ. ಬದಲಾದ ಪರಿಸರಕ್ಕೆ ಅನುಗುಣವಾಗಿ ಕ್ರೀಡೆ, ಪ್ರತಿಭಾ ಕಾರಂಜಿ, ಗಣಕ ಯಂತ್ರ, ಪ್ರವಾಸ, ವೃತ್ತಿ ಮಾರ್ಗದರ್ಶನ, ಕೈದೋಟ... ಹೀಗೆ ಬಹುಮುಖ ಬೋಧನೆ ಮಾಡುತ್ತಿದ್ದಾರೆ. ಆಕರ್ಷಕ ತಂತ್ರ, ಕೌಶಲ, ಶೈಲಿ, ಹಾಡು, ನೃತ್ಯ, ಕಥೆ, ಸ್ಥಳ ಭೇಟಿ, ಬೋಧನೋಪಕರಣ ಬಳಸುತ್ತಿದ್ದಾರೆ.
ಇದಕ್ಕಾಗಿ ಅವರೆಷ್ಟು ಪೂರ್ವಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಗೊತ್ತೇ? ನಿರಂತರ ತರಬೇತಿ ಪಡೆಯುತ್ತಾ, ಪುನಶ್ಚೇತನಗೊಳ್ಳುತ್ತಾ ಎಷ್ಟು ಕ್ರಿಯಾಶೀಲರಾಗಿರುತ್ತಾರೆ ಗೊತ್ತೇ? ಆದರೂ `ಹಿಂದೆಲ್ಲ ಮೇಷ್ಟ್ರು ಎಷ್ಟು ತಿಳ್ಕೊಂಡಿರ್ತಿದ್ರು, ಇವತ್ತು ಮೇಷ್ಟ್ರಿಗೆ ವಿಷಯ ಜ್ಞಾನವೇ ಇಲ್ಲ; ಆಳವಾಗಿ ಅಧ್ಯಯನ ಮಾಡೋಲ್ಲ' ಎಂಬ ಆರೋಪ.
ಬಡ ವಿದ್ಯಾರ್ಥಿಗಳಿಗೆ ಪೆನ್ನು, ಪುಸ್ತಕ ಕೊಡಿಸುವ, ಸಮವಸ್ತ್ರ ಹೊಲಿಸುವ, ಫೀಸು ಭರಿಸುವ, ಪ್ರವಾಸ ಕರೆದೊಯ್ಯುವ, ಬಹುಮಾನ ನೀಡುವ ಸಾವಿರಾರು ಶಿಕ್ಷಕರು ನಮ್ಮ ನಡುವೆ ಇದ್ದಾರೆ. ಹಿಂದೆ ಇದನ್ನು ಶಿಕ್ಷಕರ ಉದಾರತೆ, ಕಾಳಜಿ, ಜವಾಬ್ದಾರಿ ಎಂದು ಗುರುತಿಸಿ ಮೆಚ್ಚುತ್ತಿದ್ದ ಸಮಾಜದ ದೃಷ್ಟಿ ಇಂದು ಬೇರೆಯೇ ಆಗಿದೆ. `ಅದು ಸರ್ಕಾರದ್ದು, ಮೇಷ್ಟ್ರದ್ದಲ್ಲ, ಅವರಯಾಕೆ ಉಚಿತವಾಗಿ ಕೊಡ್ತಾರೆ?' ಎಂದೋ; `ಮೇಷ್ಟ್ರಿಗೇನೋ ಲಾಭ ಇರಬೇಕು, ಅದಕ್ಕೆ ಸಹಾಯ ಮಾಡ್ತಾರೆ' ಎಂದೋ; `ಯಾವುದರಲ್ಲಿ ಎಷ್ಟು ಹೊಡ್ಕೊಂಡಿದ್ನೋ, ಅದಕ್ಕೆ ಸ್ವಲ್ಪ ದಾನ ಮಾಡಿದ್ದಾನೆ' ಎಂದೋ ಲಘುವಾಗಿ ಮಾತನಾಡುವ, ಅನುಮಾನಿಸುವ, ಪ್ರಶ್ನಿಸುವ ಪೋಷಕರೇ ಅಧಿಕ.
ಔದಾರಯಕ್ಕೆ ಕನಿಷ್ಠ ಕೃತಜ್ಞತೆಯನ್ನೂ ಸೂಚಿಸುವ ಸೌಜನ್ಯವೂ ಹಲವು ಪೋಷಕರಿಗೆ ಇಲ್ಲ. ಇಂತಹ ಟೀಕೆ, ಅನುಭವಗಳು ಪದೇ-ಪದೇ ಆದಾಗ ಶಿಕ್ಷಕರು ತಾವಾಯಿತು, ತಮ್ಮ ಕೆಲಸವಾಯಿತು ಎಂದು ತಮ್ಮ ಸುತ್ತ ಬೇಲಿ ಹಾಕಿಕೊಳ್ಳದೆ ಇರುತ್ತಾರೆಯೇ?
ಹಾಗೆಂದು ಎಲ್ಲ ಶಿಕ್ಷಕರೂ ಪ್ರಾಮಾಣಿಕರು; ಆತ್ಮ ಗೌರವ ಉಳ್ಳವರು; ವೃತ್ತಿ ಧರ್ಮ ಕಾಪಾಡುವವರು ಎಂದಲ್ಲ. ಅಪವಾದಗಳು ಇರಬಹುದು.
ಹಾಗೆಂದು ಎಲ್ಲ ಶಿಕ್ಷಕರೂ ಪ್ರಾಮಾಣಿಕರು; ಆತ್ಮ ಗೌರವ ಉಳ್ಳವರು; ವೃತ್ತಿ ಧರ್ಮ ಕಾಪಾಡುವವರು ಎಂದಲ್ಲ. ಅಪವಾದಗಳು ಇರಬಹುದು.
ಆದರೆ ಅದೇ ಶಿಕ್ಷಕ ವರ್ಗದ ಮೌಲ್ಯ ನಿರ್ಧರಿಸುವ ಮಾನದಂಡ ಆಗಬಾರದು. ಅಂತಹವರನ್ನು ಶಿಕ್ಷಿಸುವ, ತಿದ್ದುವ ಹೊಣೆ ಖಂಡಿತಾ ಇಲಾಖೆಯದು, ಸಮಾಜದ್ದು. ಆದರೆ ಪ್ರಾಮಾಣಿಕತೆಯನ್ನು ಮೆಚ್ಚಿ, ಪ್ರೋತ್ಸಾಹಿಸದಿದ್ದರೆ ಉತ್ತಮ ಶಿಕ್ಷಕರೂ ದಕ್ಷತೆ ಕಳೆದುಕೊಳ್ಳುವ ಸಂಭವ ಇರುತ್ತದೆ ಎಂಬ ಅರಿವು ಸಮಾಜದ್ದಾಗಬೇಕು.
ಹೀಗೆ ಶಿಕ್ಷಣ ಅಥವಾ ಶಿಕ್ಷಕ ಪಾವಿತ್ರ್ಯ ಕಾಪಾಡಿಕೊಂಡಿಲ್ಲ ಎನಿಸಿದರೆ ಅದಕ್ಕೆ ಸಾಮಾಜಿಕ ವಾತಾವರಣ ಕಾರಣವೇ ಹೊರತು ಶಿಕ್ಷಕ ಅಲ್ಲ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಹಿಂದಿನದಕ್ಕೆ ಹೋಲಿಸಿ, ಈಗ ಕಾಲ ಬದಲಾಗಿದೆ, ಹಿಂದೆ ಬಹಳ ಚೆನ್ನಾಗಿತ್ತು ಎಂದು ಅಭಿಪ್ರಾಯ ಪಡುವುದು ಮಾನವನ ಸಹಜ ಗುಣ. ಅಂತೆಯೇ ಶಿಕ್ಷಕ ಮತ್ತು ಶಿಕ್ಷಣ ವ್ಯವಸ್ಥೆ ಕೂಡ ಹಿಂದಿನಂತೆ ಈಗ ಇಲ್ಲ ಎಂಬುದು ಸಹ ಒಪ್ಪಿಕೊಳ್ಳಬೇಕಾದ ಸಂಗತಿ.
ಆದ್ದರಿಂದ ಶಿಕ್ಷಕ ಬಾಂಧವರು ನಿರಾಶಾದಾಯಕವಾಗಿ ಬದುಕದೇ, ವೃತ್ತಿಯ ಬಗ್ಗೆ ಅಸಮಾಧಾನ ಬೆಳೆಸಿಕೊಳ್ಳದೇ ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳುವ, ಒಪ್ಪಿಕೊಳ್ಳುವ ಜಾಣ್ಮೆ ತೋರಬೇಕು. ವೃತ್ತಿಯಲ್ಲಿ ಆಸಕ್ತಿ ಇದ್ದರೆ ಕೀರ್ತಿ, ತೃಪ್ತಿ ಸಿಕ್ಕೇ ಸಿಗುತ್ತದೆ. ಸರ್ವ ಹಿತದ ದೃಷ್ಟಿಯಿಂದ ಯೋಚಿಸುವ ಉದಾರ ಪ್ರವೃತ್ತಿ ಶಿಕ್ಷಕರದ್ದಾಗಬೇಕು.
ಟೀಕೆ, ನಿಂದೆ ಸಾವಿರ ಬರಲಿ ಕರ್ತವ್ಯ ಲೋಪ ಮಾಡಬಾರದು. ಶ್ರದ್ಧೆ, ನಿಷ್ಠೆಯಿಂದ ಕ್ರಿಯಾಶೀಲರಾಗಿರಬೇಕು. ಯಾರೋ ಮೆಚ್ಚುವುದು ಮುಖ್ಯವಲ್ಲ. ಆತ್ಮ ತೃಪ್ತಿ ಮುಖ್ಯ. ವಿದ್ಯಾರ್ಥಿಯು ಗುರು ಬ್ರಹ್ಮ ಗುರು ವಿಷ್ಣು... ಎಂದು ಪೂಜಿಸುವುದು ಬೇಕಿಲ್ಲ; ನನ್ನೊಳಗಿನ ವಿದ್ಯೆ ಮತ್ತು ಬುದ್ಧಿಯನ್ನು ನಿರ್ವಂಚನೆಯಿಂದ ಧಾರೆ ಎರೆದಿರುವೆ ಎಂಬ ಧನ್ಯತೆ ಸಿಗಬೇಕು. ಅದೇ ಸಾರ್ಥಕ ಕ್ಷಣ. ಆದ್ದರಿಂದ ಬಾಹ್ಯ ಒತ್ತಡಗಳಿಗೆ ಬಲಿಯಾಗದೇ, ತನ್ನತನ ಕಳೆದುಕೊಳ್ಳದೇ ಸದೃಢ ಚಿತ್ತದಿಂದ ಕರ್ತವ್ಯ ನಿರ್ವಹಿಸಿ, ಗುರು ಪರಂಪರೆಯ ನಿರಂತರತೆಗೆ ಶಿಕ್ಷಕ ವರ್ಗ ಕಾರಣವಾಗಬೇಕು.
ಭಾರತ ದೇಶದ ಬಡ ಕುಟುಂಬದಲ್ಲಿ ಜನಿಸಿ ಇಚ್ಚಾಶಕ್ತಿ, ಕ್ರಿಯಾಶಕ್ತಿ ಮತ್ತು ಜ್ಞಾನ ಶಕ್ತಿ ಇದ್ದರೆ ಏನು ಬೇಕಾದರು ಸಾಧಿಸಬಹುದು ಎನ್ನುವುದಕ್ಕೆ ಬಹುದೊಡ್ಡ ಉದಾಹರಣೆಯಾಗಿ ನಿಲ್ಲುತ್ತಾರೆ ನಮ್ಮ ಶಿಕ್ಷಕ, ಶಿಕ್ಷಣ ತಜ್ಞ, ತತ್ವಜ್ಞಾನಿ ಮತ್ತು ಭಾರತ ಕಂಡ ಮೊದಲ ಉಪರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್.
ಶಿಕ್ಷಕರೆಡೆಗೆ ಅಪಾರ ಗೌರವ, ಪ್ರೀತಿ. ನಿಷ್ಠೆ ಹೊಂದಿದ್ದ, ಸ್ವತಃ ಶಿಕ್ಷಕರಾಗಿ ಹಲವಾರು ವರ್ಷಗಳ ಕಾಲ ಸೇವೆಗೈದಿರುವ ಡಾ.ರಾಧಾಕೃಷ್ಣನ್, ಭಾರತ ಕಂಡ ಅಗ್ರಗಣ್ಯ ಶಿಕ್ಷಕರು. ಅಂತಲೇ, ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುತ್ತಾ ಅವರು ಗೈದಿರುವ ಶಿಕ್ಷಣ ಕ್ಷೇತ್ರಕ್ಕೆ ಮತ್ತು ಅವರಿಗೆ ಗೌರವ ಸಲ್ಲಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಅವರ ಜೀವನ ಕುರಿತಾದ ಒಂದು ಇಣುಕುನೋಟ.
ಸರ್ವಪಲ್ಲಿ ರಾಧಾಕೃಷ್ಣನ್ ಜನಿಸಿದ್ದು ದಕ್ಷಿಣ ಭಾರತದ ತಮಿಳುನಾಡಿನ ತಿರುತ್ತಣಿ ಎಂಬಲ್ಲಿ ಸೆಪ್ಟೆಂಬರ್ 5, 1888ರಲ್ಲಿ. ಸರ್ವಪಲ್ಲಿ ಎನ್ನುವುದು ಮನೆತನದ ಹೆಸರಾದರೆ, ರಾಧಾಕೃಷ್ಣನ್ ಎನ್ನುವುದು ಅವರ ತಂದೆ-ತಾಯಿ ಇಟ್ಟ ಮುದ್ದಿನ ಹೆಸರು.
ತಂದೆ ಸರ್ವಪಲ್ಲಿ ವೀರಸ್ವಾಮಿ ಅವರು ಜಮೀನ್ದಾರರ ಬಳಿ ದಿನಗೂಲಿ ನೌಕರರಾಗಿ ಸೇವೆಗೈಯುತ್ತಾ ಮಗನ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರು. ಬರುವ ದಿನಗೂಲಿಯಲ್ಲಿ ತುಂಬು ಕುಟುಂಬವನ್ನು ಸಾಗಿಸಲು ಕಷ್ಟವಾದ ಸಂದರ್ಭದಲ್ಲಿ ರಾಧಾಕೃಷ್ಣನ್ಗೆ ಓದಬೇಕೆನ್ನುವ ಅಪಾರ ಹಂಬಲ, ಸ್ಕಾಲರ್ಶಿಪ್ ಹಣದಲ್ಲಿಯೇ ಎಲ್ಲ ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢಶಾಲೆಯ ಶಿಕ್ಷಣವನ್ನು ಮುಗಿಸಿದ ರಾಧಾಕೃಷ್ಣನ್, ಮದ್ರಾಸ್ (ಈಗಿನ ಚೆನ್ನೈ) ಕ್ರಿಶ್ಚಿಯನ್ ಕಾಲೇಜ್ನಲ್ಲಿ 'ತತ್ವಜ್ಞಾನ' ವಿಷಯದ ಮೇಲೆ ಬಿ.ಎ ಮತ್ತು ಎಂ.ಎ. ಪದವಿಯನ್ನು ಸಂಪಾದಿಸಿಕೊಂಡರು.
ಸ್ನಾತಕೋತ್ತರ ಪದವಿಯಲ್ಲಿ ರಾಧಾಕೃಷ್ಣನ್ ಮಂಡಿಸಿದ ಪ್ರಬಂಧ 'ದಿ ಎಥಿಕ್ಸ್ ಆಫ್ ವೇದಾಂತ್' ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿತು. ಕೇವಲ 20 ವರ್ಷದ ಬಾಲಕನ ತಲೆಯಲ್ಲಿದ್ದ ಸಿದ್ಧಾಂತ, ವೇದಾಂತ ವಿಚಾರಗಳು ಮುಂದೊಂದು ದಿನ ಅವರನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುತ್ತವೆ ಎಂದು ಅವರ ಕಾಲೇಜು ಶಿಕ್ಷಕರು ಆಗಲೇ ಗುರುತಿಸಿದ್ದರು.
ವೆಲ್ಲೂರಿನಲ್ಲಿರುವಾಗಲೇ ಕೇವಲ 16ನೇ ವಯಸ್ಸಿನಲ್ಲಿ ಶಿವಕಾಮುಮ್ಮ ಎಂಬುವವರನ್ನು ಬಾಳಸಂಗಾತಿಯನ್ನಾಗಿಸಿಕೊಂಡ ರಾಧಾಕೃಷ್ಣನ್, 1909ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಉಪನ್ಯಾಸಕರಾಗಿ ಅಚ್ಚುಮೆಚ್ಚಿನ ಶಿಕ್ಷಕ ಸೇವೆಯನ್ನಾರಂಭಿಸಿದರು.
ಭಾರತದ ಸನಾತನ ಧರ್ಮವಾದ ಹಿಂದೂ ಧರ್ಮದ ಸಾರ, ವೇದ, ಉಪನಿಷತ್, ಜೈನ ತತ್ವಜ್ಞಾನ, ಶಂಕರ ರಾಮಾನುಜ, ಮಧ್ವ, ಪ್ಲೂಟೋ, ಪ್ಲಾಟಿನಸ್, ಕಾಂತ್, ಬ್ರ್ಯಾಡ್ಲೆ ಮುಂತಾದ ಮಹನೀಯರ ತತ್ವಜ್ಞಾನವನ್ನು ಆಳವಾಗಿ ಅಧ್ಯಯನ ಕೈಗೊಂಡರು. ಸತತ ಅಧ್ಯಯನ ಮತ್ತು ಕಠಿಣ ಪರಿಶ್ರಮದಿಂದ ಹಂತ ಹಂತವಾಗಿ ಮೇಲೇರುತ್ತಾ ಮುನ್ನಡೆದ ರಾಧಾಕೃಷ್ಣನ್, 1918ರಲ್ಲಿ ಮೈಸೂರು ವಿಶ್ವವಿದ್ಯಾಲಯದ ತತ್ವಜ್ಞಾನ ವಿಭಾಗದ ಉಪನ್ಯಾಸಕರಾಗಿ ಆಯ್ಕೆಯಾದರು. ದೇಶ ವಿದೇಶಗಳ ವಿವಿಧ ತತ್ವಜ್ಞಾನ ಪತ್ರಿಕೆಗಳಲ್ಲಿ ತಮ್ಮ ಆಳ ಮತ್ತು ಹರಿತವಾದ ವಿಚಾರಗಳನ್ನು ಹೊಂದಿದ್ದ ಲೇಖನಗಳನ್ನು ಬರೆಯುತ್ತಾ ಸಾಗಿದ ರಾಧಾಕೃಷ್ಣನ್, 'ದಿ ಫಿಲಾಸಫಿ ಆಫ್ ರವೀಂದ್ರನಾಥ್ ಠ್ಯಾಗೋರ್' ಎಂಬ ಮೊದಲ ಪುಸ್ತಕ ಬರೆದರು.
ಭಾರತೀಯ ಪುಸ್ತಕೋದ್ಯಮದಲ್ಲಿ ಮಿಂಚುತ್ತಾ ಸಾಗಿದ ಇವರು, ಮುಂದೆ 'ಜಿನೀನ್ ಮೆನಿಫೆಸ್ಟೇಷನ್ ಆಫ್ ಇಂಡಿಯನ್ ಸ್ಪಿರಿಟ್' ಮತ್ತು 'ದಿ ರೀಜನ್ ಆಫ್ ರಿಲಿಜಿಯನ್ ಇನ್ ಕಾಂಟೆಂಪರರಿ ಫಿಲಾಸಫಿ' ಎನ್ನುವ ಪುಸ್ತಕಗಳನ್ನು ಸಹ ಬರೆದಿದ್ದಾರೆ.
'Do not sit like a Rock,
Do work as a Clock'
ಎನ್ನುವ ಮಾತಿಗೆ ಉತ್ತಮ ನಿದರ್ಶನವಾದ ರಾಧಾಕೃಷ್ಣನ್, ತಮ್ಮ ಅಪಾರವಾದ ಪಾಂಡಿತ್ಯದಿಂದಾಗಿ ದೇಶವಿದೇಶಗಳಲ್ಲಿ ಮನೆಮಾತಾಗಿದ್ದರು. ಇವರ ತತ್ವಜ್ಞಾನಕ್ಕೆ ಶರಣಾದ ಆಕ್ಸ್ಫರ್ಡ್ ವಿಶ್ವವಿದ್ಯಾಲಯ 'ಧರ್ಮ ಮತ್ತು ನೀತಿಶಾಸ್ತ್ರ' ಎನ್ನುವ ವಿಷಯದ ಮೇಲೆ ಉಪನ್ಯಾಸ ನೀಡುವಂತೆ ಆಹ್ವಾನಿಸಿತು. ಸಪ್ತಸಾಗರಗಳಾಚೆ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದು, ಭಾರತೀಯ ಸ್ವಾತಂತ್ರ್ಯಕ್ಕಾಗಿಯೂ ಹೋರಾಡಿದ ರಾಧಾಕೃಷ್ಣನ್, ಭಾರತೀಯ ಸನಾತನ ಧರ್ಮ, ತತ್ವಜ್ಞಾನ ಕುರಿತು ವಿದೇಶಿಯರಿಗೆ ಮನಮುಟ್ಟುವಂತೆ ಮನವರಿಕೆ ಮಾಡಿಕೊಟ್ಟು ಬಂದರು.
1931ರಲ್ಲಿ ಆಂಧ್ರ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಆಯ್ಕೆಯಾದ ರಾಧಾಕೃಷ್ಣನ್, ಐದು ವರ್ಷಗಳ ಕಾಲ ತಾವೊಬ್ಬ ಉತ್ತಮ ಶಿಕ್ಷಣ ಸುಧಾರಕರೂ ಹೌದು ಎಂಬುದನ್ನು ತಮ್ಮ ಸೇವಾವಧಿಯಲ್ಲಿ ತೋರಿಸಿಕೊಟ್ಟರು. ಇವರ ಅವಧಿಯಲ್ಲಿ ವಿಶ್ವವಿದ್ಯಾಲಯ ಅನೇಕ ಶಿಕ್ಷಣ ಮತ್ತು ಶಿಕ್ಷಣೇತರ ಸುಧಾರಣೆಗಳನ್ನು ಕಂಡಿತು.
1939ರಲ್ಲಿ ಬನಾರಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಆಯ್ಕೆಯಾದರು. ಅಲ್ಲಿಯೂ ತಮ್ಮ ಅನುಭವವನ್ನು ಧಾರೆ ಎರೆಯುವ ಮೂಲಕ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ರಾಧಾಕೃಷ್ಣನ್ ಅವರನ್ನು, 1948ರಲ್ಲಿ ವಿಶ್ವವಿದ್ಯಾಲಯ ಶಿಕ್ಷಣ ಆಯೋಗದ ಮುಖ್ಯಸ್ಥರನ್ನಾಗಿ ಸರಕಾರ ನೇಮಿಸಿತು. 1949ರಲ್ಲಿ ಸೋವಿಯತ್ ರಷ್ಯಾಕ್ಕೆ ಭಾರತದ ರಾಯಭಾರಿಯಾಗಿ ನೇಮಕಗೊಂಡ ರಾಧಾಕೃಷ್ಣನ್, ಸ್ಟಾಲಿನ್ನಂತಹ ಮೇಧಾವಿಗಳ ಸರಿಸಮನಾಗಿ ನಿಲ್ಲುವ ವ್ಯಕ್ತಿತ್ವವನ್ನು ಬೆಳೆಸಿಕೊಂಡರು.
ಶಿಕ್ಷಕರೆಡೆಗೆ ಅಪಾರ ಗೌರವ, ಪ್ರೀತಿ. ನಿಷ್ಠೆ ಹೊಂದಿದ್ದ, ಸ್ವತಃ ಶಿಕ್ಷಕರಾಗಿ ಹಲವಾರು ವರ್ಷಗಳ ಕಾಲ ಸೇವೆಗೈದಿರುವ ಡಾ.ರಾಧಾಕೃಷ್ಣನ್, ಭಾರತ ಕಂಡ ಅಗ್ರಗಣ್ಯ ಶಿಕ್ಷಕರು. ಅಂತಲೇ, ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುತ್ತಾ ಅವರು ಗೈದಿರುವ ಶಿಕ್ಷಣ ಕ್ಷೇತ್ರಕ್ಕೆ ಮತ್ತು ಅವರಿಗೆ ಗೌರವ ಸಲ್ಲಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಅವರ ಜೀವನ ಕುರಿತಾದ ಒಂದು ಇಣುಕುನೋಟ.
ಸರ್ವಪಲ್ಲಿ ರಾಧಾಕೃಷ್ಣನ್ ಜನಿಸಿದ್ದು ದಕ್ಷಿಣ ಭಾರತದ ತಮಿಳುನಾಡಿನ ತಿರುತ್ತಣಿ ಎಂಬಲ್ಲಿ ಸೆಪ್ಟೆಂಬರ್ 5, 1888ರಲ್ಲಿ. ಸರ್ವಪಲ್ಲಿ ಎನ್ನುವುದು ಮನೆತನದ ಹೆಸರಾದರೆ, ರಾಧಾಕೃಷ್ಣನ್ ಎನ್ನುವುದು ಅವರ ತಂದೆ-ತಾಯಿ ಇಟ್ಟ ಮುದ್ದಿನ ಹೆಸರು.
ತಂದೆ ಸರ್ವಪಲ್ಲಿ ವೀರಸ್ವಾಮಿ ಅವರು ಜಮೀನ್ದಾರರ ಬಳಿ ದಿನಗೂಲಿ ನೌಕರರಾಗಿ ಸೇವೆಗೈಯುತ್ತಾ ಮಗನ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರು. ಬರುವ ದಿನಗೂಲಿಯಲ್ಲಿ ತುಂಬು ಕುಟುಂಬವನ್ನು ಸಾಗಿಸಲು ಕಷ್ಟವಾದ ಸಂದರ್ಭದಲ್ಲಿ ರಾಧಾಕೃಷ್ಣನ್ಗೆ ಓದಬೇಕೆನ್ನುವ ಅಪಾರ ಹಂಬಲ, ಸ್ಕಾಲರ್ಶಿಪ್ ಹಣದಲ್ಲಿಯೇ ಎಲ್ಲ ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢಶಾಲೆಯ ಶಿಕ್ಷಣವನ್ನು ಮುಗಿಸಿದ ರಾಧಾಕೃಷ್ಣನ್, ಮದ್ರಾಸ್ (ಈಗಿನ ಚೆನ್ನೈ) ಕ್ರಿಶ್ಚಿಯನ್ ಕಾಲೇಜ್ನಲ್ಲಿ 'ತತ್ವಜ್ಞಾನ' ವಿಷಯದ ಮೇಲೆ ಬಿ.ಎ ಮತ್ತು ಎಂ.ಎ. ಪದವಿಯನ್ನು ಸಂಪಾದಿಸಿಕೊಂಡರು.
ಸ್ನಾತಕೋತ್ತರ ಪದವಿಯಲ್ಲಿ ರಾಧಾಕೃಷ್ಣನ್ ಮಂಡಿಸಿದ ಪ್ರಬಂಧ 'ದಿ ಎಥಿಕ್ಸ್ ಆಫ್ ವೇದಾಂತ್' ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿತು. ಕೇವಲ 20 ವರ್ಷದ ಬಾಲಕನ ತಲೆಯಲ್ಲಿದ್ದ ಸಿದ್ಧಾಂತ, ವೇದಾಂತ ವಿಚಾರಗಳು ಮುಂದೊಂದು ದಿನ ಅವರನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುತ್ತವೆ ಎಂದು ಅವರ ಕಾಲೇಜು ಶಿಕ್ಷಕರು ಆಗಲೇ ಗುರುತಿಸಿದ್ದರು.
ವೆಲ್ಲೂರಿನಲ್ಲಿರುವಾಗಲೇ ಕೇವಲ 16ನೇ ವಯಸ್ಸಿನಲ್ಲಿ ಶಿವಕಾಮುಮ್ಮ ಎಂಬುವವರನ್ನು ಬಾಳಸಂಗಾತಿಯನ್ನಾಗಿಸಿಕೊಂಡ ರಾಧಾಕೃಷ್ಣನ್, 1909ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಉಪನ್ಯಾಸಕರಾಗಿ ಅಚ್ಚುಮೆಚ್ಚಿನ ಶಿಕ್ಷಕ ಸೇವೆಯನ್ನಾರಂಭಿಸಿದರು.
ಭಾರತದ ಸನಾತನ ಧರ್ಮವಾದ ಹಿಂದೂ ಧರ್ಮದ ಸಾರ, ವೇದ, ಉಪನಿಷತ್, ಜೈನ ತತ್ವಜ್ಞಾನ, ಶಂಕರ ರಾಮಾನುಜ, ಮಧ್ವ, ಪ್ಲೂಟೋ, ಪ್ಲಾಟಿನಸ್, ಕಾಂತ್, ಬ್ರ್ಯಾಡ್ಲೆ ಮುಂತಾದ ಮಹನೀಯರ ತತ್ವಜ್ಞಾನವನ್ನು ಆಳವಾಗಿ ಅಧ್ಯಯನ ಕೈಗೊಂಡರು. ಸತತ ಅಧ್ಯಯನ ಮತ್ತು ಕಠಿಣ ಪರಿಶ್ರಮದಿಂದ ಹಂತ ಹಂತವಾಗಿ ಮೇಲೇರುತ್ತಾ ಮುನ್ನಡೆದ ರಾಧಾಕೃಷ್ಣನ್, 1918ರಲ್ಲಿ ಮೈಸೂರು ವಿಶ್ವವಿದ್ಯಾಲಯದ ತತ್ವಜ್ಞಾನ ವಿಭಾಗದ ಉಪನ್ಯಾಸಕರಾಗಿ ಆಯ್ಕೆಯಾದರು. ದೇಶ ವಿದೇಶಗಳ ವಿವಿಧ ತತ್ವಜ್ಞಾನ ಪತ್ರಿಕೆಗಳಲ್ಲಿ ತಮ್ಮ ಆಳ ಮತ್ತು ಹರಿತವಾದ ವಿಚಾರಗಳನ್ನು ಹೊಂದಿದ್ದ ಲೇಖನಗಳನ್ನು ಬರೆಯುತ್ತಾ ಸಾಗಿದ ರಾಧಾಕೃಷ್ಣನ್, 'ದಿ ಫಿಲಾಸಫಿ ಆಫ್ ರವೀಂದ್ರನಾಥ್ ಠ್ಯಾಗೋರ್' ಎಂಬ ಮೊದಲ ಪುಸ್ತಕ ಬರೆದರು.
ಭಾರತೀಯ ಪುಸ್ತಕೋದ್ಯಮದಲ್ಲಿ ಮಿಂಚುತ್ತಾ ಸಾಗಿದ ಇವರು, ಮುಂದೆ 'ಜಿನೀನ್ ಮೆನಿಫೆಸ್ಟೇಷನ್ ಆಫ್ ಇಂಡಿಯನ್ ಸ್ಪಿರಿಟ್' ಮತ್ತು 'ದಿ ರೀಜನ್ ಆಫ್ ರಿಲಿಜಿಯನ್ ಇನ್ ಕಾಂಟೆಂಪರರಿ ಫಿಲಾಸಫಿ' ಎನ್ನುವ ಪುಸ್ತಕಗಳನ್ನು ಸಹ ಬರೆದಿದ್ದಾರೆ.
'Do not sit like a Rock,
Do work as a Clock'
ಎನ್ನುವ ಮಾತಿಗೆ ಉತ್ತಮ ನಿದರ್ಶನವಾದ ರಾಧಾಕೃಷ್ಣನ್, ತಮ್ಮ ಅಪಾರವಾದ ಪಾಂಡಿತ್ಯದಿಂದಾಗಿ ದೇಶವಿದೇಶಗಳಲ್ಲಿ ಮನೆಮಾತಾಗಿದ್ದರು. ಇವರ ತತ್ವಜ್ಞಾನಕ್ಕೆ ಶರಣಾದ ಆಕ್ಸ್ಫರ್ಡ್ ವಿಶ್ವವಿದ್ಯಾಲಯ 'ಧರ್ಮ ಮತ್ತು ನೀತಿಶಾಸ್ತ್ರ' ಎನ್ನುವ ವಿಷಯದ ಮೇಲೆ ಉಪನ್ಯಾಸ ನೀಡುವಂತೆ ಆಹ್ವಾನಿಸಿತು. ಸಪ್ತಸಾಗರಗಳಾಚೆ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದು, ಭಾರತೀಯ ಸ್ವಾತಂತ್ರ್ಯಕ್ಕಾಗಿಯೂ ಹೋರಾಡಿದ ರಾಧಾಕೃಷ್ಣನ್, ಭಾರತೀಯ ಸನಾತನ ಧರ್ಮ, ತತ್ವಜ್ಞಾನ ಕುರಿತು ವಿದೇಶಿಯರಿಗೆ ಮನಮುಟ್ಟುವಂತೆ ಮನವರಿಕೆ ಮಾಡಿಕೊಟ್ಟು ಬಂದರು.
1931ರಲ್ಲಿ ಆಂಧ್ರ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಆಯ್ಕೆಯಾದ ರಾಧಾಕೃಷ್ಣನ್, ಐದು ವರ್ಷಗಳ ಕಾಲ ತಾವೊಬ್ಬ ಉತ್ತಮ ಶಿಕ್ಷಣ ಸುಧಾರಕರೂ ಹೌದು ಎಂಬುದನ್ನು ತಮ್ಮ ಸೇವಾವಧಿಯಲ್ಲಿ ತೋರಿಸಿಕೊಟ್ಟರು. ಇವರ ಅವಧಿಯಲ್ಲಿ ವಿಶ್ವವಿದ್ಯಾಲಯ ಅನೇಕ ಶಿಕ್ಷಣ ಮತ್ತು ಶಿಕ್ಷಣೇತರ ಸುಧಾರಣೆಗಳನ್ನು ಕಂಡಿತು.
1939ರಲ್ಲಿ ಬನಾರಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಆಯ್ಕೆಯಾದರು. ಅಲ್ಲಿಯೂ ತಮ್ಮ ಅನುಭವವನ್ನು ಧಾರೆ ಎರೆಯುವ ಮೂಲಕ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ರಾಧಾಕೃಷ್ಣನ್ ಅವರನ್ನು, 1948ರಲ್ಲಿ ವಿಶ್ವವಿದ್ಯಾಲಯ ಶಿಕ್ಷಣ ಆಯೋಗದ ಮುಖ್ಯಸ್ಥರನ್ನಾಗಿ ಸರಕಾರ ನೇಮಿಸಿತು. 1949ರಲ್ಲಿ ಸೋವಿಯತ್ ರಷ್ಯಾಕ್ಕೆ ಭಾರತದ ರಾಯಭಾರಿಯಾಗಿ ನೇಮಕಗೊಂಡ ರಾಧಾಕೃಷ್ಣನ್, ಸ್ಟಾಲಿನ್ನಂತಹ ಮೇಧಾವಿಗಳ ಸರಿಸಮನಾಗಿ ನಿಲ್ಲುವ ವ್ಯಕ್ತಿತ್ವವನ್ನು ಬೆಳೆಸಿಕೊಂಡರು.
ಶಿಕ್ಷಕರು ಮತ್ತು ವಿದ್ಯಾರ್ಥಿಗಳು
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮಕುತಿ ಎಂದು ನಮ್ಮ ಪುರಂದರ ದಾಸರು ಹೇಳಿದ್ದಾರೆ ಶಿಕ್ಷಣ ಬಹಳ ಮಹತ್ತರವಾದ ಕಾರ್ಯವನ್ನು ಎಲ್ಲಾರ ಜೀವನದಲ್ಲೂ ನಿರ್ವಹಿಸುತ್ತದೆ.
ಶಿಕ್ಷಕ ಅಂದರೆ
ಶಿ - ಶಿವ ಸ್ವರೂಪಿಯಾಗಿ (ಶಿಕ್ಷಿಸಿ)
ಕ್ಷ - ಕ್ಷ ಕೀರಣ ಬೀರುವಂತಹ (ಕ್ಷಮಿಸಿ)
ಕ – ಕರ್ಮವೆಸಗತಕ್ಕವ (ಕಲಿಸುವವ)
ಇಂತಹ ಅರ್ಥವನ್ನು ನೀಡುವ ಶಿಕ್ಷಕ ಎನಿಸಿಕೊಳ್ಳುವವನಿಗೆ ಇಂದಿನ ಜಗತ್ತಿನಲ್ಲಿ ಬೆಲೆ ಇಲ್ಲದಿರುವುದು ನಿಜಕ್ಕೂ ವಿಷಾದನೀಯ.
ಅಂದಿನ ಕಾಲದಲ್ಲಿನ ಗುರುವಿಗೆ ನೀಡುತ್ತದ್ದ ಗೌರವ ಇಂದು ಕಣ್ಮರೆಯಾಗುತ್ತಿದೆ ಏಕಲವ್ಯ ತಮ್ಮ ಗುರುಗಳಾದ ದ್ರೋಣಾಚಾರ್ಯರು ಕೇಳಿದ ಗುರುದಕ್ಷಿಣೆಯನ್ನು ಒಂದು ನಿಮಿಷವು ಯೋಚಿಸದೇ ತನ್ನ ಹೆಬ್ಬೆಟ್ಟನ್ನೇ ಕತ್ತರಿಸಿ ಕೊಟ್ಟ ಇಂದಿನ ವಿದ್ಯಾರ್ಥಿಗಳು ಗುರುದಕ್ಷಿಣೆ ಕೊಡುವುದಿರಲ್ಲಿ ಗುರುಗಳಿಗೆ ಗೌರವವನ್ನು ಕೂಡ ಕೊಡುವುದಿಲ್ಲ. ಶಿಕ್ಷಕನು ಸೂಕ್ತ ಪ್ರತಿಭೆಗಳನ್ನು ಹೊರ ತರುವುದು ಶಿಕ್ಷಕನ ಕೆಲಸವಾಗಿರುತ್ತದೆ.
ವಿದ್ಯಾರ್ಥಿಗಳ ಜೀವನವನ್ನು ರೂಪಿಸುವ ಶಿಕ್ಷಕನಿಗೆ ವಿದ್ಯಾರ್ಥಿಗಳು ರುಣಿಯಾಗಿರಬೇಕು ಎಂಬುದು ನನ್ನ ಹಂಬಲ.
ಅಂದು ಇಂದು
ಗುರುವೇನಮಃ **** ಗುರುವು ಏನು ಮಹಾ
ಈ ರೀತಿಯಾಗಿ ನಮ್ಮ ಜಗತ್ತಿನ ವಿದ್ಯಾರ್ಥಿಗಳು ಬದಲಾಗುತ್ತೀದ್ದಾರೆ.
****************************
ಇನ್ನು ವಿದ್ಯಾರ್ಥಿಗಳ ಜೀವನದಲ್ಲೂ ಕೆಲವು ಶಿಕ್ಷಕರು ಆಟ ಆಡುವುದುಂಟು, ಕೆಲವು ಶಿಕ್ಷಕರು ಶಾಲೆಯ ವಿರಾಮದ ವೇಳೆಯಲ್ಲಿ ದೂಮಪಾನ ಸೇವನೆ (smoke) ಮಾಡುವುದನ್ನು ನೋಡಿದರೆ ಲೋ ಮಗ ಗಣಿತ ಮೇಷ್ಟ್ರು ಸಿಗರೇಟ್ ಹೊಡಿತ್ತಾ ಇದ್ದರೂ ಕಂಡಲಾ ನಾವು ಒಂದು ಸಲ ಹೊಡೆದು ನೋಡಬೇಕು ಕಣಲಾ ಅಂದುಕೊಂಡು ಒಂದು ದಿನ ಗುಂಪಾಗಿ ಸೇರಿ ಸಿಗರೇಟ್ ಹೊಡೆದೇ ಬಿಡುತ್ತಾರೆ ಇದೇ ಅಭ್ಯಾಸವನ್ನು ಬೆಳೆಸಿಕೊಳ್ಳುವುದುಂಟು . ಇತ್ತಿಚಿನ ದಿನಗಳಲ್ಲಿ ಶಿಕ್ಷಕನಿಂದಲೇ ವಿದ್ಯಾರ್ಥಿಯ ಅತ್ಯಚಾರ ಈ ರೀತಿಯ ನ್ಯೂಸ್ ಗಳನ್ನು ಕೂಡ ನಾನು ನೋಡಿರುವೆ ಹಾಗೂ ಕೇಳಿರುವೆ .
ಶಿಕ್ಷಕರು ಭೋದನಾ ವೃತ್ತಿಗೆ ಬಂದ ಮೇಲೆ ತನ್ನಲ್ಲಿರುವ ದುರ್ಮಾರ್ಗಗಳನ್ನು ಹೋಗಲಾಡಿಸಿ ಒಳ್ಳೇಯ ಗುಣಗಳನ್ನು ಬೆಳೆಸಿಕೊಂಡು ಆದರ್ಶ ವ್ಯಾಕ್ತಿಯಾಗಿರಬೇಕು.
“ಕಲಿಕೆಯ ಕೇಂದ್ರ ಬಿಂದು ಮಕ್ಕಳಾಗಿರುವುದರಿಂದ ಪರ್ಶಿಯಾ ದೇಶದ ಯೋಗಿ ಹಾಗೂ ಕವಿ ಖಲೀಲ್ ಗಿಬ್ರಾನ್ ಎಂಬಾತನು ಈ ರೀತಿ ಹೇಳಿದ್ದಾನೆ ಮಕ್ಕಳು ನಿಮಗೊಬ್ಬರಿಗೆ ಸೇರಿದ ವ್ಯಕ್ತಿಗಳಲ್ಲ . ಅವರು ಭಾವಿ ಜೀವನದಲ್ಲಿ ಆಶಾಪೂರಿತವಾದ ಗಂಡು ಹೆಣ್ಣುಗಳು ನಿಮ್ಮ ಮೂಲಕ ಅವರು ಪ್ರಪಂಚಕ್ಕೆ ಬಂದರೂ ನಿಮ್ಮಿಂದಲೇ ಬಂದವರೆನ್ನಲಾಗದು. ಪ್ರೀತಿಯನ್ನು ನೀವೂ ನೀಡಬದುದು , ಆದರೆ ನಿಮ್ಮ ಭಾವನೆಗಳನ್ನು ನೀಡಲಾಗುವುದಿಲ್ಲ. ಕಾರಣ ಅವರದೇ ಆದ ಭಾವನೆಗಳು ಅವರಿಗೆ ಇದ್ದೇ ಇರುತ್ತವೆ . ದೇಹ ಪೋಷಣೆಯ ರಕ್ಷಣೆಯನ್ನು ನೀವೂ ಮಾಡುವಿರಿ . ಆದರೆ ಅವರ ಆತ್ಮವನ್ನು ಕಾಪಾಡಲಾರಿರಿ . ಅವರ ಜೀವವೂ ಆಗಲೇ ನಾಳಿನ ಮನೆಯಲ್ಲಿ ನೆಲೆಸಿರುವುದು, ನೀವು ಮಾತ್ರ ಕನಸು ಮನಸ್ಸಿನಲ್ಲಿಯೂ ಅದನ್ನು ಪ್ರವೇಶಿಸಲಾರಿರಿ. ಅವರಂತೆ ಇರಲು ನೀವೂ ಪ್ರಯತ್ನಿಸಬಹುದು. ಆದರೆ ಅವರು ನಿಮ್ಮನ್ನು ಮೆಚ್ಚಲೆಂದು ಪ್ರಯತ್ನಿಸದಿರಿ. ಕಾರಣ ಜೀವನವು ಸತತವಾಗಿ ಚಲಿಸುತ್ತದೆ. ನಿನ್ನೆಯಲ್ಲಿಯೇ ನಿಂತಿರಲಾರದು. ಅದು ಹಿಂದು ಹಿಂದಕ್ಕೆ ಹೋಗಲಾರದು”. ಈ ರೀತಿಯಾಗಿ ಪೋಷಕರಿಗೆ ಕವಿ ಖಲೀಲ್ ಗಿಬ್ರಾನ್ ಹೇಳಿದ್ದಾನೆ ಹಾಗಾಗಿ ಮಕ್ಕಳನ್ನು ಉತ್ತಮ ಪ್ರಜೆಯಾಗಿ ನಮ್ಮ ದೇಶದ ಭವಿಷ್ಯತ್ತಿನ ಶಿಲ್ಪಿಯಾಗಿ ವಿದ್ಯಾರ್ಥಿಗಳನ್ನು ರೂಪಿಸಬೇಕಾದ ಕರ್ತವ್ಯ ಪ್ರತಿಯೊಬ್ಬ ಶಿಕ್ಷಕನದಾಗಿರುತ್ತದೆ. ಇಲ್ಲವಾದರೆ “ಯಥಾ ಗುರು, ತಥಾ ಶಿಷ್ಯ” ಎಂಬಂತೆ ಆಗುತ್ತದೆ.
ಅಂದಿನ ಶಿಕ್ಷಕ ಮತ್ತು ವಿದ್ಯಾರ್ಥಿಗಳು ಇಂದು ಇಲ್ಲವಲ್ಲ ಎಂಬುದೇ ನನ್ನ ಅಳಲು
ಶಿಕ್ಷಕ ಅಂದರೆ
ಶಿ - ಶಿವ ಸ್ವರೂಪಿಯಾಗಿ (ಶಿಕ್ಷಿಸಿ)
ಕ್ಷ - ಕ್ಷ ಕೀರಣ ಬೀರುವಂತಹ (ಕ್ಷಮಿಸಿ)
ಕ – ಕರ್ಮವೆಸಗತಕ್ಕವ (ಕಲಿಸುವವ)
ಇಂತಹ ಅರ್ಥವನ್ನು ನೀಡುವ ಶಿಕ್ಷಕ ಎನಿಸಿಕೊಳ್ಳುವವನಿಗೆ ಇಂದಿನ ಜಗತ್ತಿನಲ್ಲಿ ಬೆಲೆ ಇಲ್ಲದಿರುವುದು ನಿಜಕ್ಕೂ ವಿಷಾದನೀಯ.
ಅಂದಿನ ಕಾಲದಲ್ಲಿನ ಗುರುವಿಗೆ ನೀಡುತ್ತದ್ದ ಗೌರವ ಇಂದು ಕಣ್ಮರೆಯಾಗುತ್ತಿದೆ ಏಕಲವ್ಯ ತಮ್ಮ ಗುರುಗಳಾದ ದ್ರೋಣಾಚಾರ್ಯರು ಕೇಳಿದ ಗುರುದಕ್ಷಿಣೆಯನ್ನು ಒಂದು ನಿಮಿಷವು ಯೋಚಿಸದೇ ತನ್ನ ಹೆಬ್ಬೆಟ್ಟನ್ನೇ ಕತ್ತರಿಸಿ ಕೊಟ್ಟ ಇಂದಿನ ವಿದ್ಯಾರ್ಥಿಗಳು ಗುರುದಕ್ಷಿಣೆ ಕೊಡುವುದಿರಲ್ಲಿ ಗುರುಗಳಿಗೆ ಗೌರವವನ್ನು ಕೂಡ ಕೊಡುವುದಿಲ್ಲ. ಶಿಕ್ಷಕನು ಸೂಕ್ತ ಪ್ರತಿಭೆಗಳನ್ನು ಹೊರ ತರುವುದು ಶಿಕ್ಷಕನ ಕೆಲಸವಾಗಿರುತ್ತದೆ.
ವಿದ್ಯಾರ್ಥಿಗಳ ಜೀವನವನ್ನು ರೂಪಿಸುವ ಶಿಕ್ಷಕನಿಗೆ ವಿದ್ಯಾರ್ಥಿಗಳು ರುಣಿಯಾಗಿರಬೇಕು ಎಂಬುದು ನನ್ನ ಹಂಬಲ.
ಅಂದು ಇಂದು
ಗುರುವೇನಮಃ **** ಗುರುವು ಏನು ಮಹಾ
ಈ ರೀತಿಯಾಗಿ ನಮ್ಮ ಜಗತ್ತಿನ ವಿದ್ಯಾರ್ಥಿಗಳು ಬದಲಾಗುತ್ತೀದ್ದಾರೆ.
****************************
ಇನ್ನು ವಿದ್ಯಾರ್ಥಿಗಳ ಜೀವನದಲ್ಲೂ ಕೆಲವು ಶಿಕ್ಷಕರು ಆಟ ಆಡುವುದುಂಟು, ಕೆಲವು ಶಿಕ್ಷಕರು ಶಾಲೆಯ ವಿರಾಮದ ವೇಳೆಯಲ್ಲಿ ದೂಮಪಾನ ಸೇವನೆ (smoke) ಮಾಡುವುದನ್ನು ನೋಡಿದರೆ ಲೋ ಮಗ ಗಣಿತ ಮೇಷ್ಟ್ರು ಸಿಗರೇಟ್ ಹೊಡಿತ್ತಾ ಇದ್ದರೂ ಕಂಡಲಾ ನಾವು ಒಂದು ಸಲ ಹೊಡೆದು ನೋಡಬೇಕು ಕಣಲಾ ಅಂದುಕೊಂಡು ಒಂದು ದಿನ ಗುಂಪಾಗಿ ಸೇರಿ ಸಿಗರೇಟ್ ಹೊಡೆದೇ ಬಿಡುತ್ತಾರೆ ಇದೇ ಅಭ್ಯಾಸವನ್ನು ಬೆಳೆಸಿಕೊಳ್ಳುವುದುಂಟು . ಇತ್ತಿಚಿನ ದಿನಗಳಲ್ಲಿ ಶಿಕ್ಷಕನಿಂದಲೇ ವಿದ್ಯಾರ್ಥಿಯ ಅತ್ಯಚಾರ ಈ ರೀತಿಯ ನ್ಯೂಸ್ ಗಳನ್ನು ಕೂಡ ನಾನು ನೋಡಿರುವೆ ಹಾಗೂ ಕೇಳಿರುವೆ .
ಶಿಕ್ಷಕರು ಭೋದನಾ ವೃತ್ತಿಗೆ ಬಂದ ಮೇಲೆ ತನ್ನಲ್ಲಿರುವ ದುರ್ಮಾರ್ಗಗಳನ್ನು ಹೋಗಲಾಡಿಸಿ ಒಳ್ಳೇಯ ಗುಣಗಳನ್ನು ಬೆಳೆಸಿಕೊಂಡು ಆದರ್ಶ ವ್ಯಾಕ್ತಿಯಾಗಿರಬೇಕು.
“ಕಲಿಕೆಯ ಕೇಂದ್ರ ಬಿಂದು ಮಕ್ಕಳಾಗಿರುವುದರಿಂದ ಪರ್ಶಿಯಾ ದೇಶದ ಯೋಗಿ ಹಾಗೂ ಕವಿ ಖಲೀಲ್ ಗಿಬ್ರಾನ್ ಎಂಬಾತನು ಈ ರೀತಿ ಹೇಳಿದ್ದಾನೆ ಮಕ್ಕಳು ನಿಮಗೊಬ್ಬರಿಗೆ ಸೇರಿದ ವ್ಯಕ್ತಿಗಳಲ್ಲ . ಅವರು ಭಾವಿ ಜೀವನದಲ್ಲಿ ಆಶಾಪೂರಿತವಾದ ಗಂಡು ಹೆಣ್ಣುಗಳು ನಿಮ್ಮ ಮೂಲಕ ಅವರು ಪ್ರಪಂಚಕ್ಕೆ ಬಂದರೂ ನಿಮ್ಮಿಂದಲೇ ಬಂದವರೆನ್ನಲಾಗದು. ಪ್ರೀತಿಯನ್ನು ನೀವೂ ನೀಡಬದುದು , ಆದರೆ ನಿಮ್ಮ ಭಾವನೆಗಳನ್ನು ನೀಡಲಾಗುವುದಿಲ್ಲ. ಕಾರಣ ಅವರದೇ ಆದ ಭಾವನೆಗಳು ಅವರಿಗೆ ಇದ್ದೇ ಇರುತ್ತವೆ . ದೇಹ ಪೋಷಣೆಯ ರಕ್ಷಣೆಯನ್ನು ನೀವೂ ಮಾಡುವಿರಿ . ಆದರೆ ಅವರ ಆತ್ಮವನ್ನು ಕಾಪಾಡಲಾರಿರಿ . ಅವರ ಜೀವವೂ ಆಗಲೇ ನಾಳಿನ ಮನೆಯಲ್ಲಿ ನೆಲೆಸಿರುವುದು, ನೀವು ಮಾತ್ರ ಕನಸು ಮನಸ್ಸಿನಲ್ಲಿಯೂ ಅದನ್ನು ಪ್ರವೇಶಿಸಲಾರಿರಿ. ಅವರಂತೆ ಇರಲು ನೀವೂ ಪ್ರಯತ್ನಿಸಬಹುದು. ಆದರೆ ಅವರು ನಿಮ್ಮನ್ನು ಮೆಚ್ಚಲೆಂದು ಪ್ರಯತ್ನಿಸದಿರಿ. ಕಾರಣ ಜೀವನವು ಸತತವಾಗಿ ಚಲಿಸುತ್ತದೆ. ನಿನ್ನೆಯಲ್ಲಿಯೇ ನಿಂತಿರಲಾರದು. ಅದು ಹಿಂದು ಹಿಂದಕ್ಕೆ ಹೋಗಲಾರದು”. ಈ ರೀತಿಯಾಗಿ ಪೋಷಕರಿಗೆ ಕವಿ ಖಲೀಲ್ ಗಿಬ್ರಾನ್ ಹೇಳಿದ್ದಾನೆ ಹಾಗಾಗಿ ಮಕ್ಕಳನ್ನು ಉತ್ತಮ ಪ್ರಜೆಯಾಗಿ ನಮ್ಮ ದೇಶದ ಭವಿಷ್ಯತ್ತಿನ ಶಿಲ್ಪಿಯಾಗಿ ವಿದ್ಯಾರ್ಥಿಗಳನ್ನು ರೂಪಿಸಬೇಕಾದ ಕರ್ತವ್ಯ ಪ್ರತಿಯೊಬ್ಬ ಶಿಕ್ಷಕನದಾಗಿರುತ್ತದೆ. ಇಲ್ಲವಾದರೆ “ಯಥಾ ಗುರು, ತಥಾ ಶಿಷ್ಯ” ಎಂಬಂತೆ ಆಗುತ್ತದೆ.
ಅಂದಿನ ಶಿಕ್ಷಕ ಮತ್ತು ವಿದ್ಯಾರ್ಥಿಗಳು ಇಂದು ಇಲ್ಲವಲ್ಲ ಎಂಬುದೇ ನನ್ನ ಅಳಲು
ಮತ್ತೊಮ್ಮೆ: ಶಾಲೆಯ ವಿದ್ಯಾರ್ಥಿ ಪೋಷಕ-ಶಿಕ್ಷಕ ಚರ್ಚೆ
Ists ಶಾಲೆಯ ಆರಂಭಿಸಲು… ಮಾಧ್ಯಮವು ಮೇಲೆ ಹಿಗ್ಗು “ಅಗ್ಗದ” ವಸ್ತು. Doctored ಮತ್ತು ಸುಧಾರಣೆ ನಿವಾರಿಸಲಾಗಿದೆ ಮಾಹಿತಿ…
ಒಮ್ಮೆ ನಾನು ಯಾವುದೇ ಸುದ್ದಿಪತ್ರಿಕೆ ಚಂದಾದಾರಿಕೆ (ಕನಿಷ್ಠ ವಾರದಲ್ಲಿ)… ಇದು ಯಾವಾಗಲೂ Zeiterl ತೆಗೆದುಕೊಳ್ಳುತ್ತದೆ, ನಾನು ಮುಖದ ಪಡೆಯಲು ರವರೆಗೆ. ಶಾಲೆಯ ಬಗ್ಗೆ ಸ್ಪಷ್ಟವಾಗಿ, ಇರಿ ನನಗೆ ವಿಷಯಗಳು ತಕ್ಷಣವೇ ಸ್ಪಷ್ಟವಾಗಿ! ನಾನು ಈಗ ಮತ್ತೆ ಏನು ಸಿಟ್ಟುಬರಿಸು ಮಾಡಬಹುದು? ಯಾರು ಉತ್ತಮ ಮತ್ತೆ ಎಲ್ಲವೂ ತಿಳಿದಿದೆ? ಇದು ಏನು ಹೇಳುತ್ತದೆ, ನಾನು ನನ್ನ ಬ್ಲಾಗ್ಗೆ ನಿರ್ಲಕ್ಷಿಸಿ ಯಾವ?
ಸಣ್ಣ ಪತ್ರಿಕೆ, ಸೋಮವಾರದಿಂದ, ಉತ್ತಮ ತಂದ ಭೇಟಿ… ಲಾರ್ಡ್ Glattauer. ಅವರ ರ ಶಿಕ್ಷಕ ಮತ್ತು ಬರಹಗಾರ. ತಮ್ಮ ಮಕ್ಕಳ ಕಾರಣದಿಂದಾಗಿ ಚೆನ್ನಾಗಿ ಪೋಷಕ ಪಾತ್ರವನ್ನು ಪರಿಚಯವಾಯಿತು. ನನಗನ್ನಿಸುವ, ಆನ್ಲೈನ್ ಮುದ್ರಿತ ಪತ್ರಿಕೆಯ ಸಂದರ್ಶನದಲ್ಲಿ ಅದೇ ಉದ್ದ ಅಲ್ಲ… ಯಾವುದೇ… ಆರಂಭದಲ್ಲಿ ಹೆಚ್ಚಾಗಿ blah, ಸಾಮಾನ್ಯ ಸಂಗತಿಗಳನ್ನು. ಆದರೆ ಒಂದು ಆಸಕ್ತಿದಾಯಕ ಪಂಚಮ ಭೂತ ಜೊತೆ: ಪಾಲಕರು ಕ್ರಿಯಾತ್ಮಕವಾಗಿ ಮತ್ತು ಶಿಕ್ಷಕರು 'ಕೈ ಬಲಪಡಿಸಲು ಇವೆ! ^ ^ ಸಂಪೂರ್ಣ ಹೊಸ ವಿಧಾನವು ರೀತಿಯಲ್ಲಿ. ಮತ್ತು ಹೌದು, ನಾನು ಒಪ್ಪುತ್ತೇನೆ. ಹೆತ್ತವರ ಮನಸ್ಸು ಬದಲಾಯಿಸಲು ಅಗತ್ಯವಿದೆ, ಶಿಕ್ಷಕರು ಬದಲಿಸಬಹುದು ಆದ್ದರಿಂದ. ಮತ್ತು, ನನಗೆ ಗೊತ್ತು, ಸಾಕಷ್ಟು ಶಿಕ್ಷಕರು ಇವೆ, ಇದು ಮತ್ತೆ ಹೊಂದಿಕೆಯಾಗುವುದಿಲ್ಲ.
ಅಂತಿಮವಾಗಿ, ಅವನು ಯೋಚಿಸುತ್ತಾನೆ, ಅವರು ಪೋಷಕರು Tafelklassern ಯಾವ ಪ್ರಶ್ನೆಗೆ 1. ಸ್ಕೂಲ್ mitgibt:
ಸಂಗಾತಿ ಕಣ್ಣು ಮತ್ತು ಧನಾತ್ಮಕ, ಆದ್ದರಿಂದ ಶಿಕ್ಷಕ, ತಲುಪಲು. ಮತ್ತು ಅದೇ ಸಮಯದಲ್ಲಿ ಒತ್ತಡ ವಿದೇಶ ತೆಗೆದುಕೊಳ್ಳುವ. ನಾವು ಹೆಚ್ಚು ಪ್ರಶಾಂತತೆ ಅಗತ್ಯವಿದೆ, ಇದು ಎಲ್ಲಾ ಅಲ್ಲ “ಹನ್ನೊಂದು ಐವತ್ತೈದು”. ನಾವು ಹೆಚ್ಚಿನ ಶಕ್ತಿಯನ್ನು ಮಗುವೊಂದನ್ನು ಪ್ರೋತ್ಸಾಹಿಸಲು ಮತ್ತು ಜನರು ಆ ಹೆತ್ತವರು ಕೇವಲ ನಮಗೆ ಮಾಡಲು ಆ.
ನಾನು ಸಂಪೂರ್ಣವಾಗಿ ಒಪ್ಪುತ್ತೇನೆ ರಿಂದ. ಒತ್ತಡ ನಾವು ಸಾಕಷ್ಟು ಹೊಂದಿವೆ, ಇದು ಜೋರು ಸಾಧ್ಯವಾಗದ “ಉತ್ತಮ” ಒದಗಿಸಲು – ಎಲ್ಲಾ ಶ್ರಮಿಸಬೇಕು ಬೇಕು ಸಹ. ಹಾಗೆಯೇ, ನಾವು ಮಕ್ಕಳಿಗೆ ಉತ್ತಮ ಶಿಕ್ಷಕರು ಬಯಸುವ!
ಹೊಂದಿಕೆ – ಪೋಷಕರ ಕರ್ತವ್ಯಗಳನ್ನು ಗೆ – ನಾನು ಸ್ವಲ್ಪ ವೃತ್ತಪತ್ರಿಕೆಯ ಇನ್ನೊಂದು ಚಿತ್ರವನ್ನು ಪ್ರಸ್ತುತ ಬಯಸುತ್ತೀರಿ:
ನಾನು ಇದು ಅಸಂಬದ್ಧ ಭಾವಿಸುತ್ತೇನೆ, ಶಾಲೆಯ ನಂತರ ಆರಂಭಗೊಂಡಾಗ. ನನ್ನ ದೃಷ್ಟಿಯಲ್ಲಿ ಇದು ಸ್ಪಷ್ಟವಾಗಿ ಪ್ರಸಿದ್ಧ ಆಗಿದೆ, ಮಕ್ಕಳಿಗೆ ತುಂಬಾ ಕಡಿಮೆ ನಿದ್ದೆ ಎಂದು. ಅವರು ಕೇವಲ ಕೇವಲ ನಂತರ ಎದ್ದೇಳಲು ಇರಬೇಕು, ಅವರು ಕೇವಲ – ಆದಷ್ಟು ಬೇಗ ಅಥವಾ ನಂತರ – ಕೇವಲ ನಂತರ ನಿದ್ರೆ ಹೋಗಿ ಮತ್ತು ನಾವು ಅದೇ ಅಸಂಬದ್ಧ beinander ಹೊಂದಿವೆ. ಇದು ಮೂಲ ಬಿಟ್ಟಿದ್ದು, ಸಮಯಕ್ಕೆ ಹಾಸಿಗೆ ತಮ್ಮ ಮಕ್ಕಳು ತರಲು. ಏಕೆಂದರೆ… ಇದು ಇಲ್ಲಿ ಬರೆಯಲಾಗಿದೆ ಮಾಹಿತಿ:ಮಕ್ಕಳಿಗೆ ಅಗತ್ಯ 10 ನಿದ್ರೆ ಅವರ್ಸ್!!! ಹಾಗೆಯೇ bitte “ಮತ್ತೆ ಲೆಕ್ಕ” ಮತ್ತು ಮಕ್ಕಳ ಜತೆಗೇ ಈಗಾಗಲೇ ಅರ್ಜಿ 20:00 ಹಾಸಿಗೆ ಕಳುಹಿಸಿ, ಇದು ತನ್ನ ಅನುಕೂಲಕ್ಕೆ ಮಾತ್ರ. ಧನ್ಯವಾದಗಳು.
ಶಿಕ್ಷಕ-ವಿದ್ಯಾರ್ಥಿ ನಡುವಿನ ಅಂತರ ಕಡಿಮೆಯಾಗಲಿ
Published: 09 Feb 2014 02:00 AM IST
No comments:
Post a Comment