ಅಪರೂಪದ ಬಿಳೆಯಾನೆ ಸೆರೆ
(1 Mar) ಯಾಂಗೂನ್: ರಾಷ್ಟ್ರದ ಪಶ್ಚಿಮ ಅಯೆಯಾರ್ವಾಡ್ಡಿ ಪ್ರದೇಶದಲ್ಲಿ ಕಾಡಿನಲ್ಲಿ ಅಪರೂಪದ ಬಿಳಿಯಾನೆಯೊಂದನ್ನು ಮ್ಯಾನ್ಮಾರ್ ಅರಣ್ಯ ಇಲಾಖೆ ಸೆರೆ ಹಿಡಿದಿದೆ ಎಂದು ಅಧಿಕಾರಿಯೊಬ್ಬರು ಈದಿನ ತಿಳಿಸಿದರು.
* ಏಳು ವರ್ಷದ ಹೆಣ್ಣಾನೆಯನ್ನು ಪಥೀನ್ ಪಟ್ಟಣದ ಬಳಿಯ ಮೀಸಲು ಅರಣ್ಯದಲ್ಲಿ ಕಂಡುಬಂದ ಆರು ವಾರಗಳ ಬಳಿಕ ಶುಕ್ರವಾರ ಸೆರೆ ಹಿಡಿಯಲಾಗಿದೆ ಎಂದು ಅರಣ್ಯಾಧಿಕಾರಿ ಟುನ್ಟುನ್ ಓ ಹೇಳಿದರು.
* ಇದು ಸರ್ಕಾರದ ವಶದಲ್ಲಿ ಇರುವ 9ನೇ ಬಿಳಿಯಾನೆಯಾಗಿದೆ. 'ನಾವು ತುಂಬಾ ಎಚ್ಚರಿಕೆಯಿಂದ ಇರಬೇಕಾಗಿತ್ತು. 1.9 ಮೀಟರ್ ಎತ್ತರದ ಆನೆ ವ್ಯಗ್ರವಾಗಿತ್ತು. ಅದನ್ನು ಹಿಡಿಯುವಾಗ ಅರಣ್ಯ ಇಲಾಖೆಯ ಸಿಬ್ಬಂದಿ ಗಾಯಗೊಳ್ಳದಂತೆ ಎಚ್ಚರಿಕೆ ವಹಿಸಬೇಕಾಗಿತ್ತು' ಎಂದು ಟುನ್ ಟುನ್ಓ ನುಡಿದರು.
* ಅಪರೂಪದ ಬಿಳಿಯಾನೆಗಳು ಮ್ಯಾನ್ಮಾರ್, ಥಾಯ್ಲೆಂಡ್, ಲಾವೋಸ್ ಮತ್ತಿತರ ಏಷ್ಯಾದ ರಾಷ್ಟ್ರಗಳಲ್ಲಿ ಆಗಾಗ ಕಾಣ ಸಿಗುತ್ತವೆ.
ಬೆಳವಣಿಗೆ, ಬೆಲೆ ನಿಯಂತ್ರಣ ಸಾಮಾಜಿಕ ನ್ಯಾಯದ ನಿರೀಕ್ಷ
(28 Feb) - ಡಾ. ಅಬ್ದುಲ್ ಅಜೀಜ್, ಅರ್ಥಶಾಸ್ತ್ರಜ್ಞ ಯಾವುದೇ ಬಜೆಟ್ ಅನ್ನು ನೋಡಬೇಕಾದರೂ ನಾವು ಮೂರು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.
1 ಬೆಳವಣಿಗೆ,
2 ಬೆಲೆ ನಿಯಂತ್ರಣ ಮತ್ತು
3 ಸಾಮಾಜಿಕ ನ್ಯಾಯ. ಈ ಮೂರು ಅಂಶಗಳ ಮೇಲೆಯೇ ಯಾವುದೇ ಬಜೆಟ್ ಬಗ್ಗೆ ನಿರೀಕ್ಷೆಯನ್ನಿಟ್ಟುಕೊಳ್ಳ ಬೇಕಾಗುತ್ತದೆ. ಒಟ್ಟಾರೆ ಅಭಿವೃದ್ಧಿಯ ದರ ಕಡಿಮೆಯಾಗಿದೆ ಎಂಬ ಮಾತಿಗೆ, ಇದನ್ನು ವೃದ್ಧಿಸಲು ಅನೇಕ ಕ್ರಮಗಳನ್ನು ತೆಗೆದುಕೊಳ್ಳಬಹುದೆಂದು ನಾನು ನಿರೀಕ್ಷೆ ಮಾಡುತ್ತಿದ್ದೇನೆ. ಹಿಂದೆ ನಮ್ಮಲ್ಲಿ ಶೇ.34 ಉಳಿತಾಯ ಇರುತ್ತಿತ್ತು. ಆದರೆ ಈಗ ಕೊಳ್ಳುಬಾಕ ಸಂಸ್ಕೃತಿಯಿಂದಾಗಿ ಉಳಿತಾಯದ ಪ್ರಮಾಣ ಕಡಿಮೆಯಾಗಿದೆ. ಆದ್ದರಿಂದ ಉಳಿತಾಯ ಜಾಸ್ತಿ ಮಾಡಲು ಪ್ರೋತ್ಸಾಹ ನೀಡುವ ಅಗತ್ಯವಿದೆ. ಇದಕ್ಕೆ ತೆರಿಗೆ ವಿನಾಯಿತಿಯ ಮಿತಿಯನ್ನು 2.5 ಲಕ್ಷ ರೂ.ಗಳಿಂದ 3 ಲಕ್ಷ ರೂ.ಗಳಿಗೆ ಹೆಚ್ಚಿಸಿದರೆ ಆಗ ಮಧ್ಯಮ ವರ್ಗದ ಜನ ಖುಷಿ ಪಡುತ್ತಾರೆ. ತೆರಿಗೆ ವಿನಾಯಿತಿಯ ಮಿತಿಯನ್ನು 5 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕೆಂಬ ಬೇಡಿಕೆ ಹಿಂದೆ ಇತ್ತು. ಆದರೆ ಅಷ್ಟು ಮಾಡುವುದು ಸಾಧ್ಯವಿಲ್ಲ, ಅದರ ಬದಲು 80 ಸಿಯಲ್ಲಿ ತೆರಿಗೆ ವಿನಾಯ್ತಿಯನ್ನು 1.5 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗಳಿಗೆ ಹೆಚ್ಚಿಸಿದರೆ ಉಳಿತಾಯದ ದೃಷ್ಟಿಯಿಂದ ಅನುಕೂಲವಾಗುತ್ತದೆ. ಎಷ್ಟೇ ಕಸರತ್ತು ಮಾಡಿದರೂ ಉಳಿತಾಯವನ್ನು ಶೇ.34ಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಇದೆ. ಎಫ್ಡಿಐ, ಎಫ್ಐಐಗಳಲ್ಲಿ
ತುಂಗಭದ್ರೆ ಒಡಲು ಬರಿದು
(25 Feb)
* ಬೇಸಿಗೆ ಮುನ್ನವೇ ನೀರಿಗೆ ಬರ
* ಕುಡಿಯುವ ನೀರಿಗೂ ತತ್ವಾರ ಆತಂಕ
* ಕೊಪ್ಪಳ, ಬಳ್ಳಾರಿ ಸೇರಿ ಹಲವು ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರೆ ನೀರಿನ ಹರಿವು ಬೇಸಿಗೆಗೆ ಮುನ್ನವೇ ಕಡಿಮೆಯಾಗುತ್ತಿದೆ. ಇದು ತೀರ ಪ್ರದೇಶದಲ್ಲಿನ ಕೃಷಿಕ ಹಾಗೂ ಜನರ ಆತಂಕಕ್ಕೆ ಕಾರಣವಾಗಿದೆ.
* ಮುಂಡರಗಿ ತಾಲೂಕಿನ ತಾಲೂಕಿನ ಗಂಗಾಪುರ, ಶೀರನಹಳ್ಳಿ, ಕೊರ್ಲಹಳ್ಳಿ, ಹಮ್ಮಿಗಿ ಬಳಿ ತುಂಗಭದ್ರಾ ನದಿ ಪ್ರತಿವರ್ಷ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ಮೈದುಂಬಿಕೊಂಡು ಹರಿಯುತ್ತಿತ್ತು. ಆದರೆ, ಈಗ ನದಿ ನೀರು ಬರಿದಾಗಿ ತಗ್ಗು ಪ್ರದೇಶಗಳಲ್ಲಿ ಮಾತ್ರ ನೀರು ಕಾಣಿಸುತ್ತಿದೆ. * ಸಿಂಗಟಾಲೂರ ಬ್ಯಾರೇಜ್ ನೀರಿಗೂ ಬರ: ಬೇಸಿಗೆ ಹಂಗಾಮಿನಲ್ಲಿ ಗದಗ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಹಮ್ಮಿಗಿ ಬಳಿ ತುಂಗಭದ್ರಾ ನದಿಗೆ ನಿರ್ವಿುಸಿರುವ ಸಿಂಗಟಾಲೂರ ಏತ ನೀರಾವರಿ ಬ್ಯಾರೇಜ್ನಲ್ಲಿನ ನೀರು ಬಳಸಲಾಗುತ್ತಿತ್ತು.
* ಕಳೆದ ವರ್ಷ 0.9 ಟಿಎಂಸಿ ನೀರು ಬಳಕೆಗೆ ಲಭ್ಯವಾಗಿತ್ತು. ಆದರೆ ಈ ವರ್ಷ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ 2 ನೇ ಹಂತದ ಕುಡಿಯುವ ನೀರು ಯೋಜನೆಯ ಜಾಕ್ವೆಲ್ ನಿರ್ವಣ ಕಾಮಗಾರಿ ನಡೆದಿದ್ದರಿಂದ ಸಿಂಗಟಾಲೂರಿನಲ್ಲಿ ಕೇವಲ 0.56 ಟಿಎಂಸಿ ನೀರು ಸಂಗ್ರಹ ಮಾತ್ರ ಇದೆ. ಹೀಗಾಗಿ ಗದಗ ಜಿಲ್ಲೆಯ ಜನತೆ ಕುಡಿಯುವ ನೀರಿಗಾಗಿ ಭದ್ರಾ ನೀರು ಆಶ್ರಯಿಸಬೇಕಾದ ಅನಿವಾರ್ಯತೆ ಇದೆ.
No comments:
Post a Comment