ಬಜೆಟ್ -2014-15
* ಭಾರತವನ್ನು ನಗದು ರಹಿತ ರಾಷ್ಟ್ರವನ್ನಾಗಿಸುವ ಗುರಿ-ಜೇಟ್ಲಿ
* ಕೃಷಿ ಇಳುವರಿ, ಮೂಲ ಸೌಕರ್ಯ ವಲಯದಲ್ಲಿ ಹೂಡಿಕೆ ಹೆಚ್ಚಿಸುವುದು ಪ್ರಮುಖ ಸವಾಲುಗಳು -ಜೇಟ್ಲಿ
* ಜನ ಧನ ಯೋಜನೆ,ಕಲ್ಲಿದ್ದಲು ನಿಕ್ಷೇಪ ಹರಾಜು,ಸ್ವಚ್ಛ ಭಾರತ- ಸರ್ಕಾರದ ಸಾಧನೆಗಳು -ಜೇಟ್ಲಿ
* ಕಪ್ಪುಹಣ ತಡೆಗೆ ನಗದು ವಹಿವಾಟು ನಿಯಂತ್ರಿಸಲು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಬಳಕೆಗೆ ಉತ್ತೇಜನ
* ಸ್ವಚ್ಛ ಭಾರತ, ಗಂಗಾ ಶುದ್ಧೀಕರಣ ಯೋಜನೆ ಮೇಲಿನ ಹೂಡಿಕೆಗೆ ಶೇ 100 ರಷ್ಟಿ ತೆರಿಗೆ ವಿನಾಯ್ತಿ
* 2014–15ರಲ್ಲಿ ಚಾಲ್ತಿ ಖಾತೆ ಕೊರತೆ ಜಿಡಿಪಿಯ ಶೇ 1.3ರಷ್ಟಿತ್ತು
* 2015–16ರಲ್ಲಿ ಶೇ 2.8ರಷ್ಟು ಆದಾಯ ಕೊರತೆ ನಿರೀಕ್ಷೆ
* ಸೇವಾ ತೆರಿಗೆ ಶೇಕಡ 12.36ರಿಂದ ಶೇ 14ಕ್ಕೆ ಏರಿಕೆ
* ನೇರ ತೆರಿಗೆ ನೀತಿಗೆ ಸಂಹಿತೆ (ಡಿಟಿಸಿ) ಕೈಬಿಟ್ಟ ಸರ್ಕಾರ
* ವೈಯಕ್ತಿಕ ಆದಾಯ ತೆರಿಗೆ ವಿನಾಯ್ತಿಯಲ್ಲಿ ಬದಲಾವಣೆ ಇಲ್ಲ
ಈ ಬಾರಿಯೂ ಬಜೆಟ್ ಮಂಡನೆ ವೇಳೆ ಕುಳಿತ ಜೇಟ್ಲಿ. ಕಳೆದ ವರ್ಷವೂ ಬಜೆಟ್ ಮಂಡನೆ ವೇಳೆ ಜೇಟ್ಲಿ ಅವರು ಬೆನ್ನು ನೋವಿನ ಸಮಸ್ಯೆಯಿಂದ ವಿಶ್ರಾಂತಿ ಪಡೆದಿದ್ದರು
* ಹಲವು ಉತ್ಪನ್ನಗಳ ಮೇಲಿನ ಕೇಂದ್ರೀಯ ಮೌಲ್ಯವರ್ಧಿತ ತೆರಿಗೆ ಸಂಪೂರ್ಣ ವಿನಾಯ್ತಿ
* ಆಸ್ತಿ ತೆರಿಗೆಗೆ ಕೋಕ್. 1 ಕೋಟಿ ಹಾಗೂ ಮೇಲ್ಪಟ್ಟ ಆದಾಯ ಉಳ್ಳವರ ಮೇಲೆ ಶೇಕಡ 2 ರಷ್ಟು ಹೆಚ್ಚವರಿ ತೆರಿಗೆ. ಇದರಿಂದ 9 ಸಾವಿರ ಕೋಟಿ ಆದಾಯ ನಿರೀಕ್ಷೆ
* ಕರ್ನಾಟಕದಲ್ಲಿ ಐಐಟಿ ಸ್ಥಾಪನೆ
* ತೆರಿಗೆ ತಪ್ಪಿಸುವ ಪ್ರವೃತ್ತಿಯನ್ನು ತಡೆಯುವ ಕಾಯ್ದೆ (ಜಿಎಎಆರ್) ಅನುಷ್ಠಾನ ಎರಡು ವರ್ಷಗಳ ಕಾಲ ಮುಂದೂಡಿಕೆ
* ಮುಂದಿನ ನಾಲ್ಕು ವರ್ಷಗಳ ಅವಧಿಗೆ ಕಾರ್ಪೊರೇಟ್ ತೆರಿಗೆ ಶೇಕಡ 30ರಿಂದ 25ಕ್ಕೆ ಇಳಿಕೆ
* ಸೇವಾ ತೆರಿಗೆ ಶೇ 12.36 ರಿಂದ ಶೇ 1
* ದೇಶದಲ್ಲಿ ಕಪ್ಪುಹಣ ನಿಯಂತ್ರಣಕ್ಕೆ ಶೀಘ್ರವೇ ಬೇನಾಮಿ ವಹಿವಾಟು ತಡೆ ಕಾನೂನು
* ಕಾರ್ಪೊರೇಟ್ ತೆರಿಗೆ ಶೇ 25ಕ್ಕೆ ಇಳಿಕೆ ಮುಂದೆ ಓದಿ
* ಗಂಗಾನದಿ ಶುದ್ಧೀಕರಣಕ್ಕೆ ನೀಡುವ ನೆರವಿಗೆ ಶೇಕಡ 100 ರಷ್ಟು ತೆರಿಗೆ ವಿನಾಯ್ತಿ
* 1 ಲಕ್ಷ ರೂಪಾಯಿಗೂ ಮೇಲ್ಪಟ್ಟ ಆಸ್ತಿ ಖರೀದಿಗೆ ಪಾನ್ ಕಾರ್ಡ್ ಕಡ್ಡಾಯ
* 20 ಸಾವಿರ ರೂಪಾಯಿಗೂ ಹೆಚ್ಚಿನ ಸ್ಥಿರಾಸ್ತಿ ಖರೀದಿಯ ನಗದು ವ್ಯವಹಾರಕ್ಕೆ ನಿರ್ಬಂಧ
* ಯೋಜನಾ ವೆಚ್ಚ 17,77,477 ಕೋಟಿ ರೂಪಾಯಿ
* ಕಾರ್ಪೋರೇಟ್ ತೆರಿಗೆ ಕಡಿತ: ಸೂಚ್ಯಂಕ 312 ಅಂಶ ಏರಿಕೆ
* ಕಪ್ಪುಹಣ ಹೊಂದಿರುವವರಿಗೆ ಶೇಕಡ 300 ರಷ್ಟು ತೆರಿಗೆ ವಿಧಿಸಲು ಪ್ರಸ್ತಾಪ
* ಕಾರ್ಪೊರೇಟ್ ತೆರಿಗೆ ಇಳಿಕೆ ಪ್ರಸ್ತಾವದ ಬೆನ್ನಲ್ಲೆ ಮತ್ತೆ ಪುಟಿದೆದ್ದ ಷೇರುಪೇಟೆ
* ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಮುಖ್ಯಸ್ಥರ ನೇಮಕಕ್ಕಾಗಿ ಸ್ವಾಯತ್ತ ಬ್ಯಾಂಕ್ ಮಂಡಳಿ ಕೇಂದ್ರ ಸ್ಥಾಪನೆ
* ವೈಯಕ್ತಿಕ ಆದಾಯ ತೆರಿಗೆ ವಿನಾಯತಿಯಲ್ಲಿ ಯಥಾಸ್ಥಿತಿ
* 22 ಸರಕುಗಳ ಮೇಲಿನ ಸೀಮಾ ಸುಂಕ ಇಳಿಕೆ
* ಸ್ಟಾರ್ಟ್ ಅಪ್ ಕಂಪೆನಿಗಳು, ಉದ್ಯಮಿಗಳಿಗಾಗಿ 1000 ಕೋಟಿ ರೂಪಾಯಿ ನಿಧಿ
* ಪರ್ಯಾಯ ಹೂಡಿಕೆಗೆ ನಿಧಿಯಲ್ಲಿ ವಿದೇಶ ನೇರ ಬಂಡವಾಳ ಹೂಡಿಕೆ ಅವಕಾಶಕ್ಕೆ ಪ್ರಸ್ತಾವ
* ಮುಂದಿನ ಹಣಕಾಸು ವರ್ಷದಲ್ಲಿ ರಕ್ಷಣೆಗಾಗಿ 2,46,727 ಕೋಟಿ ರೂಪಾಯಿ
* ಆಂಧ್ರಪ್ರದೇಶ, ತೆಲಂಗಾಣಕ್ಕೆ ನೀಡಿರುವ ಭರವಸೆ ಈಡೇರಿಕೆಗೆ ಬದ್ಧ
* ಆಂಧ್ರ ಪ್ರದೇಶದಂತೆ ಬಿಹಾರ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಿಗೆ ವಿಶೇಷ ಆರ್ಥಿಕ ನೆರವು
* ಕಪ್ಪುಹಣ ವಾಪಸ್ ತರಲು ಹೊಸ ಕಾನೂನು
* ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ತಮಿಳುನಾಡು ಹಾಗೂ ಅಸ್ಸಾಂನಲ್ಲಿ ಏಮ್ಸ್ ಸ್ಥಾಪನೆ
* 150 ಕೋಟಿ ರೂಪಾಯಿ ಆರಂಭಿಕ ಮೊತ್ತದಲ್ಲಿ ವಿಶ್ವ ದರ್ಜೆ ಐಟಿ ವಲಯ ಸ್ಥಾಪನೆ
* ಸರ್ಕಾರಿ ವಲಯದ ಬಂದರುಗಳ ಕಾರ್ಪೊರೇಟ್ ವ್ಯಾಪ್ತಿಗೆ ತರಲು ಚಿಂತನೆ
* ಕಾರ್ಪೊರೇಟ್ ತೆರಿಗೆ ಶೇಕಡ 30ರಿಂದ ಶೇ 25ಕ್ಕೆ ಇಳಿಕೆ
* ಆಗಮನದ ಬಳಿಕ ವೀಸಾ ಯೋಜನೆಯನ್ನು ಪ್ರಸಕ್ತ 43 ರಾಷ್ಟ್ರಗಳಿಂದ 150 ರಾಷ್ಟ್ರಗಳಿಗೆ ವಿಸ್ತರಣೆ
* ಜಿಎಸ್ಟಿ ಮೂಲಕ ರೂ 14.5 ಲಕ್ಷ ಕೋಟಿ ನಿರೀಕ್ಷೆ
* ಯೋಜನಾ ವೆಚ್ಚ 4.56 ಲಕ್ಷ ಕೋಟಿ
* ಯೋಜನೇತರ ವೆಚ್ಚ 13.12 ಲಕ್ಷ ಕೋಟಿ
* ಕಳೆದ 9 ತಿಂಗಳಲ್ಲಿ ಸ್ಥಿರ ತೆರಿಗೆ ಯೋಜನೆಗೆ ಒತ್ತು ನೀಡಿದ್ದೇವೆ
* ರಕ್ಷಣಾ ಕ್ಷೇತ್ರಕ್ಕೆ ರೂ 2,46,727 ಕೋಟಿ ಬಿಡುಗಡೆ
* ಬಂದರುಗಳು ಆಕರ್ಷಕ ಹೂಡಿಕೆ ತಾಣಗಳಾಗಿವೆ
* ರಾಷ್ಟ್ರೀಯ ಷೇರು ಸೂಚ್ಯಂಕ ‘ನಿಫ್ಟಿ’ ಇಳಿಕೆ
* ಪ್ರಧಾನಿ ನೀರಾವರಿ ಯೋಜನೆಗೆ 3 ಸಾವಿರ ಕೋಟಿ ರೂಪಾಯಿ
* ಸಮಗ್ರ ಮಕ್ಕಳ ರಕ್ಷಣಾ ಯೋಜನೆಗೆ 500 ಕೋಟಿ ರೂಪಾಯಿ
* ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಗೆ 1500 ಕೋಟಿ ರೂಪಾಯಿ
* ಬಂಡವಾಳ ಹರಿವಿನ ಮೇಲೆ ನಿಯಂತ್ರಣಕ್ಕಾಗಿ ‘ಫೆಮಾ’ಗೆ ತಿದ್ದುಪಡಿ
* 2015–16ರಲ್ಲಿ ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರದ 2ನೇ ಘಟಕ ಕಾರ್ಯಾರಂಭ ನಿರೀಕ್ಷೆ
* ಕರ್ನಾಟಕದಲ್ಲಿ ಐಐಟಿ ಸ್ಥಾಪನೆ
* ವಿದ್ಯುತ್ ಚಾಲಿತ ವಾಹನ ತಯಾರಿಕೆ ಉತ್ತೇಜಿಸಲು ರೂ 75 ಕೋಟಿ
* 4 ಸಾವಿರ ಮೆಗಾ ವ್ಯಾಟ್ ಸಾಮರ್ಥ್ಯದ ಐದು ಬೃಹತ್ ವಿದ್ಯುತ್ ಯೋಜನೆಗೆ ಪ್ರಸ್ತಾವ
* ನಿರ್ಭಯ ನಿಧಿಗೆ ಮತ್ತೆ ರೂ 10 ಸಾವಿರ ಕೋಟಿ
* 2015–16ರಲ್ಲಿ ಮಹಿಳೆಯರಿಗಾಗಿ 79,258 ಕೋಟಿ ರೂಪಾಯಿ
* 2015–16ರಲ್ಲಿ ಪರಿಶಿಷ್ಟ ಜಾತಿಗೆ 30,851 ಕೋಟಿ ರೂಪಾಯಿ
* ಶೀಘ್ರವೇ ಪ್ರಧಾನಿ ಸುರಕ್ಷಾ ಯೋಜನೆಯಡಿ ವರ್ಷಕ್ಕೆ 12 ರೂಪಾಯಿ ಕಂತಿನ 2 ಲಕ್ಷ ಮೊತ್ತ ಅಪಘಾತ ವಿಮೆ ಸ್ಥಾಪನೆ
* ದೇಶದಲ್ಲಿ ಸಾಂಸ್ಕೃತಿಕ ಆವಿಷ್ಕಾರವನ್ನು ಪ್ರೋತ್ಸಾಹಿಸಲು ಅಟಲ್ ಆವಿಷ್ಕಾರ ಯೋಜನೆ
* ಪ್ರಧಾನ ಮಂತ್ರಿ ಜೀವನ ಬಿಮಾ ಯೋಜನೆಯಡಿ ಪ್ರತಿ ವರ್ಷ 330 ರೂಪಾಯಿಗಳ ಕಂತಿನ ಅಪಘಾತ ವಿಮೆ
* ಅಲ್ಪಸಂಖ್ಯಾತ ಸಮುದಾಯಗಳ ನಿರುದ್ಯೋಗಿ ಯುವಕ–ಯುವತಿಯರಿಗಾಗಿ ಶಿಕ್ಷಣ ಕಲ್ಯಾಣ ಯೋಜನೆ ‘ನಯಿ ಮಂಜಿಲ್’ ಸ್ಥಾಪನೆ
* ಅಂಚೆ ಕಚೇರಿಗಳಲ್ಲೂ ಬ್ಯಾಂಕಿಂಗ್ ಸೇವೆ
* 9 ಸಾವಿರ ಕೋಟಿ ರೂಪಾಯಿಗಳಲ್ಲಿ ಹಿರಿಯ ನಾಗರಿಕರ ಕಲ್ಯಾಣ ನಿಧಿ ಸ್ಥಾಪನೆಗೆ ಪ್ರಸ್ತಾವ
* 2015–16ರಲ್ಲಿ 8.5 ಲಕ್ಷ ರೂಪಾಯಿ ಕೃಷಿ ಸಾಲದ ಗುರಿ
* 2015–16ರಲ್ಲಿ ಜಿಡಿಪಿ ಶೇ 8ರಿಂದ8.5ಕ್ಕೆ ಹೆಚ್ಚಲಿದ್ದು, ಶೀಘ್ರವೇ ಎರಡಂಕಿ ತಲುಪಲಿದೆ
* ನರೇಗಾ ಯೋಜನೆಗಾಗಿ 34,699 ಕೋಟಿ ರೂಪಾಯಿ ಬಿಡುಗಡೆ
* ರಸ್ತೆ ಮತ್ತು ರೈಲು ಯೋಜನೆಗಳಲ್ಲಿ ಹೂಡಿಕೆ ಉತ್ತೇಜನಕ್ಕೆ ತೆರಿಗೆ ರಹಿತ ಮೂಲಸೌಕರ್ಯ ಬಾಂಡ್ ಗಳ ಬಿಡುಗಡೆ
* ಎಲ್ಲಾ ಭಾರತೀಯರಿಗಾಗಿ ಸಾರ್ವತ್ರಿಕ ಸಾಮಾಜಿಕ ಭದ್ರತಾ ವ್ಯವಸ್ಥೆ ನಿರ್ಮಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸಲಿದೆ
* ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿಗೆ ಪ್ರಸ್ತಾವ
* 11.5 ಕೋಟಿ ಅಡುಗೆ ಅನಿಲ ಗ್ರಾಹಕರಿಗೆ ಸಬ್ಸಿಡಿಯನ್ನು ನೇರವಾಗಿ ನೀಡಲಾಗಿದೆ
* 2016–17ರಲ್ಲಿ ಜಿಡಿಪಿಯ ಶೇ 3.5 ರಷ್ಟು ಹಾಗೂ 2017–18ರಲ್ಲಿ ಶೇ 3 ರಷ್ಟು ವಿತ್ತೀಯ ಕೊರತೆ ನಿರೀಕ್ಷೆ
* 2015–16ರಲ್ಲಿ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಗೆ ರೂ. 25 ಸಾವಿರ ಕೋಟಿ
* 2016ರ ಏಪ್ರಿಲ್ 1ರಿಂದ ಜಿ ಎಸ್ ಟಿ ಜಾರಿ
* ಸಬ್ಸಿಡಿ ಸೋರಿಕೆ ತಡೆಗೆ ಪರಿಣಾಮಕಾರಿ ಕ್ರಮ
* ಮುಂದಿನ ಮೂರು ಹಣಕಾಸು ವರ್ಷಗಳಲ್ಲಿ ಜಿಡಿಪಿ ಸರಾಸರಿ ಶೇ 3.3ರಷ್ಟು ಪ್ರಗತಿ ಕಾಣಲಿದ್ದು ಎರಡಂಕಿ ಪ್ರಗತಿ ದಾಖಲಿಸಲಿದೆ
* ಸಾರ್ವಜನಿಕ ಹೂಡಿಕೆಯು 1.25 ಕೋಟಿಯಷ್ಟಿದ್ದು, ಇದು ಬಜೆಟ್ ಗುರಿ ಮೀರಿದೆ
* ಪ್ರಸಕ್ತ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆ ಅಂತರವನ್ನು ಜಿಡಿಪಿಯ ಶೇ 4.1ರಷ್ಟು ತಗ್ಗಿಸುವ ಗುರಿ ತಲುಪಲು ಸಾಧ್ಯವಾಗಲಿದೆ
* ಮಹಾ ಆರ್ಥಿಕ ಜಿಗಿತಕ್ಕೆ ಭಾರತ ಸಿದ್ಧ: ಜೇಟ್ಲಿ
* 2015–16ನೇ ಸಾಲಿನಲ್ಲಿ ರಾಜ್ಯಗಳಿಗೆ ಕೇಂದ್ರಿಯ ತೆರಿಗೆಗಳಿಂದ 5.24 ಲಕ್ಷ ಕೋಟಿ ಲಭಿಸಲಿದೆ
* 3 ವರ್ಷಗಳ ಬದಲಿಗೆ 2 ವರ್ಷಗಳಲ್ಲಿ ವಿತ್ತೀಯ ಕೊರತೆಯ ಉದ್ದೇಶಿತ ಗುರಿ ಮುಟ್ಟುತ್ತೇವೆ
* ದೇಶವನ್ನು ತಯಾರಿಕಾ ವಲಯವಾಗಿಸುವ ಗುರಿ ಹೊಂದಬೇಕು
* ಹಣಕಾಸು ನೀತಿ ಸಮಿತಿ ರಚನೆ ನಿಟ್ಟಿನಲ್ಲಿ ಈ ವರ್ಷ ಆರ್ ಬಿ ಐ ಕಾಯ್ದೆಗೆ ತಿದ್ದುಪಡಿ
* 2014–15ರಲ್ಲಿ 50 ಲಕ್ಷ ಶೌಚಾಲಯ ನಿರ್ಮಿಸಲಾಗಿದೆ; 6 ಕೋಟಿ ಶೌಚಾಲಯ ನಿರ್ಮಾಣ ಗುರಿಯಲ್ಲಿದ್ದೇವೆ
* 2015–16ನೇ ಸಾಲಿನಲ್ಲಿ ಶೇ 7.4ರಷ್ಟು ಜಿಡಿಪಿ ನಿರೀಕ್ಷೆ
* ಬಜೆಟ್: ಬಿಎಸ್ಇ 250 ಅಂಶ ಏರಿಕೆ
* 2016ರ ವೇಳೆಗೆ ಜಿಎಸ್ಟಿ ಜಾರಿ –ಜೇಟ್ಲಿ
* ಭಾರತ ಆರ್ಥಿಕತೆಯ ವಿಶ್ವಾಸಾರ್ಹತೆಯನ್ನು ಮರು ಸ್ಥಾಪಿಸಲಾಗಿದೆ– ಜೇಟ್ಲಿ
* ಆರ್ಥಿಕ ವಾತಾವರಣ ಹಿಂದಿಗಿಂತಲೂ ಸಕಾರಾತ್ಮಕವಾಗಿದೆ –ಜೇಟ್ಲಿ
* ಬಜೆಟ್ ಮಂಡನೆ ಆರಂಭಿಸಿದ ಅರುಣ್ ಜೇಟ್ಲಿ
‘* ಭಾರತದಲ್ಲಿ ತಯಾರಿಸಿ’ ಕೇಂದ್ರಿತ ಬಜೆಟ್ ‘ಭಾರತ ನಿರ್ಮಿಸಲಿದೆ’ – ಕಿರಣ್ ಬೇಡಿ ಟ್ವೀಟ್
ಬಜೆಟ್: ಯಾವುದು ತುಟ್ಟಿ,
ಯಾವುದು ತುಟ್ಟಿ?
* ಸಿಗರೇಟು ಹಾಗೂ ಇತರ ತಂಬಾಕು ಉತ್ಪನ್ನಗಳು
* ಸಂಪೂರ್ಣ ಸಿದ್ಧಗೊಂಡ ವಿದೇಶಿ ವಾಣಿಜ್ಯ ವಾಹನಗಳು
* ಸಿಮೆಂಟ್
* ವಿವಿಧ ಬಗೆಯ ಪಾನೀಯಗಳು ಹಾಗೂ ಪ್ಯಾಕಿಂಗ್ ಮಾಡಿದ ನೀರು
* ಪ್ಲ್ಯಾಸ್ಟಿಕ್ ಚೀಲಗಳು ಹಾಗೂ ಕಾಲುಚೀಲಗಳು
* ಬಿಸಿನೆಸ್ ಹಾಗೂ ಎಕ್ಸಿಕ್ಯೂಟಿವ್ ದರ್ಜೆಯ ವಿಮಾನಯಾನ
* ಅಮ್ಯೂಜಮೆಂಟ್ ಹಾಗೂ ಥೀಮ್ ಪಾರ್ಕ್
* ಸಂಗೀತ ಗೋಷ್ಠಿಗಳು
* ಮದ್ಯ, ಚಿಟ್ ಫಂಡ್ ಹಾಗೂ ಲಾಟರಿ
ಯಾವುದು ಅಗ್ಗ?
* 1 ಸಾವಿರಕ್ಕೂ ಮೇಲ್ಪಟ್ಟ ಚರ್ಮದ ಪಾದರಕ್ಷೆ
*ಸ್ಥಳೀಯವಾಗಿ ನಿರ್ಮಾಣಗೊಂಡ ಮೊಬೈಲ್ ಫೋನ್
* ಎಲ್ಇಡಿ/ಎಲ್ ಸಿಡಿ ಪರದೆಗಳು
* ಎಲ್ಇಡಿ ಲೈಟ್ಸ್ ಹಾಗೂ ಎಲ್ಇಡಿ ಲ್ಯಾಂಪ್ಸ್
* ಸೌರ ಆಧಾರಿತ ನೀರು ಬಿಸಿ ಮಾಡುವ ಸಾಧನ
* ಪ್ರಸಾಧನ ಸಾಮಗ್ರಿಗಳು
* ಆಂಬುಲೆನ್ಸ್ ಹಾಗೂ ಆಂಬುಲೆನ್ಸ್ ಸೇವೆಗಳು
* ಟ್ಯಾಬ್ಲೆಟ್
* ಅಗರಬತ್ತಿ
* ಮೈಕ್ರೋ ಅವೆನ್
* ಫಿಡ್ಜ್
* ಕಡಲೇ ಬೆಣ್ಣೆ, ಪ್ಯಾಕ್ ಮಾಡಿದ ಹಣ್ಣು ಹಾಗೂ ತರಕಾರಿಗಳು
* ಮ್ಯೂಸಿಯಂ, ಪ್ರಾಣಿ ಸಂಗ್ರಹಾಲಯಗಳು,ರಾಷ್ಟ್ರೀಯ ಉದ್ಯಾನಗಳ ಭೇಟಿ
1) ರಾಜ್ಯಗಳಿಗೆ ತೆರಿಗೆಗಳ ಪಾಲು: ಶೇ. 23
2) ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಯೋಜನೇತರ ನೆರವು: ಶೇ. 5
3) ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಯೋಜನಾ ನೆರವು: ಶೇ. 9
4) ಕೇಂದ್ರ ಯೋಜನಾ ವೆಚ್ಚ: ಶೇ. 11
5) ಬಡ್ಡಿ ಪಾವತಿ: ಶೇ. 20
6) ರಕ್ಷಣಾ ಕ್ಷೇತ್ರ: ಶೆ. 11
7) ಸಬ್ಸಿಡಿ: ಶೇ.10
8) ಇತರ ಯೋಜನೇತರ ವೆಚ್ಚ: ಶೇ. 11
ಕೇಂದ್ರ ಬಜೆಟ್: ಯಾವ್ಯಾವುದಕ್ಕೆ ಎಷ್ಟೆಷ್ಟು ವೆಚ್ಚ..?
28 Feb ಕೇಂದ್ರದ ಬಳಿ ಇರುವ ಒಟ್ಟು ಮೊತ್ತದಲ್ಲಿ ಯಾವ್ಯಾವುದಕ್ಕೆ ಎಷ್ಟೆಷ್ಟು ಪ್ರಮಾಣದಲ್ಲಿ ವೆಚ್ಚವಾಗುತ್ತದೆ ಎಂಬ ವಿವರ ಇಲ್ಲಿದೆ. ನಾವು ಕಟ್ಟುವ ತೆರಿಗೆ ಹಣ ಎಲ್ಲಿ ಹೋಗುತ್ತವೆ ಎಂಬುದನ್ನ ತಿಳಿಯಿರಿ.1) ರಾಜ್ಯಗಳಿಗೆ ತೆರಿಗೆಗಳ ಪಾಲು: ಶೇ. 23
2) ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಯೋಜನೇತರ ನೆರವು: ಶೇ. 5
3) ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಯೋಜನಾ ನೆರವು: ಶೇ. 9
4) ಕೇಂದ್ರ ಯೋಜನಾ ವೆಚ್ಚ: ಶೇ. 11
5) ಬಡ್ಡಿ ಪಾವತಿ: ಶೇ. 20
6) ರಕ್ಷಣಾ ಕ್ಷೇತ್ರ: ಶೆ. 11
7) ಸಬ್ಸಿಡಿ: ಶೇ.10
8) ಇತರ ಯೋಜನೇತರ ವೆಚ್ಚ: ಶೇ. 11
ಜೇಟ್ಲಿ ಬಜೆಟ್: ಯಾವ್ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಹಣ..?
28 Feb 2015
ಅರುಣ್ ಜೇಟ್ಲಿ ಮಂಡಿಸಿದ ಬಜೆಟ್'ನಲ್ಲಿ ಯಾವ್ಯಾವ ಕ್ಷೇತ್ರಗಳಿಗೆ ಎಷ್ಟೆಷ್ಟು ಹಣ ವಿನಿಯೋಗ ಮಾಡುತ್ತಿದ್ದಾರೆ ಎಂಬ ವಿವರ ಇಲ್ಲಿದೆ. *ಒಟ್ಟು ಬಜೆಟ್ ಮೊತ್ತ: 5,78,382 ಕೋಟಿ ರೂ.
1) ಕೃಷಿ, ಗ್ರಾಮೀಣಾಭಿವೃದ್ಧಿ, ನೀರಾವರಿ ಇತ್ಯಾದಿ ಕ್ಷೇತ್ರ: 15,560 ಕೋಟಿ ರೂ.
2) ಇಂಧನ: 1,67,342 ಕೋಟಿ ರೂ.
3) ಕೈಗಾರಿಕೆ ಮತ್ತು ಖನಿಜ: 43,113 ಕೋಟಿ ರೂ.
4) ಸಾಗಣೆ: 1,93,417 ಕೋಟಿ ರೂ.
5) ಸಂವಹನ(ಕಮ್ಯೂನಿಕೇಶನ್ಸ್): 12,032 ಕೋಟಿ
6) ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ: 19,023 ಕೋಟಿ ರೂ.
7) ಸಾಮಾನ್ಯ ಆರ್ಥಿಕ ಸೇವೆ: 20,333 ಕೋಟಿ
8) ಸಾಮಾಜಿಕ ಸೇವೆ: 81,003 ಕೋಟಿ
9) ಸಾಮಾನ್ಯ ಸೇವೆ: 26,559 ಕೋಟಿ
ಕೇಂದ್ರ ಬಜೆಟ್: ಕ್ಷೇತ್ರವಾರು ಸಂಕ್ಷಿಪ್ತ ನೋಟ
: * ಸಂಪತ್ತು ತೆರಿಗೆ ರದ್ದು
* 1 ಕೋಟಿ ರೂ.ಗಿಂತ ಹೆಚ್ಚಿನ ಆದಾಯ ಇರುವ ಅತೀ ಶ್ರೀಮಂತರಿಗೆ 2% ಹೆಚ್ಚುವರಿ ಸರ್ಚಾರ್ಜ್ ಹೇರಿಕೆ
* ಮುಂದಿನ ನಾಲ್ಕು ವರ್ಷಗಳಿಗೆ ಕಾರ್ಪೊರೇಟ್ ತೆರಿಗೆ 25% ಕಡಿತ
* ಆದಾಯ ತೆರಿಗೆ ಸ್ಲಾಬ್ನಲ್ಲಿ ಬದಲಾವಣೆ ಇಲ್ಲ
* ಒಟ್ಟು 4,44,200 ರೂ. ವರೆಗೆ ವೈಯಕ್ತಿಕ ತೆರಿಗೆ ವಿನಾಯತಿ ಲಾಭದ ಅವಕಾಶ.
* ಸ್ವಚ್ಛ ಭಾರತ ಮತ್ತು ಸ್ವಚ್ಛ ಗಂಗಾ ಯೋಜನೆ ವಂತಿಗೆಗಳಿಗೆ ಶೇಕಡಾ 100% ತೆರಿಗೆ ವಿನಾಯಿತಿ
* ಸೇವಾ ತೆರಿಗೆ 14% ಕ್ಕೆ ಏರಿಕೆ
* ಚಿನ್ನ ಆಮದು ನಿಯಂತ್ರಣಕ್ಕಾಗಿ ಅಶೋಕ ಚಕ್ರವುಳ್ಳ ಭಾರತೀಯ ಚಿನ್ನದ ನಾಣ್ಯ, ಚಿನ್ನದ ಬಾಂಡ್ ಬಿಡುಗಡೆ ಮತ್ತು ಚಿನ್ನದಿಂದ ಹಣಗಳಿಸುವ ಯೋಜನೆಗಳ ಜಾರಿ. ಕೃಷಿ:
* ಗ್ರಾಮೀಣ ಮೂಲಸವಲತ್ತು ಅಭಿವೃದ್ಧಿ ಬ್ಯಾಂಕ್ಗೆ 25 ಸಾವಿರ ಕೋಟಿ ರೂ.
* ಸೂಕ್ಷ್ಮ ನೀರಾವರಿ ಕಾರ್ಯಕ್ರಮಗಳಿಗೆ 5,300 ಕೋಟಿ ರೂ. * ಕೃಷಿ ಸಾಲ - 8.5 ಲಕ್ಷ ಕೋಟಿ ರೂ. ಮೂಲ ಸೌಕರ್ಯ:
* ಮೌಲಸೌಕರ್ಯ ವೃದ್ಧಿಗೆ 70,000 ಕೋಟಿ ರೂ.
* ರೈಲ್ವೆ, ರಸ್ತೆ ಮತ್ತು ನೀರಾವರಿ ಯೋಜನೆಯಲ್ಲಿ ತೆರಿಗೆ ಮುಕ್ತ ಬಾಂಡ್
* ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ ಮೌಲ ಸೌಕರ್ಯ ಅಭಿವೃದ್ಧಿಗೆ ಪುನಶ್ಚೇತನ, ಸರ್ಕಾರ ಹೆಚ್ಚಿನ ಹೊರೆ ತೆಗೆದುಕೊಳ್ಳಲಿದೆ.
* ಸಂಶೋಧನೆ ಮತ್ತು ಅಭಿವೃದ್ಧಿಗೆ 150 ಕೋಟಿ ರೂ.
* 5 ಬೃಹತ್ ವಿದ್ಯುತ್ ಉತ್ಪಾದನಾ ಯೋಜನೆಗಳು, ಪ್ರತಿಯೊಂದು 4 ಸಾವಿರ ಮೆಗವಾಟ್
ಕಪ್ಪು ಹಣದ ವಿರುದ್ಧ ಕಠಿಣ ಕ್ರಮಗಳನ್ನ ವಿತ್ತ ಸಚಿವ ಅರುಣ್ ಜೆಟ್ಲಿ ಘೋಷಿಸಿದ್ದಾರೆ.
* ಕಪ್ಪು ಹಣ ಹೊಂದಿರವವರಿಗೆ ಹತ್ತು ವರ್ಷ ಜೈಲು ಶಿಕ್ಷೆ, ಈ ಅಪರಾಧಕ್ಕೆ ಜಾಮೀನು ಸಿಗುವುದಿಲ್ಲ. ಈ ಬಗ್ಗೆ ಅಗತ್ಯ ತಿದ್ದುಪಡಿ ಮಾಡುವುದಾಗಿ ಹೇಳಿದ್ದಾರೆ.
* ನಿರ್ಭಯಾ ನಿಧಿಗೆ ಮತ್ತೆ ಒಂದು ಸಾವಿರ ಕೋಟಿ ರೂಪಾಯಿ ಘೋಷಣೆ ಬೇನಾಮಿ ಆಸ್ತಿ ಪತ್ತೆಗೆ ಹೊಸ ಕ್ರಮ ವೈಯಕ್ತಿಕ ಆದಾಯ ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಇಲ್ಲ.
* 2.5 ಲಕ್ಷದವರೆಗೆ ಯಾವುದೇ ತೆರಿಗೆ ಇಲ್ಲ.
* 2.5ರಿಂದ 5 ಲಕ್ಷದವರೆಗೆ ಶೇ.10ರಷ್ಟು,
* 5ರಿಂದ 10ಲಕ್ಷದ ವರೆಗೆ ಶೇ. 20,
* 10ಲಕ್ಷಕ್ಕೂ ಮೇಲ್ಪಟ್ಟು ಶೇ. 30ರಷ್ಟು ತೆರಿಗೆ ಮುಂದುವರೆಯಲಿದೆ.
*ಕಪ್ಪುಹಣವುಳ್ಳವರಿಗೆ 10 ವರ್ಷ, ಐಟಿ ರಿಟರ್ನ್ಸ್ ಫೈಲ್ ಮಾಡದಿದ್ದಲ್ಲಿ ಏಳು ವರ್ಷ ಜೈಲು ಶಿಕ್ಷೆ. ಒಂದು ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಯಾವುದೇ ಖರೀದಿಗೆ ಪಾನ್ ನಂ. ಕಡ್ಡಾಯ ಸೇವಾ ತೆರಿಗೆಯನ್ನು ಶೇ> 12ರಿಂದ ಶೇ. 14ಕ್ಕೆ ಹೆಚ್ಚಿಸಲಾಗಿದೆ
ಕಪ್ಪು ಹಣದ ವಿರುದ್ಧ ಕಠಿಣ ಕ್ರಮಗಳನ್ನ ವಿತ್ತ ಸಚಿವ ಅರುಣ್ ಜೆಟ್ಲಿ ಘೋಷಿಸಿದ್ದಾರೆ.
* ಕಪ್ಪು ಹಣ ಹೊಂದಿರವವರಿಗೆ ಹತ್ತು ವರ್ಷ ಜೈಲು ಶಿಕ್ಷೆ, ಈ ಅಪರಾಧಕ್ಕೆ ಜಾಮೀನು ಸಿಗುವುದಿಲ್ಲ. ಈ ಬಗ್ಗೆ ಅಗತ್ಯ ತಿದ್ದುಪಡಿ ಮಾಡುವುದಾಗಿ ಹೇಳಿದ್ದಾರೆ.
* ನಿರ್ಭಯಾ ನಿಧಿಗೆ ಮತ್ತೆ ಒಂದು ಸಾವಿರ ಕೋಟಿ ರೂಪಾಯಿ ಘೋಷಣೆ ಬೇನಾಮಿ ಆಸ್ತಿ ಪತ್ತೆಗೆ ಹೊಸ ಕ್ರಮ ವೈಯಕ್ತಿಕ ಆದಾಯ ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಇಲ್ಲ.
* 2.5 ಲಕ್ಷದವರೆಗೆ ಯಾವುದೇ ತೆರಿಗೆ ಇಲ್ಲ.
* 2.5ರಿಂದ 5 ಲಕ್ಷದವರೆಗೆ ಶೇ.10ರಷ್ಟು,
* 5ರಿಂದ 10ಲಕ್ಷದ ವರೆಗೆ ಶೇ. 20,
* 10ಲಕ್ಷಕ್ಕೂ ಮೇಲ್ಪಟ್ಟು ಶೇ. 30ರಷ್ಟು ತೆರಿಗೆ ಮುಂದುವರೆಯಲಿದೆ.
*ಕಪ್ಪುಹಣವುಳ್ಳವರಿಗೆ 10 ವರ್ಷ, ಐಟಿ ರಿಟರ್ನ್ಸ್ ಫೈಲ್ ಮಾಡದಿದ್ದಲ್ಲಿ ಏಳು ವರ್ಷ ಜೈಲು ಶಿಕ್ಷೆ. ಒಂದು ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಯಾವುದೇ ಖರೀದಿಗೆ ಪಾನ್ ನಂ. ಕಡ್ಡಾಯ ಸೇವಾ ತೆರಿಗೆಯನ್ನು ಶೇ> 12ರಿಂದ ಶೇ. 14ಕ್ಕೆ ಹೆಚ್ಚಿಸಲಾಗಿದೆ
ಪ್ರಗತಿಗೆ ಪೂರಕ ಬಜೆಟ್: ನ್ಯೂಯಾರ್ಕ್ ಟೈಮ್ಸ್
ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಗೆ ಅಮೆರಿಕದ ಪ್ರತಿಷ್ಠಿತ ನ್ಯೂಯಾರ್ಕ್ ಪತ್ರಿಕೆಯಿಂದಲೂ ಮೆಚ್ಟುಗೆ ವ್ಯಕ್ತವಾಗಿದೆ.
* ಇದು ಬೆಳವಣಿಗೆ ಯನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿದ ಬಜೆಟ್.
* ಮೂಲಸೌಲಭ್ಯಕ್ಕಾಗಿ ಭಾರಿ ವೆಚ್ಚ, ಕಾರ್ಪೋರೇಟ್ ತೆರಿಗೆ ಕಡಿತದಂಥ ಬಜೆಟ್ ಕ್ರಮಗಳನ್ನು ಭಾರತದ ಉದ್ಯಮ ವಲಯವೂ ಸ್ವಾಗತಿಸಿದೆ.
* ಈ ಮಾರುಕಟ್ಟೆ ಸ್ನೇಹಿ ಕ್ರಮಗಳ ಜತೆಗೆ ಕಡಿಮೆ ದರದ ವಿಮೆ, ಪಿಂಚಣಿಗಳಂಥ ಬಡವರ ಪರ ಹೊಸ ಕಲ್ಯಾಣ ಕಾರ್ಯಕ್ರಮಗಳನ್ನೂ ಬಜೆಟ್ ನಲ್ಲಿ ಘೋಷಿಸಲಾಗಿದೆ.
* ಈ ಮೂಲಕ ಉದ್ಯಮ ಹಾಗೂ ಜನಸಾಮಾನ್ಯ ಇಬ್ಬರನ್ನೂ ಮೆಚ್ಚಿಸುವ ಪ್ರಯತ್ನ ಮಾಡಲಾಗಿದೆ.
* ಭಾರತದ ಆರ್ಥಿಕ ತಜ್ಞರು ಹಾಗೂ ಉದ್ಯಮಿಗಳು ಈ ಬಜೆಟ್ಗಾಗಿ ಕುತೂಹಲದಿಂದ ಕಾಯುತ್ತಿದ್ದರು.
* ಈ ಬಜೆಟ್ ಹೂಡಿಕೆಗೆ ಉತ್ತೇಜನ ನೀಡುವಂಥ ಅನೇಕ ಸುಧಾರಣಾ ಕ್ರಮಗಳನ್ನು ಒಳಗೊಳ್ಳಲಿದೆ ಎಂದು ನಿರೀಕ್ಷಿಸಿದ್ದರು.
* ಆದರೆ, ಬಜೆಟ್ ನಲ್ಲಿ ಪ್ರಸ್ತಾಪಿತ ಘೋಷಣೆಗಳು ಆರ್ಥಿಕ ಬೆಳವಣಿಗೆಗೆ ಪೂರಕವಾಗಿವೆಯಷ್ಟೆ. ಬಜೆಟ್ ಹಿನ್ನೆಲೆಯಲ್ಲಿ ತೆರೆದಿದ್ದ ಷೇರು ಮಾರುಕಟ್ಟೆಗಳು ಕುಸಿತ ಕಂಡವು.
* ಬಜೆಟ್ ಗೂ ಮೊದಲು ಸರ್ಕಾರಿ ವೆಚ್ಚವನ್ನು ಕಡಿತ ಮಾಡಬೇಕೇ ಅಥವಾ ಬೆಳವಣಿಗೆಗೆ ಉತ್ತೇಜನ ನೀಡಲು ಸಾರ್ವಜನಿಕ ಹೂಡಿಕೆಯನ್ನು ಜಾಸ್ತಿ ಮಾಡಿ,
* ಈ ಮೂಲಕ ಸಾಲದ ಸುಳಿಯಲ್ಲಿ ಸಿಲುಕಿರುವ ಖಾಸಗಿ ಕ್ಷೇತ್ರ ಹಾಗೂ ಒತ್ತಡದಲ್ಲಿರುವ ಬ್ಯಾಂಕ್ ಗಳ ಹೊರೆಯನ್ನು
ಇಳಿಸ ಬೇಕೇ
ಕೇಂದ್ರದಿಂದ ರಾಜ್ಯಗಳ ತೆರಿಗೆ ಪಾಲು ಹೆಚ್ಚಳ..!
* ಕೇಂದ್ರ-ರಾಜ್ಯಗಳ ತೆರಿಗೆ ಹಂಚಿಕೆಯಲ್ಲಿ 2015-16ನೇ ಸಾಲಿನಿಂದ ರಾಜ್ಯಗಳ ಪಾಲು ಹೆಚ್ಚಾಗಲಿದ್ದು, ಕೇಂದ್ರ ಸಂಗ್ರಹಿಸುವ ತೆರಿಗೆಯಲ್ಲಿ ರಾಜ್ಯಗಳಿಗೆ ಸಿಗುವ ಪಾಲು ಹೆಚ್ಚಾಗುವ ಸಾಧ್ಯತೆ ಇದೆ.
* ಈ ಹಿಂದೆ ರಾಜ್ಯಕ್ಕೆ ನೀಡಲಾಗುತ್ತಿದ್ದ ತೆರಿಗೆ ಪಾಲನ್ನು ಶೇ.32ರಿಂದ 42ಕ್ಕೆ ಏರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.
*ಸಾಲದ ಸುಳಿಯಲ್ಲಿ ಸಿಲುಕಿರುವ ಮತ್ತು ಪ್ರತಿ ವರ್ಷವೂ ವಿತ್ತೀಯ ಶಿಸ್ತು ಮೀರಿ ಸಾಲ ಮಾಡುತ್ತಿರುವ ರಾಜ್ಯಗಳಿಗೆ ಇದರಿಂದ ಹೆಚ್ಚು ಅನುಕೂಲ ಆಗಲಿದೆ.
* ಈ ಹೆಚ್ಚಳಕ್ಕೆ ಮುಖ್ಯ ಕಾರಣ ಆರ್ಬಿಐನ ನಿವೃತ್ತ ಗವರ್ನರ್ ವೈ.ವಿ. ರೆಡ್ಡಿ ನೇತತ್ವದ 14ನೇ ಹಣಕಾಸು ಆಯೋಗವು 2015-2020ರ ಅವಧಿಯಲ್ಲಿ ರಾಜ್ಯಗಳಿಗೆ ನೀಡುವ ತೆರಿಗೆ ಪಾಲನ್ನು ಈಗಿರುವ ಶೇ.32ರಿಂದ ಶೇ.42ಕ್ಕೆ ಹೆಚ್ಚಿಸಲು ಶಿಫಾರಸು ಮಾಡಿತ್ತು.
* 14ನೇ ಹಣಕಾಸು ಆಯೋಗದ ಶಿಫಾರಸು ಜಾರಿಯ ಮೊದಲ ವರ್ಷ ತೆರಿಗೆ ಪಾಲಿನಲ್ಲಿ ವಿತ್ತ ಸಚಿವ ಅರುಣ್ ಜೆಟ್ಲಿ ಶೇ.2.5ರಷ್ಟು ಹೆಚ್ಚಳ ಮಾಡುವ ನಿರೀಕ್ಷೆ ಇದೆ.
* ಬರುವ ಮುಂಬರುವ ವರ್ಷಗಳಲ್ಲಿ ಒಟ್ಟು ಶೇ.10 ರಷ್ಟು ಹೆಚ್ಚಳ ಆಗಲಿದೆ. ಆದರೆ, ಕೇವಲ ಬರೀ ತೆರಿಗೆಯಲ್ಲಿನ ಪಾಲು ಹೆಚ್ಚಿಸುವುದಷ್ಟೇ ಅಲ್ಲದೇ, ರಾಜ್ಯಗಳಿಗೆ ಹೆಚ್ಚಿನ ಪಾಲು ನೀಡಿದಷ್ಟೂ ಅವುಗಳ ಜವಾಬ್ದಾರಿ ಹೆಚ್ಚಿಸುವ ಕೆಲಸಕ್ಕೂ ಕೇಂದ್ರ ಸರ್ಕಾರ ಮುಂದಾಗಿದೆ.
* ಮೊದಲ ಹಂತದಲ್ಲಿ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಒದಗಿಸುತ್ತಿರುವ ಅನುದಾನವನ್ನು ಕಡಿತ
ರೈಲ್ವೆ ಬಜೆಟ್ನಲ್ಲಿ 15 ಪ್ರಯಾಣಿಕ ಸ್ನೇಹಿ ಘೋಷಣೆಗಳು
ರೈಲ್ವೆ ಸಚಿವ ಸುರೇಶ್ ಪ್ರಭು ರೈಲ್ವೆ ಬಜೆಟ್ ಮಂಡನೆ ಮಾಡುತ್ತಾ, ಪ್ರಯಾಣಿಕರ ಹಿತಾಸಕ್ತಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಲಿದೆ ಎಂದಿದ್ದಾರೆ.
* ರೈಲ್ವೆ ಬಜೆಟ್ ನಲ್ಲಿ 15 ಪ್ರಯಾಣಿಕ ಸ್ನೇಹಿ ಪ್ರಕಟಣೆಗಳನ್ನು ಸುರೇಶ್ ಪ್ರಭು ಮಾಡಿದ್ದಾರೆ.
1* ರೈಲ್ವೆ ಪ್ರಯಾಣದರಗಳಲ್ಲಿ ಯಾವುದೇ ಏರಿಕೆ ಇಲ್ಲ
2 * ಜನರ ದೂರುಗಳನ್ನು ಆಲಿಸಲು ಮೊಬೈಲ್ ಅಪ್ಲಿಕೇಷನ್
3 * ಟಿಕೆಟ್ ಕಾದಿರಿಸುವಿಕೆ ಇಲ್ಲದ ಪ್ರಯಾಣಿಕನಿಗೆ 5 ನಿಮಿಷಗಳಲ್ಲಿ ಟಿಕೆಟ್ ಖರೀದಿಸುವ ಖಾತರಿಗೆ 'ಆಪರೇಷನ್ 5 ಮಿನಿಟ್ಸ್'
4* ರೈಲುಗಳ ಆಗಮನ ಮತ್ತು ನಿರ್ಗಮನಗಳ ಬಗ್ಗೆ ಮಾಹಿತಿಗಾಗಿ ಪ್ರಯಾಣಿಕರಿಗೆ ಎಸ್ಎಂಎಸ್ ಅಲರ್ಟ್ ಸೇವೆಗಳು
5 * ಅಂಗವಿಕಲ ಪೌರರಿಗೆ, ಹಿರಿಯ ಪೌರರಿಗೆ, ಐಆರ್ಸಿಟಿಸಿ ಮೂಲಕ ರೋಗಿಗಳಿಗೆ ವಿಶೇಷ ಸೌಲಭ್ಯಗಳು
6* ಕೆಲವು ಗುರುತಿಸಿದ ರೈಲುಗಳಲ್ಲಿ 24ರಿಂದ 26 ಬೋಗಿಗಳು, ಹೆಚ್ಚು ಜನರಲ್ ಕ್ಲಾಸ್ ಬೋಗಿಗಳು
7* 400 ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯದ ಸೇವೆ
8 * ಪಾನ್ ಇಂಡಿಯಾ 24X 7 ಸಹಾಯವಾಣಿ ಸಂಖ್ಯೆ ಜಾರಿಗೆ
9 * ಸಂಯೋಜಿತ ಟಿಕೆಟಿಂಗ್ ಜಾರಿಗ, ಪ್ರಯಾಣ ಸುಗಮವಾಗಿರಲು ರಕ್ಷಣಾ ಪ್ರಯಾಣ ವ್ಯವಸ್ಥೆ ಅಭಿವೃದ್ಧಿ.
10* 17,000 ಶೌಚಾಲಯಗಳ ಬದಲಿಗೆ ಈ ವರ್ಷ ಜೈವಿಕ ಶೌಚಾಲಯಗಳ ನಿರ್ಮಾಣ.
11* ಆಯ್ದ ಮಾರ್ಗಗಳಲ್ಲಿ ಮತ್ತು ಮಹಿಳೆಯರ ಬೋಗಿಗಳಲ್ಲಿ ನಿಗಾ ಕ್ಯಾಮೆರಾಗಳ ಅಳವಡಿಕೆ ಸ್ವಚ್ಛ ರೈಲು ಸ್ವಚ್ಛ ಭಾರತ್ ಯೋಜನೆಯಡಿ ರೈಲ್ವೆಯಲ್ಲಿ ಸ್ವಚ್ಛತೆಗೆ
No comments:
Post a Comment