ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ಬಜೆಟ್‌ -2014-15 | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Saturday, February 28, 2015

ಬಜೆಟ್‌ -2014-15

  Pundalik       Saturday, February 28, 2015
ಬಜೆಟ್‌  -2014-15

* ಭಾರತವನ್ನು ನಗದು ರಹಿತ ರಾಷ್ಟ್ರವನ್ನಾಗಿಸುವ ಗುರಿ-ಜೇಟ್ಲಿ

* ಕೃಷಿ ಇಳುವರಿ, ಮೂಲ ಸೌಕರ್ಯ ವಲಯದಲ್ಲಿ ಹೂಡಿಕೆ ಹೆಚ್ಚಿಸುವುದು ಪ್ರಮುಖ ಸವಾಲುಗಳು -ಜೇಟ್ಲಿ

* ಜನ ಧನ ಯೋಜನೆ,ಕಲ್ಲಿದ್ದಲು ನಿಕ್ಷೇಪ ಹರಾಜು,ಸ್ವಚ್ಛ ಭಾರತ- ಸರ್ಕಾರದ ಸಾಧನೆಗಳು -ಜೇಟ್ಲಿ



* ಕಪ್ಪುಹಣ ತಡೆಗೆ ನಗದು ವಹಿವಾಟು ನಿಯಂತ್ರಿಸಲು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಬಳಕೆಗೆ ಉತ್ತೇಜನ

* ಸ್ವಚ್ಛ ಭಾರತ, ಗಂಗಾ ಶುದ್ಧೀಕರಣ ಯೋಜನೆ ಮೇಲಿನ ಹೂಡಿಕೆಗೆ ಶೇ 100 ರಷ್ಟಿ ತೆರಿಗೆ ವಿನಾಯ್ತಿ

* 2014–15ರಲ್ಲಿ ಚಾಲ್ತಿ ಖಾತೆ ಕೊರತೆ ಜಿಡಿಪಿಯ ಶೇ 1.3ರಷ್ಟಿತ್ತು
* 2015–16ರಲ್ಲಿ ಶೇ 2.8ರಷ್ಟು ಆದಾಯ ಕೊರತೆ ನಿರೀಕ್ಷೆ

* ಸೇವಾ ತೆರಿಗೆ ಶೇಕಡ 12.36ರಿಂದ ಶೇ 14ಕ್ಕೆ ಏರಿಕೆ

* ನೇರ ತೆರಿಗೆ ನೀತಿಗೆ ಸಂಹಿತೆ (ಡಿಟಿಸಿ) ಕೈಬಿಟ್ಟ ಸರ್ಕಾರ

* ವೈಯಕ್ತಿಕ ಆದಾಯ ತೆರಿಗೆ ವಿನಾಯ್ತಿಯಲ್ಲಿ ಬದಲಾವಣೆ ಇಲ್ಲ

ಈ ಬಾರಿಯೂ ಬಜೆಟ್ ಮಂಡನೆ ವೇಳೆ ಕುಳಿತ ಜೇಟ್ಲಿ. ಕಳೆದ ವರ್ಷವೂ ಬಜೆಟ್ ಮಂಡನೆ ವೇಳೆ ಜೇಟ್ಲಿ ಅವರು ಬೆನ್ನು ನೋವಿನ ಸಮಸ್ಯೆಯಿಂದ ವಿಶ್ರಾಂತಿ ಪಡೆದಿದ್ದರು

* ಹಲವು ಉತ್ಪನ್ನಗಳ ಮೇಲಿನ ಕೇಂದ್ರೀಯ ಮೌಲ್ಯವರ್ಧಿತ ತೆರಿಗೆ ಸಂಪೂರ್ಣ ವಿನಾಯ್ತಿ

* ಆಸ್ತಿ ತೆರಿಗೆಗೆ ಕೋಕ್. 1 ಕೋಟಿ ಹಾಗೂ ಮೇಲ್ಪಟ್ಟ ಆದಾಯ ಉಳ್ಳವರ ಮೇಲೆ ಶೇಕಡ 2 ರಷ್ಟು ಹೆಚ್ಚವರಿ ತೆರಿಗೆ. ಇದರಿಂದ 9 ಸಾವಿರ ಕೋಟಿ ಆದಾಯ ನಿರೀಕ್ಷೆ

* ಕರ್ನಾಟಕದಲ್ಲಿ ಐಐಟಿ ಸ್ಥಾಪನೆ

* ತೆರಿಗೆ ತಪ್ಪಿಸುವ ಪ್ರವೃತ್ತಿಯನ್ನು ತಡೆಯುವ ಕಾಯ್ದೆ (ಜಿಎಎಆರ್) ಅನುಷ್ಠಾನ ಎರಡು ವರ್ಷಗಳ ಕಾಲ ಮುಂದೂಡಿಕೆ

* ಮುಂದಿನ ನಾಲ್ಕು ವರ್ಷಗಳ ಅವಧಿಗೆ ಕಾರ್ಪೊರೇಟ್ ತೆರಿಗೆ ಶೇಕಡ 30ರಿಂದ 25ಕ್ಕೆ ಇಳಿಕೆ
                     *  ಸೇವಾ ತೆರಿಗೆ ಶೇ 12.36 ರಿಂದ ಶೇ 1


* ದೇಶದಲ್ಲಿ ಕಪ್ಪುಹಣ ನಿಯಂತ್ರಣಕ್ಕೆ ಶೀಘ್ರವೇ ಬೇನಾಮಿ ವಹಿವಾಟು ತಡೆ ಕಾನೂನು

* ಕಾರ್ಪೊರೇಟ್‌ ತೆರಿಗೆ ಶೇ 25ಕ್ಕೆ ಇಳಿಕೆ ಮುಂದೆ ಓದಿ

* ಗಂಗಾನದಿ ಶುದ್ಧೀಕರಣಕ್ಕೆ ನೀಡುವ ನೆರವಿಗೆ ಶೇಕಡ 100 ರಷ್ಟು ತೆರಿಗೆ ವಿನಾಯ್ತಿ

* 1 ಲಕ್ಷ ರೂಪಾಯಿಗೂ ಮೇಲ್ಪಟ್ಟ ಆಸ್ತಿ ಖರೀದಿಗೆ ಪಾನ್ ಕಾರ್ಡ್ ಕಡ್ಡಾಯ

* 20 ಸಾವಿರ ರೂಪಾಯಿಗೂ ಹೆಚ್ಚಿನ ಸ್ಥಿರಾಸ್ತಿ ಖರೀದಿಯ ನಗದು ವ್ಯವಹಾರಕ್ಕೆ ನಿರ್ಬಂಧ

* ಯೋಜನಾ ವೆಚ್ಚ 17,77,477 ಕೋಟಿ ರೂಪಾಯಿ

* ಕಾರ್ಪೋರೇಟ್‌ ತೆರಿಗೆ ಕಡಿತ: ಸೂಚ್ಯಂಕ 312 ಅಂಶ ಏರಿಕೆ

* ಕಪ್ಪುಹಣ ಹೊಂದಿರುವವರಿಗೆ ಶೇಕಡ 300 ರಷ್ಟು ತೆರಿಗೆ ವಿಧಿಸಲು ಪ್ರಸ್ತಾಪ

* ಕಾರ್ಪೊರೇಟ್ ತೆರಿಗೆ ಇಳಿಕೆ ಪ್ರಸ್ತಾವದ ಬೆನ್ನಲ್ಲೆ ಮತ್ತೆ ಪುಟಿದೆದ್ದ ಷೇರುಪೇಟೆ

* ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಮುಖ್ಯಸ್ಥರ ನೇಮಕಕ್ಕಾಗಿ ಸ್ವಾಯತ್ತ ಬ್ಯಾಂಕ್ ಮಂಡಳಿ ಕೇಂದ್ರ ಸ್ಥಾಪನೆ

* ವೈಯಕ್ತಿಕ ಆದಾಯ ತೆರಿಗೆ ವಿನಾಯತಿಯಲ್ಲಿ ಯಥಾಸ್ಥಿತಿ

* 22 ಸರಕುಗಳ ಮೇಲಿನ ಸೀಮಾ ಸುಂಕ ಇಳಿಕೆ

* ಸ್ಟಾರ್ಟ್ ಅಪ್ ಕಂಪೆನಿಗಳು, ಉದ್ಯಮಿಗಳಿಗಾಗಿ 1000 ಕೋಟಿ ರೂಪಾಯಿ ನಿಧಿ

* ಪರ್ಯಾಯ ಹೂಡಿಕೆಗೆ ನಿಧಿಯಲ್ಲಿ ವಿದೇಶ ನೇರ ಬಂಡವಾಳ ಹೂಡಿಕೆ ಅವಕಾಶಕ್ಕೆ ಪ್ರಸ್ತಾವ

* ಮುಂದಿನ ಹಣಕಾಸು ವರ್ಷದಲ್ಲಿ ರಕ್ಷಣೆಗಾಗಿ 2,46,727 ಕೋಟಿ ರೂಪಾಯಿ

* ಆಂಧ್ರಪ್ರದೇಶ, ತೆಲಂಗಾಣಕ್ಕೆ ನೀಡಿರುವ ಭರವಸೆ ಈಡೇರಿಕೆಗೆ ಬದ್ಧ

* ಆಂಧ್ರ ಪ್ರದೇಶದಂತೆ ಬಿಹಾರ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಿಗೆ ವಿಶೇಷ ಆರ್ಥಿಕ ನೆರವು

* ಕಪ್ಪುಹಣ ವಾಪಸ್ ತರಲು ಹೊಸ ಕಾನೂನು

* ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ತಮಿಳುನಾಡು ಹಾಗೂ ಅಸ್ಸಾಂನಲ್ಲಿ ಏಮ್ಸ್ ಸ್ಥಾಪನೆ

* 150 ಕೋಟಿ ರೂಪಾಯಿ ಆರಂಭಿಕ ಮೊತ್ತದಲ್ಲಿ ವಿಶ್ವ ದರ್ಜೆ ಐಟಿ ವಲಯ ಸ್ಥಾಪನೆ

* ಸರ್ಕಾರಿ ವಲಯದ ಬಂದರುಗಳ ಕಾರ್ಪೊರೇಟ್ ವ್ಯಾಪ್ತಿಗೆ ತರಲು ಚಿಂತನೆ

* ಕಾರ್ಪೊರೇಟ್ ತೆರಿಗೆ ಶೇಕಡ 30ರಿಂದ ಶೇ 25ಕ್ಕೆ ಇಳಿಕೆ

*‍ ಆಗಮನದ ಬಳಿಕ ವೀಸಾ ಯೋಜನೆಯನ್ನು ಪ್ರಸಕ್ತ 43 ರಾಷ್ಟ್ರಗಳಿಂದ 150 ರಾಷ್ಟ್ರಗಳಿಗೆ ವಿಸ್ತರಣೆ

* ಜಿಎಸ್‌ಟಿ ಮೂಲಕ ರೂ 14.5 ಲಕ್ಷ ಕೋಟಿ ನಿರೀಕ್ಷೆ

* ಯೋಜನಾ ವೆಚ್ಚ 4.56 ಲಕ್ಷ ಕೋಟಿ

* ಯೋಜನೇತರ ವೆಚ್ಚ 13.12 ಲಕ್ಷ ಕೋಟಿ

* ಕಳೆದ 9 ತಿಂಗಳಲ್ಲಿ ಸ್ಥಿರ ತೆರಿಗೆ ಯೋಜನೆಗೆ ಒತ್ತು ನೀಡಿದ್ದೇವೆ

* ರಕ್ಷಣಾ ಕ್ಷೇತ್ರಕ್ಕೆ ರೂ 2,46,727 ಕೋಟಿ ಬಿಡುಗಡೆ

* ಬಂದರುಗಳು ಆಕರ್ಷಕ ಹೂಡಿಕೆ ತಾಣಗಳಾಗಿವೆ

* ರಾಷ್ಟ್ರೀಯ ಷೇರು ಸೂಚ್ಯಂಕ ‘ನಿಫ್ಟಿ’ ಇಳಿಕೆ

* ಪ್ರಧಾನಿ ನೀರಾವರಿ ಯೋಜನೆಗೆ 3 ಸಾವಿರ ಕೋಟಿ ರೂಪಾಯಿ

* ಸಮಗ್ರ ಮಕ್ಕಳ ರಕ್ಷಣಾ ಯೋಜನೆಗೆ 500 ಕೋಟಿ ರೂಪಾಯಿ

* ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಗೆ 1500 ಕೋಟಿ ರೂಪಾಯಿ

* ಬಂಡವಾಳ ಹರಿವಿನ ಮೇಲೆ ನಿಯಂತ್ರಣಕ್ಕಾಗಿ ‘ಫೆಮಾ’ಗೆ ತಿದ್ದುಪಡಿ

* 2015–16ರಲ್ಲಿ ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರದ 2ನೇ ಘಟಕ ಕಾರ್ಯಾರಂಭ ನಿರೀಕ್ಷೆ

* ಕರ್ನಾಟಕದಲ್ಲಿ ಐಐಟಿ ಸ್ಥಾಪನೆ

* ವಿದ್ಯುತ್‌ ಚಾಲಿತ ವಾಹನ ತಯಾರಿಕೆ ಉತ್ತೇಜಿಸಲು ರೂ 75 ಕೋಟಿ

* 4 ಸಾವಿರ ಮೆಗಾ ವ್ಯಾಟ್ ಸಾಮರ್ಥ್ಯದ ಐದು ಬೃಹತ್ ವಿದ್ಯುತ್ ಯೋಜನೆಗೆ ಪ್ರಸ್ತಾವ

* ನಿರ್ಭಯ ನಿಧಿಗೆ ಮತ್ತೆ ರೂ 10 ಸಾವಿರ ಕೋಟಿ

* 2015–16ರಲ್ಲಿ ಮಹಿಳೆಯರಿಗಾಗಿ 79,258 ಕೋಟಿ ರೂಪಾಯಿ

* 2015–16ರಲ್ಲಿ ಪರಿಶಿಷ್ಟ ಜಾತಿಗೆ 30,851 ಕೋಟಿ ರೂಪಾಯಿ

* ಶೀಘ್ರವೇ ಪ್ರಧಾನಿ ಸುರಕ್ಷಾ ಯೋಜನೆಯಡಿ ವರ್ಷಕ್ಕೆ 12 ರೂಪಾಯಿ ಕಂತಿನ 2 ಲಕ್ಷ ಮೊತ್ತ ಅಪಘಾತ ವಿಮೆ ಸ್ಥಾಪನೆ

* ದೇಶದಲ್ಲಿ ಸಾಂಸ್ಕೃತಿಕ ಆವಿಷ್ಕಾರವನ್ನು ಪ್ರೋತ್ಸಾಹಿಸಲು ಅಟಲ್ ಆವಿಷ್ಕಾರ ಯೋಜನೆ

* ಪ್ರಧಾನ ಮಂತ್ರಿ ಜೀವನ ಬಿಮಾ ಯೋಜನೆಯಡಿ ಪ್ರತಿ ವರ್ಷ 330 ರೂಪಾಯಿಗಳ ಕಂತಿನ ಅಪಘಾತ ವಿಮೆ

* ಅಲ್ಪಸಂಖ್ಯಾತ ಸಮುದಾಯಗಳ ನಿರುದ್ಯೋಗಿ ಯುವಕ–ಯುವತಿಯರಿಗಾಗಿ ಶಿಕ್ಷಣ ಕಲ್ಯಾಣ ಯೋಜನೆ ‘ನಯಿ ಮಂಜಿಲ್’ ಸ್ಥಾಪನೆ

* ಅಂಚೆ ಕಚೇರಿಗಳಲ್ಲೂ ಬ್ಯಾಂಕಿಂಗ್ ಸೇವೆ

* 9 ಸಾವಿರ ಕೋಟಿ ರೂಪಾಯಿಗಳಲ್ಲಿ ಹಿರಿಯ ನಾಗರಿಕರ ಕಲ್ಯಾಣ ನಿಧಿ ಸ್ಥಾಪನೆಗೆ ಪ್ರಸ್ತಾವ

* 2015–16ರಲ್ಲಿ 8.5 ಲಕ್ಷ ರೂಪಾಯಿ ಕೃಷಿ ಸಾಲದ ಗುರಿ

* 2015–16ರಲ್ಲಿ ಜಿಡಿಪಿ ಶೇ 8ರಿಂದ8.5ಕ್ಕೆ ಹೆಚ್ಚಲಿದ್ದು, ಶೀಘ್ರವೇ ಎರಡಂಕಿ ತಲುಪಲಿದೆ

* ನರೇಗಾ ಯೋಜನೆಗಾಗಿ 34,699 ಕೋಟಿ ರೂಪಾಯಿ ಬಿಡುಗಡೆ

* ರಸ್ತೆ ಮತ್ತು ರೈಲು ಯೋಜನೆಗಳಲ್ಲಿ ಹೂಡಿಕೆ ಉತ್ತೇಜನಕ್ಕೆ ತೆರಿಗೆ ರಹಿತ ಮೂಲಸೌಕರ್ಯ ಬಾಂಡ್ ಗಳ ಬಿಡುಗಡೆ

* ಎಲ್ಲಾ ಭಾರತೀಯರಿಗಾಗಿ ಸಾರ್ವತ್ರಿಕ ಸಾಮಾಜಿಕ ಭದ್ರತಾ ವ್ಯವಸ್ಥೆ ನಿರ್ಮಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸಲಿದೆ

* ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿಗೆ ಪ್ರಸ್ತಾವ

* 11.5 ಕೋಟಿ ಅಡುಗೆ ಅನಿಲ ಗ್ರಾಹಕರಿಗೆ ಸಬ್ಸಿಡಿಯನ್ನು ನೇರವಾಗಿ ನೀಡಲಾಗಿದೆ

* 2016–17ರಲ್ಲಿ ಜಿಡಿಪಿಯ ಶೇ 3.5 ರಷ್ಟು ಹಾಗೂ 2017–18ರಲ್ಲಿ ಶೇ 3 ರಷ್ಟು ವಿತ್ತೀಯ ಕೊರತೆ ನಿರೀಕ್ಷೆ

* 2015–16ರಲ್ಲಿ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಗೆ ರೂ. 25 ಸಾವಿರ ಕೋಟಿ

* 2016ರ ಏಪ್ರಿಲ್ 1ರಿಂದ ಜಿ ಎಸ್ ಟಿ ಜಾರಿ

* ಸಬ್ಸಿಡಿ ಸೋರಿಕೆ ತಡೆಗೆ ಪರಿಣಾಮಕಾರಿ ಕ್ರಮ

* ಮುಂದಿನ ಮೂರು ಹಣಕಾಸು ವರ್ಷಗಳಲ್ಲಿ ಜಿಡಿಪಿ ಸರಾಸರಿ ಶೇ 3.3ರಷ್ಟು ಪ್ರಗತಿ ಕಾಣಲಿದ್ದು ಎರಡಂಕಿ ಪ್ರಗತಿ ದಾಖಲಿಸಲಿದೆ

* ಸಾರ್ವಜನಿಕ ಹೂಡಿಕೆಯು 1.25 ಕೋಟಿಯಷ್ಟಿದ್ದು, ಇದು ಬಜೆಟ್ ಗುರಿ ಮೀರಿದೆ

* ಪ್ರಸಕ್ತ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆ ಅಂತರವನ್ನು ಜಿಡಿಪಿಯ ಶೇ 4.1ರಷ್ಟು ತಗ್ಗಿಸುವ ಗುರಿ ತಲುಪಲು ಸಾಧ್ಯವಾಗಲಿದೆ

* ಮಹಾ ಆರ್ಥಿಕ ಜಿಗಿತಕ್ಕೆ ಭಾರತ ಸಿದ್ಧ: ಜೇಟ್ಲಿ

* 2015–16ನೇ ಸಾಲಿನಲ್ಲಿ ರಾಜ್ಯಗಳಿಗೆ ಕೇಂದ್ರಿಯ ತೆರಿಗೆಗಳಿಂದ 5.24 ಲಕ್ಷ ಕೋಟಿ ಲಭಿಸಲಿದೆ

* 3 ವರ್ಷಗಳ ಬದಲಿಗೆ 2 ವರ್ಷಗಳಲ್ಲಿ ವಿತ್ತೀಯ ಕೊರತೆಯ ಉದ್ದೇಶಿತ ಗುರಿ ಮುಟ್ಟುತ್ತೇವೆ

* ದೇಶವನ್ನು ತಯಾರಿಕಾ ವಲಯವಾಗಿಸುವ ಗುರಿ ಹೊಂದಬೇಕು

* ಹಣಕಾಸು ನೀತಿ ಸಮಿತಿ ರಚನೆ ನಿಟ್ಟಿನಲ್ಲಿ ಈ ವರ್ಷ ಆರ್ ಬಿ ಐ ಕಾಯ್ದೆಗೆ ತಿದ್ದುಪಡಿ

* 2014–15ರಲ್ಲಿ 50 ಲಕ್ಷ ಶೌಚಾಲಯ ನಿರ್ಮಿಸಲಾಗಿದೆ; 6 ಕೋಟಿ ಶೌಚಾಲಯ ನಿರ್ಮಾಣ ಗುರಿಯಲ್ಲಿದ್ದೇವೆ

* 2015–16ನೇ ಸಾಲಿನಲ್ಲಿ ಶೇ 7.4ರಷ್ಟು ಜಿಡಿಪಿ ನಿರೀಕ್ಷೆ



* ಬಜೆಟ್‌: ಬಿಎಸ್‌ಇ 250 ಅಂಶ ಏರಿಕೆ

* 2016ರ ವೇಳೆಗೆ ಜಿಎಸ್‌ಟಿ ಜಾರಿ –ಜೇಟ್ಲಿ

* ಭಾರತ ಆರ್ಥಿಕತೆಯ ವಿಶ್ವಾಸಾರ್ಹತೆಯನ್ನು ಮರು ಸ್ಥಾಪಿಸಲಾಗಿದೆ– ಜೇಟ್ಲಿ

* ಆರ್ಥಿಕ ವಾತಾವರಣ ಹಿಂದಿಗಿಂತಲೂ ಸಕಾರಾತ್ಮಕವಾಗಿದೆ –ಜೇಟ್ಲಿ

* ಬಜೆಟ್ ಮಂಡನೆ ಆರಂಭಿಸಿದ ಅರುಣ್ ಜೇಟ್ಲಿ

‘* ಭಾರತದಲ್ಲಿ ತಯಾರಿಸಿ’ ಕೇಂದ್ರಿತ ಬಜೆಟ್ ‘ಭಾರತ ನಿರ್ಮಿಸಲಿದೆ’ – ಕಿರಣ್ ಬೇಡಿ ಟ್ವೀಟ್‌









ಬಜೆಟ್: ಯಾವುದು ತುಟ್ಟಿ,


ಯಾವುದು ತುಟ್ಟಿ?
* ಸಿಗರೇಟು ಹಾಗೂ ಇತರ ತಂಬಾಕು ಉತ್ಪನ್ನಗಳು
* ಸಂಪೂರ್ಣ ಸಿದ್ಧಗೊಂಡ ವಿದೇಶಿ ವಾಣಿಜ್ಯ ವಾಹನಗಳು
* ಸಿಮೆಂಟ್
* ವಿವಿಧ ಬಗೆಯ ಪಾನೀಯಗಳು ಹಾಗೂ ಪ್ಯಾಕಿಂಗ್ ಮಾಡಿದ ನೀರು
* ಪ್ಲ್ಯಾಸ್ಟಿಕ್ ಚೀಲಗಳು ಹಾಗೂ ಕಾಲುಚೀಲಗಳು
* ಬಿಸಿನೆಸ್ ಹಾಗೂ ಎಕ್ಸಿಕ್ಯೂಟಿವ್ ದರ್ಜೆಯ ವಿಮಾನಯಾನ
* ಅಮ್ಯೂಜಮೆಂಟ್ ಹಾಗೂ ಥೀಮ್ ಪಾರ್ಕ್
* ಸಂಗೀತ ಗೋಷ್ಠಿಗಳು
* ಮದ್ಯ, ಚಿಟ್ ಫಂಡ್ ಹಾಗೂ ಲಾಟರಿ
ಯಾವುದು ಅಗ್ಗ?
* 1 ಸಾವಿರಕ್ಕೂ ಮೇಲ್ಪಟ್ಟ ಚರ್ಮದ ಪಾದರಕ್ಷೆ
*ಸ್ಥಳೀಯವಾಗಿ ನಿರ್ಮಾಣಗೊಂಡ ಮೊಬೈಲ್ ಫೋನ್
* ಎಲ್ಇಡಿ/ಎಲ್ ಸಿಡಿ ಪರದೆಗಳು
* ಎಲ್ಇಡಿ ಲೈಟ್ಸ್ ಹಾಗೂ ಎಲ್ಇಡಿ ಲ್ಯಾಂಪ್ಸ್
* ಸೌರ ಆಧಾರಿತ ನೀರು ಬಿಸಿ ಮಾಡುವ ಸಾಧನ
* ಪ್ರಸಾಧನ ಸಾಮಗ್ರಿಗಳು
* ಆಂಬುಲೆನ್ಸ್ ಹಾಗೂ ಆಂಬುಲೆನ್ಸ್ ಸೇವೆಗಳು
* ಟ್ಯಾಬ್ಲೆಟ್
* ಅಗರಬತ್ತಿ
* ಮೈಕ್ರೋ ಅವೆನ್
* ಫಿಡ್ಜ್
* ಕಡಲೇ ಬೆಣ್ಣೆ, ಪ್ಯಾಕ್ ಮಾಡಿದ ಹಣ್ಣು ಹಾಗೂ ತರಕಾರಿಗಳು
* ಮ್ಯೂಸಿಯಂ, ಪ್ರಾಣಿ ಸಂಗ್ರಹಾಲಯಗಳು,ರಾಷ್ಟ್ರೀಯ ಉದ್ಯಾನಗಳ ಭೇಟಿ



ಕೇಂದ್ರ ಬಜೆಟ್: ಯಾವ್ಯಾವುದಕ್ಕೆ ಎಷ್ಟೆಷ್ಟು ವೆಚ್ಚ..?

28 Feb ಕೇಂದ್ರದ ಬಳಿ ಇರುವ ಒಟ್ಟು ಮೊತ್ತದಲ್ಲಿ ಯಾವ್ಯಾವುದಕ್ಕೆ ಎಷ್ಟೆಷ್ಟು ಪ್ರಮಾಣದಲ್ಲಿ ವೆಚ್ಚವಾಗುತ್ತದೆ ಎಂಬ ವಿವರ ಇಲ್ಲಿದೆ. ನಾವು ಕಟ್ಟುವ ತೆರಿಗೆ ಹಣ ಎಲ್ಲಿ ಹೋಗುತ್ತವೆ ಎಂಬುದನ್ನ ತಿಳಿಯಿರಿ.
1) ರಾಜ್ಯಗಳಿಗೆ ತೆರಿಗೆಗಳ ಪಾಲು: ಶೇ. 23
2) ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಯೋಜನೇತರ ನೆರವು: ಶೇ. 5 
3) ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಯೋಜನಾ ನೆರವು: ಶೇ. 9 
4) ಕೇಂದ್ರ ಯೋಜನಾ ವೆಚ್ಚ: ಶೇ. 11 
5) ಬಡ್ಡಿ ಪಾವತಿ: ಶೇ. 20 
6) ರಕ್ಷಣಾ ಕ್ಷೇತ್ರ: ಶೆ. 11 
7) ಸಬ್ಸಿಡಿ: ಶೇ.10 
8) ಇತರ ಯೋಜನೇತರ ವೆಚ್ಚ: ಶೇ. 11












ಜೇಟ್ಲಿ ಬಜೆಟ್: ಯಾವ್ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಹಣ..?


jetli bajet: yaavyaava kshetrakke eshteshtu hana..? ಅರುಣ್ ಜೇಟ್ಲಿ ಮಂಡಿಸಿದ ಬಜೆಟ್'ನಲ್ಲಿ ಯಾವ್ಯಾವ ಕ್ಷೇತ್ರಗಳಿಗೆ ಎಷ್ಟೆಷ್ಟು ಹಣ ವಿನಿಯೋಗ ಮಾಡುತ್ತಿದ್ದಾರೆ ಎಂಬ ವಿವರ ಇಲ್ಲಿದೆ.  *ಒಟ್ಟು ಬಜೆಟ್ ಮೊತ್ತ: 5,78,382 ಕೋಟಿ ರೂ. 
1) ಕೃಷಿ, ಗ್ರಾಮೀಣಾಭಿವೃದ್ಧಿ, ನೀರಾವರಿ ಇತ್ಯಾದಿ ಕ್ಷೇತ್ರ: 15,560 ಕೋಟಿ ರೂ. 
2) ಇಂಧನ: 1,67,342 ಕೋಟಿ ರೂ. 
3) ಕೈಗಾರಿಕೆ ಮತ್ತು ಖನಿಜ: 43,113 ಕೋಟಿ ರೂ. 
4) ಸಾಗಣೆ: 1,93,417 ಕೋಟಿ ರೂ. 
5) ಸಂವಹನ(ಕಮ್ಯೂನಿಕೇಶನ್ಸ್): 12,032 ಕೋಟಿ 
6) ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ: 19,023 ಕೋಟಿ ರೂ. 
7) ಸಾಮಾನ್ಯ ಆರ್ಥಿಕ ಸೇವೆ: 20,333 ಕೋಟಿ 
8) ಸಾಮಾಜಿಕ ಸೇವೆ: 81,003 ಕೋಟಿ 
9) ಸಾಮಾನ್ಯ ಸೇವೆ: 26,559 ಕೋಟಿ

ಕೇಂದ್ರ ಬಜೆಟ್: ಕ್ಷೇತ್ರವಾರು ಸಂಕ್ಷಿಪ್ತ ನೋಟ

: * ಸಂಪತ್ತು ತೆರಿಗೆ ರದ್ದು
 * 1 ಕೋಟಿ ರೂ.ಗಿಂತ ಹೆಚ್ಚಿನ ಆದಾಯ ಇರುವ ಅತೀ ಶ್ರೀಮಂತರಿಗೆ 2% ಹೆಚ್ಚುವರಿ ಸರ್​ಚಾರ್ಜ್ ಹೇರಿಕೆ
 * ಮುಂದಿನ ನಾಲ್ಕು ವರ್ಷಗಳಿಗೆ ಕಾರ್ಪೊರೇಟ್ ತೆರಿಗೆ 25% ಕಡಿತ
 * ಆದಾಯ ತೆರಿಗೆ ಸ್ಲಾಬ್​ನಲ್ಲಿ ಬದಲಾವಣೆ ಇಲ್ಲ
 * ಒಟ್ಟು 4,44,200 ರೂ. ವರೆಗೆ ವೈಯಕ್ತಿಕ ತೆರಿಗೆ ವಿನಾಯತಿ ಲಾಭದ ಅವಕಾಶ.
 * ಸ್ವಚ್ಛ ಭಾರತ ಮತ್ತು ಸ್ವಚ್ಛ ಗಂಗಾ ಯೋಜನೆ ವಂತಿಗೆಗಳಿಗೆ ಶೇಕಡಾ 100% ತೆರಿಗೆ ವಿನಾಯಿತಿ
 * ಸೇವಾ ತೆರಿಗೆ 14% ಕ್ಕೆ ಏರಿಕೆ
 * ಚಿನ್ನ ಆಮದು ನಿಯಂತ್ರಣಕ್ಕಾಗಿ ಅಶೋಕ ಚಕ್ರವುಳ್ಳ ಭಾರತೀಯ ಚಿನ್ನದ ನಾಣ್ಯ, ಚಿನ್ನದ ಬಾಂಡ್ ಬಿಡುಗಡೆ ಮತ್ತು ಚಿನ್ನದಿಂದ ಹಣಗಳಿಸುವ ಯೋಜನೆಗಳ ಜಾರಿ. ಕೃಷಿ:
 * ಗ್ರಾಮೀಣ ಮೂಲಸವಲತ್ತು ಅಭಿವೃದ್ಧಿ ಬ್ಯಾಂಕ್​ಗೆ 25 ಸಾವಿರ ಕೋಟಿ ರೂ. 
* ಸೂಕ್ಷ್ಮ ನೀರಾವರಿ ಕಾರ್ಯಕ್ರಮಗಳಿಗೆ 5,300 ಕೋಟಿ ರೂ. * ಕೃಷಿ ಸಾಲ - 8.5 ಲಕ್ಷ ಕೋಟಿ ರೂ. ಮೂಲ ಸೌಕರ್ಯ: 
* ಮೌಲಸೌಕರ್ಯ ವೃದ್ಧಿಗೆ 70,000 ಕೋಟಿ ರೂ. 
* ರೈಲ್ವೆ, ರಸ್ತೆ ಮತ್ತು ನೀರಾವರಿ ಯೋಜನೆಯಲ್ಲಿ ತೆರಿಗೆ ಮುಕ್ತ ಬಾಂಡ್
 * ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ ಮೌಲ ಸೌಕರ್ಯ ಅಭಿವೃದ್ಧಿಗೆ ಪುನಶ್ಚೇತನ, ಸರ್ಕಾರ ಹೆಚ್ಚಿನ ಹೊರೆ ತೆಗೆದುಕೊಳ್ಳಲಿದೆ. 
* ಸಂಶೋಧನೆ ಮತ್ತು ಅಭಿವೃದ್ಧಿಗೆ 150 ಕೋಟಿ ರೂ.
 * 5 ಬೃಹತ್ ವಿದ್ಯುತ್ ಉತ್ಪಾದನಾ ಯೋಜನೆಗಳು, ಪ್ರತಿಯೊಂದು 4 ಸಾವಿರ ಮೆಗವಾಟ್


ಕಪ್ಪು ಹಣದ ವಿರುದ್ಧ ಕಠಿಣ ಕ್ರಮಗಳನ್ನ ವಿತ್ತ ಸಚಿವ ಅರುಣ್ ಜೆಟ್ಲಿ ಘೋಷಿಸಿದ್ದಾರೆ.

* ಕಪ್ಪು ಹಣ ಹೊಂದಿರವವರಿಗೆ ಹತ್ತು ವರ್ಷ ಜೈಲು ಶಿಕ್ಷೆ, ಈ ಅಪರಾಧಕ್ಕೆ ಜಾಮೀನು ಸಿಗುವುದಿಲ್ಲ. ಈ ಬಗ್ಗೆ ಅಗತ್ಯ ತಿದ್ದುಪಡಿ ಮಾಡುವುದಾಗಿ ಹೇಳಿದ್ದಾರೆ. 
* ನಿರ್ಭಯಾ ನಿಧಿಗೆ ಮತ್ತೆ ಒಂದು ಸಾವಿರ ಕೋಟಿ ರೂಪಾಯಿ ಘೋಷಣೆ ಬೇನಾಮಿ ಆಸ್ತಿ ಪತ್ತೆಗೆ ಹೊಸ ಕ್ರಮ ವೈಯಕ್ತಿಕ ಆದಾಯ ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. 
* 2.5 ಲಕ್ಷದವರೆಗೆ ಯಾವುದೇ ತೆರಿಗೆ ಇಲ್ಲ. 
* 2.5ರಿಂದ 5 ಲಕ್ಷದವರೆಗೆ ಶೇ.10ರಷ್ಟು, 
* 5ರಿಂದ 10ಲಕ್ಷದ ವರೆಗೆ ಶೇ. 20, 
* 10ಲಕ್ಷಕ್ಕೂ ಮೇಲ್ಪಟ್ಟು ಶೇ. 30ರಷ್ಟು ತೆರಿಗೆ ಮುಂದುವರೆಯಲಿದೆ. 
*ಕಪ್ಪುಹಣವುಳ್ಳವರಿಗೆ 10 ವರ್ಷ, ಐಟಿ ರಿಟರ್ನ್ಸ್ ಫೈಲ್ ಮಾಡದಿದ್ದಲ್ಲಿ ಏಳು ವರ್ಷ ಜೈಲು ಶಿಕ್ಷೆ. ಒಂದು ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಯಾವುದೇ ಖರೀದಿಗೆ ಪಾನ್ ನಂ. ಕಡ್ಡಾಯ ಸೇವಾ ತೆರಿಗೆಯನ್ನು ಶೇ> 12ರಿಂದ ಶೇ. 14ಕ್ಕೆ ಹೆಚ್ಚಿಸಲಾಗಿದೆ

ಪ್ರಗತಿಗೆ ಪೂರಕ ಬಜೆಟ್: ನ್ಯೂಯಾರ್ಕ್ ಟೈಮ್ಸ್


pragatige puraka bajet: nyuyaark taims ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಗೆ ಅಮೆರಿಕದ ಪ್ರತಿಷ್ಠಿತ ನ್ಯೂಯಾರ್ಕ್ ಪತ್ರಿಕೆಯಿಂದಲೂ ಮೆಚ್ಟುಗೆ ವ್ಯಕ್ತವಾಗಿದೆ. 
* ಇದು ಬೆಳವಣಿಗೆ ಯನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿದ ಬಜೆಟ್. 
* ಮೂಲಸೌಲಭ್ಯಕ್ಕಾಗಿ ಭಾರಿ ವೆಚ್ಚ, ಕಾರ್ಪೋರೇಟ್ ತೆರಿಗೆ ಕಡಿತದಂಥ ಬಜೆಟ್ ಕ್ರಮಗಳನ್ನು ಭಾರತದ ಉದ್ಯಮ ವಲಯವೂ ಸ್ವಾಗತಿಸಿದೆ. 
* ಈ ಮಾರುಕಟ್ಟೆ ಸ್ನೇಹಿ ಕ್ರಮಗಳ ಜತೆಗೆ ಕಡಿಮೆ ದರದ ವಿಮೆ, ಪಿಂಚಣಿಗಳಂಥ ಬಡವರ ಪರ ಹೊಸ ಕಲ್ಯಾಣ ಕಾರ್ಯಕ್ರಮಗಳನ್ನೂ ಬಜೆಟ್ ನಲ್ಲಿ ಘೋಷಿಸಲಾಗಿದೆ. 
* ಈ ಮೂಲಕ ಉದ್ಯಮ ಹಾಗೂ ಜನಸಾಮಾನ್ಯ ಇಬ್ಬರನ್ನೂ ಮೆಚ್ಚಿಸುವ ಪ್ರಯತ್ನ ಮಾಡಲಾಗಿದೆ. 
* ಭಾರತದ ಆರ್ಥಿಕ ತಜ್ಞರು ಹಾಗೂ ಉದ್ಯಮಿಗಳು ಈ ಬಜೆಟ್ಗಾಗಿ ಕುತೂಹಲದಿಂದ ಕಾಯುತ್ತಿದ್ದರು. 
* ಈ ಬಜೆಟ್ ಹೂಡಿಕೆಗೆ ಉತ್ತೇಜನ ನೀಡುವಂಥ ಅನೇಕ ಸುಧಾರಣಾ ಕ್ರಮಗಳನ್ನು ಒಳಗೊಳ್ಳಲಿದೆ ಎಂದು ನಿರೀಕ್ಷಿಸಿದ್ದರು. 
* ಆದರೆ, ಬಜೆಟ್ ನಲ್ಲಿ ಪ್ರಸ್ತಾಪಿತ ಘೋಷಣೆಗಳು ಆರ್ಥಿಕ ಬೆಳವಣಿಗೆಗೆ ಪೂರಕವಾಗಿವೆಯಷ್ಟೆ. ಬಜೆಟ್ ಹಿನ್ನೆಲೆಯಲ್ಲಿ ತೆರೆದಿದ್ದ ಷೇರು ಮಾರುಕಟ್ಟೆಗಳು ಕುಸಿತ ಕಂಡವು.
* ಬಜೆಟ್ ಗೂ ಮೊದಲು ಸರ್ಕಾರಿ ವೆಚ್ಚವನ್ನು ಕಡಿತ ಮಾಡಬೇಕೇ ಅಥವಾ ಬೆಳವಣಿಗೆಗೆ ಉತ್ತೇಜನ ನೀಡಲು ಸಾರ್ವಜನಿಕ ಹೂಡಿಕೆಯನ್ನು ಜಾಸ್ತಿ ಮಾಡಿ,
* ಈ ಮೂಲಕ ಸಾಲದ ಸುಳಿಯಲ್ಲಿ ಸಿಲುಕಿರುವ ಖಾಸಗಿ ಕ್ಷೇತ್ರ ಹಾಗೂ ಒತ್ತಡದಲ್ಲಿರುವ ಬ್ಯಾಂಕ್ ಗಳ ಹೊರೆಯನ್ನು 
ಇಳಿಸ ಬೇಕೇ

ಕೇಂದ್ರದಿಂದ ರಾಜ್ಯಗಳ ತೆರಿಗೆ ಪಾಲು ಹೆಚ್ಚಳ..!


kendradindha raajyagala terige paalu hechhala..! * ಕೇಂದ್ರ-ರಾಜ್ಯಗಳ ತೆರಿಗೆ ಹಂಚಿಕೆಯಲ್ಲಿ 2015-16ನೇ ಸಾಲಿನಿಂದ ರಾಜ್ಯಗಳ ಪಾಲು ಹೆಚ್ಚಾಗಲಿದ್ದು, ಕೇಂದ್ರ ಸಂಗ್ರಹಿಸುವ ತೆರಿಗೆಯಲ್ಲಿ ರಾಜ್ಯಗಳಿಗೆ ಸಿಗುವ ಪಾಲು ಹೆಚ್ಚಾಗುವ ಸಾಧ್ಯತೆ ಇದೆ. 
* ಈ ಹಿಂದೆ ರಾಜ್ಯಕ್ಕೆ ನೀಡಲಾಗುತ್ತಿದ್ದ ತೆರಿಗೆ ಪಾಲನ್ನು ಶೇ.32ರಿಂದ 42ಕ್ಕೆ ಏರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. 
*ಸಾಲದ ಸುಳಿಯಲ್ಲಿ ಸಿಲುಕಿರುವ ಮತ್ತು ಪ್ರತಿ ವರ್ಷವೂ ವಿತ್ತೀಯ ಶಿಸ್ತು ಮೀರಿ ಸಾಲ ಮಾಡುತ್ತಿರುವ ರಾಜ್ಯಗಳಿಗೆ ಇದರಿಂದ ಹೆಚ್ಚು ಅನುಕೂಲ ಆಗಲಿದೆ. 
* ಈ ಹೆಚ್ಚಳಕ್ಕೆ ಮುಖ್ಯ ಕಾರಣ ಆರ್‍ಬಿಐನ ನಿವೃತ್ತ ಗವರ್ನರ್ ವೈ.ವಿ. ರೆಡ್ಡಿ ನೇತತ್ವದ 14ನೇ ಹಣಕಾಸು ಆಯೋಗವು 2015-2020ರ ಅವಧಿಯಲ್ಲಿ ರಾಜ್ಯಗಳಿಗೆ ನೀಡುವ ತೆರಿಗೆ ಪಾಲನ್ನು ಈಗಿರುವ ಶೇ.32ರಿಂದ ಶೇ.42ಕ್ಕೆ ಹೆಚ್ಚಿಸಲು ಶಿಫಾರಸು ಮಾಡಿತ್ತು. 
* 14ನೇ ಹಣಕಾಸು ಆಯೋಗದ ಶಿಫಾರಸು ಜಾರಿಯ ಮೊದಲ ವರ್ಷ ತೆರಿಗೆ ಪಾಲಿನಲ್ಲಿ ವಿತ್ತ ಸಚಿವ ಅರುಣ್ ಜೆಟ್ಲಿ ಶೇ.2.5ರಷ್ಟು ಹೆಚ್ಚಳ ಮಾಡುವ ನಿರೀಕ್ಷೆ ಇದೆ. 
* ಬರುವ ಮುಂಬರುವ ವರ್ಷಗಳಲ್ಲಿ ಒಟ್ಟು ಶೇ.10 ರಷ್ಟು ಹೆಚ್ಚಳ ಆಗಲಿದೆ. ಆದರೆ, ಕೇವಲ ಬರೀ ತೆರಿಗೆಯಲ್ಲಿನ ಪಾಲು ಹೆಚ್ಚಿಸುವುದಷ್ಟೇ ಅಲ್ಲದೇ, ರಾಜ್ಯಗಳಿಗೆ ಹೆಚ್ಚಿನ ಪಾಲು ನೀಡಿದಷ್ಟೂ ಅವುಗಳ ಜವಾಬ್ದಾರಿ ಹೆಚ್ಚಿಸುವ ಕೆಲಸಕ್ಕೂ ಕೇಂದ್ರ ಸರ್ಕಾರ ಮುಂದಾಗಿದೆ. 
* ಮೊದಲ ಹಂತದಲ್ಲಿ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಒದಗಿಸುತ್ತಿರುವ ಅನುದಾನವನ್ನು ಕಡಿತ


ರೈಲ್ವೆ ಬಜೆಟ್‌ನಲ್ಲಿ 15 ಪ್ರಯಾಣಿಕ ಸ್ನೇಹಿ ಘೋಷಣೆಗಳು


railve bajetnalli 15 prayaanika snehi ghoshanegaluರೈಲ್ವೆ ಸಚಿವ ಸುರೇಶ್ ಪ್ರಭು ರೈಲ್ವೆ ಬಜೆಟ್ ಮಂಡನೆ ಮಾಡುತ್ತಾ, ಪ್ರಯಾಣಿಕರ ಹಿತಾಸಕ್ತಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಲಿದೆ ಎಂದಿದ್ದಾರೆ. 
* ರೈಲ್ವೆ ಬಜೆಟ್ ನಲ್ಲಿ 15 ಪ್ರಯಾಣಿಕ ಸ್ನೇಹಿ ಪ್ರಕಟಣೆಗಳನ್ನು ಸುರೇಶ್ ಪ್ರಭು ಮಾಡಿದ್ದಾರೆ. 
1* ರೈಲ್ವೆ ಪ್ರಯಾಣದರಗಳಲ್ಲಿ ಯಾವುದೇ ಏರಿಕೆ ಇಲ್ಲ 
2 * ಜನರ ದೂರುಗಳನ್ನು ಆಲಿಸಲು ಮೊಬೈಲ್ ಅಪ್ಲಿಕೇಷನ್
3 * ಟಿಕೆಟ್ ಕಾದಿರಿಸುವಿಕೆ ಇಲ್ಲದ ಪ್ರಯಾಣಿಕನಿಗೆ 5 ನಿಮಿಷಗಳಲ್ಲಿ ಟಿಕೆಟ್ ಖರೀದಿಸುವ ಖಾತರಿಗೆ 'ಆಪರೇಷನ್ 5 ಮಿನಿಟ್ಸ್' 
4* ರೈಲುಗಳ ಆಗಮನ ಮತ್ತು ನಿರ್ಗಮನಗಳ ಬಗ್ಗೆ ಮಾಹಿತಿಗಾಗಿ ಪ್ರಯಾಣಿಕರಿಗೆ ಎಸ್‌ಎಂಎಸ್ ಅಲರ್ಟ್ ಸೇವೆಗಳು
5 * ಅಂಗವಿಕಲ ಪೌರರಿಗೆ, ಹಿರಿಯ ಪೌರರಿಗೆ, ಐಆರ್‌ಸಿಟಿಸಿ ಮೂಲಕ ರೋಗಿಗಳಿಗೆ ವಿಶೇಷ ಸೌಲಭ್ಯಗಳು 
6* ಕೆಲವು ಗುರುತಿಸಿದ ರೈಲುಗಳಲ್ಲಿ 24ರಿಂದ 26 ಬೋಗಿಗಳು, ಹೆಚ್ಚು ಜನರಲ್ ಕ್ಲಾಸ್ ಬೋಗಿಗಳು 
7* 400 ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯದ ಸೇವೆ
8 * ಪಾನ್ ಇಂಡಿಯಾ 24X 7 ಸಹಾಯವಾಣಿ ಸಂಖ್ಯೆ ಜಾರಿಗೆ
9 * ಸಂಯೋಜಿತ ಟಿಕೆಟಿಂಗ್ ಜಾರಿಗ, ಪ್ರಯಾಣ ಸುಗಮವಾಗಿರಲು ರಕ್ಷಣಾ ಪ್ರಯಾಣ ವ್ಯವಸ್ಥೆ ಅಭಿವೃದ್ಧಿ. 
10* 17,000 ಶೌಚಾಲಯಗಳ ಬದಲಿಗೆ ಈ ವರ್ಷ ಜೈವಿಕ ಶೌಚಾಲಯಗಳ ನಿರ್ಮಾಣ. 
11* ಆಯ್ದ ಮಾರ್ಗಗಳಲ್ಲಿ ಮತ್ತು ಮಹಿಳೆಯರ ಬೋಗಿಗಳಲ್ಲಿ ನಿಗಾ ಕ್ಯಾಮೆರಾಗಳ ಅಳವಡಿಕೆ ಸ್ವಚ್ಛ ರೈಲು ಸ್ವಚ್ಛ ಭಾರತ್ ಯೋಜನೆಯಡಿ ರೈಲ್ವೆಯಲ್ಲಿ ಸ್ವಚ್ಛತೆಗೆ



logoblog

Thanks for reading ಬಜೆಟ್‌ -2014-15

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *