ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ರಾಜ್ಯಶಾಸ್ತ್ರ (POL.SCIENCE) | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Saturday, March 07, 2015

ರಾಜ್ಯಶಾಸ್ತ್ರ (POL.SCIENCE)

  Pundalik       Saturday, March 07, 2015

ಅಧ್ಯಾಯ 1. ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು (PS)

ಮುಖ್ಯಾಂಶಗಳು:
ತಾವು ವಾಸಿಸುವ ಪ್ರದೇಶದ ಬಗ್ಗೆ ಅತ್ಯಂತ ಗಾಢವಾದ ಅಭಿಮಾನ ಬೆಳೆಸಿಕೊಂಡಿರುವುದನ್ನು ಪ್ರಾದೇಶಿಕವಾದ ಎನ್ನುತ್ತೇವೆ.
ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳ ವಿಭಜನೆಯು 1956 ರಲ್ಲಿ ಆಯಿತು.
ಕರ್ನಾಟಕದಲ್ಲಿ ಬ್ರಷ್ಟಾಚಾರ ನಿಯಂತ್ರಿಸಲು ಲೋಕಾಯುಕ್ತ ಸಂಸ್ಥೆ ಅಸ್ತಿತ್ವದಲ್ಲಿದೆ.
2011ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆಯು 121 ಕೋಟಿ ದಾಟಿದೆ.
ಬಳಕೆದಾರರಿಂದ ಹೆಚ್ಚಿನ ಲಾಭ ಗಳಿಸುವ ಧೋರಣೆಯನ್ನು ಲಾಭಕೋರತನ ಎಂದು ಕರೆಯುತ್ತಾರೆ.
ಕೋಮುವಾದವೆಂದರೆ ಅನ್ಯ ಧರ್ಮೀಯರ ಬಗ್ಗೆ ಸೈರಣೆ ಇಲ್ಲದಿರುವದಾಗಿದೆ.
2011ರ ಜನಗಣತಿಯ ಪ್ರಕಾರ ಭಾರತದ ಸಾಕ್ಷರತೆಯ ಪ್ರಮಾಣ ಶೇ. 74 ಆಗಿರುತ್ತದೆ.
ಅನಕ್ಷರಸ್ಥರನ್ನು ಸಾಕ್ಷರನನ್ನಾಗಿ ಮಾಡಲು ಭಾರತ ಸರ್ಕಾರ 1988 ರಲ್ಲಿ ರಾಷ್ಟ್ರೀಯ ಸಾಕ್ಷರತಾ ಮಿಷನ್ ಸ್ಥಾಪಿಸಿದೆ.
ಸಂವಿಧಾನದ 21 ನೇ ವಿಧಿಯನ್ವಯ ಶಿಕ್ಷಣದ ಹಕ್ಕನ್ನು ಮೂಲಭೂತ ಹಕ್ಕಾಗಿ ಪರಿಗಣಿಸಿದೆ.
2009ರಲ್ಲಿ ದೇಶದಾದ್ಯಂತ ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೆ ತರಲಾಗಿದೆ.
ಕರ್ನಾಟಕದ ಸ್ಥಳೀಯ ಸಂಸ್ಥೆಗಳಲ್ಲಿನ ಚುನಾವಣೆಗಳಲ್ಲಿ ಮಹಿಳಾ ಮೀಸಲಾತಿಯನ್ನು ಶೇ. 33 ರ ಪ್ರಮಾಣದಲ್ಲಿ ಅನುಷ್ಟಾಗೊಳಿಸಲಾಗಿರುತ್ತದೆ.

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಸ್ವಾತಂತ್ರ್ಯಾನಂತರ ಭಾರತ ದೇಶ ಎದುರಿಸುತ್ತಿರುವ ಸಮಸ್ಯೆಗಳಾವವು?
  ಕೋಮುವಾದ, ಪ್ರಾದೇಶಿಕವಾದ, ಆರ್ಥಿಕ ಅಸಮಾನತೆ, ಜನಸಂಖ್ಯೆ ಹೆಚ್ಚಳ, ಬಡತನ, ಲಾಭಕೋರತನ,
ಕಳ್ಳಸಾಗಾಣಿಕೆ, ಬ್ರಷ್ಟಾಚಾರ ಅನಕ್ಷರತೆ ಮುಂತಾದವು.

2. ಕೋಮುವಾದ ದೇಶದ ಐಕ್ಯತೆಗೆ ಮಾರಕ. ಹೇಗೆ?
ಕೋಮುವಾದವೆಂದರೆ ಅನ್ಯ ಧರ್ಮೀಯರ ಬಗ್ಗೆ ಸೈರಣೆ ಇಲ್ಲದಿರುವದಾಗಿದೆ.
ಕೋಮುವಾದ ಸಮಾಜದಲ್ಲಿ ದ್ವೇಶ ಅಸುಹೆಗಳನ್ನು ಹುಟ್ಟುಹಾಕುತ್ತದೆ.
ಕೋಮುವಾದ ದೇಶದ ಜನತೆಯನ್ನು ಮತೀಯ ಆಧಾರದ ಮೇಲೆ ವಿಭಜಿಸಿ ದೇಶವನ್ನು ದುರ್ಬಲಗೊಳಿಸುತ್ತದೆ.
ಕೋಮುವಾದ ನಮ್ಮ ಜಾತ್ಯಾತೀತ ತತ್ವಗಳಿಗೆ ವಿರುದ್ಧವಾಗಿದೆ.
ಭಾರತದ ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರುತ್ತದೆ.

3. ಪ್ರಾದೇಶಿಕವಾದ ಎಂದರೇನು?
   ಒಂದು ನಿರ್ದಿಷ್ಟ ಜನಸಮುದಾಯ ತಾವು ವಾಸಿಸುವ ಪ್ರದೇಶವನ್ನೇ ಅತ್ಯಂತ ಗಾಡವಾಗಿ ಪ್ರೀತಿಸ, ಕೇವಲ ಆ ಭಾಗದ ಬಗ್ಗೆಯೇ ಸಂಕುಚಿತವಾದ ಅತಿಯಾದ ಅಭಿಮಾನವನ್ನು
ಬೆಳೆಸಿಕೊಂಡರೆ ಅದನ್ನು ಪ್ರಾದೇಶಿಕವಾದ ಎಂದು ಕರೆಯುತ್ತಾರೆ.

4. ಪ್ರಾದೇಶಿಕವಾದವು ದೇಶದ ಅಭಿವೃದ್ಧಿಗೆ ಮಾರಕವಾಗುತ್ತದೆ. ಚರ್ಚಿಸಿ.
ಪ್ರಾದೇಶಿಕ ಮನೋಭಾವ ತೀರಾ ಹೆಚ್ಚು ಎನಿಸಿದರೆ ಅದು ರಾಷ್ಟ್ರದ ಏಕತೆ ಹಾಗೂ ಹಿತಾಸಕ್ತಿಗೆ ಧಕ್ಕೆ ಒದಗಿಸುತ್ತದೆ.
ಅತಿಯಾದ ಭಾಷಾಭಿಮಾನವೂ ರಾಷ್ಟ್ರೀಯವಾದದ ವಿರುದ್ಧ ಸಂಕುಚಿತ ಮನೋಭಾವವನ್ನು ಬೆಳೆಸುತ್ತದೆ. ಉದಾ : ತೆಲಂಗಾಣ ವಿವಾದ.
ಇದು ದೇಶದ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತದೆ.

5. ಸಾಕ್ಷರತೆಯನ್ನು ವೃದ್ಧಿಸಲು ಕೈಗೊಂಡಿರುವ ಕ್ರಮಗಳಾವವು?
ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕರಣಕ್ಕಾಗಿ ಸರ್ವಶಿಕ್ಷಣ ಅಭಿಯಾನ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ.
ಅನಕ್ಷರತೆಯನ್ನು ಹೋಗಲಾಡಿಲು ಭಾರತ ಸರಕಾರವು 1988 ರಲ್ಲಿ ‘ರಾಷ್ಟ್ರೀಯ ಸಾಕ್ಷರತಾ ಮಿಷನ್ ಸ್ಥಾಪಿಸಿದೆ.
2009 ರಲ್ಲಿ ದೇಶಾದಾದ್ಯಂತ ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಿದೆ.
ಸಂವಿಧಾನದ 21ನೇ ವಿಧಿಯನ್ವಯ ಶಿಕ್ಷಣದ ಹಕ್ಕನ್ನು ಮೂಲಭೂತ ಹಕ್ಕಾಗಿ ಪರಿಗಣಿಸಿದೆ.
ಅಕ್ಷರ ದಾಸೋಹ ಯೋಜನೆ & ಕ್ಷೀರ ಯೋಜನೆಗಳನ್ನು ಜಾರಿಗೆ ತಂದಿದೆ.
ಸರ್ಕಾರಿ ಶಾಲೆಯ ಎಲ್ಲಾ ಮಕ್ಕಳಿಗೂ ಉಚಿತ ಸಮವಸ್ತ್ರ & ಪಠ್ಯಪುಸ್ತಕಗಳನ್ನು ವಿತರಿಸಲಾಗುತ್ತಿದೆ.

6. ಲಾಭಕೋರತನ ಎಂದರೇನು? ಉದಾಹರಣೆ ಕೊಡಿ.
   ಲಾಭಕೋರತನವೆಂದರೆ ಅತಿ ಹೆಚ್ಚಿನ ಲಾಭ ಪಡೆಯಲು ಅನೈತಿಕ ಮಾರ್ಗ ಅನುಸರಿಸುವದಾಗಿದೆ.
ತೂಕ ಮತ್ತು ಅಳತೆಗಳಲ್ಲಿ ಮೋಸ. 2. ಕಲಬೆರೆಕೆ ವಸ್ತುಗಳ ಮಾರಾಟ ಪದಾರ್ಥಗಳಿಗೆ ಅಧಿಕ ಬೆಲೆ ವಿಧಿಸುವದು.

7. ಮಹಿಳೆಯರ ಸ್ಥಾನಮಾನ ಉತ್ತಮಪಡಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳಾವವು?
ಮಹಿಳೆಯರ ಸಬಲೀಕರಣಕ್ಕಾಗಿ ಮಹಿಳಾ ಶಿಕ್ಷಣ, ಬಾಲ್ಯವಿವಾಹ ನಿಷೇದ ಕಾಯ್ದೆ, ವರದಕ್ಷಿಣೆ ನಿμಇಂzಂ ಕಾಯ್ದೆ & ಬಹುಪತ್ನಿತ್ವ ನಿಷೇದ ಕಾಯ್ದೆ ಮುಂತಾದ ಕಾರ್ಯಕ್ರಮಗಳನ್ನು ರೂಪಿಸಿದೆ.
ಕರ್ನಾಟಕ ಸರ್ಕಾರವು ಗ್ರಾಮಾಂತರ ಮಹಿಳೆಯರ ವಿಕಾಸಕ್ಕೆ ‘ಸ್ತ್ರೀ ಶಕ್ತಿ’ ಎಂಬ ಕಾರ್ಯಕ್ರಮವನ್ನು ರೂಪಿಸಿದೆ.
ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ನಿಗದಿತ ಪ್ರಮಾಣದ ಮೀಸಲಾತಿಯನ್ನು ನೀಡಲಾಗುತ್ತಿದೆ.
ಆಸ್ತಿಯಲ್ಲಿ ಸ್ತ್ರೀಯರಿಗೆ ಭಾಗ ನೀಡಬೇಕೆಂಬ ಕಾನೂನನ್ನು ಜಾರಿಗೊಳಿಸಲಾಗಿದೆ.

8. ದೇಶದ ಜನಸಂಖ್ಯೆಯನ್ನು ಮಾನವ ಸಂಪನ್ಮೂಲವೆಂದು ಪರಿಗಣಿಸಬಹುದಾಗಿದೆ. ಇದನ್ನು ಸಮರ್ಥಿಸಿ.
ಭಾರತ ಅಪಾರ ಜನಸಂಖ್ಯೆಯನ್ನು ರಾಷ್ಟ್ರೀಯ ಪ್ರಗತಿಗೆ ಅವಶ್ಯಕವಾದ ಮಾನವ ಸಂಪನ್ಮೂಲವನ್ನಾಗಿ ಪರಿವರ್ತಿಸುವ ಎಲ್ಲಾ ಸಾಧ್ಯತೆಗಳನ್ನೂ ಹೊಂದಿದೆ. 
ವೃತ್ತಿ ಕೌಶಲ್ಯ, ಉತ್ತಮ ಶಿಕ್ಷಣ ಮಾರ್ಗದರ್ಶನ, ಪರಿಣತಿ ಮುಂತಾದವುಗಳಿಂದ ದೇಶದ ಜನಸಂಖ್ಯೆಯು ಮಾನವ ಸಂಪನ್ಮೂಲವಾಗಿ ಪರಿವರ್ತನೆಯಾಗುತ್ತದೆ.
ಹೀಗೆ ಉತ್ತಮ ಶಿಕ್ಷಣ, ಆರೋಗ್ಯ, ವೃತ್ತಿ ತರಬೇತಿ, ಕೌಶಲ್ಯ ಹೊಂದಿದ ಜನಸಂಖ್ಯೆ ಮಾನವ ಸಂಪನ್ಮೂಲವಾಗುತ್ತದೆ.

9. ಕರ್ನಾಟಕ ರಾಜ್ಯದಲ್ಲಿ ಬಡತನ ನಿವಾರಣೆಗಾಗಿ ರೂಪಿಸಿರುವ ಯೋಜನೆಗಳನ್ನು ವಿವರಿಸಿ.
ಬಡಕುಟುಂಬಗಳಿಗೆ ಬಿಪಿಎಲ್ ಕಾರ್ಡುಗಳನ್ನು ವಿತರಿಸಲಾಗಿದೆ.
2 ಅನ್ನಭಾಗ್ಯ ಯೋಜನೆಯ ಮೂಲಕ ಪ್ರತಿ ಕುಟುಂಬಕ್ಕೂ 30 ಕೆ.ಜಿ. ಅಕ್ಕಿ ನೀಡಲಾಗುತ್ತಿದೆ.
ಜವಾಹರ ರೋಜಗಾರ ಯೋಜನೆ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಪ್ರಧಾನಮಂತ್ರಿ
ಗ್ರಾಮೋದಯ ಯೋಜನೆ ಮುಂತಾದವುಗಳು ಬಡತನ ನಿರ್ಮೂಲನ ಮಾಡಲು ಜಾರಿಗೆ ತಂದ ಯೋಜನೆಗಳಾಗಿವೆ.
ಬಡವರಿಗಾಗಿ ಉಚಿತ ವಸತಿ ಯೋಜನೆ, ಉಚಿತ ವಿದ್ಯುತ್‍ದೀಪ ಯೋಜನೆಗಳ ಮೂಲಕ ಸೌಕರ್ಯಗಳನ್ನು ರೂಪಿಸುತ್ತಿದೆ.

10. ಲಾಭಕೋರತನವು ಉತ್ಪಾದಕ ಮತ್ತು ಗ್ರಾಹಕರೀರ್ವರಿಗೂ ನಷ್ಟ ಉಂಟು ಮಾಡುತ್ತದೆ. ವಿವರಿಸಿ.
    ಲಾಭಕೋರತನದಲ್ಲಿ ಅನುಸರಿಸುವ ಅನೈತಿಕ ಮಾರ್ಗಗಳಿಂದ ವಸ್ತುಗಳ ಗುಣಮಟ್ಟವು ಕಡಿಮೆಯಾಗುತ್ತದೆ. ಇದರಿಂದ ಉತ್ಪಾದಿತ ವಸ್ತುಗಳನ್ನು ಕೊಳ್ಳುವವರ ಸಂಖ್ಯೆ ಕಡಿಮೆಯಾಗಿ ಉತ್ಪಾದಕನಿಗೆ ನಷ್ಟ ಉಂಟು ಮಾಡುತ್ತದೆ. & ಗ್ರಾಹಕನಿಗೂ ಸಹ ಮೌಲ್ಯಕ್ಕನುಗುಣವಾಗಿ ವಸ್ತುಗಳು ಸರಿಯಾಗಿ ಸಿಗದೇ ಮೋಸಕ್ಕೆ ಒಳಗಾಗಿ ನಷ್ಟವನ್ನು ಅನುಭವಿಸಬೇಕಾಗುತ್ತದೆ.
11. ಕಳ್ಳ ಸಾಗಾಣಿಕೆ ಎಂದರೇನು? ಇದನ್ನು ತಡೆಗಟ್ಟಲು ಸರ್ಕಾರ ಯಾವ ಕ್ರಮಗಳನ್ನು ಕೈಗೊಂಡಿದೆ?
    ಯಾವುದೇ ಆಮದು ಸುಂಕವನ್ನು ನೀಡದೆ ಗುಪ್ತವಾಗಿ ವಿದೇಶಗಳಿಂದ ವಸ್ತುಗಳನ್ನು ತರಿಸಿಕೊಳ್ಳುವುದನ್ನು ಕಳ್ಳಸಾಗಾಣಿಕೆ ಎಂದು ಕರೆಯುತ್ತಾರೆ.
ಕಳ್ಳ ಸಾಗಾಣಿಕೆ ತಡೆಗಟ್ಟಲು ಕೈಗೊಂಡ ಕ್ರಮಗಳು.
ಕಳ್ಳಸಾಗಾಣಿಕೆ ತಡೆಗಟ್ಟಲು ಸಮುದ್ರತೀರದ ಉದ್ದಕ್ಕೂ ಕರಾವಳಿ ರಕ್ಷಕ ಪಡೆಯನ್ನು ಕಾವಲು ಹಾಕಲಾಗಿದೆ.
ವಿಮಾನ ನಿಲ್ದಾಣಗಳಲ್ಲಿ ಕಸ್ಟ್‍ಮ್ಸ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ವಿದೇಶಿ ವಿನಿಮಯ ಉಳಿಕೆ & ಕಳ್ಳಸಾಗಾಣಿಕೆ ತಡೆಗಟ್ಟುವ ಶಾಸನ ( ಕಾಫಿಪೋಸಾ ) ಜಾರಿಗೆ ತರಲಾಗಿದೆ.
ಸರ್ಕಾರ ಕಳ್ಳಸಾಗಾಣಿಕೆಗೆ ಕಠಿಣ ಶಿಕ್ಷೆ & ಸುಂಕ ವಂಚಿತ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು.

12. ಲಾಭಕೋರತನ ತಡೆಗಟ್ಟಲು ಕೈಗೊಂಡ ಕ್ರಮಗಳಾವವು?
ಪ್ರತಿ ಉತ್ಪಾದಿತ ವಸ್ತುವಿನ ತೂಕ ಅಥವಾ ಅಳತೆ, ಅದರ ಗರಿಷ್ಟ ಬೆಲೆ, ಉತ್ಪಾದನಾ ತಾರೀಖು ಮತ್ತು ಅದರ ಬಳಕೆಯ ದಿನಮಿತಿಗಳನ್ನು ಅದರ ಮೇಲೆ ಮುದ್ರಿಸಬೇಕೆಂದು ಕೈಗಾರಿಕೆಗಳ ಮೇಲೆ ಕಾನೂನಿನ ನಿಬಂಧನೆ ಇದೆ.
ಪದಾರ್ಥಗಳ ಗುಣಮಟ್ಟ ಕಾಪಾಡಲೆಂದೇ ಇಂಡಿಯನ್ ಸ್ಟ್ಯಾಂಡರ್ಡ್‍ಸಂಸ್ಥೆ (ಐ.ಎಸ್.ಐ) ಸ್ಥಾಪಿಸಿದೆ.
ವ್ಯವಸಾಯ ಉತ್ಪನ್ನಕ್ಕೆ ಸಂಬಂಧಪಟ್ಟ ಪ್ರತಿಯೊಂದು ವಸ್ತುವಿನ ಮೇಲೆ ಅಗ್‍ಮಾರ್ಕನ್ನು ಕಡ್ಡಾಯಗೊಳಿಸಿದೆ.
ಗ್ರಾಹಕರನ್ನು ಶೋಷಣೆಯಿಂದ ರಕ್ಷಿಸಲೆಂದೇ 1986 ರಲ್ಲಿ ಗ್ರಾಹಕ ರಕ್ಷಣಾ ಕಾನೂನು ರಚಿಸಿದೆ.
ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣೆಗೆ ಪಡಿತರ ಅಂಗಡಿಗಳನ್ನು ತೆರೆಯಲಾಗಿದೆ.

13. ಭ್ರಷ್ಠಾಚಾರ ಎಂದರೇನು? ಇದನ್ನು ತಡೆಗಟ್ಟಲು ಸರ್ಕಾರ ಕೈಗೊಂಡ ಕ್ರಮಗಳಾವವು?
    ಭ್ರóಷ್ಟಾಚಾರ ಎಂದರೆ ಲಂಚ ಅಥವಾ ಇನ್ನಾವುದೇ ಕ್ರಮದಿಂದ ಕಾನೂನುಬಾಹಿರ ಕ್ರಮಕ್ಕೆ ಪ್ರಚೋದನೆ ನೀಡುವುದು ಎಂದು ಅರ್ಥ. ಭ್ರóಷ್ಟಾಚಾರವನ್ನು ತಡೆಗಟ್ಟಲು ಲೋಕಪಾಲ, ಲೋಕಾಯುಕ್ತದಂತಹ ಸಂಸ್ಥೆಗಳನ್ನು ಸ್ತಾಪಿಸಲಾಗಿದೆ.

14. ಕರ್ನಾಟಕದ ಸ್ಥಳೀಯ ಸಂಸ್ಥೆಗಳಲ್ಲಿ ಸ್ತ್ರೀಯರಿಗೆ ಶೆ. 33 ಮೀಸಲಾತಿ ನೀಡುವ ಮೂಲ ಕಾರಣವೇನು?
    ಮಹಿಳೆಯರ ಸ್ಥಾನಮಾನ ಉತ್ತಮಪಡಿಸುವ ಸಲುವಾಗಿ ರಾಜಕೀಯ ಮೀಸಲಾತಿ ನೀಡುವ ಉದ್ದೇಶದಿಂದ ಕರ್ನಾಟಕದ ಸ್ಥಳೀಯ ಸಂಸ್ಥೆಗಳಲ್ಲಿ ಸ್ತ್ರೀಯರಿಗೆ ಶೆ. 33 ಮೀಸಲಾತಿ ನೀಡಲಾಗಿದೆ.

15. ಮಹಿಳಾ ಸಬಲೀಕರಣ ಎಂದರೇನು?
   ಮಹಿಳೆಯು ಪುರುಷರಿಗೆ ಸರಿಸಮಾನವಾಗಿ ದೇಶದ ಪ್ರತಿ ರಂಗದಲ್ಲೂ ದಿಟ್ಟತನದಿಂದ ದುಡಿದು ಆರ್ಥಿಕವಾಗಿ ಸಾಮಾಜಿಕವಾಗಿ ಸ್ವಾವಲಂಬಿಯಾವುದನ್ನು ಮಹಿಳಾ ಸಬಲೀಕರಣ ಎನ್ನತ್ತಾರೆ.

ಅಧ್ಯಾಯ 2. ಭಾರತದ ವಿದೇಶಾಂಗ ನೀತಿ (PS)


ಮುಖ್ಯಾಂಶಗಳು:
ಭಾರತದ ವಿದೇಶಾಂಗ ನೀತಿಯನ್ನು ವಿ±ಇಂμಂವಾಗಿ ನಿರೂಪಿಸಿದವರು ಜವಾಹರಲಾಲ ನೆಹರುರವರು ಆದ್ದರಿಂದ ಇವರನ್ನು ಭಾರತದ ವಿದೇಶಾಂಗ ನೀತಿಯ ಶಿಲ್ಪಿ ಎಂದು ಕರೆಯುತ್ತಾರೆ.
ವಿಶ್ವದ ಯಾವುದೇ ಬಣಕ್ಕೆ ಸೇರದೇ ಇರುವ ನೀತಿಯನ್ನು ಅಲಿಪ್ತ್ ನೀತಿ ಎನ್ನಬಹುದು.
ಭಾರತವು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ವಸಾಹತುಶಾಹಿಗೆ ಒಳಪಟ್ಟಿತ್ತು.
ಭಾರತದ ಸಂವಿಧಾನವು ತನ್ನ 51ನೇ ವಿಧಿಯ ಮೂಲಕ ಅಂತರಾಷ್ಟ್ರೀಯ ಸಹಬಾಳ್ವೆ ಹಾಗೂ ಅಂತರಾಷ್ಟ್ರೀಯ ಕಾನೂನಿಗೆ ಗೌರವ ತಂದು ಕೊಡುವಂತಹ ವಿದೇಶಾಂಗ ನೀತಿ ಸೂಚಿಸುತ್ತದೆ.
1946 ಸೆಪ್ಟಂಬರ್ 7 ರಂದು ಜವಾಹರಲಾಲ ನೆಹರು ಅವರು ನೀಡಿದ ರೇಡಿಯೋ ಭಾಷಣದಲ್ಲಿ ವಿದೇಶಾಂಗ ನೀತಿಯ ರೂಪರೇಷಗಳ ಬಗ್ಗೆ ಅರಿವು ಮೂಡಿಸಿದ್ದರು.
1954ರಲ್ಲಿ ಭಾರತದ ಪ್ರದಾನಿ ನೆಹರು & ಚೀನಾದ ಪ್ರದಾನಿ ಚೌ.ಎನ್.ಲಾಯ್ ನಡುವೆ ವಿಶ್ವಶಾಂತಿ ದೃಷ್ಟಿಯಿಂದ ಪಂಚಶೀಲ ಒಪ್ಪಂದ ಏರ್ಪಟ್ಟಿತು.
ಎರಡನೇ ಮಹಾಯುದ್ಧದ ನಂತರ ಅಮೇರಿಕಾ & ಸೋವಿಯತ್ ರಷ್ಯಾ ಬಣಗಳ ನಡುವೆ ಶೀತಲ ಯುದ್ದ ಆರಂಭವಾಯಿತು.
ಮಾನವ ಹಕ್ಕುಗಳ ಉಲ್ಲಂಘನೆ ವಿಶ್ವಶಾಂತಿ & ಸಹಬಾಳ್ವೆಗೆ ಮಾರಕವಾಗುತ್ತದೆ.
ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ನೆಲ್ಸನ್ ಮಂಡೇಲಾರವರು ಹೋರಾಟ ನಡೆಸಿದರು.
ಭಾರತವು ಅಲಿಪ್ತ ಚಳುವಳಿಯನ್ನು ಅನುಸರಿಸಿದ್ದು ಜಗತ್ತು ಎರಡು ಬಣಗಳಾಗಿ ವಿಭಜನೆಯಾದ ಸಂದರ್ಭದಲ್ಲಿ.

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ವಿದೇಶಾಂಗ ನೀತಿ ಎಂದರೇನು?
  ಒಂದು ರಾಷ್ಟ್ರ ಅನ್ಯರಾಷ್ಟ್ರದೊಂದಿಗೆ ವ್ಯವಹರಿಸುವಾಗ ಅನುಸರಿಸುವ ನೀತಿಯೇ ವಿದೇಶಾಂಗ ನೀತಿ ಎಂದು ಕರೆಯಲಾಗಿದೆ.

2. ಭಾರತದ ವಿದೇಶಾಂಗ ನೀತಿಯ ಉದ್ದೇಶ ಅಥವಾ ಗುರಿಗಳಾವವು?
ರಾಷ್ಟ್ರದ ಭದ್ರತೆ
ರಾಷ್ಟ್ರದ ಆರ್ಥಿಕ ಸಂವರ್ಧನೆ.
ನಮ್ಮ ದೇಶದ ಸಾಂಸ್ಕøತಿಕ ಮೌಲ್ಯಗಳನ್ನು ಬೇರೆ ದೇಶದಲ್ಲಿ ಬಿತ್ತರಿಸುವದು.
ಮಿತ್ರ ರಾಷ್ಟ್ರಗಳನ್ನು ಹೆಚ್ಚಿಸಿಕೊಂಡು ವಿರೋಧಿ ರಾಷ್ಟ್ರಗಳನ್ನು ನಿರ್ಭಂದಿಸುವುದು ಅಥವಾ ಹತ್ತಿಕ್ಕುವುದು.
ವಿಶ್ವಶಾಂತಿ ಹಾಗೂ ಸಹಬಾಳ್ವೆಯನ್ನು ಸಾಧಿಸುವುದು.



3. ಸಾರ್ವಭೌಮ ರಾಷ್ಟ್ರವೆಂದರೇನು?
   ಸಾರ್ವಭೌಮ ರಾಷ್ಟ್ರವೆಂದರೆ ಯಾವುದೇ ರಾಷ್ಟ್ರ ಆಂತರಿಕವಾಗಲೀ, ಬಾಹ್ಯವಾಗಿಯಾಗಲಿ ಇತರೆ ರಾಷ್ಟ್ರಗಳಿಗೆ ಅಧೀನವಾಗಿರದೆ ಸ್ವತಂತ್ರವಾಗಿರುವದನ್ನು ಸಾರ್ವಭೌಮ ಅಥವಾ ಪರಮಾಧಿಕಾರವುಳ್ಳ ರಾಷ್ಟ್ರ ಎನ್ನಲಾಗಿದೆ.

4. ವಸಾಹತುಶಾಹಿತ್ವವನ್ನು ಭಾರತವು ವಿರೋಧಿಸಲು ಕಾರಣಗಳೇನು?
   ಒಂದು ರಾಷ್ಟ್ರ ಇನ್ನೊಂದು ರಾಷ್ಟ್ರವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡು ಆ ದೇಶದ ಸಾರ್ವಭೌಮತ್ವವನ್ನು ಹತ್ತಿಕ್ಕಿ ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಳ್ಳುವದಕ್ಕೆ ವಸಾಹತುಶಾಹಿತ್ವ ಎಂದು ಕರೆಯುತ್ತಾರೆ. ವಸಾಹತುಶಾಹಿತ್ವವನ್ನು ವಿರೋಧಿಸಿ ಸ್ವಾತಂತ್ರ್ಯ ಗಳಿಸಿಕೊಂಡ ಭಾರತವು ಸ್ವಾಭಾವಿಕವಾಗಿಯೇ ಪ್ರಪಂಚದ ಯಾವುದೇ ಮೂಲೆಯಲ್ಲಿ ಇರಕೂಡದು ಎಂಬ ತನ್ನ ನಿಲುವನ್ನು
ಪ್ರತಿಪಾದಿಸಿದೆ.

5. ಪಂಚಶೀಲ ತತ್ವಗಳಾವವು?
   ಪಂಚಶೀಲ ತತ್ವಗಳು : ಕ್ರಿ ಶ 1954 ರಲ್ಲಿ ಚೀನಾದ ಪ್ರದಾನಿ ಚೌ ಎನ್‍ಲಾಯ್ ಮತು ಪಂಡಿತ ನೆಹರುರವರು ಮಾಡಿಕೊಂಡ ಒಪ್ಪಂದವು ಪಂಚಶೀಲ ತತ್ವಗಳನ್ನು ಒಳಗೊಂಡಿದೆ.
ಅವುಗಳೆಂದರೆ –
ಪರಸ್ಪರರ ಪರಮಾಧಿಕಾರ ಮತ್ತು ಪ್ರಾದೇಶಿಕ ಐಕ್ಯತೆಗಳನ್ನು ಗೌರವಿಸುವದು.
ಪರಸ್ಪರರ ಮೇಲೆ ಆಕ್ರಮಣ ಮಾಡದೇ ಇರುವದು.
ದೇಶಗಳ ಒಳಾಡಳಿತದಲ್ಲಿ ಹಸ್ತಕ್ಷೇಪ ಮಾಡದೆ ಇರುವದು.
ಸಮಾನತೆ ಮತ್ತು ಪರಸ್ಪರ ಹಿತಸಾಧನೆಗೆ ಶ್ರಮಿಸುವದು.
ಶಾಂತಿಯುತ ಸಹಜೀವನ.

6. ನಿಶ್ಯಸ್ತ್ರೀಕರಣ ಎಂದರೇನು?
  ನಿಶ್ಯಸ್ತ್ರೀಕರಣ ಎಂದರೆ ಕೆಲವು ನಿರ್ದಿಷ್ಟ ಬಗೆಯ ಅಥವಾ ಎಲ್ಲಾ ಬಗೆಯ ಶಸ್ತ್ರಾಸ್ತ್ರಗಳನ್ನು ಹಂತಹಂತವಾಗಿ ಇಲ್ಲವಾಗಿಸುವುದೇ ಆಗಿದೆ.

7. ಪ್ರಚಲಿತ ಜಗತ್ತಿಗೆ ನಿಶಸ್ತ್ರೀಕರಣ ಅತೀ ಅಗತ್ಯ ಎಂದು ಭಾರತ ಏಕೆ ಪ್ರತಿಪಾದಿಸುತ್ತಿದೆ? ವಿವರಿಸಿ.
ನಿಶ್ಯಸ್ತ್ರೀಕರಣವೆಂದರೆ ಎಲ್ಲಾ ಬಗೆಯ ಶಸ್ತ್ರಾಸ್ತ್ರಗಳನ್ನು ಹಂತಹಂತವಾಗಿ ಇಲ್ಲವಾಗಿಸುವುದೇ ಆಗಿದೆ.
ಜಗತ್ತಿನಲ್ಲಿ ಶಸ್ತ್ರಾಸ್ತ್ರಗಳ ಉತ್ಪಾದನೆ, ಮಾರಾಟ, ಸಂಗ್ರಹಣೆಯಲ್ಲಿ ಬಾರಿ ಪೈಪೋಟಿ ನಡೆದಿದೆ.
ಶಸ್ತ್ರಾಸ್ತ್ರಗಳ ಪೈಪೋಟಿಯಿಂದ ಮೂರನೇ ಮಹಾಯುದ್ಧ ನಡೆಯಬಹುದೆಂಬ ಆತಂಕ ಹಲವು ರಾಷ್ಟ್ರಗಳಲ್ಲಿ ಉಂಟಾಗಿದೆ.
ಶಸ್ತ್ರಾಸ್ತ್ರ ಪೈಪೋಟಿಗೆ ಒಳಗಾದ ರಾಷ್ಟ್ರಗಳು ಅಚಾತುರ್ಯದಿಂದಲೋ, ತಪ್ಪು ಗ್ರಹಿಕೆಯಿಂದಲೋ ಬೇಕಂತಲೇ ಒಂದರ ಮೇಲೊಂದು ಯುದ್ಧ ಶಸ್ತ್ರಾಸ್ತ್ರಗಳನ್ನು ಅದರಲ್ಲೂ ಅಣ್ವಸ್ತ್ರಗಳನ್ನು ತಯಾರಿಸಿ ಉಪಯೋಗಿಸುವ ಸಂಭವವಿರುತ್ತದೆ.
ಭಾರತ ಶಾಂತಿಪ್ರೀಯ ರಾಷ್ಟ್ರವಾಗಿದ್ದು, ಶಾಂತಿ ಸೌಹಾರ್ಧತೆಗೆ ಒತ್ತು ನೀಡಿ ಪ್ರಚಲಿತ ಜಗತ್ತಿಗೆ ನಿಶ್ಯಸ್ತ್ರೀಕರಣ ಅತಿ ಅಗತ್ಯ ಎಂದು ಪ್ರತಿಪಾದಿಸುತ್ತಿದೆ.

8. ಭಾರತದ ವಿದೇಶಾಂಗ ನೀತಿಯನ್ನು ವಿವರಿಸಿ. ಅಥವಾ
ವಿದೇಶಾಂಗ ನೀತಿಯು ರಾಷ್ಟ್ರದ ಅಭಿವೃದ್ಧಿಗೆ ಸಹಕಾರಿ ಹೇಗೆ?
ದಿವಂಗತ ಜವಾಹರಲಾಲ ನೆಹರುವರು ಭಾರತದ ವಿದೇಶಾಂಗ ನೀತಿಯ ಶಿಲ್ಪಿಯಾಗಿದ್ದಾರೆ.
ಭಾರತದ ವಿದೇಶಾಂಗ ನೀತಿಯಲ್ಲಿ ಅಹಿಂಸಾತತ್ವ, ಆದರ್ಶವಾದ, ಮಾನವೀಯ ಅನುಕಂಪ, ವ್ಯಾವಹಾರಿಕ ಕಾಠಿಣತೆಯನ್ನು ಕಾಣಬಹುದು.
ಭಾರತದ ವಿದೇಶಾಂಗ ನೀತಿಯು ಶಾಂತಿ ಹಾಗೂ ಸಹಬಾಳ್ವೆ ತತ್ವದ ಮೇಲೆ ಆಧಾರಿತವಾಗಿದೆ.
ವಿಶ್ವಶಾಂತಿ ಕಾಪಾಡಲೆಂದೇ ಎಲ್ಲಾ ರಾಷ್ಟ್ರಗಳೊಂದಿಗೆ ಸ್ನೇಹ ಹಾಗೂ ಸಹಬಾಳ್ವೆಯೊಂದಿಗೆ ಸಂಬಂಧಗಳನ್ನು ಮುಂದುವಿರಿಸಿಕೊಂಡು ಹೊಗಲು ನಿರ್ಧರಿಸಿತು.
ಅಲಿಪ್ತ ನೀತಿಯು ಪಂಚಶೀಲ ತತ್ವಗಳನ್ನು ಒಳಗೊಂಡಿದೆ.
ಇದು ಒಟ್ಟಾರೆಯಾಗಿ ದೇಶದ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಹೇಳಬಹುದು.

9. ಭಾರತವು ಅಲಿಪ್ತನೀತಿಯನ್ನು ಪ್ರತಿಪಾಧಿಸುತ್ತಿದೆ. ಚರ್ಚಿಸಿ.
ದ್ವೀತಿಯ ಜಾಗತಿಕ ಮಹಾಯುದ್ಧದ ನಂತರ ಜಗತ್ತು ಅಮೇರಿಕ & ರಷ್ಯಾ ಒಕ್ಕೂಟದ ನೇತೃತ್ವದಲ್ಲಿ ಎರಡು ಶಕ್ತಿ ಬಣಗಳಾಗಿ ವಿಭಾಗವಾಗಿತ್ತು.
ಭಾರತವು ಯಾವ ಬಣಕ್ಕೆ ಸೇರದೇ ತಾಟಸ್ಥ್ಯ ನೀತಿಯನ್ನು ಅನುಸರಿಸಿತು ಇದೇ ಅಲಿಪ್ತ ನೀತಿ.
ಅಲಿಪ್ತ ನೀತಿ ಎಂದರೆ ಎರಡು ಶಕ್ತಿಶಾಲಿ ಬಣಗಳ ಆಚೆ ನಿಂತು ಸ್ವತಂತ್ರವಾಗಿ ಅಭಿಪ್ರಾಯ ವ್ಯಕ್ತಪಡಿಸುವದಾಗಿದೆ.
ನ್ಯಾಯ ಅನ್ಯಾಯ ಎರಡನ್ನೂ ನಿಷ್ಪಕ್ಷಪಾತವಾಗಿ ತೂಗಿ ನೋಡಿ ತಿರ್ಮಾನಿಸುವ ದೃಷ್ಟಿಕೋನವನ್ನು ಭಾರತವು ಪ್ರತಿಪಾದಿಸುತ್ತದೆ.
ವಿಶ್ವದ ಪ್ರತಿಯೊಂದು ವಿದ್ಯಮಾನವನ್ನು ಅದರ ಗುಣ ದೋಷಗಳ ಆಧಾರದ ಮೇಲೆ ಸ್ವಾಗತಿಸುವ ಅಥವಾ ವಿರೋಧಿಸುವ ಸ್ವತಂತ್ರ ಕಾರ್ಯಶೈಲಿಯನ್ನು ಭಾರತ ರೂಪಿಸಿತು.

10. ವರ್ಣಭೇದ ನೀತಿಯ ಬಗ್ಗೆ ಭಾರತದ ನೀಲುವೇನು? ತಿಳಿಸಿ.
   ವರ್ಣಭೇದ ನೀತಿಯು ಅಮಾನವೀಯ ಮತ್ತು ಮಾನವ ಹಕ್ಕುಗಳನ್ನು ಉಲ್ಲಂಘಿಸಿ ವಿಶ್ವಶಾಂತಿ ಮತ್ತು ಸಹಬಾಳ್ವೆಗೆ ಮಾರಕವಾಗಿತ್ತದೆ. ಇಂತಹ ವರ್ಣಭೇದನೀತಿಯು ಜಗತ್ತಿನಲ್ಲಿ ಎಲ್ಲಿಯೂ ಯಾವ ರಾಷ್ಟ್ರವೂ ಅನುಸರಿಸಬಾರದು ಎಂಬ ವಿದೇಶಾಂಗ ನೀತಿಯನ್ನು ಭಾರತ ಹೊಂದಿದೆ.

11. ವರ್ಣಭೇದ ನೀತಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಈ ಹೇಳಿಕೆಯನ್ನು ವಿಮರ್ಶಿಸಿ.
    ವರ್ಣಗಳ ಆಧಾರದ ಮೇಲೆ ಒಂದು ಜನಸಮುದಾಯ ಇನ್ನೊಂದು ಜನಸಮುದಾಯವನ್ನು ತಮಗಿಂತ ಕೀಳು ಎಂದು ಭಾವಿಸಿ ಅವರನ್ನು ಅತ್ಯಂತ ಕ್ರೂರ ಅಥವಾ ದೌರ್ಜನ್ಯದಿಂದ ನಡೆಸಿಕೊಳ್ಳುವದನ್ನು ವರ್ಣಭೇದ ನೀತಿ ಎಂದು ಕರೆಯುವರು. ಈ ವರ್ಣಭೇದ ನೀತಿಯು ಅಮಾನವೀಯ ಮತ್ತು ಮಾನವ ಹಕ್ಕುಗಳನ್ನು ಉಲ್ಲಂಘಿಸಿ ವಿಶ್ವಶಾಂತಿ ಮತ್ತು ಸಹಬಾಳ್ವೆಗೆ ಮಾರಕವಾಗುತ್ತದೆ.

12. ದಕ್ಷಿಣ ಆಫ್ರಿಕಾದಲ್ಲಿ ಅನುಸರಿಸಿದ ವರ್ಣಭೇದ ನೀತಿಯ ಬಗ್ಗೆ ವಿವರಿಸಿ.
ಬಿಳಿಯರು ಕರಿಯರನ್ನು ಅತ್ಯಂತ ಕ್ರೂರ ಮತು ದೌರ್ಜನ್ಯದಿಂದ ನಡೆಸಿಕೊಳ್ಳುತ್ತಿದ್ದುದನ್ನು ವರ್ಣಭೇದ ನೀತಿ ಎನ್ನುವರು.
ದಕ್ಷಿಣ ಆಪ್ರಿಕಾದಲ್ಲಿ ಅತ್ಯಂತ ಕ್ರೂರ ಹಾಗೂ ದಮನಕಾರಿ ವರ್ಣಭೇದ ನೀತಿಯನ್ನು ಅನುಸರಿಸಲಾಗುತ್ತಿತ್ತು.
ಕರಿಯರಿಗೆ ಮತದಾನದ ಹಕ್ಕನ್ನು ನಿರಾಕರಿಸಲಾಗಿತ್ತು.
ಕಪ್ಪು ಜನರನ್ನು ಗುಲಾಮರಂತೆ ಮಾರಾಟ ಮಾಡಲಾಗುತ್ತಿತ್ತು.
ನೆಲ್ಸನ್ ಮಂಡೆಲಾರ ನೇತೃತ್ವದಲ್ಲಿ ಕರಿಜನರು ದೀರ್ಘ ಹೋರಾಟ ನಡೆಸಿ ವರ್ಣಭೇದನೀತಿಯನ್ನು ಕೊನೆಗಾಣಿಸಿದರು. ಹಾಗಾಗಿ ಇವರನ್ನು ಆಪ್ರಿಕಾದ ಗಾಂಧಿ ಎಂದು ಕರೆಯುತ್ತಾರೆ.

ಅಧ್ಯಾಯ 3] ಅನ್ಯದೇಶಗಳೊಂದಿಗೆ ಭಾರತದ ಸಂಬಂಧ (PS)


ಮುಖ್ಯಾಂಶಗಳು:
ಭಾರತವು ಏಷ್ಯಾ ಖಂಡದಲ್ಲಿದೆ.
ಬಾಂಗ್ಲಾ ದೇಶವು ನಮ್ಮ ಪೂರ್ವ ಭಾಗದಲ್ಲಿದೆ.
ಚರಿತ್ರೆಯ ಕಾಲಘಟ್ಟದಲ್ಲಿ ಬೌದ್ಧ ಧರ್ಮ ಭಾರತೀಯ ಭಿಕ್ಷುಗಳಿಂದ ಶ್ರೀಲಂಕಾದಲ್ಲಿ ಪಸರಿಸಲ್ಪಟ್ಟಿತು.
ಭಾರತದ ಭಿಲೈ ಹಾಗೂ ಭೋಕಾರೋ ಉಕ್ಕಿನ ಕಾರ್ಖಾನೆಗಳಿಗೆ ರಷ್ಯಾ ದೇಶವು ಸಹಕರಿಸಿತು.
ಅಕ್ಟೋಬರ್ 1949 ರಂದು ಚೀನಾ ಕಮ್ಯುನಿಷ್ಟ ರಾಷ್ಟ್ರವೆಂದು ಘೋಷಿಸಿಕೊಂಡಿತು.
ಭಾರತದ ದೋರಣೆಯ ವಿರುದ್ದ ಚೈನಾ ಟಿಬೇಟನ್ನು ವಶಪಡಿಸಿಕೊಂಡಿತು.
1962 ರಲ್ಲಿ ಚೀನಾವು ಭಾರತದ ಮೇಲೆ ದಾಳಿಮಾಡಿತು.

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಭಾರತ - ಶ್ರೀಲಂಕಾ ಬಾಂಧವ್ಯವು ಐತಿಹಾಸಿಕವಾದುದು. ಈ ಹೇಳಿಕೆಯ ಹಿನ್ನೆಲೆಯಲ್ಲಿ ಈ ರಾಷ್ಟ್ರಗಳ ಬಾಂಧವ್ಯವನ್ನು ವಿಮರ್ಶಿಸಿ.
ರಾಮಾಯಣ ಕಾಲದಿಂದಲೂ ಭಾರತ & ಶ್ರೀಲಂಕಾಗಳ ಮಧ್ಯೆ ಉತ್ತಮ ಸಂಬಂಧ ಇದೆ.
ಚರಿತ್ರೆಯ ಕಾಲಘಟ್ಟದಲ್ಲಿ ಬೌದ್ಧ ಧರ್ಮ ಭಾರತೀಯ ಭಿಕ್ಷುಗಳಿಂದ ಶ್ರೀಲಂಕಾದಲ್ಲಿ ಪಸರಿಸಲ್ಪಟ್ಟಿತ್ತು.
ರಾಜಕೀಯ & ಆರ್ಥಿಕ ರಂಗದಲ್ಲಿ ಭಾರತ ಶ್ರೀಲಂಕಾದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದೆ.
ಸಮುದ್ರ ವ್ಯಾಪಾರದ ಬಗೆಗಿನ ಒಪ್ಪಂದ ಮಾಡಿಕೊಳ್ಳಲಾಗಿದೆ.
ಶ್ರೀಲಂಕಾದ ಮನವಿಯ ªುÉ ೀರೆU É ಭಾರತz À ಶಾಂತಿಪಾಲನ ಪqಂÉ iÀುನ್ನು ಕಳುಹಿಸಲಾಯಿತು.

2. ಅನ್ಯ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಅವಶ್ಯಕ ಏಕೆ?
ನಾವೊಂದು ಸ್ವತಂತ್ರ ರಾಷ್ಟ್ರವಾಗಿ ಎಲ್ಲಾ ವಿದೇಶಗಳೊಂದಿಗೆ ಉತ್ತಮ ಸಂಬಂಧ ಹೊಂದಬೇಕಾಗಿದೆ.
ಅದರಲ್ಲಿಯೂ ಮುಖ್ಯವಾಗಿ ಏμಂಚಿ ಖಂಡದ ನಮ್ಮ ನೆರೆಹೊರೆಯ ರಾಷ್ಟ್ರಗಳೊಂದಿಗೆ ಒಳ್ಳೆಯ ಬಾಂಧವ್ಯ ಇರಿಸಿಕೊಳ್ಳಬೇಕಾಗಿದೆ.
ಇದರೊಂದಿಗೆ ರಾಷ್ಟ್ರೀಯ ಹಿತಾಶಕ್ತಿಗಳಾದ ಗಡಿ ಭದ್ರತೆ, ವಿದೇಶ ವ್ಯಾಪಾರ, ಆರ್ಥಿಕ ಲಾಭ, ರಾಷ್ಟ್ರದ ಗೌರವ ಮುಂತಾದವುಗಳನ್ನು ಜೋಪಾನವಾಗಿ ಕಾಯ್ದುಕೊಳ್ಳಬೇಕಾಗಿದೆ.
ಈ ಎಲ್ಲಾ ಕಾರಣಗಳಿಗಾಗಿ ನಾವು ಅನ್ಯ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದುವುದು ಅವಶ್ಯಕ.

3. ಭಾರತ & ಪಾಕಿಸ್ತಾನದ ಮಧ್ಯೆ ಉದ್ವಿಗ್ನತೆಗೆ ಕಾರಣವಾದ ವಿಷಯಗಳು ಯಾವುವು?
   1947ರಲ್ಲಿ ಸ್ವಾತಂತ್ರ್ಯ ದೊರಕಿದಾಗಿನಿಂದಲೂ ಭಾರತ & ಪಾಕಿಸ್ತಾನಗಳ ಮಧ್ಯೆ ಸಂಬಂಧ ಸೌಹಾರ್ಧಯುತವಾಗಿಲ್ಲ. ಭಾರತ & ಪಾಕಿಸ್ತಾನದ ಮಧ್ಯೆ ಉದ್ವಿಗ್ನತೆಗೆ ಕಾರಣಗಳೆಂದರೆ,
1. ಕಾಶ್ಮೀರ ಸಮಸ್ಯೆ,
2. ಮಿಲಿಟರಿ ಕೂಟಗಳೊಂದಿಗೆ ಪಾಕಿಸ್ತಾನದ ಸಂಬಂಧಗಳು
3. ಚೀನಾ - ಪಾಕ್ ಮೈತ್ರಿ,
4. ನೀರಿನ ವಿವಾದ
5. ವ್ಯಾಪಾರ ಸಮಸ್ಯೆ,
6. ಎರಡು ರಾಷ್ಟ್ರಗಳಲ್ಲಿನ ಅಲ್ಪಸಂಖ್ಯಾತರ ನಿರಂತರ ಸಮಸ್ಯೆ,
7. ಭಯೋತ್ಪಾದನೆ ಮುಂತಾದವು.

4. ಭಾರತ & ಅಮೇರಿಕಾ ದೇಶಗಳು ಪ್ರಜಾತಂತ್ರ ದೇಶಗಳಾಗಿದ್ದು, ಇವುಗಳ ಪರಸ್ಪರ ಸೌಹಾರ್ಧತೆಯು ಹೇಗಿದೆ ಎಂಬುದನ್ನು ವಿವರಿಸಿ.
   ಭಾರತ & ಅಮೇರಿಕಾ ದೇಶಗಳು ಪ್ರಜಾತಂತ್ರ ದೇಶಗಳಾಗಿದ್ದು, ಪ್ರಚಲಿತ ಜಾಗತಿಕ ವಿದ್ಯಮಾನದಲ್ಲಿ ಈ ಎರಡು ರಾಷ್ಟ್ರಗಳ ಪರಸ್ಪರ ಮೈತ್ರಿ ತುಂಬಾ ಪ್ರಾಮುಖ್ಯವಾದುದು. ಏಕೆಂದರೆ -
ಭಾರತದ ಪಂಚವಾರ್ಷಿಕ ಯೋಜನೆಗೆ ಅಮೇರಿಕಾ ತುಂಬಾ ಸಹಾಯ ನೀಡಿತು.
1962ರ ಚೀನಾ ಆಕ್ರಮಣ ಸಂದರ್ಭದಲ್ಲೂ ಅಮೇರಿಕಾದ ಸಹಾಯ ನಮಗೆ ತುಂಬಾ ಶಕ್ತಿ ನೀಡಿತು.
ಭಯೋತ್ಪಾದನೆ ಹತ್ತಿಕ್ಕುವಲ್ಲಿ ನಮ್ಮೆರಡು gಂμಂಔಛಿUಂಳ ಮಧ್ಯೆ ಸಮಾನ ಹಿತಾಸಕ್ತಿಯಿದೆ.
ಭಾರತವು ವಿದೇಶಿ ವ್ಯಾಪಾರ, ವಿಜ್ಞಾನ ಮತ್ತು ತಾಂತ್ರಿಕತೆ, ಬಾಹ್ಯಾಕಾಶ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಅಮೇರಿಕಾದೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ.
ವಿಶ್ವಸಂಸ್ಥೆಯನ್ನು ಬಲಪಡಿಸುವ ಹಾಗೂ ಜಾಗತಿಕ ಶಾಂತಿಯನ್ನು ಉಳಿಸುವ ನಿಟ್ಟಿನಲ್ಲಿ ಎರಡು ರಾಷ್ಟ್ರಗಳು ಸಮಾನ ದೋರಣೆ ಹೊಂದಿವೆ.

5. ಇತ್ತೀಚಿನ ದಿನಗಳಲ್ಲಿ ಚೀನಾದೊಂದಿಗೆ ನಮ್ಮ ಬಾಂಧವ್ಯ ಹದಗೆಡಲು ಕಾರಣಗಳಾವವು?
ಭಾರತದ ದೋರಣೆಯ ವಿರುದ್ಧ ಚೀನಾ ಟಿಬೇಟನ್ನು ವಶಪಡಿಸಿಕೊಂಡಿತು.
1962ರಲ್ಲಿ ಚೀನಾ ಭಾರತದ ಮೇಲೆ ದಾಳಿ ಮಾಡಿತು.
ಭಾರತ & ಚೀನಾ ದೇಶಗಳ ಮಧ್ಯೆ ಗಡಿ ಸಮಸ್ಯೆ ಇನ್ನೂ ಇತ್ಯರ್ಥವಾಗಿಲ್ಲ.
ನಮ್ಮ ರಾಜ್ಯಗಳಲ್ಲೊಂದಾದ ಅರುಣಾಚಲ ಪ್ರದೇಶವನ್ನು ಚೀನಾ ತನ್ನದೆಂದು ವಾದಿಸುತ್ತಿದೆ.
ಅಣ್ವಸ್ತ್ರಗಳ ತಯಾರಿ, ವಿದೇಶಿ ವ್ಯಾಪಾರದ ಸವಾಲುಗಳು, ಗಡಿಯಲ್ಲಿ ಚೀನಾ ಮಿಲಿಟರಿ ಪಡೆಗಳ ಅತಿಕ್ರಮಣ ಇವೆಲ್ಲಾ ಭಾರತ & ಚೀನಾ ಮಧ್ಯೆ ಸಂಬಂಧ ಹದಗೆಡಲು ಕಾರಣಗಳಾಗಿವೆ.

6. ರಷ್ಯಾದೊಂದಿಗೆ ಭಾರತದ ಸಂಬಂಧವನ್ನು ವಿವರಿಸಿ.
ಕಾಶ್ಮೀರ ಸಮಸ್ಯೆಗೆ ಸಂಬಂಧಿಸಿದಂತೆ ರಷ್ಯಾ ತನ್ನ ಬೆಂಬಲ ನೀಡಿದೆ. ಉದಾ : 1966ರ ತಾಷ್ಕೆಂಟ್ ಒಪ್ಪಂದ
1962ರ ಚೀನಾ ದಾಳಿಯನ್ನು ರಷ್ಯಾ ಖಂಡಿಸಿತು.
ಕ್ರಿ ಶ 1971 ರಲ್ಲಿ ಭಾರತ – ರಷ್ಯಾ ನಡುವೆ ಪರಸ್ಪರ ಮೈತ್ರಿ, ಶಾಂತಿ ಹಾಗೂ ಸಹಕಾರಗಳ 20 ವರ್ಷದ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ರಷ್ಯಾದ ಸಹಕಾರದಿಂದ ಬಿಲಾಯ್, ಬೊಕಾರೋಗಳಲ್ಲಿ ಉಕ್ಕಿನ ಕಾರ್ಖಾನೆಗಳನ್ನು ಸ್ಥಾಪಿಸಲಾಯಿತು.
ಹರಿದ್ವಾರದಲ್ಲಿ ರಷ್ಯಾ ಸಹಕಾರದಿಂದ ಭಾರಿ ವಿದ್ಯುತ್ ಸ್ಥಾವರದ ಘಟಕ ಸ್ಥಾಪಿಸಲಾಯಿತು.
ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ದೊರೆಯಬೇಕೆಂದು ರಷ್ಯಾ ಪ್ರತಿಪಾದಿಸುತ್ತಿದೆ.

ಅಧ್ಯಾಯ 4. ಜಾಗತಿಕ ಸಮಸ್ಯೆಗಳು ಹಾಗೂ ಭಾರತದ ಪಾತ್ರ (PS)


ಮುಖ್ಯಾಂಶಗಳು:
ಮಾನವ ಹಕ್ಕುಗಳ ದಿನವನ್ನು ಡಿಸೆಂಬರ್ 10 ರಂದು ಆಚರಿಸುತ್ತೇವೆ.
ಭಾರತವು ನಿರಂತರವಾಗಿ ಸಾರ್ವತ್ರಿಕ ಮಾನವ ಹಕ್ಕುಗಳನ್ನು ಪ್ರತಿಪಾದಿಸುತ್ತಾ ಬಂದಿದೆ.
ಆಫ್ರಿಕಾದಲ್ಲಿ ವರ್ಣಬೇಧ ನೀತಿಯ ವಿರುದ್ಧ ಹೋರಾಡಿದವರು ನೆಲ್ಸನ್ ಮಂಡೇಲಾ.
ಮಾನವ ಹಕ್ಕು ಎಂಬುದು ಸ್ವಾತಂತ್ರ್ಯ & ಸಮಾನತೆಯನ್ನು ಒಳಗೊಂಡಿದೆ.
1948ರ ಡಿಸೆಂಬರ್ 10ರ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಘೋಷಣೆ ಒಂದು ಪ್ರಮುಖ ಮೈಲಿಗಲ್ಲು ಎಂಬುದಾಗಿ ಭಾವಿಸಲಾಗಿದೆ.
ದಕ್ಷಿಣ ಆಫ್ರಿಕಾದ ಗಾಂಧಿಯೆಂದು ನೆಲ್ಸನ್ ಮಂಡೆಲಾರನ್ನು ಕರೆಯಲಾಗುತ್ತದೆ.

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಮಾನವ ಹಕ್ಕುಗಳ ಪ್ರತಿಪಾದನೆಗಾಗಿ ಭಾರತವು ನಡೆಸುತ್ತಿರುವ ಹೋರಾಟಗಳನ್ನು ವಿವರಿಸಿ.
ಸಾರ್ವತ್ರಿಕ ಮಾನವ ಹಕ್ಕುಗಳನ್ನು ಭಾರತ ನಿರಂತರವಾಗಿ ಪ್ರತಿಪಾದಿಸುತ್ತಾ ಬಂದಿದೆ.
ಭಾರತ ತನ್ನ ಸಂವಿಧಾನದಲ್ಲೂ ಮೂಲಭೂತ ಹಕ್ಕುಗಳನ್ನು ನಮೂದಿಸಿದೆ.
ವಿಶ್ವಸಂಸ್ಥೆ ಹಾಗೂ ಜಾಗತಿಕ ವೇದಿಕೆಗಳ ಮೂಲಕ ಭಾರತ ಮಾನವ ಹಕ್ಕುಗಳ ಸಂರಕ್ಷಣೆಗೆ ಯತ್ನಿಸುತ್ತಿದೆ..
ಗುಲಾಮಗಿರಿ ಪದ್ಧತಿ, ಮಾನವರ ಮಾರಾಟ, ಮಕ್ಕಳ ದುಡಿಮೆ, ಮಹಿಳಾ ಶೋಷಣೆ ಇತ್ಯಾದಿಗಳನ್ನು ಸಾರ್ವತ್ರಿಕ ಮಾನವ ಹಕ್ಕುಗಳ ಘೋಷಣೆ
ಜನಾಂಗ ಹತ್ಯೆ, ಎಲ್ಲಾ ವಿಧದ ಶೋಷಣೆ ಹಾಗೂ ದಬ್ಬಾಳಿಕೆಗೆ ಭಾರತ ವಿರೋಧ ವ್ಯಕ್ತಪಡಿಸುತ್ತದೆ.

2. ದ್ವೀತಿಯ ಮಹಾಯುದ್ಧದ ನಂತರ ಎದುರಾದ ಮುಖ್ಯ ಸಮಸ್ಯೆಗಳು ಯಾವುವು?
   ಮಾನವ ಹಕ್ಕುಗಳ ನಿರಾಕರಣೆ, ಶಸ್ತ್ರಾಸ್ತ್ರಗಳ ಪೈಪೋಟಿ, ಆರ್ಥಿಕ ಅಸಮಾನತೆ, ವರ್ಣಭೇದ ನೀತಿ ಹಾಗೂ ಭಯೋತ್ಪಾದನೆಯಂತಹ ಸಮಸ್ಯೆಗಳು ದ್ವೀತಿಯ ಮಹಾಯುದ್ಧದ ನಂತರ ಎದುರಾದ ಮುಖ್ಯ ಸಮಸ್ಯೆಗಳಾಗಿವೆ.

3. ಶಸ್ತ್ರಾಸ್ತ್ರಗಳ ಪೈಪೋಟಿಯು ಜಗತ್ತಿನ ನಾಶಕ್ಕೆ ನಾಂದಿ ಈ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರಗಳ ಪೈಪೋಟಿಯಿಂದಾಗುವ ಪರಿಣಾಮಗಳಾವವು? ಅಥವಾ ಭಾರತವೂ ಸೇರಿದಂತೆ ಎಲ್ಲಾ ರಾಷ್ಟ್ರಗಳು ಪರಸ್ಪರ ನಿಶ್ಚಿತ ನಾಶದ ವಿರುದ್ಧ ಹೋರಾಡಬೇಕು. ಏಕೆ?
ಶಸ್ತ್ರಾಸ್ತ್ರ ಪೈಪೋಟಿಯ ಬಗ್ಗೆ ಹೇಳುವದಾದರೆ ಒಂದು ಮಾತಿದೆ. – ‘ಅಣ್ವಸ್ತ್ರ ಯುಗದಲ್ಲಿ
ನಾವು ಯುದ್ದವನ್ನು ಕೊನೆಗಾಣಿಸಬೇPುÀ , ಇಲ್ಲವಾದರೆ ಯುದ್ಧ ನಮ್ಮನ್ನು ಕೊನೆಗಾಣಿಸುತ್ತದೆ.’
ಪ್ರಚಲಿತ ಜಗತ್ತಿನಲ್ಲಿ ಶಸ್ತ್ರಾಸ್ತ್ರಗಳ ಪೈಪೋಟಿ ಒಂದು ಭಯಾನಕ ವಿಧ್ಯಮಾನ ಎಂಬುದಾಗಿ ಕಾಣಿಸುತ್ತಿದೆ.
ಶಸ್ತ್ರಾಸ್ತ್ರಗಳ ಪೈಪೋಟಿಯಿಂದಾಗಿ ಜಗತ್ತಿನಲ್ಲಿ ಯಾವ ಸಮಯದಲ್ಲಿಯಾಗಲೀ ಯುದ್ಧ
ಆರಂಭವಾಗಿ ಮನುಕುಲ ನಾಶವಾಗುವ ಭೀತಿ ಇದೆ.
ಶಸ್ತ್ರಾಸ್ತ್ರ ಜಮಾವಣೆ ತಪ್ಪಿಸುವದು ಅವಶ್ಯವಾಗಿದೆ.
ಪರಸ್ಪರ ‘ನಿಶ್ಚಿತ ನಾಶ’ದ ವಿರುದ್ಧ ಭಾರತವು ಸೇರಿ ಎಲ್ಲಾ ರಾಷ್ಟ್ರಗಳು ಪ್ರಯತ್ನಿಸುವ ಅವಶ್ಯಕತೆಯಿದೆ.

4. ಆರ್ಥಿಕವಾಗಿ ಹಿಂದುಳಿದ ರಾಷ್ಟ್ರಗಳ ಲಕ್ಷಣಗಳಾವವು? ಈ ರೀತಿ ಹಿಂದುಳಿಯುವಿಕೆಯ ಕಾರಣಗಳಾವವು?
ಹಿಂದುಳಿದ ರಾಷ್ಟ್ರಗಳು ಸ್ವಾತಂತ್ರ್ಯವನ್ನು ಪಡೆದರೂ ಸಹ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದೆ ಉಳಿದಿದ್ದವು.
ಔದ್ಯೋಗಿಕ, ತಂತ್ರಜ್ಞಾನ ಮತ್ತು ವಿಜ್ಞಾನ ರಂಗಗಳಲ್ಲಿಯೂ ಈ ಪ್ರದೇಶಗಳು ಹಿಂದೆ ಇದ್ದುದರಿಂದ
ಈ ದೇಶಗಳಲ್ಲಿನ ಜೀವನಮಟ್ಟ ಕೆಳಮಟ್ಟದಲ್ಲಿತ್ತು.
ಶಿಕ್ಷಣ, ಆರೋಗ್ಯ, ಕೃಷಿ ಮುಂತಾದ ಕ್ಷೇತ್ರಗಳಲ್ಲಿ ಹೇಳಿಕೊಳ್ಳುವಂತಹ ಸಾಧನೆಗಳಿರಲಿಲ್ಲ.
ಹಿಂದುಳಿಯುವಿಕೆಯ ಕಾರಣಗಳು
   ಆರ್ಥಿಕವಾಗಿ ರಾಷ್ಟ್ರಗಳ ಹಿಂದುಳಿವಿಕೆಗೆ ಕಾರಣ ಐರೋಪ್ಯ ರಾಷ್ಟ್ರಗಳು ಆಫ್ರಿಕಾ, ಏಷ್ಯಾ & ಲ್ಯಾಟಿನ್ ಅಮೇರಿಕನ್ ರಾಷ್ಟ್ರಗಳಲ್ಲ್ಲಿ ವಸಾಹತುಗಳನ್ನು ಸ್ಥಾಪಿಸಿ ಆ ರಾಷ್ಟ್ರಗಳುÀ ಸಂಪತ್ತನ್ನು ದೋಚಿದ್ದು ಪ್ರಮುಖ ಕಾರಣವಾಗಿದೆ.


5. ಆರ್ಥಿಕ ಅಸಮಾನತೆಯ ನಿವಾರಣೆಗಾಗಿ ಭಾರತವು ಕೈಗೊಂಡಿರುವ ಸುಧಾರಣಾ ಕ್ರಮಗಳಾವವು?
ಯಾವುದೇ ಷರತ್ತುಗಳಿಲ್ಲದೆ ಮುಂದುವರೆದ ರಾಷ್ಟ್ರಗಳು ಬಡರಾಷ್ಟ್ರಳಿಗೆ ಆರ್ಥಿಕ ನೆರವು ನೀಡಬೇಕೆಂಬ ನೀತಿಯನ್ನು ಭಾರತ ಪ್ರತಿಪಾದಿಸಿತು.
ಶ್ರೀಮಂತ ರಾಷ್ಟ್ರಗಳ ಬಂಡವಾಳವೂ ಕೂಡ ಬಡರಾಷ್ಟ್ರಗಳಿಗೆ ಹರಿದು ಬರುವಂತೆ ಯತ್ನಿಸಿತು.
ಭಾರತ ಒಂದು ಪ್ರಗತಿಪರ ರಾಷ್ಟ್ರವಾಗಿ ವಿಶ್ವ ಕುಟುಂಬದ ಎಲ್ಲಾ ರಾಷ್ಟ್ರಗಳ ಮಧ್ಯೆ ಆರ್ಥಿಕ ನ್ಯಾಯ ಹಾಗೂ ಸಮಾ£ತಯನ್ನು ¥್ರÀತಿಪಾದಿಸುತ್ತಿದೆ.

6. ಶಸ್ತ್ರಾಸ್ತ್ರಗಳ ಪೈಪೋಟಿಯ ಬಗ್ಗೆ ಅಮೇರಿಕಾದ ಅಧ್ಯಕ್ಷ ಐಸಾನ್ ಹೋವರ್‍ನ ಉದ್ಗಾರವೇನು?
   ಅಮೇರಿಕದ ಅಧ್ಯಕ್ಷ ಐಸನ್ ಹೋವರ್ ಶಸ್ತ್ರಾಸ್ತ್ರಗಳ ಪೈಪೋಟಿ ಕುರಿತು ಒಮ್ಮೆ ‘ಶಸ್ತ್ರಗಳನ್ನು ಹೊಂದಿದ ಈ ಜಗತ್ತು ಕೇವಲ ಹಣವನ್ನು ಮಾತ್ರ ಪೋಲು ಮಾಡುವುದಿಲ್ಲ. ಬದಲಾಗಿ ಕಾರ್ಮಿಕರ ಬೆವರನ್ನು, ವಿಜ್ಞಾನಿಗಳ ಬುದ್ಧಿವಂತಿಕೆಯನ್ನು ಹಾಗೂ ಮಕ್ಕಳ ಆಸೆಗಳನ್ನು ವ್ಯಯಗೊಳಿಸುತ್ತದೆ’ ಎಂದು ಉದ್ಗರಿಸಿದರು.

7. ವರ್ಣಭೇದ ನೀತಿಯು ಮಾನವತ್ವಕ್ಕೆ ವಿರೋಧವಾದುದು ಇದನ್ನು ನಿಮ್ಮ ದೃಷ್ಟಿಕೋನದಲ್ಲಿ ಸಮರ್ಥಿಸಿ.
ಮಾನವರೆಲ್ಲರೂ ಹುಟ್ಟಿನಿಂದ ಸರಿಸಮಾನರು ಮತ್ತು ಸ್ವತಂತ್ರರು. ಜಾತಿ, ವರ್ಣ, ಲಿಂಗ, ಭಾಷೆ, ಧರ್ಮ, ಆಸ್ತಿ ಅಥವಾ ಹುಟ್ಟಿನಿಂದ ಯಾವ ಭೇದಭಾವನೆಗಳಿಗೆ ಒಳಗಾಗದೆ ಸಮಾನ ಹಕ್ಕು ಹಾಗೂ ಗೌರವಗಳಿಗೆ ಪಾತ್ರರಾಗಿದ್ದಾರೆ.
ವರ್ಣಬೇಧ ನೀತಿಯು ಅತಿ ಅಮಾನುಷವಾದುದು.
ಈ ನೀತಿಯು ಅತ್ಯಂತ ಕ್ರೂರ & ದಮನಕಾರಿಯಾಗಿತ್ತು.
ದಕ್ಷಿಣ ಆಫ್ರಿಕಾದಲ್ಲಿ ಕರಿಯರನ್ನು ಮಾರಾಟ ಮಾಡಲಾಗುತ್ತಿತ್ತು.
ಅವರಿಗೆ ಯಾವ ಸೌಲಭ್ಯಗಳು ಇರಲಿಲ್ಲ. ಅವರನ್ನು ನಿಕೃಷ್ಟವಾಗಿ ಕಾಣಲಾಗುತ್ತಿತ್ತು.
ಆದ್ದರಿಂದ ಈ ನೀತಿಗೆ ಪ್ರಪಂಚದಾದ್ಯಂತ ತೀವ್ರ ವಿರೋಧ ವ್ಯಕ್ತವಾಯಿತು. ಆದರೆ ಈಗ ವರ್ಣಭೇದ ನೀತಿಯು ಮುಗಿದ ಅಧ್ಯಾಯವಾಗಿದೆ.

8. ಭಯೋತ್ಪಾದನೆಯಿಂದ ಉಂಟಾಗುವ ಪರಿಣಾಮಗಳಾವವು?
ಭಯೋತ್ಪಾದನೆಯು ಸಾರ್ವಜನಿಕವಾಗಿ ವ್ಯಕ್ತಿಗಳಿಗೆ & ಆಸ್ತಿ-ಪಾಸ್ತಿಗಳಿಗೆ ಹಾನಿ ಉಂಟುಮಾಡುತ್ತದೆ.
ಸಾಮಾಜಿಕ ಸಂಸ್ಕøತಿಗೆ, ಅದೇ ರೀತಿ ಸರ್ಕಾರಕ್ಕೆ ನಕಾರಾತ್ಮಕ ಪ್ರಭಾವ ಬೀರುತ್ತದೆ.
ಭಯೋತ್ಪಾದನೆಯಿಂದ ನಿರ್ದಿಷ್ಟ ಭಾಷಾವಾರು, ಧಾರ್ಮಿಕ, ಜನಾಂಗೀಯ ಅಥವಾ ವರ್ಣದವರು ಸಂಕಷ್ಟ ತೊಂದರೆಯನ್ನು ಅನುಭವಿಸುತ್ತಾರೆ.
ಭಯೋತ್ಪಾದಕರ ಆತ್ಮಾಹುತಿ ದಾಳಿಯಿಂದಾಗಿ ರಸ್ತೆ ಸಾರಿಗೆ, ರೈಲ್ವೆ, ವಿಮಾನ, ಪ್ರಮುಖ ಸರ್ಕಾರಿ ಕಛೇರಿಗಳು, ಕಿಕ್ಕಿರಿದ ಜನಜಂಗುಳಿ ಪ್ರದೇಶ & ಮಾರುಕಟ್ಟೆ ಪ್ರದೇಶಗಳು ನಾಶವಾಗುತ್ತವೆ.

9. ಭಯೋತ್ಪಾದಕತೆಯ ನಿಗ್ರಹಕ್ಕೆ ಭಾರತವು ಕೈಗೊಂಡಿರುವ ಕ್ರಮಗಳಾವವು?
   ನಮ್ಮ ಕೇಂದ್ರ & ರಾಜ್ಯ ಸರಕಾರಗಳು ಭಯೋತ್ಪಾದನೆಯ ನಿಗ್ರಹಕ್ಕೆ ತೀವ್ರ ಪ್ರಯತ್ನ ನಡೆಸುತ್ತಿವೆ. ಹಾಗೂ ತನ್ಮೂಲಕ ಜನತೆಯ ಪ್ರಾಣ ಹಾಗೂ ಆಸ್ತಿಪಾಸ್ತಿಯನ್ನು ಉಳಿಸಲು ಯತ್ನಿಸುತ್ತಿವೆ. ಭಯೋತ್ಪಾದನೆಯನ್ನು ನಿಗ್ರಹಿಸಲು ವಿ±ಇಂμಂ ಪರಿಣಿತಿ ಪಡೆದ ಪಡೆಗಳನ್ನು ರಚಿಸಲಾಗಿದೆ.

10. ಪ್ರಪಂಚದ ಯಾವ ಪ್ರಮುಖ ಘಟನೆಗಳು ಮಾನವ ಹಕ್ಕುಗಳ ಹೋರಾಟಕ್ಕೆ ಪುಷ್ಟಿ ನೀಡಿದವು?
     1776ರ ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮ, 1789ರ ಪ್ರಾನ್ಸಿನ ಮಹಾಕ್ರಾಂತಿ, 1917ರ  ರಷ್ಯಾ ಕ್ರಾಂತಿ, 20ನೇಯ ಶತಮಾನದ ಭಾರತ ಹಾಗೂ ಇನ್ನಿತರ ರಾಷ್ಟ್ರಗಳÀ ಸ್ವಾತಂತ್ರ್ಯ ಹೋರಾಟ, ಇವೆಲ್ಲಾ ಮಾನವ ಹಕ್ಕುಗಳ ಹೋರಾಟಕ್ಕೆ ಪುಷ್ಟಿ ತಂದುಕೊಟ್ಟವು.

11. ಶಸ್ತ್ರಾಸ್ತ್ರಗಳ ಸಂಖ್ಯೆಯನ್ನು ತಗ್ಗಿಸುವ ಸಲುವಾಗಿ ಪ್ರಪಂಚದಲ್ಲಿ ಆದ ಪ್ರಮುಖ ಒಪ್ಪಂದಗಳು ಯಾವುವು?
1963ರ ಮಿತ ಅಣ್ವಸ್ತ್ರ ಪರೀಕ್ಷಾ ನಿರ್ಬಂಧ ಒಪ್ಪಂದ
ಬಾಹ್ಯಾಕಾಶ ಒಪ್ಪಂದ
ಅಣ್ವಸ್ತ್ರಗಳ ಸಂಖ್ಯೆಯನ್ನು ಕುಗ್ಗಿಸುವ ಒಪ್ಪಂದ
1975ರ ಜೈವಿಕ ಅಸ್ತ್ರಗಳ ಉತ್ಪಾದನೆ & ದಾಸ್ತಾನು ನಿಷೇದ (ಃWಅ) ಒಪ್ಪಂದ
ಸಮಗ್ರ ಪರೀಕ್ಷಣ ನಿಷೇದ ಒಪ್ಪಂದ

12. ವರ್ಣಭೇದ ನೀತಿಯ ವಿರುದ್ಧ ಹೋರಾಡಿದ ಪ್ರಪಂಚದ ಪ್ರಮುಖ ಮಹನೀಯರು ಯಾರು?
   ಮಹಾತ್ಮ ಗಾಂಧಿ, ಅಬ್ರಹಾಂ ಲಿಂಕನ್, ಜಾನ್.ಎಫ್.ಕೆನೆಡಿ, ಮಾರ್ಟಿನ್ ಲೂಥರ್ ಹಾಗೂ ನೆಲ್ಸನ್ ಮಂಡೆಲಾರವರು ವರ್ಣಭೇದ ನೀತಿಯ ವಿರುದ್ಧ ಹೋರಾಡಿದ ಪ್ರಪಂಚದ
ಪ್ರಮುಖ ಮಹನೀಯರಾಗಿದ್ದಾರೆ.

13. ದಕ್ಷಿಣ ಆಫ್ರಿಕದಲ್ಲಿ ಅನುಸರಿಸಿದ ವರ್ಣಭೇದ ನೀತಿಯ ಬಗ್ಗೆ ಬರೆಯಿರಿ.
ಬಿಳಿಯರು ಕರಿಯರನ್ನು ಅತ್ಯಂತ ಕ್ರೂರ ಮತು ದೌರ್ಜನ್ಯದಿಂದ ನಡೆಸಿಕೊಳ್ಳತ್ತಿದ್ದನ್ನು ವರ್ಣಭೇದನೀತಿ ಎನ್ನುವರು.
ದಕ್ಷಿಣ ಆಪ್ರಿಕಾದಲ್ಲಿ ಅತ್ಯಂತ ಕ್ರೂರ ಹಾಗೂ ದಮನಕಾರಿ ವರ್ಣಭೇದ ನೀತಿಯನ್ನು ಅನುಸರಿಸಲಾಗುತ್ತಿತ್ತು.
ಕರಿಯರಿಗೆ ಮತದಾನದ ಹಕ್ಕನ್ನು ನಿರಾಕರಿಸಲಾಗಿತ್ತು.
ಕಪ್ಪು ಜನರನ್ನು ಗುಲಾಮರಂತೆ ಮಾರಾಟ ಮಾಡಲಾಗುತ್ತಿತ್ತು.
ನೆಲ್ಸನ್ ಮಂಡೆಲಾರ ನೇತೃತ್ವದಲ್ಲಿ ಕರಿಜನರು ದೀರ್ಘ ಹೋರಾಟ ನಡೆಸಿ ವರ್ಣಭೇದ ನೀತಿಯನ್ನು ಕೊನೆಗಾಣಿಸಿದರು. ಹಾಗಾಗಿ ಇವರನ್ನು ಆಪ್ರಿಕಾದ ಗಾಂಧಿ ಎಂದು ಕರೆಯುತ್ತಾರೆ.

ಅಧ್ಯಾಯ 5 ಜಾಗತಿಕ ಸಂಸ್ಥೆಗಳು (PS)


ಮುಖ್ಯಾಂಶಗಳು:
ವಿಶ್ವಸಂಸ್ಥೆಯು ಪ್ರಾರಂಭವಾದ ªಂμಂಜ ಅಕ್ಟೋಬರ್ 24, 1945.
ವಿಶ್ವಸಂಸ್ಥೆಯ ಮುಖ್ಯ ಕಚೇರಿ ನ್ಯೂಯಾರ್ಕ ನಗರದಲ್ಲಿದೆ.
ವಿಶ್ವಸಂಸ್ಥೆಯ ಸಚಿವ ಸಂಪುಟ ಎನ್ನುವ ಮಾದರಿಯಲ್ಲಿರುವ ಅಂಗಸಂಸ್ಥೆ ಭದ್ರತಾ ಸಮಿತಿ.
ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾದೀಶರ ಅವಧಿ ಒಂಬತ್ತು ವರ್ಷಗಳು.
ಅಂತರಾಷ್ಟ್ರೀಯ ನ್ಯಾಯಾಲಯವು ನೆದರಲ್ಯಾಂಡಿನ ಹೇಗ್ ಎಂಬಲ್ಲಿ ಇದೆ.
ವಿಶ್ವಸಂಸ್ಥೆಯ ಈಗಿನ ಮಹಾಕಾರ್ಯದರ್ಶಿಯ ಹೆಸರು ಬಾನಕಿ ಮೂನ್.
ವಿಶ್ವ ಆರೋಗ್ಯ ಸಂಸ್ಥೆಯು ಸ್ಥಾಪನೆಯಾದ ವರ್ಷ 1948.
ಸಾರ್ಕ ಸ್ಥಾಪನೆಯಾದ ವರ್ಷ 1985.
ಮೊದಲನೇ ಜಾಗತಿಕ ಯುದ್ಧದ ತರುವಾಯ ಜಾಗತಿಕ ಶಾಂತಿಗೆಂದು ಸ್ಥಾಪಿತವಾದ ಸಂಸ್ಥೆ ಲೀಗ್ ಆಫ್ ನೇಷನ್( ರಾಷ್ಟ್ರಗಳ ಸಂಘ ).
ವಿಶ್ವಸಂಸ್ಥೆ ಎಂಬ ಶಬ್ದವನ್ನು ಚಾಲ್ತಿಗೆ ತಂದವರು ಅಮೇರಿಕದ ಅಧ್ಯಕ್ಷ ಎಫ್.ಡಿ.ರೂಸ್‍ವೆಲ್ಟ್.
ವಿಶ್ವಸಂಸ್ಥೆಯ ಸದಸ್ಯತ್ವವನ್ನು ಹೊಂದಿದ ರಾಷ್ಟ್ರಗಳ ಸಂಖ್ಯೆ 193.
ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾದೀಶರ ಸಂಖ್ಯೆ 15.
ಆಹಾರ & ಕೃಷಿ ಸಂಸ್ಥೆ : 1945 : : ವಿಶ್ವ ಆರೋಗ್ಯ ಸಮಸ್ಥೆ : 1948
ಕಾಮನ್‍ವೆಲ್ತ್ ಒಕ್ಕೂಟದ ಕೇಂದ್ರ ಕಚೇರಿ ಲಂಡನ್‍ನಲ್ಲಿದೆ.
ವಿಶ್ವಬ್ಯಾಂಕ್ : ಅಮೇರಿಕಾದ ವಾಷಿಂಗಟನ್ : : ಸಾರ್ಕ : ನೇಪಾಳದ ಕಾಠ್ಮಂಡು.
ಆಫ್ರಿಕನ್ ಒಕ್ಕೂಟ ಸಂಸ್ಥೆ ಸ್ಥಾಪನೆ : 1963 : ಆಸಿಯಾನ್ ಸ್ಥಾಪನೆ : 1967.
ವಿಶ್ವಕುಟುಂಬದ ಆರ್ಥಿಕ ಪ್ರಗತಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ – ವಿಶ್ವಸಂಸ್ಥೆಯ ವ್ಯಾಪಾರ ಮತ್ತು ವಾಣಿಜ್ಯ ಪ್ರಗತಿ.

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ವಿಶ್ವಸಂಸ್ಥೆಯ ಸ್ಥಾಪನೆಗೆ ಮುಂದಾದವರ ಹೆಸರುಗಳನ್ನು ತಿಳಿಸಿ.
   ಇಂಗ್ಲಂಡಿನ ವಿನ್‍ಸ್ಟನ್ ಚರ್ಚಿಲ್, ರಷ್ಯಾದ ಜೋಸೆಫ್ ಸ್ಟಾಲಿನ್ ಹಾಗೂ ಅಮೆರಿಕಾದ ಪ್ರಾಂಕ್ಲಿನ್ ಡಿ ರೂಸವೆಲ್ಟ್ ವಿಶ್ವಸಂಸ್ಥೆಯ ಸ್ಥಾಪನೆಗೆ ಮುಂದಾದವರು.

2. ವಿಶ್ವಸಂಸ್ಥೆಯ ಅಂಗಸಂಸ್ಥೆಗಳಾವವು?
1. ಸಾಮಾನ್ಯ ಸಭೆ
2. ಭದ್ರತಾ ಸಮಿತಿ
3. ಸಾಮಾಜಿಕ ಹಾಗೂ ಆರ್ಥಿಕ ಸಮಿತಿ
4. ಧರ್ಮದರ್ಶಿ ಸಮಿತಿ
5. ಸಚಿವಾಲಯ
6. ಅಂತರಾಷ್ಟ್ರೀಯ ನ್ಯಾಯಾಲಯ

3. ಭದ್ರತಾ ಸಮಿತಿಯಲ್ಲಿನ ಖಾಯಂ ಸದಸ್ಯ ರಾಷ್ಟ್ರಗಳು ಯಾವವು?
   ಇಂಗ್ಲೆಂಡ, ಅಮೆರಿಕಾ, ರಷ್ಯಾ, ಪ್ರಾನ್ಸ್, ಚೀನಾ ವಿಶ್ವಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರಗಳು

4. ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯ ಸೂಚಿಯಲ್ಲಿರುವ ವಿಷಯಗಳಾವವು?
   ಜನಸಂಖ್ಯಾ ಸ್ಪೋಟ ತಡೆಗಟ್ಟುವದು, ಪರಿಸರ ಸಂರಕ್ಷಣೆ, ಹಸಿವು, ಪೌಷ್ಟಿಕಾಂಶದ ಕೊರತೆ ಮುಂತಾದ ವಿಷಯಗಳು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಸೂಚಿಯಲ್ಲಿರುವ ವಿμಯಳಾಗಿವೆ.

5. ಅಂತರಾಷ್ಟ್ರೀಯ ಕಾರ್ಮಿಕ ಸಂಘದ ಕಾರ್ಯಗಳನ್ನು ಪಟ್ಟಿ ಮಾಡಿ.
ಎಲ್ಲಾ ಉದ್ಯೋಗಗಳಲ್ಲಿಯೂ ಕಾರ್ಮಿಕರ ಜೀವನ ಮಟ್ಟವನ್ನು ಉತ್ತಮಗೊಳಿಸುವದು.
ಬಾಲ ಕಾರ್ಮಿಕರ ನೇಮಕ ತಡೆಯುವದು.
ಸ್ತ್ರೀ ಕಾರ್ಮಿಕರಿಗೆ ಹೆರಿಗೆ, ಪೌಷ್ಟಿಕ ಆಹಾರ, ವಸತಿ, ಮನರಂಜನೆ ಮುಂತಾದ ಸೌಲಭ್ಯಗಳನ್ನು ಒದಗಿಸುವದು.
ಉದ್ದಿಮೆಗಳ ಆಡಳಿತದಲ್ಲಿ ಕಾರ್ಮಿಕರಿಗೂ ಪಾಲುಗೊಳ್ಳುವ ಅವಕಾಶಗಳನ್ನು ಕಲ್ಪಿಸುವದು.

6. ವಿಶ್ವಸಂಸ್ಥೆಯ ಉದ್ದೇಶಗಳನ್ನು ಪಟ್ಟಿ ಮಾಡಿರಿ.
ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವದು.
ವಿವಿಧ ರಾಷ್ಟ್ರಗಳಲ್ಲಿ ಸ್ನೇಹ ಸಂಬಂಧವನ್ನು ಬೆಳೆಸುವದು.
ಮಾನವನ ಮೂಲಭೂತ ಹಕ್ಕುಗಳನ್ನು ರಕ್ಷಿಸುವದು.
ಆಂತರಾಷ್ಟ್ರೀಯ ಸಮಸ್ಯೆಗಳನ್ನು ಅಂತರಾಷ್ಟ್ರೀಯ ಸಹಕಾರದೊಂದಿಗೆ ಪರಿಹಾರ ಕಂಡುಕೊಳ್ಳುವುದು.
ಅಂತರಾಷ್ಟ್ರೀಯ ಮಟ್ಟದ ನ್ಯಾಯ ಹಾಗೂ ಒಡಂಬಡಿಕೆಗಳ ಷರತ್ತುಗಳಿಗೆ ಮನ್ನಣೆ ಒದಗಿಸುವದು.
ಪ್ರಪಂಚದ ರಾಷ್ಟ್ರಗಳ ಮಧ್ಯೆ ಪರಸ್ಪರ ಸೌಹಾರ್ದತೆಯ ಕೇಂದ್ರವಾಗಿ ಕಾರ್ಯ ನಿರ್ವಹಿಸುವದು.

7. Sಂಂಖಅ ನ್ನು ವಿಸ್ತರಿಸಿ.
   Sಂಂಖಅ – Souಣh ಂsiಚಿಟಿ ಂssoಛಿiಚಿಣioಟಿ oಜಿ ಖegioಟಿಚಿಟ ಛಿo-oಠಿeಡಿಚಿಣioಟಿ (ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘ ) ಎಂದರ್ಥ.

8. ಸಾಮಾನ್ಯ ಸಭೆಯ ರಚನೆಯನ್ನು ವಿವರಿಸಿ.
ಸಾಮಾನ್ಯ ಸಭೆಯು ಎಲ್ಲಾ ಸದಸ್ಯ ರಷ್ಯಾಗಳ ಪ್ರತಿನಿಧಿಗಳನ್ನು ಒಳಗೊಂಡ ಅಂಗಸಂಸ್ಥೆಯಾಗಿದೆ.
ಪ್ರತಿಯೊಂದು ಸದಸ್ಯ ರಷ್ಯಾವು 5 ಸದಸ್ಯರನ್ನು ಇದಕ್ಕೆ ಕಳುಹಿಸಿಕೊಡುತ್ತದೆ. ಆದರೆ ಪ್ರತಿ ದೇಶP್ಕÉ ಒಂದೇ ªುÀತz À ಹPುÀ ್ಕ ಮಾತ್ರ ಇರುತ್ತದೆ.
ಸಾಮಾನ್ಯ ಸಭೆಯು ತನ್ನ ಪ್ರಥಮ ಅಧಿವೇಶನದಲ್ಲಿಯೇ ಓರ್ವ ಅಧ್ಯಕ್ಷನನ್ನು ಆರಿಸುತ್ತದೆ.
ಅದೇ ರೀತಿ 17 ಉಪಾಧ್ಯಕ್ಷರನ್ನು ಹಾಗೂ 7 ಸ್ಥಾಯಿ ಸಮಿತಿಗಳಿಗೆ ಏಳು ಮಂದಿ ಅಧ್ಯಕ್ಷರನ್ನೂ ಇಲ್ಲಿ ಆರಿಸಲಾಗುತ್ತದೆ.
9. ಸಾರ್ಕ ಸಂಸ್ಥೆಯಲ್ಲಿ ಇರುವ ಸದಸ್ಯ gಂμಂಔಛಿUಂಳು ಯಾವುವು?
   ಸಾರ್ಕ ಸಂಸ್ಥೆಯು 1985ರಲ್ಲಿ ಸ್ಥಾಪನೆಯಾಗಿದ್ದು, ಭಾರತ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಪಾಕಿಸ್ತಾನ, ಮಾಲ್ಡೀವ್ಸ್, ಭೂತಾನ್ & ಅಪಘಾನಿಸ್ತಾನ ಪ್ರಮುಖ ಸದಸ್ಯ ರಾಷ್ಟ್ರಗಳಾಗಿವೆ.

10. ‘ಜಾಗತಿಕ ಹಂತದಲ್ಲಿ ಶಾಂತಿ ಸ್ಥಾಪನೆ ಮಾಡುವಲ್ಲಿ ವಿಶ್ವಸಂಸ್ಥೆಯ ಪಾತ್ರ ಮಹತ್ತರವಾಗಿದೆ’ ಈ ಹೇಳಿಕೆಯನ್ನು ಸಮರ್ಥಿಸಿ.
ವಿಶ್ವದ ಹಲವಾರು ರಾಜಕೀಯ ಸಂಘರ್ಷಗಳನ್ನು ನಿವಾರಿಸಿದೆ.
ಸೂಯೇಜ್ ಕಾಲುವೆ ಬಿಕ್ಕಟ್ಟು, ಇರಾನ್ ಸಂಘರ್ಷ, ಇಂಡೋನೇಷಿಯಾ, ಕಾಶ್ಮೀರ, ಪ್ಯಾಲೆಸ್ಟೈನ್, ಕೋರಿಯಾ, ಹಂಗೇರಿ, ಕಾಂಗೋ, ಅರಬ್-ಇಸ್ರೇಲ್, ಅಫಘಾನಿಸ್ತಾನ ಇತ್ಯಾದಿ ವಿವಾದಗಳ ಪರಿಹಾರಕ್ಕಾಗಿ ವಿಶ್ವಸಂಸ್ಥೆ ಶ್ರಮಿಸಿದೆ.
ಅಣ್ವಸ್ತ್ರ ಹಾಗೂ ಸಾಂಪ್ರದಾಯಿಕ ನಿಶ್ಯಸ್ತ್ರೀಕರಣ ನಿಟ್ಟಿನಲ್ಲಿಯೂ ವಿಶ್ವಸಂಸ್ಥೆ ನಿರಂತರ ಪ್ರಯತ್ನ ಮಾಡುತ್ತಿದೆ.

11. ಆರ್ಥಿಕ ಹಾಗೂ ಸಾಮಾಜಿಕ ಸಮಿತಿಯ ಕಾರ್ಯಗಳಾವವು?
ಜನರ ಜೀವನ ಮಟ್ಟ ಸುಧಾರಿಸುವದು, & ಉದ್ಯೋಗಾವಕಾಶ ಒದಗಿಸುವದು.
ನೀರಾಶ್ರಿತರು, ಮಹಿಳೆಯರ ಸ್ಥಾನಮಾನ, ವಸತಿ ಸಮಸ್ಯೆಗಳನ್ನು ನಿವಾರಿಸಲು ಕ್ರಮವಹಿಸುವದು.
ಅಂತರಾಷ್ಟ್ರೀಯ ಆರ್ಥಿಕ, ಸಾಮಾಜಿಕ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಮಾರ್ಗ ಸೂಚಿಸುವದು.
ಶೈಕ್ಷಣಿಕ ಮತ್ತು ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಏರ್ಪಡಿಸುವದು.
ಜನಾಂಗ, ಲಿಂಗ, ಭಾಷೆ, ಧರ್ಮಗಳ ಭೇದ ಭಾವನೆಗಳಿಗೆ ಆಸ್ಪದ ನೀಡದೇ ಎಲ್ಲಾ ಮಾನವರಿಗೂ ಮೂಲಭೂತ ಹಕ್ಕುಗಳನ್ನು ಒದಗಿಸುವದು.
ಮಾನವ ಸಂಪನ್ಮೂಲ, ಸಂಸ್ಕøತಿ, ಶಿಕ್ಷಣ ಮುಂತಾದ ವಿμಯಗಳ ಬಗ್ಗೆ ಅಂತರಾಷ್ಟ್ರೀಯ ಸಮ್ಮೇಳನಗಳನ್ನು ಸಂಘಟಿಸುವದು.

12. ಯುನೆಸ್ಕೋದ ಕಾರ್ಯಗಳಾವವು?
ಶಾಂತಿ ಸ್ಥಾಪನೆ.
ಮಾನವನ ಹಕ್ಕುಗಳನ್ನು ರಕ್ಷಿಸುವದು
ಶೈಕ್ಷಣಿಕ ಅಭಿವೃದ್ಧಿ ಸಾಧನೆ
ಮಾನವರ ವಿಕಾಸಕ್ಕೆಂದೇ ವಿಜ್ಞಾನ ಮತ್ತು ತಂತ್ರಜ್ಞಾನಗಳ ಬಳಕೆ.
ಪರಿಸರ ಹಾಗೂ ಮಾನವರ ನಡುವೆ ಸಮತೋಲನ
ಜನಸಂಖ್ಯಾ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವದು.

13. ಜಾಗತಿಕ ಮಟ್ಟದಲ್ಲಿನ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಐ.ಎಂ.ಎಫ್‍ನ ಪಾತ್ರವನ್ನು ವಿಶ್ಷೇಷಿಸಿ.
   ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದ ಆರ್ಥಿಕ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸುತ್ತದೆ. ವಿಶ್ವ ವಾಣಿಜ್ಯ ವ್ಯವಹಾರದ ಬೆಳವಣಿಗೆಗೆ, ಆರ್ಥಿಕ ಸ್ಥಿರತೆ ಹಾಗೂ ಉತ್ತಮ ವಿದೇಶಿ ಪಾವತಿ ಸಮತೋಲನವನ್ನು ಕಾಯ್ದುಕೊಳ್ಳಲು ಸಹಕರಿಸುತ್ತದೆ.

14. ಕಾಮನ್‍ವೆಲ್ತ್ ರಾಷ್ಟ್ರ ಸಂಘದ ಉದ್ದೇಶಗಳನ್ನು ಪಟ್ಟಿಮಾಡಿರಿ.
ಪ್ರಜಾತಂತ್ರವನ್ನು ಎತ್ತಿಹಿಡಿಯುವದು.
ಸ್ವಾತಂತ್ರ್ಯದ ಸಂರಕ್ಷಣೆ & ಬಡತನ ನಿರ್ಮೂಲನೆಗೆ ಕ್ರಮ ಕೈಗೊಳ್ಳುವದು.
ವಿಶ್ವಶಾಂತಿಯನ್ನು ನೆಲೆಗೊಳಿಸುವದು.
ಕ್ರೀಡೆ, ವಿಜ್ಞಾನ ಹಾಗೂ ಕಲೆಯ ಬೆಳವಣಿಗೆಗೆ ಪ್ರೋತ್ಸಾಹಿಸುವದು.

15. ಯುರೋಪಿಯನ್ ಯುನಿಯನ್ ಸಂಸ್ಥೆಯನ್ನು ವಿವರಿಸಿ.
    ಯುರೋಪಿಯನ್ ಯುನಿಯನ್ ಸಂಸ್ಥೆಯು 27 ಯುರೋಪಿನ ಸದಸ್ಯ ರಾಷ್ಟ್ರಗಳನ್ನು ಒಳಗೊಂಡ ಸಂಸ್ಥೆಯಾಗಿದೆ. ಇದು ಸದಸ್ಯ ರಾಷ್ಟ್ರಗಳ ಮಧ್ಯೆ ಸಮಾನ ಏಕ ಮಾರುಕಟ್ಟೆ, ಒಂದೇ ಚಲಾವಣೆಯ ಕರೆನ್ಸಿ, ಸಮಾನ ಕೃಷಿ ಹಾಗೂ ವ್ಯಾಪಾರ ಧೋರಣೆ ಇತ್ಯಾದಿಗಳಿಗೆ ಅವಕಾಶ ಮಾಡಿಕೊಡುತ್ತದೆ.

16. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಕಾರ್ಯಗಳು ಯಾವುವು?
ಪ್ರತಿ ವರ್ಷದ ಸಪ್ಟಂಬರ್ ತಿಂಗಳಲ್ಲಿ ಸಾಮಾನ್ಯ ಸಭೆಯ ಅಧಿವೇಶನವನ್ನು ಕರೆಯುವದು.
ಪ್ರಮುಖ ವಿμಯಗಳನ್ನು ಬಹುಮತದ ಸಿದ್ದಾಂತದಂತೆ ಅಥವಾ 2/3 ಮತಗಳ ಬೆಂಬಲದಿಂದ ನಿರ್ಧರಿಸುವದು.
ವಿಶ್ವಸಂಸ್ಥೆಯ ಆಯವ್ಯಯ ಪಟ್ಟಿಯನ್ನು ಅನುಮೋದಿಸುತ್ತದೆ.
ಪ್ರತಿಯೊಂದು ರಾಷ್ಟ್ರವು ನೀಡಬಹುದಾದ ಚಂದಾಹಣವನ್ನು ನಿಗದಿ ಮಾಡುತ್ತದೆ.

17. ಸಾರ್ಕ ಸಂಸ್ಥೆ ಸ್ಥಾಪನೆಯ ಮೂಲ ಉದ್ದೇಶವೇನು?
    ಆರ್ಥಿಕ ಸಂಬಂಧಗಳ ವೃದ್ಧಿ, ಸಾಮಾಜಿಕ ಪ್ರಗತಿ ಹಾಗೂ ಸಾಂಸ್ಕøತಿಕ ಬೆಳವಣಿಗೆಯನ್ನು ಪರಸ್ಪರ ಸಹಕಾರದೊಂದಿಗೆ ಸಾಧಿಸುವಿಕೆ ಸಾರ್ಕ ಸಂಸ್ಥೆಯ ಮೂಲ ಉದ್ದೇಶವಾಗಿದೆ.

18. ಆಹಾರ & ಕೃಷಿ ಸಂಸ್ಥೆ ಸ್ಥಾಪನೆಯ ಉದ್ದೇಶಗಳಾವುವು?
ಪೌಷ್ಟಿಕ ಆಹಾರ ಒದಗಿಸುವದು.
ಹಸಿವೆಯಿಂದ ಜಾಗತಿಕ ಜನಸಮುದಾಯವನ್ನು ವಿಮುಕ್ತಿಗೊಳಿಸುವುದು.
ಕೃಷಿ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವುದು.
ಗ್ರಾಮಾಂತರ ಪ್ರದೇಶಗಳ ಜನರ ಜೀವನ ಮಟ್ಟವನ್ನು ಸುಧಾರಿಸುವುದು.

19. ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಕಾರ್ಯಗಳು ಯಾವುವು?
ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುತ್ತದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ನೂತನ ಸದಸ್ಯರ ಆಯ್ಕೆಯನ್ನು ಶಿಫಾರಸ್ಸು ಮಾಡುವ ಅಥವಾ ತಿರಸ್ಕರಿಸುವ ಆಧಿಕಾರವನ್ನು ಹೊಂದಿದೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಅಭ್ಯರ್ಥಿಯನ್ನು ಸೂಚಿಸುವ ಅಧಿಕಾರವನ್ನು ಹೊಂದಿದೆ.
ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಆಯ್ಕೆಯಲ್ಲಿ ಭಾಗವಹಿಸುತ್ತದೆ.
20. ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ರಚನೆಯನ್ನು ವಿವರಿಸಿ.
ಈ ಸಮಿತಿಯು 15 ಪ್ರತಿನಿಧಿಗಳಿಂದ ಕೂಡಿದ್ದು, ಅದರಲ್ಲಿ 5 ಖಾಯಂ ಸದಸ್ಯರು ಹಾಗೂ 10 ಹಂಗಾಮಿ ಸದಸ್ಯರನ್ನು ಹೊಂದಿದೆ.
ಇಂಗ್ಲಂಡ, ಅಮೇರಿಕಾ, ರಷ್ಯಾ, ಪ್ರಾನ್ಸ್, ಚೀನಾ ಖಾಯಂ ಸದಸ್ಯ ರಾಷ್ಟ್ರಗಳು
ಖಾಯಂ ಸದಸ್ಯರಿಗೆ ‘ವಿಟೋ’ ಅಂದರೆ ನಿಷೇದಾತ್ಮಕ ಮತ ಚಲಾಯಿಸುವ ವಿಶೇಷ ಅಧಿಕಾರ ಇದೆ.

21. ವಿಶ್ವಸಂಸ್ಥೆಯ ಸಾಧನೆಗಳಾವುವು?
ಜಾಗತಿಕ ಹಂತದಲ್ಲಿ ಶಾಂತಿ ಸ್ಥಾಪನೆ ಮಾಡುವಲ್ಲಿ ವಿಶ್ವಸಂಸ್ಥೆಯ ಪಾತ್ರ ಮಹತ್ತರವಾಗಿದೆ.
ವಿಶ್ವದ ಹಲವಾರು ರಾಜಕೀಯ ಸಂಘರ್ಷಗಳನ್ನು ನಿವಾರಿಸಿದೆ. ಉದಾ : ಸೂಯೇಜ್‍ಕಾಲುವೆ ಬಿಕ್ಕಟ್ಟು ನಿವಾರಣೆ, ಇರಾನ್ ¸ಂಘರ್ಷ, ಇಂಡೋನೆಷ್ಯಾ ಸ್ವಾತಂತ್ರ್ಯ ಘೋಷಣೆ.
ಅಣ್ವಸ್ತ್ರ ಹಾಗೂ ಸಾಂಪ್ರದಾಯಿಕ ನಿಶ್ಯಸ್ತ್ರೀಕರಣ ನಿಟ್ಟಿನಲ್ಲಿಂiುÀ ೂ ವಿಶ್ವಸಂಸ್ಥೆ ನಿರಂತರ ಪ್ರಯತ್ನ ಮಾಡುತ್ತಿದೆ.
ವಿಶ್ವದ ಸಾಮಾಜಿಕ & ಆರ್ಥಿಕ ಪ್ರಗತಿಗೆ ಸಂಬಂಧಿಸಿದಂತೆ ಮೇಲ್ವಿಚಾರಣೆ ಮಾಡುತ್ತದೆ.
ವರ್ಣಭೇದ ನೀತಿಯನ್ನು ಅಳಿಸಿ ಹಾಕುವಲ್ಲಿ, ಸಾಮ್ರಾಜ್ಯಶಾಹಿತ್ವ, ವಸಾಹತುಶಾಹಿತ್ವ ಇತ್ಯಾದಿಗಳನ್ನು ಇಲ್ಲವಾಗಿಸುವಲ್ಲಿಯೂ ವಿಶ್ವಸಂಸ್ಥೆಯ ಪಾತ್ರ ಗಮನಾರ್ಹವಾದದು.

22. ಯುನಿಸೆಫ್ ಸಂಸ್ಥೆ ಸ್ಥಾಪನೆಯ ಮೂಲ ಉದ್ದೇಶವೇನು?
    ಮಹಿಳೆಯರ ಹಾಗೂ ಮಕ್ಕಳ ಅಭಿವೃದ್ಧಿಗೆ ಪೂರಕವಾದ ಪರಿಸರವನ್ನು ಒದಗಿಸುವುದೇ ಈ ಸಂಸ್ಥೆಯ ಮೂಲ ಉದ್ದೇಶವಾಗಿದೆ.

23. ಸಾರ್ಕ ಸಂಸ್ಥೆಯ ಪ್ರಗತಿಗೆ ತೊಡಕಾಗಿರುವ ಅದರ ಸೂತ್ರವೇನು?
    ‘ಎಲ್ಲಾ ನಿರ್ಣಯಗಳು ಸದಸ್ಯ ರಾÀಷ್ಟ್ರಗಳ ಅವಿರೋಧದ ನೆಲೆಯಲ್ಲೇ ಇರಬೇಕು’ ಎಂಬ ಸಾರ್ಕನ ಸೂತ್ರವು ಅದರ ಪ್ರಗತಿಗೆ ಒಂದು ತೊಡಕಾಗಿ ಪರಿಣಮಿಸಿದೆ.

24. ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಗಳಾವುವು?
ಕಾಲರಾ, ಪ್ಲೇಗ್, ಮಲೇರಿಯಾ, ಸಿಡುಬು ಮುಂತಾದ ರೋಗಗಳನ್ನು ಸಂಪೂರ್ಣವಾಗಿ ತೊಡೆದು ಹಾಕಲು ಯತ್ನಿಸುತ್ತದೆ.
ಏಡ್ಸ್, ಕ್ಯಾನ್ಸರ್‍ನಂತಹ ಭೀಕರ ರೋಗಗಳಿಂದ ಪ್ರಪಂಚವನ್ನು ಮುಕ್ತಿಗೊಳಿಸಲು ಪ್ರಯತ್ನಿಸುತ್ತದೆ.
ಸಿಡುಬು ರೋಗವನ್ನು ಸಂಪೂರ್ಣವಾಗಿ ನಿವಾರಿಸುವಲ್ಲಿ ಈ ಸಂಸ್ಥೆ ಯಶಸ್ಸು ಕಂಡಿದೆ.
ಜನಸಂಖ್ಯಾ ಸ್ಪೋಟ, ಪರಿಸರ ಸಂರಕ್ಷಣೆ, ಹಸಿವು, ಪೌಷ್ಟಿಕತೆಯ ಕೊರತೆ ಮುಂತಾದ ವಿಷಯಗಳು ಈ ಸಂಸ್ಥೆಯ ಕಾರ್ಯ ಸೂಚಿಯಲ್ಲಿವೆ.

25. ಯಾವ ಸಮ್ಮೇಳನದಲ್ಲಿ ವಿಶ್ವಸಂಸ್ಥೆಯ ಸನ್ನದಿಗೆ ಸಹಿ ಹಾಕಲಾಯಿತು?
    1945 ಜೂನ್ 26ರಂದು ಸ್ಕಾನ್ ಪ್ರಾನ್ಸಿಸ್ಕೋ ವಿಶ್ವಸಂಸ್ಥೆಯ ಸನ್ನದಿಗೆ ಸಹಿಹಾಕಲಾಯಿತು.
logoblog

Thanks for reading ರಾಜ್ಯಶಾಸ್ತ್ರ (POL.SCIENCE)

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *