ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ಸಮಾಜಶಾಸ್ತ್ರ | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Saturday, March 07, 2015

ಸಮಾಜಶಾಸ್ತ್ರ

  Pundalik       Saturday, March 07, 2015

ಅಧ್ಯಾಯ 5 ಜಾಗತಿಕ ಸಂಸ್ಥೆಗಳು (PS)


ಮುಖ್ಯಾಂಶಗಳು:
ವಿಶ್ವಸಂಸ್ಥೆಯು ಪ್ರಾರಂಭವಾದ ªಂμಂಜ ಅಕ್ಟೋಬರ್ 24, 1945.
ವಿಶ್ವಸಂಸ್ಥೆಯ ಮುಖ್ಯ ಕಚೇರಿ ನ್ಯೂಯಾರ್ಕ ನಗರದಲ್ಲಿದೆ.
ವಿಶ್ವಸಂಸ್ಥೆಯ ಸಚಿವ ಸಂಪುಟ ಎನ್ನುವ ಮಾದರಿಯಲ್ಲಿರುವ ಅಂಗಸಂಸ್ಥೆ ಭದ್ರತಾ ಸಮಿತಿ.
ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾದೀಶರ ಅವಧಿ ಒಂಬತ್ತು ವರ್ಷಗಳು.
ಅಂತರಾಷ್ಟ್ರೀಯ ನ್ಯಾಯಾಲಯವು ನೆದರಲ್ಯಾಂಡಿನ ಹೇಗ್ ಎಂಬಲ್ಲಿ ಇದೆ.
ವಿಶ್ವಸಂಸ್ಥೆಯ ಈಗಿನ ಮಹಾಕಾರ್ಯದರ್ಶಿಯ ಹೆಸರು ಬಾನಕಿ ಮೂನ್.
ವಿಶ್ವ ಆರೋಗ್ಯ ಸಂಸ್ಥೆಯು ಸ್ಥಾಪನೆಯಾದ ವರ್ಷ 1948.
ಸಾರ್ಕ ಸ್ಥಾಪನೆಯಾದ ವರ್ಷ 1985.
ಮೊದಲನೇ ಜಾಗತಿಕ ಯುದ್ಧದ ತರುವಾಯ ಜಾಗತಿಕ ಶಾಂತಿಗೆಂದು ಸ್ಥಾಪಿತವಾದ ಸಂಸ್ಥೆ ಲೀಗ್ ಆಫ್ ನೇಷನ್( ರಾಷ್ಟ್ರಗಳ ಸಂಘ ).
ವಿಶ್ವಸಂಸ್ಥೆ ಎಂಬ ಶಬ್ದವನ್ನು ಚಾಲ್ತಿಗೆ ತಂದವರು ಅಮೇರಿಕದ ಅಧ್ಯಕ್ಷ ಎಫ್.ಡಿ.ರೂಸ್‍ವೆಲ್ಟ್.
ವಿಶ್ವಸಂಸ್ಥೆಯ ಸದಸ್ಯತ್ವವನ್ನು ಹೊಂದಿದ ರಾಷ್ಟ್ರಗಳ ಸಂಖ್ಯೆ 193.
ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾದೀಶರ ಸಂಖ್ಯೆ 15.
ಆಹಾರ & ಕೃಷಿ ಸಂಸ್ಥೆ : 1945 : : ವಿಶ್ವ ಆರೋಗ್ಯ ಸಮಸ್ಥೆ : 1948
ಕಾಮನ್‍ವೆಲ್ತ್ ಒಕ್ಕೂಟದ ಕೇಂದ್ರ ಕಚೇರಿ ಲಂಡನ್‍ನಲ್ಲಿದೆ.
ವಿಶ್ವಬ್ಯಾಂಕ್ : ಅಮೇರಿಕಾದ ವಾಷಿಂಗಟನ್ : : ಸಾರ್ಕ : ನೇಪಾಳದ ಕಾಠ್ಮಂಡು.
ಆಫ್ರಿಕನ್ ಒಕ್ಕೂಟ ಸಂಸ್ಥೆ ಸ್ಥಾಪನೆ : 1963 : ಆಸಿಯಾನ್ ಸ್ಥಾಪನೆ : 1967.
ವಿಶ್ವಕುಟುಂಬದ ಆರ್ಥಿಕ ಪ್ರಗತಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ – ವಿಶ್ವಸಂಸ್ಥೆಯ ವ್ಯಾಪಾರ ಮತ್ತು ವಾಣಿಜ್ಯ ಪ್ರಗತಿ.

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ವಿಶ್ವಸಂಸ್ಥೆಯ ಸ್ಥಾಪನೆಗೆ ಮುಂದಾದವರ ಹೆಸರುಗಳನ್ನು ತಿಳಿಸಿ.
   ಇಂಗ್ಲಂಡಿನ ವಿನ್‍ಸ್ಟನ್ ಚರ್ಚಿಲ್, ರಷ್ಯಾದ ಜೋಸೆಫ್ ಸ್ಟಾಲಿನ್ ಹಾಗೂ ಅಮೆರಿಕಾದ ಪ್ರಾಂಕ್ಲಿನ್ ಡಿ ರೂಸವೆಲ್ಟ್ ವಿಶ್ವಸಂಸ್ಥೆಯ ಸ್ಥಾಪನೆಗೆ ಮುಂದಾದವರು.

2. ವಿಶ್ವಸಂಸ್ಥೆಯ ಅಂಗಸಂಸ್ಥೆಗಳಾವವು?
1. ಸಾಮಾನ್ಯ ಸಭೆ
2. ಭದ್ರತಾ ಸಮಿತಿ
3. ಸಾಮಾಜಿಕ ಹಾಗೂ ಆರ್ಥಿಕ ಸಮಿತಿ
4. ಧರ್ಮದರ್ಶಿ ಸಮಿತಿ
5. ಸಚಿವಾಲಯ
6. ಅಂತರಾಷ್ಟ್ರೀಯ ನ್ಯಾಯಾಲಯ

3. ಭದ್ರತಾ ಸಮಿತಿಯಲ್ಲಿನ ಖಾಯಂ ಸದಸ್ಯ ರಾಷ್ಟ್ರಗಳು ಯಾವವು?
   ಇಂಗ್ಲೆಂಡ, ಅಮೆರಿಕಾ, ರಷ್ಯಾ, ಪ್ರಾನ್ಸ್, ಚೀನಾ ವಿಶ್ವಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರಗಳು

4. ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯ ಸೂಚಿಯಲ್ಲಿರುವ ವಿಷಯಗಳಾವವು?
   ಜನಸಂಖ್ಯಾ ಸ್ಪೋಟ ತಡೆಗಟ್ಟುವದು, ಪರಿಸರ ಸಂರಕ್ಷಣೆ, ಹಸಿವು, ಪೌಷ್ಟಿಕಾಂಶದ ಕೊರತೆ ಮುಂತಾದ ವಿಷಯಗಳು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಸೂಚಿಯಲ್ಲಿರುವ ವಿμಯಳಾಗಿವೆ.

5. ಅಂತರಾಷ್ಟ್ರೀಯ ಕಾರ್ಮಿಕ ಸಂಘದ ಕಾರ್ಯಗಳನ್ನು ಪಟ್ಟಿ ಮಾಡಿ.
ಎಲ್ಲಾ ಉದ್ಯೋಗಗಳಲ್ಲಿಯೂ ಕಾರ್ಮಿಕರ ಜೀವನ ಮಟ್ಟವನ್ನು ಉತ್ತಮಗೊಳಿಸುವದು.
ಬಾಲ ಕಾರ್ಮಿಕರ ನೇಮಕ ತಡೆಯುವದು.
ಸ್ತ್ರೀ ಕಾರ್ಮಿಕರಿಗೆ ಹೆರಿಗೆ, ಪೌಷ್ಟಿಕ ಆಹಾರ, ವಸತಿ, ಮನರಂಜನೆ ಮುಂತಾದ ಸೌಲಭ್ಯಗಳನ್ನು ಒದಗಿಸುವದು.
ಉದ್ದಿಮೆಗಳ ಆಡಳಿತದಲ್ಲಿ ಕಾರ್ಮಿಕರಿಗೂ ಪಾಲುಗೊಳ್ಳುವ ಅವಕಾಶಗಳನ್ನು ಕಲ್ಪಿಸುವದು.

6. ವಿಶ್ವಸಂಸ್ಥೆಯ ಉದ್ದೇಶಗಳನ್ನು ಪಟ್ಟಿ ಮಾಡಿರಿ.
ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವದು.
ವಿವಿಧ ರಾಷ್ಟ್ರಗಳಲ್ಲಿ ಸ್ನೇಹ ಸಂಬಂಧವನ್ನು ಬೆಳೆಸುವದು.
ಮಾನವನ ಮೂಲಭೂತ ಹಕ್ಕುಗಳನ್ನು ರಕ್ಷಿಸುವದು.
ಆಂತರಾಷ್ಟ್ರೀಯ ಸಮಸ್ಯೆಗಳನ್ನು ಅಂತರಾಷ್ಟ್ರೀಯ ಸಹಕಾರದೊಂದಿಗೆ ಪರಿಹಾರ ಕಂಡುಕೊಳ್ಳುವುದು.
ಅಂತರಾಷ್ಟ್ರೀಯ ಮಟ್ಟದ ನ್ಯಾಯ ಹಾಗೂ ಒಡಂಬಡಿಕೆಗಳ ಷರತ್ತುಗಳಿಗೆ ಮನ್ನಣೆ ಒದಗಿಸುವದು.
ಪ್ರಪಂಚದ ರಾಷ್ಟ್ರಗಳ ಮಧ್ಯೆ ಪರಸ್ಪರ ಸೌಹಾರ್ದತೆಯ ಕೇಂದ್ರವಾಗಿ ಕಾರ್ಯ ನಿರ್ವಹಿಸುವದು.

7. Sಂಂಖಅ ನ್ನು ವಿಸ್ತರಿಸಿ.
   Sಂಂಖಅ – Souಣh ಂsiಚಿಟಿ ಂssoಛಿiಚಿಣioಟಿ oಜಿ ಖegioಟಿಚಿಟ ಛಿo-oಠಿeಡಿಚಿಣioಟಿ (ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘ ) ಎಂದರ್ಥ.

8. ಸಾಮಾನ್ಯ ಸಭೆಯ ರಚನೆಯನ್ನು ವಿವರಿಸಿ.
ಸಾಮಾನ್ಯ ಸಭೆಯು ಎಲ್ಲಾ ಸದಸ್ಯ ರಷ್ಯಾಗಳ ಪ್ರತಿನಿಧಿಗಳನ್ನು ಒಳಗೊಂಡ ಅಂಗಸಂಸ್ಥೆಯಾಗಿದೆ.
ಪ್ರತಿಯೊಂದು ಸದಸ್ಯ ರಷ್ಯಾವು 5 ಸದಸ್ಯರನ್ನು ಇದಕ್ಕೆ ಕಳುಹಿಸಿಕೊಡುತ್ತದೆ. ಆದರೆ ಪ್ರತಿ ದೇಶP್ಕÉ ಒಂದೇ ªುÀತz À ಹPುÀ ್ಕ ಮಾತ್ರ ಇರುತ್ತದೆ.
ಸಾಮಾನ್ಯ ಸಭೆಯು ತನ್ನ ಪ್ರಥಮ ಅಧಿವೇಶನದಲ್ಲಿಯೇ ಓರ್ವ ಅಧ್ಯಕ್ಷನನ್ನು ಆರಿಸುತ್ತದೆ.
ಅದೇ ರೀತಿ 17 ಉಪಾಧ್ಯಕ್ಷರನ್ನು ಹಾಗೂ 7 ಸ್ಥಾಯಿ ಸಮಿತಿಗಳಿಗೆ ಏಳು ಮಂದಿ ಅಧ್ಯಕ್ಷರನ್ನೂ ಇಲ್ಲಿ ಆರಿಸಲಾಗುತ್ತದೆ.
9. ಸಾರ್ಕ ಸಂಸ್ಥೆಯಲ್ಲಿ ಇರುವ ಸದಸ್ಯ gಂμಂಔಛಿUಂಳು ಯಾವುವು?
   ಸಾರ್ಕ ಸಂಸ್ಥೆಯು 1985ರಲ್ಲಿ ಸ್ಥಾಪನೆಯಾಗಿದ್ದು, ಭಾರತ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಪಾಕಿಸ್ತಾನ, ಮಾಲ್ಡೀವ್ಸ್, ಭೂತಾನ್ & ಅಪಘಾನಿಸ್ತಾನ ಪ್ರಮುಖ ಸದಸ್ಯ ರಾಷ್ಟ್ರಗಳಾಗಿವೆ.

10. ‘ಜಾಗತಿಕ ಹಂತದಲ್ಲಿ ಶಾಂತಿ ಸ್ಥಾಪನೆ ಮಾಡುವಲ್ಲಿ ವಿಶ್ವಸಂಸ್ಥೆಯ ಪಾತ್ರ ಮಹತ್ತರವಾಗಿದೆ’ ಈ ಹೇಳಿಕೆಯನ್ನು ಸಮರ್ಥಿಸಿ.
ವಿಶ್ವದ ಹಲವಾರು ರಾಜಕೀಯ ಸಂಘರ್ಷಗಳನ್ನು ನಿವಾರಿಸಿದೆ.
ಸೂಯೇಜ್ ಕಾಲುವೆ ಬಿಕ್ಕಟ್ಟು, ಇರಾನ್ ಸಂಘರ್ಷ, ಇಂಡೋನೇಷಿಯಾ, ಕಾಶ್ಮೀರ, ಪ್ಯಾಲೆಸ್ಟೈನ್, ಕೋರಿಯಾ, ಹಂಗೇರಿ, ಕಾಂಗೋ, ಅರಬ್-ಇಸ್ರೇಲ್, ಅಫಘಾನಿಸ್ತಾನ ಇತ್ಯಾದಿ ವಿವಾದಗಳ ಪರಿಹಾರಕ್ಕಾಗಿ ವಿಶ್ವಸಂಸ್ಥೆ ಶ್ರಮಿಸಿದೆ.
ಅಣ್ವಸ್ತ್ರ ಹಾಗೂ ಸಾಂಪ್ರದಾಯಿಕ ನಿಶ್ಯಸ್ತ್ರೀಕರಣ ನಿಟ್ಟಿನಲ್ಲಿಯೂ ವಿಶ್ವಸಂಸ್ಥೆ ನಿರಂತರ ಪ್ರಯತ್ನ ಮಾಡುತ್ತಿದೆ.

11. ಆರ್ಥಿಕ ಹಾಗೂ ಸಾಮಾಜಿಕ ಸಮಿತಿಯ ಕಾರ್ಯಗಳಾವವು?
ಜನರ ಜೀವನ ಮಟ್ಟ ಸುಧಾರಿಸುವದು, & ಉದ್ಯೋಗಾವಕಾಶ ಒದಗಿಸುವದು.
ನೀರಾಶ್ರಿತರು, ಮಹಿಳೆಯರ ಸ್ಥಾನಮಾನ, ವಸತಿ ಸಮಸ್ಯೆಗಳನ್ನು ನಿವಾರಿಸಲು ಕ್ರಮವಹಿಸುವದು.
ಅಂತರಾಷ್ಟ್ರೀಯ ಆರ್ಥಿಕ, ಸಾಮಾಜಿಕ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಮಾರ್ಗ ಸೂಚಿಸುವದು.
ಶೈಕ್ಷಣಿಕ ಮತ್ತು ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಏರ್ಪಡಿಸುವದು.
ಜನಾಂಗ, ಲಿಂಗ, ಭಾಷೆ, ಧರ್ಮಗಳ ಭೇದ ಭಾವನೆಗಳಿಗೆ ಆಸ್ಪದ ನೀಡದೇ ಎಲ್ಲಾ ಮಾನವರಿಗೂ ಮೂಲಭೂತ ಹಕ್ಕುಗಳನ್ನು ಒದಗಿಸುವದು.
ಮಾನವ ಸಂಪನ್ಮೂಲ, ಸಂಸ್ಕøತಿ, ಶಿಕ್ಷಣ ಮುಂತಾದ ವಿμಯಗಳ ಬಗ್ಗೆ ಅಂತರಾಷ್ಟ್ರೀಯ ಸಮ್ಮೇಳನಗಳನ್ನು ಸಂಘಟಿಸುವದು.

12. ಯುನೆಸ್ಕೋದ ಕಾರ್ಯಗಳಾವವು?
ಶಾಂತಿ ಸ್ಥಾಪನೆ.
ಮಾನವನ ಹಕ್ಕುಗಳನ್ನು ರಕ್ಷಿಸುವದು
ಶೈಕ್ಷಣಿಕ ಅಭಿವೃದ್ಧಿ ಸಾಧನೆ
ಮಾನವರ ವಿಕಾಸಕ್ಕೆಂದೇ ವಿಜ್ಞಾನ ಮತ್ತು ತಂತ್ರಜ್ಞಾನಗಳ ಬಳಕೆ.
ಪರಿಸರ ಹಾಗೂ ಮಾನವರ ನಡುವೆ ಸಮತೋಲನ
ಜನಸಂಖ್ಯಾ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವದು.

13. ಜಾಗತಿಕ ಮಟ್ಟದಲ್ಲಿನ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಐ.ಎಂ.ಎಫ್‍ನ ಪಾತ್ರವನ್ನು ವಿಶ್ಷೇಷಿಸಿ.
   ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದ ಆರ್ಥಿಕ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸುತ್ತದೆ. ವಿಶ್ವ ವಾಣಿಜ್ಯ ವ್ಯವಹಾರದ ಬೆಳವಣಿಗೆಗೆ, ಆರ್ಥಿಕ ಸ್ಥಿರತೆ ಹಾಗೂ ಉತ್ತಮ ವಿದೇಶಿ ಪಾವತಿ ಸಮತೋಲನವನ್ನು ಕಾಯ್ದುಕೊಳ್ಳಲು ಸಹಕರಿಸುತ್ತದೆ.

14. ಕಾಮನ್‍ವೆಲ್ತ್ ರಾಷ್ಟ್ರ ಸಂಘದ ಉದ್ದೇಶಗಳನ್ನು ಪಟ್ಟಿಮಾಡಿರಿ.
ಪ್ರಜಾತಂತ್ರವನ್ನು ಎತ್ತಿಹಿಡಿಯುವದು.
ಸ್ವಾತಂತ್ರ್ಯದ ಸಂರಕ್ಷಣೆ & ಬಡತನ ನಿರ್ಮೂಲನೆಗೆ ಕ್ರಮ ಕೈಗೊಳ್ಳುವದು.
ವಿಶ್ವಶಾಂತಿಯನ್ನು ನೆಲೆಗೊಳಿಸುವದು.
ಕ್ರೀಡೆ, ವಿಜ್ಞಾನ ಹಾಗೂ ಕಲೆಯ ಬೆಳವಣಿಗೆಗೆ ಪ್ರೋತ್ಸಾಹಿಸುವದು.

15. ಯುರೋಪಿಯನ್ ಯುನಿಯನ್ ಸಂಸ್ಥೆಯನ್ನು ವಿವರಿಸಿ.
    ಯುರೋಪಿಯನ್ ಯುನಿಯನ್ ಸಂಸ್ಥೆಯು 27 ಯುರೋಪಿನ ಸದಸ್ಯ ರಾಷ್ಟ್ರಗಳನ್ನು ಒಳಗೊಂಡ ಸಂಸ್ಥೆಯಾಗಿದೆ. ಇದು ಸದಸ್ಯ ರಾಷ್ಟ್ರಗಳ ಮಧ್ಯೆ ಸಮಾನ ಏಕ ಮಾರುಕಟ್ಟೆ, ಒಂದೇ ಚಲಾವಣೆಯ ಕರೆನ್ಸಿ, ಸಮಾನ ಕೃಷಿ ಹಾಗೂ ವ್ಯಾಪಾರ ಧೋರಣೆ ಇತ್ಯಾದಿಗಳಿಗೆ ಅವಕಾಶ ಮಾಡಿಕೊಡುತ್ತದೆ.

16. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಕಾರ್ಯಗಳು ಯಾವುವು?
ಪ್ರತಿ ವರ್ಷದ ಸಪ್ಟಂಬರ್ ತಿಂಗಳಲ್ಲಿ ಸಾಮಾನ್ಯ ಸಭೆಯ ಅಧಿವೇಶನವನ್ನು ಕರೆಯುವದು.
ಪ್ರಮುಖ ವಿμಯಗಳನ್ನು ಬಹುಮತದ ಸಿದ್ದಾಂತದಂತೆ ಅಥವಾ 2/3 ಮತಗಳ ಬೆಂಬಲದಿಂದ ನಿರ್ಧರಿಸುವದು.
ವಿಶ್ವಸಂಸ್ಥೆಯ ಆಯವ್ಯಯ ಪಟ್ಟಿಯನ್ನು ಅನುಮೋದಿಸುತ್ತದೆ.
ಪ್ರತಿಯೊಂದು ರಾಷ್ಟ್ರವು ನೀಡಬಹುದಾದ ಚಂದಾಹಣವನ್ನು ನಿಗದಿ ಮಾಡುತ್ತದೆ.

17. ಸಾರ್ಕ ಸಂಸ್ಥೆ ಸ್ಥಾಪನೆಯ ಮೂಲ ಉದ್ದೇಶವೇನು?
    ಆರ್ಥಿಕ ಸಂಬಂಧಗಳ ವೃದ್ಧಿ, ಸಾಮಾಜಿಕ ಪ್ರಗತಿ ಹಾಗೂ ಸಾಂಸ್ಕøತಿಕ ಬೆಳವಣಿಗೆಯನ್ನು ಪರಸ್ಪರ ಸಹಕಾರದೊಂದಿಗೆ ಸಾಧಿಸುವಿಕೆ ಸಾರ್ಕ ಸಂಸ್ಥೆಯ ಮೂಲ ಉದ್ದೇಶವಾಗಿದೆ.

18. ಆಹಾರ & ಕೃಷಿ ಸಂಸ್ಥೆ ಸ್ಥಾಪನೆಯ ಉದ್ದೇಶಗಳಾವುವು?
ಪೌಷ್ಟಿಕ ಆಹಾರ ಒದಗಿಸುವದು.
ಹಸಿವೆಯಿಂದ ಜಾಗತಿಕ ಜನಸಮುದಾಯವನ್ನು ವಿಮುಕ್ತಿಗೊಳಿಸುವುದು.
ಕೃಷಿ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವುದು.
ಗ್ರಾಮಾಂತರ ಪ್ರದೇಶಗಳ ಜನರ ಜೀವನ ಮಟ್ಟವನ್ನು ಸುಧಾರಿಸುವುದು.

19. ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಕಾರ್ಯಗಳು ಯಾವುವು?
ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುತ್ತದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ನೂತನ ಸದಸ್ಯರ ಆಯ್ಕೆಯನ್ನು ಶಿಫಾರಸ್ಸು ಮಾಡುವ ಅಥವಾ ತಿರಸ್ಕರಿಸುವ ಆಧಿಕಾರವನ್ನು ಹೊಂದಿದೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಅಭ್ಯರ್ಥಿಯನ್ನು ಸೂಚಿಸುವ ಅಧಿಕಾರವನ್ನು ಹೊಂದಿದೆ.
ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಆಯ್ಕೆಯಲ್ಲಿ ಭಾಗವಹಿಸುತ್ತದೆ.
20. ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ರಚನೆಯನ್ನು ವಿವರಿಸಿ.
ಈ ಸಮಿತಿಯು 15 ಪ್ರತಿನಿಧಿಗಳಿಂದ ಕೂಡಿದ್ದು, ಅದರಲ್ಲಿ 5 ಖಾಯಂ ಸದಸ್ಯರು ಹಾಗೂ 10 ಹಂಗಾಮಿ ಸದಸ್ಯರನ್ನು ಹೊಂದಿದೆ.
ಇಂಗ್ಲಂಡ, ಅಮೇರಿಕಾ, ರಷ್ಯಾ, ಪ್ರಾನ್ಸ್, ಚೀನಾ ಖಾಯಂ ಸದಸ್ಯ ರಾಷ್ಟ್ರಗಳು
ಖಾಯಂ ಸದಸ್ಯರಿಗೆ ‘ವಿಟೋ’ ಅಂದರೆ ನಿಷೇದಾತ್ಮಕ ಮತ ಚಲಾಯಿಸುವ ವಿಶೇಷ ಅಧಿಕಾರ ಇದೆ.

21. ವಿಶ್ವಸಂಸ್ಥೆಯ ಸಾಧನೆಗಳಾವುವು?
ಜಾಗತಿಕ ಹಂತದಲ್ಲಿ ಶಾಂತಿ ಸ್ಥಾಪನೆ ಮಾಡುವಲ್ಲಿ ವಿಶ್ವಸಂಸ್ಥೆಯ ಪಾತ್ರ ಮಹತ್ತರವಾಗಿದೆ.
ವಿಶ್ವದ ಹಲವಾರು ರಾಜಕೀಯ ಸಂಘರ್ಷಗಳನ್ನು ನಿವಾರಿಸಿದೆ. ಉದಾ : ಸೂಯೇಜ್‍ಕಾಲುವೆ ಬಿಕ್ಕಟ್ಟು ನಿವಾರಣೆ, ಇರಾನ್ ¸ಂಘರ್ಷ, ಇಂಡೋನೆಷ್ಯಾ ಸ್ವಾತಂತ್ರ್ಯ ಘೋಷಣೆ.
ಅಣ್ವಸ್ತ್ರ ಹಾಗೂ ಸಾಂಪ್ರದಾಯಿಕ ನಿಶ್ಯಸ್ತ್ರೀಕರಣ ನಿಟ್ಟಿನಲ್ಲಿಂiುÀ ೂ ವಿಶ್ವಸಂಸ್ಥೆ ನಿರಂತರ ಪ್ರಯತ್ನ ಮಾಡುತ್ತಿದೆ.
ವಿಶ್ವದ ಸಾಮಾಜಿಕ & ಆರ್ಥಿಕ ಪ್ರಗತಿಗೆ ಸಂಬಂಧಿಸಿದಂತೆ ಮೇಲ್ವಿಚಾರಣೆ ಮಾಡುತ್ತದೆ.
ವರ್ಣಭೇದ ನೀತಿಯನ್ನು ಅಳಿಸಿ ಹಾಕುವಲ್ಲಿ, ಸಾಮ್ರಾಜ್ಯಶಾಹಿತ್ವ, ವಸಾಹತುಶಾಹಿತ್ವ ಇತ್ಯಾದಿಗಳನ್ನು ಇಲ್ಲವಾಗಿಸುವಲ್ಲಿಯೂ ವಿಶ್ವಸಂಸ್ಥೆಯ ಪಾತ್ರ ಗಮನಾರ್ಹವಾದದು.

22. ಯುನಿಸೆಫ್ ಸಂಸ್ಥೆ ಸ್ಥಾಪನೆಯ ಮೂಲ ಉದ್ದೇಶವೇನು?
    ಮಹಿಳೆಯರ ಹಾಗೂ ಮಕ್ಕಳ ಅಭಿವೃದ್ಧಿಗೆ ಪೂರಕವಾದ ಪರಿಸರವನ್ನು ಒದಗಿಸುವುದೇ ಈ ಸಂಸ್ಥೆಯ ಮೂಲ ಉದ್ದೇಶವಾಗಿದೆ.

23. ಸಾರ್ಕ ಸಂಸ್ಥೆಯ ಪ್ರಗತಿಗೆ ತೊಡಕಾಗಿರುವ ಅದರ ಸೂತ್ರವೇನು?
    ‘ಎಲ್ಲಾ ನಿರ್ಣಯಗಳು ಸದಸ್ಯ ರಾÀಷ್ಟ್ರಗಳ ಅವಿರೋಧದ ನೆಲೆಯಲ್ಲೇ ಇರಬೇಕು’ ಎಂಬ ಸಾರ್ಕನ ಸೂತ್ರವು ಅದರ ಪ್ರಗತಿಗೆ ಒಂದು ತೊಡಕಾಗಿ ಪರಿಣಮಿಸಿದೆ.

24. ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಗಳಾವುವು?
ಕಾಲರಾ, ಪ್ಲೇಗ್, ಮಲೇರಿಯಾ, ಸಿಡುಬು ಮುಂತಾದ ರೋಗಗಳನ್ನು ಸಂಪೂರ್ಣವಾಗಿ ತೊಡೆದು ಹಾಕಲು ಯತ್ನಿಸುತ್ತದೆ.
ಏಡ್ಸ್, ಕ್ಯಾನ್ಸರ್‍ನಂತಹ ಭೀಕರ ರೋಗಗಳಿಂದ ಪ್ರಪಂಚವನ್ನು ಮುಕ್ತಿಗೊಳಿಸಲು ಪ್ರಯತ್ನಿಸುತ್ತದೆ.
ಸಿಡುಬು ರೋಗವನ್ನು ಸಂಪೂರ್ಣವಾಗಿ ನಿವಾರಿಸುವಲ್ಲಿ ಈ ಸಂಸ್ಥೆ ಯಶಸ್ಸು ಕಂಡಿದೆ.
ಜನಸಂಖ್ಯಾ ಸ್ಪೋಟ, ಪರಿಸರ ಸಂರಕ್ಷಣೆ, ಹಸಿವು, ಪೌಷ್ಟಿಕತೆಯ ಕೊರತೆ ಮುಂತಾದ ವಿಷಯಗಳು ಈ ಸಂಸ್ಥೆಯ ಕಾರ್ಯ ಸೂಚಿಯಲ್ಲಿವೆ.

25. ಯಾವ ಸಮ್ಮೇಳನದಲ್ಲಿ ವಿಶ್ವಸಂಸ್ಥೆಯ ಸನ್ನದಿಗೆ ಸಹಿ ಹಾಕಲಾಯಿತು?
    1945 ಜೂನ್ 26ರಂದು ಸ್ಕಾನ್ ಪ್ರಾನ್ಸಿಸ್ಕೋ ವಿಶ್ವಸಂಸ್ಥೆಯ ಸನ್ನದಿಗೆ ಸಹಿಹಾಕಲಾಯಿತು

ಅಧ್ಯಾಯ 2. ದುಡಿಮೆ ಮತ್ತು ಆರ್ಥಿಕ ಜೀವನ (S)


ಮುಖ್ಯಾಂಶಗಳು:
ಶ್ರಮ ವಿಭಜನೆಯು ವಿಶೇಷ ಪರಿಣತಿಗೆ ಕಾರಣವಾಗುವದು.
ವಿಶೇಷ ತರಬೇತಿ ಹೊಂದಿರದ ಕಾರ್ಮಿಕರನ್ನು ಅಸಂಘಟಿತ ಕೆಲಸಗಾರರು ಎಂದು ಕರೆಯುತ್ತೇವೆ.
ಕೇಂದ್ರ ಸರಕಾರ ಸಮಾನ ವೇತನ ಕಾಯ್ದೆಯನ್ನು 1976 ರಲ್ಲಿ ಜಾರಿಗೆ ತಂದಿತು.

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಕೂಲಿ ಸಹಿತ ದುಡಿಮೆ ಎಂದರೇನು?
  ಕೂಲಿ, ಸಂಬಳ ಅಥವಾ ಇನ್ನಾವುದೇ ಭೌತಿಕ ರೂಪದ ಪ್ರತಿಫಲ ನೀಡುವ ದುಡಿಮೆಯ ಚಟುವಟಿಕೆಯನ್ನು ಕೂಲಿಸಹಿತ ದುಡಿಮೆ ಎಂದು ಕರೆಯುತ್ತಾರೆ.

2. ನಿರುದ್ಯೋಗ ಎಂದರೇನು?
   ನಿರುದ್ಯೋಗ ಎಂದರೆ ದುಡಿಯುವ ವಯಸ್ಸು, ಸಾಮಥ್ರ್ಯ, ಆಸಕ್ತಿ, ಅರ್ಹತೆ ಇದ್ದರೂ ಉದ್ಯೋಗ ಸಿಗದ ಪರಿಸ್ಥಿತಿ ಎಂದರ್ಥ.

3. ನಿರುದ್ಯೋಗಕ್ಕೆ ಕಾರಣಗಳಾವವು?
  ನಿರುದ್ಯೋಗಕ್ಕೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ಅತಿಯಾದ ಜನಸಂಖ್ಯೆ, ಯಾಂತ್ರಿಕರಣ. ಅತಿಯಾದ ಶ್ರಮವಿಭಜನೆ, ಸಾಮಾಜಿಕ ಅಸಮಾನತೆ, ಬಂಡವಾಳದ ಕೊರತೆ, ಅನಕ್ಷರತೆ ಮುಂತಾದವು.

4. ನಿರುದ್ಯೋಗದ ಪರಿಣಾಮಗಳಾವವು?
   ನಿರುದ್ಯೋಗವು ಸಮಾಜದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ನಿರುದ್ಯೋಗ ಸಮಸ್ಯೆಯು ಬಡತನ, ಅನಾರೋಗ್ಯ, ಭಷ್ಟಾಚಾರ, ಕೌಟಂಬಿಕ ವಿಘಟನೆ, ಮೋಸ, ವಂಚನೆ, ಕಳ್ಳತನ, ವ್ಯಭಿಚಾರ ಮುಂತಾದ ಪರಿಣಾಮಗಳಿಗೆ ಕಾರಣವಾಗುವದು.

5. ನಿರುದ್ಯೋಗದ ಪ್ರಕಾರಗಳಾವವು? ತಿಳಿಸಿ.
   ನಿರುದ್ಯೋಗದಲ್ಲಿ ಹಲವಾರು ಪ್ರಕಾರಗಳನ್ನು ಕಾಣಬಹುದು. ಅವುಗಳೆಂದರೆ- ಅರೆನಿರುದ್ಯೋಗ, ಮರೆಮಾಚಿದ ನಿರುದ್ಯೋಗ, ತಾಂತ್ರಿಕ ನಿರುದ್ಯೋಗ, ಚಕ್ರೀಯ ನಿರುದ್ಯೋಗ, ಸ್ವಇಚ್ಛೆಯ ನಿರುದ್ಯೋಗ.

6. ದುಡಿಮೆಯಲ್ಲಿನ ತಾರತಮ್ಯತೆಯ ಸ್ವರೂಪಗಳನ್ನು ವಿವರಿಸಿ.
ದುಡಿಮೆ ಮತ್ತು ಕೂಲಿ ಹಂಚಿಕೆಯಲ್ಲಿ ಕಾಣಬರುವ ಈ ಅಸಮಾನತೆಯನ್ನು ದುಡಿಮೆಯ ತಾರತಮ್ಯ ಅಥವಾ ದುಡಿಮೆಯಲ್ಲಿ ಬೇಧ - ಭಾವ ಎನ್ನಬಹುದು.
ಭಾರತವನ್ನೊಳಗೊಂಡಂತೆ ಜಗತ್ತಿನ ದೇಶಗಳಲ್ಲಿ ಪುರುಷರಿಗಿಂತ ಉತ್ತಮ ಸ್ವರೂಪದ ಉದ್ಯೋಗಗಳನ್ನು ನೀಡಲಾಗುತ್ತಿದೆ.ಹಾಗೆಯೇ ಹೆಚ್ಚಿನ ಹೊಣೆಗಾರಿಕೆ & ಸಂಬಳ ನೀಡಲಾಗುತ್ತಿದೆ.
ಸ್ತ್ರೀಯರಿಗೆ ಕಡಿಮೆ ಮಟ್ಟದ ಉದ್ಯೋಗ, ಹೊಣೆಗಾರಿಕೆ & ಸಂಬಳವನ್ನು ನೀಡಲಾಗುತ್ತಿದೆ. ¥ಂಂgಂಂμಂರಿUಇ ಸರಿಸಮಾನವಾಗಿ ಮಹಿಳೆಯರು ದುಡಿದರೂ ಸಂಬಳ ಮಾತ್ರ ಕಡಿಮೆ ನೀಡಲಾಗುತ್ತಿದೆ.

7. ಶ್ರಮ ವಿಭಜನೆ ಎಂದರೇನು?
   ಒಂದು ಕೆಲಸವನ್ನು ಜನರು ತಮ್ಮ ಆಸಕ್ತಿ, ಅಭಿರುಚಿ, ಸಾಮಥ್ರ್ಯ, ವಯಸ್ಸು, ವಿಶೇಷ ಪರಿಣಿತಿ, ಕೌಶಲ್ಯ ಹಾಗೂ ಲಿಂಗಭೇದಗಳ ಆಧಾರದ ಮೇಲೆ ಹಂಚಿಕೊಂಡು ಮಾಡುವುದನ್ನು
‘ಶ್ರಮ ವಿಭಜನೆ’ ಎಂದು ಕರೆಯುತ್ತಾರೆ.

8. ನಿರುದ್ಯೋಗ ಸಮಸ್ಯೆಗೆ ಪರಿಹಾರ ಕ್ರಮಗಳಾವವು? ವಿವರಿಸಿ.
ಜನಸಂಖ್ಯಾ ನಿಯಂತ್ರಣ ಕ್ರಮಗಳು,
ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ,
ಕೃಷಿ & ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿ,
ಶೈಕ್ಷಣಿಕ ಸುಧಾರಣಾ ಯೋಜನೆಗಳು,
ವೃತ್ತಿಪರ ಶಿಕ್ಷಣಕ್ಕೆ ಪ್ರೋತ್ಸಾಹ,
ಗ್ರಾಮೀಣಾಭಿವೃದ್ಧಿ ಯೋಜನೆಗಳು,
ಉದ್ಯೋಗ ಖಾತರಿ ಯೋಜನೆಗಳು ಇತ್ಯಾದಿ.

9. ದುಡಿಮೆ ಎಂದರೇನು?
   ವ್ಯಕ್ತಿಯೋರ್ವನ ಶಕ್ತಿಯ ವ್ಯಯದಿಂದ ಅಥವಾ ಪರಿಶ್ರಮದಿಂದ ಆತನಿಗೆ ಆರ್ಥಿಕ ಅಥವಾ ವಸ್ತು ರೂಪದ ಪ್ರತಿಫಲ ಸಿಗುವುದಿದ್ದರೆ ಅದನ್ನು ದುಡಿಮೆ ಎನ್ನಬಹುದು.

10. ವಿಶೇಷ ಪರಿಣತಿ ಎಂದರೇನು? 
    ವಿಶೇಷ ಪರಿಣತಿ ಎಂದರೆ ಯಾವುದಾದರೂ ನಿರ್ದಿಷ್ಟ ಕ್ಷೇತ್ರವೊಂದರಲ್ಲಿ ಸಾಕಷ್ಟು ಆಳವಾದ ಪರಿಣತಿ, ತರಬೇತಿ ಅಥವಾ ಕೌಶಲ್ಯ ಪಡೆಯುವದು ಎಂದರ್ಥ.

11. ಸಂಘಟಿತ ಮತ್ತು ಅಸಂಘಟಿತ ಕೆಲಸಗಾರರ ನಡುವಿನ ವ್ಯತ್ಯಾಸಗಳಾವವು?
ಸಂಘಟಿತ ಕೆಲಸಗಾರರು:
ಕಾನೂನು, ಕಾಯ್ದೆಗಳಿಗೆ ಬದ್ಧವಾದಂತಹ ನಿಗದಿತ ಕಾರ್ಯಕ್ಷೇತ್ರದಲ್ಲಿ ಕೆಲಸ ಮಾಡುವವರನ್ನು ಸಂಘಟಿತಕೆಲಸಗಾರರು ಎಂದು ಕರೆಯುತ್ತಾರೆ.
ಸಂಘಟಿತ ಕೆಲಸಗಾರರಿಗೆ ವಿಶೇಷ ಪರಿಣತಿ, ತರಬೇತಿ, ಅನುಭವ & ಶೈಕ್ಷಣಿಕ ಅರ್ಹತೆಗಳಿಗೆ ಅವಕಾಶಗಳಿರುತ್ತವೆ.
ಇವರಿಗೆ ನಿಗದಿತ ವೇತನ, ಭತ್ಯೆ, ವಿರಾಮ ವೇತನ, ನಿವೃತ್ತಿ ವೇತನ ಸೌಲಭ್ಯಗಳನ್ನು ನೀಡಲಾಗುತ್ತದೆ.
ಇವರಿಗೆ ಕೆಲಸದ ಖಾತರಿ ಇರುತ್ತದೆ.
ಅಸಂಘಟಿತ ಕೆಲಸಗಾರರು
ಯಾವುದೇ ನಿರ್ದಿಷ್ಟ ಕಾಯ್ದೆ ಕಾನೂನು ನಿಯಂತ್ರಣಕ್ಕೆ ಒಳಪಡದೆ ಜೀವನ ನಿರ್ವಹಣೆಗಾಗಿ ಕೆಲಸ ಮಾಡುವ ದಿನಗೂಲಿ ಕೆಲಸಗಾರರನ್ನು ಅಸಂಘಟಿತ ಕೆಲಸಗಾರರು ಎಂದು ಕರೆಯಲಾಗುತ್ತದೆ.
ಅಸಂಘಟಿತ ಕೆಲಸಗಾರರಿಗೆ ವಿಶೇಷ ಪರಿಣತಿ, ತರಬೇತಿ, ಅನುಭವ ಇರುವುದಿಲ್ಲ.
ಇವರ ಕೆಲಸಕ್ಕೆ ಭದ್ರತೆ & ನಿಗದಿತ ವೇತನ, ವಿರಾಮ ವೇತನ, ನಿವೃತ್ತಿ ವೇತನ ಹಾಗೂ ಭತ್ಯೆಗಳ ಸೌಲಭ್ಯವಿರುವದಿಲ್ಲ.
ಕೆಲಸದ ಖಾತರಿಯೂ ಸಹ ಇರುವದಿಲ್ಲ.

ಅಧ್ಯಾಯ 3 ಸಾಮೂಹಿಕ ವರ್ತನೆ ಮತ್ತು ಪ್ರತಿಭಟನೆಗಳು (S)


ಮುಖ್ಯಾಂಶಗಳು:
ಚಿಪ್ಕೋ ಚಳುವಳಿ ನಡೆದ ರಾಜ್ಯ ಉತ್ತರ ಪ್ರದೇಶ.
‘ನರ್ಮದಾ ಅಂದೋಲನ’ದ ನೇತೃತ್ವ ವಹಿಸಿದವರು ಪರಿಸರ ಪ್ರೇಮಿ ಮೇದಾ ಪಟ್ಕರ್ & ಬಾಬಾ ಆಮ್ಟೆ.
ಡಾ. ಶಿವರಾಮ ಕಾರಂತರು ಕೈಗಾದಲ್ಲಿ ಅಣುವಿದ್ಯುತ್ ಸ್ಥಾವರ ಸ್ಥಾಪಿಸುವದನ್ನು ವಿರೋಧಿಸಿದರು.
ದೊಡ್ಡ ಸಂಖ್ಯೆಯ ಜನರ ಆಕಸ್ಮಿಕವಾದ ಹಾಗೂ ಯೋಜನಾಬದ್ಧವಲ್ಲದ ವರ್ತನೆಗೆ ಸಾಮೂಹಿಕ ವರ್ತ£ É ಎನ್ನಬಹುದು.
ಚಿಪ್ಕೋ ಚಳುವಳಿಯು 1973 ರಲ್ಲಿ ಶ್ರೀ ಸುಂದರಲಾಲ ಬಹುಗುಣ ಹಾಗೂ ಶ್ರೀ ಚಂಡಿ ಪ್ರಸಾದ ಭಟ್ಟರವರ ನೇತೃತ್ವದಲ್ಲಿ ನಡೆಯಿತು.
ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಸಲ್ಯಾನಿ ಗ್ರಾಮದ ರೈತರು 1983 ರಲ್ಲಿ ಅಪ್ಪಿಕೋ ಚಳುವಳಿಯನ್ನು ನಡೆಸಿದರು.
ಸ್ತ್ರೀಯರನ್ನು ಸಮಾಜದಲ್ಲಿ ಸಬಲರನ್ನಾಗಿ ಬಲಪಡಿಸುವಲ್ಲಿ ಸ್ತ್ರೀಯರ ಸ್ವಸಹಾಯ ಗುಂಪುಗಳು (ಸ್ತ್ರೀಶಕ್ತಿ ಸಂಘಗಳು ) ಪ್ರಮುಖ ಪಾತ್ರ ವಹಿಸುತ್ತವೆ.
ಚಿಪ್ಕೋ ಚಳುವಳಿಯು ಮೊದಲು ಪ್ರಾರಂಭವಾದದ್ದು ಉತ್ತರ ಪ್ರದೇಶದ ತೆಹ್ರಿ-ಘರ್ವಾಲ್ ಜಿಲ್ಲೆಯಲ್ಲಿ.
ಚಿಪ್ಕೋ ಚಳುವಳಿಯ ನೇತಾರ - ಸುಂದರಲಾಲ ಬಹುಗುಣ

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಸಮೂಹ ವರ್ತನೆ ಎಂದರೇನು?
   ಸಂಘಜೀವಿಯಾದ ಮಾನವನು ಸಮೂಹದ ಮಧ್ಯದಲ್ಲಿರುವಾಗ ತಾನು ಒಬ್ಬಂಟಿಗನಾಗಿದ್ದಾಗ ವರ್ತಿಸುವ ರೀತಿಗಿಂತಲೂ ಭಿನ್ನ ರೀತಿಯಲ್ಲಿ ವರ್ತಿಸುತ್ತಾನೆ. ಸಮೂಹದಲ್ಲಿ ಇರುವಾಗ ಮಾಡುವ ಆತನ ವರ್ತನೆಯನ್ನು ಸಮೂಹ ವರ್ತನೆ ಎಂದು ಕರೆಯಲಾಗುತ್ತದೆ.
2. ಸ್ವ-ಸಹಾಯ ಸಮೂಹ ಎಂದರೇನು?
    ಮಹಿಳೆಯರ ಸ್ವ-ಸಹಾಯ ಸಮೂಹ ಎಂಬುದು ಸ್ವಪ್ರಜ್ಞೆ, ಸ್ವಪ್ರೇರಣೆ ಹಾಗೂ ಪರಸ್ಪರ ನಂಬಿಕೆಯೊಂದಿಗೆ ತಮ್ಮ ಆರ್ಥಿಕ, ಸಾಮಾಜಿಕ ಅಗತ್ಯತೆಗಳನ್ನು ತಾವೇ ತಮ್ಮ ಸ್ವಂತ ಪ್ರಯತ್ನ ಮತ್ತು ಸಹಕಾರದಿಂದ ಪೂರೈಸಿಕೊಳ್ಳುವ ಉದ್ದೇಶದಿಂದ ರೂಪಿತವಾದ 10 ರಿಂದ 20 ಜನ ಸ್ತ್ರೀಯರನ್ನೊಳಗೊಂಡ ಒಂದು ಸ್ಥಳೀಯ ಸಮೂಹವಾಗಿರುತ್ತದೆ.

3. ಸಮೂಹ ವರ್ತನೆಯ ಮಾದರಿಗಳಾವವು?
   ಸಮೂಹ ವರ್ತನೆಯಲ್ಲಿ ಜನಮಂದೆ, ದೊಂಬಿ, ಪೊಳ್ಳುಸುದ್ದಿಗಳ ಪ್ರಚಾರ, ಸಾರ್ವಜನಿಕ ಅಭಿಪ್ರಾಯ, ಕ್ರಾಂತಿ ಹಾಗೂ ಸಾಮಾಜಿಕ ಅಂದೋಲಗಳನ್ನು ಗುರುತಿಸಬಹುದಾಗಿದೆ.

4. ಜನಮಂದೆ ಎಂದರೇನು? ಉದಾಹರಣೆ ಕೊಡಿ.
   ಯಾವುದೇ ಪೂರ್ವ ಯೋಜನೆ ಇಲ್ಲದೆ ಅನಿಶ್ಚಿತವಾಗಿ ಒಂದು ಆಸಕ್ತಿಯ ಸುತ್ತ ನೆರೆದಿರುವ ಜನರಾಶಿಯೇ ಜನಮಂದೆಯಾಗಿದೆ. ಉದಾ : ರಸ್ತೆ ಅಪಘಾತ ವಿಕ್ಷಿಸಲು ಸೇರಿರುವ ಜನಸಮೂಹ.

5. ಜನಮಂದೆಯ ಸ್ವರೂಪವನ್ನು ತಿಳಿಸಿ.
  ಜನಮಂದೆಯು ತಾತ್ಕಾಲಿಕ ಸ್ವರೂಪದ್ದಾಗಿರುತ್ತದೆ. ಇದರಲ್ಲಿ ಜನರು ಯಾವುದೋ ಒಂದು ನಿರ್ಧಿಷ್ಟ ಸ್ಥಳದಲ್ಲಿ ಭೌತಿಕವಾಗಿ ಒಟ್ಟಾಗಿ ಸೇರಿರುತ್ತಾರೆ. ಜನಮಂದೆಯ ಸದಸ್ಯರು ಪರಸ್ಪರ ಅಭಿಪ್ರಾಯ, ಭಾವನೆಗಳು ಮತ್ತು ಕ್ರಿಯೆಗಳ ಪ್ರಭಾವಕ್ಕೆ ಬಹುಬೇಗ ಒಳಗಾಗುತ್ತಾರೆ.

6. ಪರಿಸರ ಮಾಲಿನ್ಯದ ಅರ್ಥ ತಿಳಿಸಿ.
   ಭೂಮಿ, ಗಾಳಿ, ನೀರು ಮತ್ತು ಜೀವಮಂಡಲವನ್ನೊಳಗೊಂಡ ನಮ್ಮ ಸುತ್ತ ಮುತ್ತಲಿನ ಪರಿಸರವು ವಿಷಕಾರಕ ಹಾಗೂ ರಾಸಾಯನಿಕ ಅಂಶಗಳಿಂದ ಕಲುಷಿತವಾಗುವದನ್ನು ‘ಪರಿಸರ
ಮಾಲಿನ್ಯ’ ಎನ್ನಬಹುದು.

7. ದೊಂಬಿ ಎಂದರೇನು? ದೊಂಬಿಯ ಸ್ವರೂಪವನ್ನು ತಿಳಿಸಿ.
   ತೀರಾ ಹಿಂಸಾತ್ಮಕ ಹಾಗೂ ವಿನಾಶಾತ್ಮಕ ಸ್ವರೂಪದ ಜನಮಂದೆಯ ವರ್ತನೆಯನ್ನು ದೊಂಬಿ ಎನ್ನುತ್ತಾರೆ. ದೊಂಬಿಯಲ್ಲಿ ಭಾಗವಹಿಸಿರುವವರು ಎದುರಿಗೆ ಸಿಕ್ಕದ್ದೆಲ್ಲವನ್ನು ಹಾಳುಮಾಡುತ್ತಾ ಸಾಗುವರು. ಗೊಂದಲವನ್ನು ಸೃಷ್ಟಿ ಮಾಡುವುದೇ ದೊಂಬಿಯ ಉದ್ದೇಶವಾಗಿರುತ್ತದೆ. ದೊಂಬಿಗಳು ಅಪಾರ ಹಾನಿಯನ್ನು ಉಂಟು ಮಾಡುತ್ತವೆ.

8. ಮಹಿಳಾ ಸ್ವ - ಸಹಾಯ ಸಮೂಹಗಳ ಪ್ರಾಮುಖ್ಯತೆಯನ್ನು ವಿವರಿಸಿ.
ಮಹಿಳಾ ಸ್ವ - ಸಹಾಯ ಗುಂಪುಗಳು ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವಲ್ಲಿ ಸಫಲವಾಗಿವೆ.
ಸ್ತ್ರೀಯರು ತಮ್ಮ ದುಡಿಮೆಯ ಸ್ವಲ್ಪ ಹಣವನ್ನು ಉಳಿಸುತ್ತಾರೆ. ಇದರಿಂದ ಹಣ ಸಂಗ್ರಹವಾಗಿ ಮಹಿಳೆಯರ ಕೌಟಂಬಿಕ ಜೀವನಕ್ಕೆ ನೆರವಾಗುತ್ತದೆ.
ಸ್ತ್ರೀಯರ ಸಾಮಾಜಿಕ ಶಕ್ತಿಯನ್ನು ಬಲಪಡಿಸುವಲ್ಲಿ ಸ್ವಸಹಾಯ ಸಮೂಹಗಳು ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ.
ಇವು ಸ್ತ್ರೀಯರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರನ್ನಾಗಿಸುತ್ತವೆ.
ಸ್ತ್ರೀಯರ ಆರ್ಥಿಕ & ಸಾಮಾಜಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ.
ಸ್ತ್ರೀಯರು ಸ್ವ-ಸಹಾಯ ಗುಂಪುಗಳ ಮೂಲಕ ಸರಕಾರದ ಹಲವಾರು ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಲು ಸಹಕಾರಿಯಾಗಿದೆ.

9. ಅಪ್ಪಿಕೋ ಚಳುವಳಿಯ ಉದ್ದೇಶ ಏನಾಗಿತ್ತು?
  ಮರಗಳ ಕಳ್ಳಸಾಗಾಣಿಗೆ ತಡೆಗಟ್ಟುವದು, ಗಿಡಮರಗಳನ್ನು ಬೆಳೆಸುವದು ಹಾಗೂ ಪರಿಸರ ಮಹತ್ವದ ಬಗ್ಗೆ ಸಾಮಾನ್ಯ ಜನರಿಗೆ ಅರಿವು ಮೂಡಿಸುವುದು ಅಪ್ಪಿಕೋ ಚಳುವಳಿ ಉದ್ದೇಶವಾಗಿತ್ತು.

10. ಮೌನ ಕಣಿವೆ ಆಂದೋಲನ ಎಂದರೇನು?
    ಕೇರಳದ ಪಾಲ್‍ಘಾಟ್ ತಾಲೂಕಿನ ಮೌನ ಕಣಿವೆಯಲ್ಲಿ ಸ್ಥಾಪಿಸಲು ಉದ್ದೇಶಿಸಲಾದ ಆಣೆಕಟ್ಟಿನ ನಿರ್ಮಾಣದಿಂದ ಪರಿಸರ ನಾಶದ ಜೊತೆಗೆ ಅನೇಕ ಜೀವ ಪ್ರಭೇದಗಳು ಜೀವಿಸಲು ತೊಂದರೆಯಾಗುತ್ತದೆ ಎಂಬ ಉದ್ದೇಶದಿಂದ ಅದನ್ನು ತಡೆಗಟ್ಟಲು ನಡೆದ ಚಳುವಳಿಯಾಗಿದೆ.

11. ನರ್ಮದಾ ಆಂದೋಲನಕ್ಕೆ ಕಾರಣಗಳೇನು?
   ಗುಜರಾತ ರಾಜ್ಯದ ಸರ್ದಾರ್ ಸರೋವರ ಯೋಜನೆಯಡಿಯಲ್ಲಿ ನರ್ಮದಾ ನದಿಗೆ ಕಟ್ಟಲಾದ ಆಣೆಕಟ್ಟು ನಿರ್ಮಾಣದಿಂದ ಅರಣ್ಯ ನಾಶ, ಜೀವ ಸಂಕುಲಗಳಿಗೆ ತೊಂದರೆಯಾಗುತ್ತದೆ. ಎಂಬ ಉದ್ದೇಶದಿಂದ ಪರಿಸರ ಪ್ರೇಮಿ ಮೇಧಾ ಪಾಟ್ಕರ್ ಮತ್ತು ಬಾಬಾ ಆಮ್ಟೆಯವರ ನೇತೃತ್ವದಲ್ಲಿ ನರ್ಮದಾ ಬಚಾವೋ ಆಂದೋಲನ ನಡೆಯಿತು.

12. ಕೈಗಾ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ವಿರೋಧ ವ್ಯಕ್ತವಾಗಲು ಕಾರಣಗಳೇನು?
   ಕೈಗಾ ಅಣುಶಕ್ತಿ ಸ್ಥಾವರ ಸ್ಥಾಪನೆಯಿಂದ ಅರಣ್ಯ ನಾಶ, ಅಣುವಿಕಿರಣದಿಂದ ಪರಿಸರ ಮಾಲಿನ್ಯ ಮುಂತಾದ ದುಷ್ಪಾರಿಣಾಮಗಳಿಂದ ಜೀವ ಪ್ರಭೇದಗಳ ಮೇಲೆ ಹಾನಿಕಾರಕ ಪರಿಣಾಮಗಳುಂಟಾಗುತ್ತವೆ ಎಂಬ ಉದ್ದೇಶಗಳಿಂದ ಕೈಗಾ ಆಣುಶಕ್ತಿ ಸ್ಥಾವರ ಸ್ಥಾಪನೆಗೆ ವಿರೋಧ ವ್ಯಕ್ತವಾಯಿತು.

13. ಪರಿಸರ ಸಂರಕ್ಷಣೆಗಾಗಿ ನಡೆಸಿರುವ ಕೆಲವು ಸಾಮೂಹಿಕ ಪ್ರತಿಭಟನೆಗಳನ್ನು ಪಟ್ಟಿ ಮಾಡಿ.
1. ಚಿಪ್ಕೋ ಚಳುವಳಿ, 2. ಅಪ್ಪಿಕೋ ಚಳುವಳಿ, 3. ನರ್ಮದಾ ಅಂದೋಲನ 4. ಮೌನ ಕಣಿವೆ ಅಂದೋಲನ, 5. ಕೈಗಾ ವಿರೋಧಿ ಚಳುವಳಿ.

14. ಪರಿಸರ ಮಾಲಿನ್ಯವು ಗಂಭಿರ ಸಮಸ್ಯೆಯಾಗಿದೆ ಏಕೆ?
ಜನರು ತಮ್ಮ ಸುಖಭೋಗದ ಜೀವನಕ್ಕಾಗಿ ಪರಿಸರವನ್ನು ದುರ್ಬಳಕೆ ಮಾಡುತ್ತಿದ್ದಾರೆ.
ಜಗತ್ತಿನ ಹಲವಾರು ದೇಶಗಳು ಹೆಚ್ಚುತ್ತಿರುವ ಜನಸಂಖ್ಯೆಯಿಂದುಂಟಾಗುವ ಸಮಸ್ಯೆಗಳನ್ನು
ಎದುರಿಸಲು ಪರಿಸರದ ಮೇಲೆ ಒತ್ತಡ ತರುತ್ತೀವೆ.
ಅನಿಯಂತ್ರಿತವಾಗಿ ಸಾಗುತ್ತಿರುವ ನಗರಗಳ ಬೆಳವಣಿಗೆ, ಕೈಗಾರಿಕಾ ಅಭಿವೃದ್ಧಿ, ತಾಂತ್ರಿಕ
ಪ್ರಗತಿ, ಸಾರಿಗೆ ವ್ಯವಸ್ಥೆಯ ಬೆಳವಣಿಗೆ ಮುಂತಾದವುಗಳಿಂದ ಅರಣ್ಯಗಳ ನಾಶ ಮತ್ತು ಪರಿಸರ ಮಾಲಿನ್ಯ ಉಂಟಾಗುತ್ತದೆ.
ಇದರಿಂದಾಗಿ ಪರಿಸರ ಮಾಲಿನ್ಯವು ಒಂದು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ.

15. ಚಳುವಳಿ ಎಂದರೇನು?
   ಸಮೂಹ ವರ್ತನೆಯು ಯೋಜನಾಬದ್ಧವಾಗಿ ಒಂದು ನಿರ್ದಿಷ್ಟ ಗುರಿಯನ್ನು ಹೊಂದಿದ್ದು, ಸಾಮಾಜಿಕ ಬದಲಾವಣೆಗೆ ಪ್ರಯತ್ನಿಸಿದರೆ ಅದನ್ನು ಚಳುವಳಿ ಎನ್ನಬಹುದು.

16. ಪರಿಸರ ಮಾಲಿನ್ಯದಿಂದುಂಟಾಗುವ ದುಷ್ಪರಿಣಾಮಗಳೇನು?
ಅರಣ್ಯಗಳು ನಾಶವಾಗುತ್ತವೆ.
ಜೀವಸಂಕುಲಗಳು ನಾಶವಾಗುತ್ತವೆ.
ಅಣುವಿಕಿರಣದಿಂದ ಪರಿಸರ ಮಾಲಿನ್ಯವಾಗುತ್ತದೆ.
ಜೀವ ಪ್ರಭೇದಗಳ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ.
ವಿμಕಾರಕ ಹಾಗೂ ರಾಸಾಯನಿಕ ಅಂಶಗಳಿಂದ ಪರಿಸರ ಕಲುಷಿತಗೊಳ್ಳುತ್ತದೆ

ಅಧ್ಯಾಯ 4. ಸಾಮಾಜಿಕ ಸಮಸ್ಯೆಗಳು (S)


ಮುಖ್ಯಾಂಶಗಳು:
ಸಂವಿಧಾನದ 24 ನೇ ವಿಧಿ ಮಕ್ಕಳನ್ನು ದುಡಿಮೆಗೆ ತೊಡಗಿಸುವುದು ಕಾನೂನು ಬಾಹಿರ ಎಂದು ಘೋಷಿಸಿದೆ.
ಬಾಲ ಕಾರ್ಮಿಕ ನಿಷೇಧ ಕಾಯ್ದೆ ಜಾರಿಗೆ ಬಂದ ವರ್ಷ 1986.
ಬಾಲ ಕಾರ್ಮಿಕರ ಕಲ್ಯಾಣಕ್ಕಾಗಿ 1987 ರಲ್ಲಿ ರಾಷ್ಟ್ರೀಯ ನೀತಿಯನ್ನು ಜಾರಿಗೊಳಿಸಿತು.
ವರದಕ್ಷಿಣೆ ನಿμಇಂzಂ ಕಾಯ್ದೆ ಮೊದಲು 1961 ರಲ್ಲಿ ಜಾರಿಗೆ ಬಂದಿತು.
ಗರ್ಭದಲ್ಲಿರುವ ಲಿಂಗ ಪತ್ತೆ ಹಚ್ಚುವದನ್ನು ನಿಯಂತ್ರಿಸಲು 1994 ರಲ್ಲಿ ‘ಪ್ರಸವ ಲಿಂಗ ಪರೀಕ್ಷೆ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೆ ತರಲಾಯಿತು.

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಬಾಲ ಕಾರ್ಮಿಕರ ಸಮಸ್ಯೆಗೆ ಕಾರಣಗಳಾವವು? ತಿಳಿಸಿ.
  ಕಡು ಬಡತನ, ಉದ್ಯಮಪತಿಗಳ ಲಾಭಕೋರತನ, ಅನಕ್ಷರತೆ, ಜೀತ, ಪೋಷಕರ ಅತಿಯಾದ ನಿಯಂತ್ರಣ, ಕೌಟಂಬಿಕ ಹಿಂಸೆ, ವಿಚ್ಛೇದನ, ಕೌಟಂಬಿಕ ಕಲಹ ಇವು ಬಾಲ ಕಾರ್ಮಿಕ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ.

2. ಭಾರತದ ಪ್ರಮುಖ ಸಾಮಾಜಿಕ ಸಮಸ್ಯೆಗಳನ್ನು ಪಟ್ಟಿ ಮಾಡಿರಿ.
   ಭಾರತದಂತಹ ಅಭಿವೃದ್ಧಿ ಪಥದಲ್ಲಿರುವ ಸಮಾಜಗಳಲ್ಲಿ ಹಲವಾರು ಬಗೆಯ ಸಾಮಾಜಿಕ ಸಮಸ್ಯೆಗಳು ತಾಂಡವವಾಡುತ್ತಿವೆ. ಉದಾಹರಣೆಗೆ : ಮಿತಿಮೀರಿದ ಜನಸಂಖ್ಯೆ, ಬಡತನ, ನಿರುದ್ಯೋಗ, ಬಿಕ್ಷಾಟನೆ, ಬಾಲಾಪರಾಧ, ಬಾಲಕಾರ್ಮಿಕರ ಸಮಸ್ಯೆ, ಬ್ರಷ್ಟಾಚಾರ, ಮಹಿಳೆಯರ ಶೋಷಣೆ ವರದಕ್ಷಿಣೆ ಕಿರುಕುಳ, ಯುವಜನರ ಅಶಾಂತಿ ಇತ್ಯಾದಿ.

3. ಬಾಲಕಾರ್ಮಿಕರು ಎಂದರೆ ಯಾರು?
  ಭಾರತದ ಸಂವಿಧಾನದ ಪ್ರಕಾರ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಆರ್ಥಿಕ ಸಂಪಾದನೆಯ ಉದ್ದೇಶದಿಂದ ದುಡಿಮೆ ಮಾಡುತ್ತಿದ್ದರೆ ಅಂತಹವರನ್ನು ಬಾಲ ಕಾರ್ಮಿಕರು
ಎಂದು ಕರೆಯಲಾಗಿದೆ.

4. ಹೆಣ್ಣು ಭ್ರೂಣ ಹತ್ಯೆ ಎಂದರೇನು?
  ಗರ್ಭದಲ್ಲಿರುವ ಭ್ರೂಣವು ಹೆಣ್ಣು ಭ್ರೂಣವಾಗಿದ್ದು, ಅದು ತಂದೆ-ತಾಯಿಯರಿಗೆ ಬೇಡವಾದರೆ ಅದನ್ನು ಗರ್ಭದಲ್ಲಿಯೇ ಕೊಂದು ಹಾಕುವುದನ್ನೇ ಹೆಣ್ಣು ಭ್ರೂಣ ಹತ್ಯೆ ಎಂದು ಕರೆಯುತ್ತಾರೆ.

5. ಹೆಣ್ಣು ಶಿಶು ಹತ್ಯೆ ಎಂದರೇನು?
  ಜನನದ ನಂತರದಲ್ಲಿ ಹೆಣ್ಣು ಮಗುವನ್ನು ಹತ್ಯೆ ಮಾಡುವ ಕ್ರೂರ ಪದ್ಧತಿಯೇ ಹೆಣ್ಣು ಶಿಶು ಹತ್ಯೆಯಾಗಿದೆ.

6. ಬಾಲ ಕಾರ್ಮಿಕ ಸಮಸ್ಯೆಗಳಿಂದಾಗುವ ಪರಿಣಾಮಗಳೇನು?   
   ಬಾಲ ಕಾರ್ಮಿಕ ಸಮಸ್ಯೆಗಳಿಂದಾಗಿ ಮಕ್ಕಳು ಆಟವಾಡುವ, ಕನಸುಕಾಣುವ & ಓದುವ ವಯಸ್ಸಿನಲ್ಲಿ ಅವರನ್ನು ದುಡಿಮೆಗೆ ದೂಡಿ ಅವರ ಬಾಲ್ಯವನ್ನು ಕಸಿದುಕೊಳ್ಳಲಾಗಿದೆ. ಇದು ಮಕ್ಕಳ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತದೆ.

7. ಬಾಲ ಕಾರ್ಮಿಕ ಸಮಸ್ಯೆಯ ನಿರ್ಮೂಲನಾ ಕ್ರಮಗಳಾವವು? ವಿವರಿಸಿ.
ಭಾರತ ಸರಕಾರವು ‘ಬಾಲಕಾರ್ಮಿಕರ ಪುನರ್ವಸತಿ ಕಲ್ಯಾಣ ನಿಧಿ’ ಸ್ಥಾಪನೆಯ ಮೂಲಕ ಬಾಲಕಾರ್ಮಿಕರ ಮೂಲಭೂತ ಅಗತ್ಯತೆಗಳನ್ನು ಪೂರೈಸುವ ಯೋಜನೆಯನ್ನು ಹಮ್ಮಿಕೊಂಡಿದೆ.
1986 ರಲ್ಲಿ ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ.
ನಮ್ಮ ಸಂವಿಧಾನದ 24 ನೇ ವಿಧಿಯು 14 ವರ್ಷದ ಕಿರಿಯ ವಯಸ್ಸಿನ ಮಕ್ಕಳನ್ನು ದುಡಿಮೆಗೆ ನೇಮಿಸುವದು ಶಿಕ್ಷಾರ್ಹ ಅಪರಾಧ ಎಂದು ಘೋಷಿಸಿದೆ.
1988 ರಲ್ಲಿ ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆಯನ್ನು ಜಾರಿಗೆ ತಂದಿದೆ.
ಶಿಕ್ಷಣ ಹಕ್ಕು ಕಾಯ್ದೆ 2009 ರಲ್ಲಿ 6 ರಿಂದ 14 ವರ್ಷದ ಮಕ್ಕಳಿಗೆ ಕಡ್ಡಾಯವಾಗಿ ಉಚಿತ ಶಿಕ್ಷಣದ ಹಕ್ಕನ್ನು ಕಲ್ಪಿಸಿದೆ.

8. ಹೆಣ್ಣು ಭ್ರೂಣ ಹತ್ಯೆಗೆ ಕಾರಣಗಳೇನು?
  ಬಡತನ, ವರದಕ್ಷಿಣೆ ಭೀತಿ, ಅನಕ್ಷರತೆ, ಅಜ್ಞಾನ, ಸ್ತ್ರೀ ವಿರೋಧಿ ನಿಲುವುಗಳು, ಗಂಡು ಮಗುವಿನ ಬಯಕೆ ಮುಂತಾದ ಕಾರಣಗಳಿಂದಾಗಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ನಡೆಯುತ್ತವೆ.

9. ಸಮಾಜದಲ್ಲಿ ಮಹಿಳೆಯರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಾವವು?
  ದೌರ್ಜನ್ಯ, ಅತ್ಯಾಚಾರ, ವರದಕ್ಷಿಣೆ ಕಿರುಕುಳ, ದೈಹಿಕ & ಮಾನಸಿಕ ಕಿರುಕುಳ, ಗರ್ಭಪಾತಕ್ಕೆ ಪ್ರೇರೇಪಿಸುವುದು, ಅವಾಚ್ಯ ಪದಗಳ ಬಳಕೆ ಮುಂತಾದ ರೂಪದಲ್ಲಿ ಹಿಂಸಾಚಾರಗಳು ಕುಟುಂಬದ ಹೊರಗೂ & ಒಳಗೂ ಸ್ತ್ರೀಯರ ಮೇಲೆ ನಡೆಯುತ್ತಲೇ ಇವೆ.

10. ವರದಕ್ಷಿಣೆ ಪಿಡುಗಿನಿಂದಾಗುವ ದಷ್ಪರಿಣಾಮಗಳಾವವು?
ವರದಕ್ಷಿಣೆ ಸ್ತ್ರೀಯರ ಸ್ವಾಭಿಮಾನ, ಗೌರವ, ಸ್ಥಾನಮಾನವನ್ನು ಕುಗ್ಗಿಸುತ್ತದೆ.
ಕೌಟಂಬಿಕ ಕಲಹವನ್ನು ಉಂಟು ಮಾಡುತ್ತದೆ.
ಸ್ತ್ರೀ ಪುರುಷರ ನಡುವೆ ಒಡಕುಂಟಾಗಲು ಕಾರಣವಾಗಿದೆ.
ವರದಕ್ಷಿಣೆಯಿಂದಾಗಿ ಕೌಟಂಬಿಕ ಸಂಬಂಧಗಳು ಹಾಳಾಗುವವು.
ಹೆಣ್ಣು ಭ್ರೂಣ ಹತ್ಯೆ & ಹೆಣ್ಣು ಶಿಶು ಹತ್ಯೆ ಪ್ರಕರಣಗಳು ಹೆಚ್ಚಾಗುತ್ತವೆ.
ವಿವಾಹ ವಿಚ್ಛೇಧನ ¥್ರಕ Àರಣಗಳು ಹೆಚ್ಚಾಗುತ್ತಿವೆ.

11. ಹೆಣ್ಣು ಭ್ರೂಣ ಹತ್ಯೆಯಂತಹ ಪ್ರಕರಣಗಳಿಂದ ಆಗುವ ದುಷ್ಪರಿಣಾಮಗಳಾವುವು?
   ಹೆಣ್ಣು ಭ್ರೂಣ ಹತ್ಯೆಗಳಂತಹ ಪ್ರಕರಣಗಳಿಂದ ಸ್ತ್ರೀ ಪುರುಷರ ಲಿಂಗಾನುಪಾತದಲ್ಲಿ ಏರುಪೇರು, ಲಿಂಗ ತಾರತಮ್ಯತೆ, ಹೆಣ್ಣಿನ ಅಪಮೌಲ್ಯೀಕರಣ ಮುಂತಾದ ದುಷ್ಪರಿಣಾಮಮಗಳು ಉಂಟಾಗುತ್ತಿವೆ.

12. ವರದಕ್ಷಿಣೆ ಎಂದರೇನು? ವರದಕ್ಷಿಣೆ ಸಮಸ್ಯೆಗೆ ಪರಿಹಾರ
   ಕ್ರಮಗಳಾವವು?
  ಮದುವೆಯ ಸಂದರ್ಭದಲ್ಲಿ ವಧುವಿನ ಕಡೆಯವರು ಉಡುಗೊರೆ ರೂಪದಲ್ಲಿ ವರನಿಗೆ ನಗನಾಣ್ಯ, ಆಸ್ತಿ, ನಿವೇಶನ ಮುಂತಾದವುಗಳನ್ನು ನೀಡುವುದನ್ನೇ ವರದಕ್ಷಿಣೆ ಎನ್ನವರು.
ವರದಕ್ಷಿಣೆ ಸಮಸ್ಯೆಗೆ ಪರಿಹಾರ ಕ್ರಮಗಳು
1961 ರಲ್ಲಿ ಭಾರತ ಸರ್ಕಾರ ವರದಕ್ಷಿಣೆ ನಿμಇಂzಂ ಕಾಯ್ದೆಯನ್ನು ಜಾರಿಗೊಳಿಸಿತು.
ಈ ಕಾಯ್ದೆ ಉಲ್ಲಂಘಿಸಿದವರಿಗೆ 5000 ರೂ.ಗಳ ದಂಡ ಇಲ್ಲವೇ 6 ತಿಂಗಳ ಕಾರಾಗೃಹವಾಸ ವಿಧಿಸಬಹುದಾಗಿದೆ.
ವರದಕ್ಷಿಣೆ ನಿಷೇಧ ಕಾಯ್ದೆಯನ್ನು 1986 ರಲ್ಲಿ ತಿದ್ದುಪಡಿ ಮಾಡಿ ಮತ್ತಷ್ಟು ಕಠಿಣಗೊಳಿಸಲಾಯಿತು.
ಜನಜಾಗೃತಿ, ಅಂತರ್ಜಾತಿಯ ವಿವಾಹ, ಸ್ವಯಂ ಸೇವಾ ಸಂಘಟನೆಗಳು & ಮಹಿಳಾ ಸಂಘಟನೆಗಳ ಮೂಲಕ ವರದಕ್ಷಿಣೆ ಪಿಡುಗನ್ನು ತೊಲಗಿಸಲು ಪ್ರಯತ್ನಿಸಲಾಗುತ್ತಿದೆ.

13. ಗರ್ಭದಲ್ಲಿರುವ ಮಗುವಿನ ಲಿಂಗ ಕಂಡುಕೊಳ್ಳುವಿಕೆ ಕಾನೂನು     
    ಬಾಹಿರ ಏಕೆ?
   ತಾಯಿಯ ಗರ್ಭದಲ್ಲಿರುವ ಮಗುವಿನ ಲಿಂಗವನ್ನು ಪತ್ತೆ ಹಚ್ಚಿ ಅದು ಹೆಣ್ಣು ಶಿಶುವಾಗಿದ್ದರೆ ಅದನ್ನು ಗರ್ಭದಲ್ಲಿಯೇ ಕೊಂದು ಹಾಕುವುದರ ಮೂಲಕ ಗರ್ಭಪಾತದ ಪ್ರಕರಣಗಳು ಹೆಚ್ಚುತ್ತಿವೆ. ಆದ್ದರಿಂದ ಗರ್ಭದಲ್ಲಿರುವ ಮಗುವಿನ ಲಿಂಗ ಕಂಡುಕೊಳ್ಳುವಿಕೆ ಕಾನೂನು ಬಾಹಿರವಾಗಿದೆ.

14. ಬಾಲಕಾರ್ಮಿಕ ವಿರೋಧಿ ಕಾಯ್ದೆ ಉಲ್ಲಂಘಿಸಿದ ಉದ್ಯೋಗಪತಿಗಳು ಕಡ್ಡಾಯವಾಗಿ ಭರಿಸಬೇಕಾದ್ದು ಏನು?
    ಬಾಲಕಾರ್ಮಿಕ ವಿರೋಧಿ ಕಾಯ್ದೆ ಉಲ್ಲಂಘಿಸಿದ ಉದ್ಯೋಗಪತಿಗಳು ಪ್ರತಿಯೊಬ್ಬ ಬಾಲ ಕಾರ್ಮಿಕನ ಪರವಾಗಿ 20,000/- ರೂ.ಗಳ ದಂಡವನ್ನು ಕಲ್ಯಾಣ ನಿಧಿಗೆ ಕಡ್ಡಾಯವಾಗಿ ಭರಿಸಬೇಕಾಗುತ್ತದೆ.

logoblog

Thanks for reading ಸಮಾಜಶಾಸ್ತ್ರ

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *