ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 current affairs 4/02/15 | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Wednesday, March 04, 2015

current affairs 4/02/15

  Pundalik       Wednesday, March 04, 2015

ವಾರಣಾಸಿ-ಕಠ್ಮಂಡು ನಡುವೆ ಗುರುವಾರ ಬಸ್ ಸಂಚಾರ ಪ್ರಾರಂಭ


vaaranaasi-kathmandu naduve guruvaara bas sanchaara praarambha(3 Mar) ಕಠ್ಮಂಡು: ಭಾರತದ ವಾರಣಾಸಿ ಮತ್ತು ನೇಪಾಳದ ರಾಜಧಾನಿ ಕಠ್ಮಂಡು ನಡುವೆ ಗುರುವಾರದಿಂದ ಬಸ್ ಸಂಚಾರ ಪ್ರಾರಂಭವಾಗಲಿದ್ದು, ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯ ಮತ್ತು ಕಠ್ಮಂಡುವಿನ ಪಶುಪತಿನಾಥ ದೇವಾಲಯವನ್ನು ಬೆಸೆಯಲಿದೆ.
* ಕಳೆದ ವರ್ಷ ದೆಹಲಿ-ಕಠ್ಮಂಡು ನಡುವೆ ಬಸ್ ಸಂಚಾರವನ್ನು ಪ್ರಾಂಭಿಸಲಾಗಿತ್ತು, ಆನಂತರ ಪ್ರಾರಂಭವಾಗುತ್ತಿರುವ ಎರಡನೇ ಬಸ್ ಸಂಚಾರ ಮಾರ್ಗ ಇದಾಗಿದೆ. 
* ಕಳೆದ ವರ್ಷ ನವೆಂಬರ್​ನಲ್ಲಿ ಕಠ್ಮಂಡುವಿನಲ್ಲಿ ನಡೆದ 18ನೇ ಸಾರ್ಕ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಆಗ ದೆಹಲಿ-ಕಠ್ಮಂಡು ನೇರ ಬಸ್ ಸಂಚಾರವನ್ನು ಪ್ರಾರಂಭಿಸಲಾಗಿತ್ತು. ಹೊಸ ಬಸ್ ಮಾರ್ಗವು ಯಾತ್ರಾರ್ಥಿಗಳಿಗೆ ಅನುಕೂಲ ಕಲ್ಪಿಸಲಿದೆ. ಎರಡು ಯಾತ್ರಾಸ್ಥಳಗಳ ನಡುವೆ ಸಂಚರಿಸಲು ಯಾತ್ರಾರ್ಥಿಗಳಿಗೆ ಅನುಕೂಲವಾಗಿಲಿದೆ, 
* ನೇರವಾಗಿ ತಲುಪಲು ಸಾಧ್ಯವಾಗಲಿದೆ. 35 ಸೀಟುಗಳ ಸಾಮರ್ಥ್ಯದ ಎರಡು ಬಸ್​ಗಳು ಪ್ರಾರಂಭದಲ್ಲಿ ಸಂಚರಿಸಲಿವೆ. ಮುಂದಿನ ದಿನಗಳಲ್ಲಿ ಕಠ್ಮಂಡುವಿನಿಂದ ಬಿಹಾರ ರಾಜಧಾನಿ ಪಟನಾಗೆ ನೇರ ಬಸ್ ಸಂಚಾರ ಕಲ್ಪಿಸುವ ಪ್ರಸ್ತಾವನೆ ಇದೆ ಎಂದು ನೇಪಾಳದ ಅಧಿಕಾರಿಗಳು ತಿಳಿಸಿದ್ದಾರೆ

ಇಂಡೋನೇಷ್ಯಾದಲ್ಲಿ ಭೂಕಂಪನ


indoneshyaadalli bhukampana (3 Mar) ಜಕಾರ್ತ: ಪಶ್ಚಿಮ ಇಂಡೋನೇಷ್ಯಾದ ಸಮುದ್ರದ ಅಡಿಯಲ್ಲಿ ರಿಚ್​ಟರ್ ಮಾಪಕದಲ್ಲಿ 6.4 ಪ್ರಮಾಣದ ಪ್ರಬಲ ಭೂಕಂಪನ ಮಂಗಳವಾರ ಸಂಭವಿಸಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.
*  ಆದರೆ ಸುನಾಮಿ ಭಯ ಕಂಡು ಬಂದಿಲ್ಲ, ಭೂಕಂಪನದಿಂದ ಸಾವುನೋವು, ಆಸ್ತಿಪಾಸ್ತಿ ಹಾನಿ ಬಗೆಗೂ ಯಾವುದೇ ವರದಿಗಳು ಬಂದಿಲ್ಲ ಎಂದು ಅದು ಹೇಳಿದೆ. 
* ಸುಮಾತ್ರಾ ದ್ವೀಪದ ಪಶ್ಚಿಮ ಕರಾವಳಿ ದೂರ ಸಮುದ್ರದಲ್ಲಿರುವ ಮೆಂಟಾವಾಯಿ ದ್ವೀಪಗಳ ಭಾಗವಾಗಿರುವ ಪುಲಾವು ಸಿಬೆರೂತ್ ಸಮೀಪ 37 ಕಿಮೀ ಆಳದಲ್ಲಿ ಸ್ಥಳೀಯ ಕಾಲಮಾನ ರಾತ್ರಿ 5.37ಕ್ಕೆ ಭೂಕಂಪನ ಸಂಭವಿಸಿದೆ. 
* ಈ ಭೂಕಂಪನಕ್ಕೆ ಸುನಾಮಿ ಎಬ್ಬಿಸುವಷ್ಟು ಸಾಮರ್ಥ್ಯಇರಲಿಲ್ಲ ಎಂದು ವರದಿ ಹೇಳಿದೆ. 
* 2004ರಲ್ಲಿ ಸಂಭವಿಸಿದ್ದ ಸಮುದ್ರದೊಳಗಿನ ಭೂಕಂಪನದಿಂದ ಉಂಟಾದ ಸುನಾಮಿ ಹೊಡೆತಕ್ಕೆ ಸಿಲುಕಿ ಇಂಡೋನೇಷ್ಯಾದ ಪಶ್ಚಿಮ ಸುಮಾತ್ರಾ ದ್ವೀಪದಲ್ಲಿ 1, 70,000 ಮಂದಿ ಅಸು ನೀಗಿದ್ದರು.

ತೈವಾನ್​ನಲ್ಲಿ ಭೂಕಂಪನ


taivaan​nalli bhukampana (21 Feb) ತೈಪೆ: ತೈವಾನ್​ನಲ್ಲಿ ಶನಿವಾರ ನಸುಕಿನಲ್ಲಿ ರಿಚ್​ಟರ್ ಮಾಪಕದಲ್ಲಿ 5.9 ಪ್ರಮಾಣದ ಭೂಕಂಪನ ಸಂಭವಿಸಿದೆ ಎಂದು ಅಮೆರಿಕದ ಭೂಕಂಪ ತಜ್ಞರು ತಿಳಿಸಿದ್ದಾರೆ. 
* ಆದರೆ ಭೂಕಂಪನದಿಂದ ಯಾವುದೇ ಸಾವು-ನೋವು, ಹಾನಿ ಸಂಭವಿಸಿದ ವರದಿಗಳು ಬಂದಿಲ್ಲ ಎಂದು ಅವರು ಹೇಳಿದ್ದಾರೆ. 
* ನಸುಕಿನ 4.06 ಗಂಟೆ (20.06 ಜಿಎಂಟಿ) ವೇಳೆಗೆ ಈ ಭೂಕಂಪನ ಸಂಭವಿಸಿದೆ. 
* ತೈವಾನಿನ ಎರಡನೇ ದೊಡ್ಡ ನಗರ ಮತ್ತು ಪ್ರಮುಖ ಬಂದರು ಕವೊಸಿಯಾಂಗ್ ನಿಂದ 110 ಕಿಮೀ ಪೂರ್ವಕ್ಕೆ 25 ಕಿಮೀ ಆಳದಲ್ಲಿ ಕಂಪನದ ಕೇಂದ್ರವಿತ್ತು ಎಂದು ಭೂಕಂಪ ತಜ್ಞರು ಹೇಳಿದ್ದಾರೆ. 
* ಕಳೆದ ವರ್ಷ ಜೂನ್ ತಿಂಗಳಲ್ಲಿ ಕೇಂದ್ರ ತೈವಾನ್​ನಲ್ಲಿ ಸಂಭವಿಸಿದ್ದ ಭೂಕಂಪನದಲ್ಲಿ 4 ಮೃತರಾಗಿ ಹಲವಾರು ಕಡೆ ಭೂಕುಸಿತಗಳು ಉಂಟಾಗಿದ್ದವು. 
* 1999ರ ಸೆಪ್ಟೆಂಬರ್​ನಲ್ಲಿ ಸಂಭವಿಸಿದ್ದ 6.3 ಪ್ರಮಾಣದ ಭೂಕಂಪದಲ್ಲಿ 2400 ಮಂದಿ ಅಸು ನೀಗಿದ್ದರು

ಎವರೆಸ್ಟ್​ನಲ್ಲಿ ಮಾನವ ತ್ಯಾಜ್ಯದ್ದೇ ದೊಡ್ಡ ಸಮಸ್ಯೆ: ನೇಪಾಳ


evarest​nalli maanava tyaajyadde dodda samasye: nepaala(3 Mar) ಕಠ್ಮಂಡು: ಪ್ರಪಂಚದ ಅತೀ ಎತ್ತರದ ಪರ್ವತವಾದ ಮೌಂಟ್ ಎವರೆಸ್ಟ್ ಹತ್ತುವವರ ಮಾನವ ತ್ಯಾಜ್ಯಗಳಿಂದ ಎವರೆಸ್ಟ್ ಮಲಿನವಾಗಿದೆ ಎಂದು ನೇಪಾಳದ ಪರ್ವತಾರೋಹಣ ಸಂಸ್ಥೆ ತಿಳಿಸಿದೆ. 
* ಪ್ರತೀ ವರ್ಷದ ಪರ್ವತಾರೋಹಣ ಋತುವಿನಲ್ಲಿ ಎರಡು ತಿಂಗಳ ಕಾಲ ಸುಮಾರು 700 ಪರ್ವತಾರೋಹಿಗಳು ಮತ್ತು ಅವರ ಮಾರ್ಗದರ್ಶಿಗಳು ಪರ್ವತದಲ್ಲಿ ಕಾಲ ಕಳೆಯುತ್ತಾರೆ. 
* ಈ ಸಂದರ್ಭದಲ್ಲಿ ಪರ್ವತದ ಮೇಲೆ ಸಂಗ್ರಹವಾಗುವ ಮನುಷ್ಯರ ಮಲ ಮತ್ತು ಮೂತ್ರ ಈಗ ಸಮಸ್ಯೆಯಾಗಿ ಪರಿಣಮಿಸುತ್ತಿದೆ ಎಂದು ಪರ್ವತಾರೋಹಣ ಸಂಸ್ಥೆ ತಿಳಿಸಿದೆ. ಪ್ರತೀ ವರ್ಷ ನೂರಾರು ವಿದೇಶಿ ಪರ್ವತಾರೋಹಿಗಳು ಎವರೆಸ್ಟ್ ಪರ್ವತ ಏರಲು ಆಗಮಿಸುತ್ತಾರೆ. 
* ಮಾರ್ರ್ಚ್ ನಿಂದ ಮೇ ತಿಂಗಳವರೆಗೆ ಪರ್ವತವನ್ನು ಏರಲು ಅನುಮತಿ ನೀಡಲಾಗುತ್ತದೆ. 
* ಪರ್ವತವನ್ನು ಏರಲು ನಾಲ್ಕು ಹಂತಗಳಾಗಿ ವಿಭಾಗಿಸಿದ್ದು, ಪರ್ವತಾರೋಹಿಗಳು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ನಿರ್ದಿಷ್ಟ ಎತ್ತರದಲ್ಲಿರುವ ಕ್ಯಾಂಪ್​ಗಳಲ್ಲಿ ವಾರಗಳ ಕಾಲ ಕಾಲ ಕಳೆಯುತ್ತಾರೆ.  
* ಬೇಸ್ ಕ್ಯಾಂಪ್ 5,300 ಮೀಟರ್ (17,380) ಅಡಿ ಎತ್ತರದಲ್ಲಿದೆ. ನಂತರ ನಿರ್ದಿಷ್ಟ ಎತ್ತರದಲ್ಲಿ 3 ಕ್ಯಾಂಪ್​ಗಳಿವೆ. 
* ಕ್ಯಾಂಪ್​ಗಳಲ್ಲಿ ಪರ್ವತಾರೋಹಿಗಳು ಉಳಿದುಕೊಳ್ಳಲು ಟೆಂಟ್ ವ್ಯವಸ್ಥೆ ಇದೆ ಆದರೆ ಶೌಚಗೃಹದ ವ್ಯವಸ್ಥೆ ಇಲ್ಲ. ಹಾಗಾಗಿ ಪರ್ವತಾರೋಹಿಗಳು ಹಿಮದಲ್ಲಿ ಸ್ವಲ್ಪ ಹಳ್ಳಮಾಡಿ ಶೌಚದ ನಂತರ ಅದರ ಮೇಲೆ ಹಿಮವನ್ನು ಮುಚ್ಚುತ್ತಿದ್ದಾರೆ. ಹಾಗಾಗಿ ನಾಲ್ಕು ಕ್ಯಾಂಪ್

30 ಸಾವಿರ ಗಡಿದಾಟಿದ ಸೆನ್​ಸೆಕ್ಸ್; ಹೊಸ ದಾಖಲೆ


30 saavira gadidaatidha sen​seks; hosa daakhale(4 Mar) ಮುಂಬೈ: ಆರ್​ಬಿಐ ರೆಪೋ ದರವನ್ನು ಶೇಕಡಾ 0.25ರಷ್ಟು ಕಡಿತಗೊಳಿಸಿದ ಬೆನ್ನಿಗೇ ಚೇತರಿಕೆ ಕಂಡ ಷೇರುಮಾರುಕಟ್ಟೆ ಇದೇ 
* ಮೊದಲಬಾರಿಗೆ 30 ಸಾವಿರ ಗಡಿದಾಟಿ ದಾಖಲೆ ಸೃಷ್ಟಿಸಿದೆ. 
* ಆರ್​ಬಿಐನ ಈ ಕ್ರಮದಿಂದಾಗಿ ಸೆನ್​ಸೆಕ್ಸ್ ಹಠಾತ್ತನೆ 431 ಅಂಕ ಏರಿಕೆ ಕಂಡಿತು. 
* ಅಂತೆಯೇ ನಿಫ್ಟಿ ಕೂಡ ಚೇತರಿಸಿಕೊಂಡಿದೆ. 122 ಅಂಕಗಳ ಏರಿಕೆಯಿಂದ 9119.20ರ ಗಡಿಯಲ್ಲಿ ತನ್ನ ದಾಖಲೆಯನ್ನು ಇನ್ನಷ್ಟು ಉತ್ತಮ ಪಡಿಸಿಕೊಂಡಿತು. 
* ಮಂಗಳವಾದ ವಹಿವಾಟಿನಲ್ಲಿ ನಿಫ್ಟಿ 9 ಸಾವಿರದ ಗಡಿ ದಾಟಿ ದಾಖಲೆ ಸೃಷ್ಟಿಸಿತ್ತು. 
* ಬೆಳಗ್ಗೆ 9.20ರ ವಹಿವಾಟಿನ 30 ಷೇರುಗಳಿಂದ 315 ಅಂಕಗಳಷ್ಟು ಹೆಚ್ಚಿಸಿಕೊಂಡ ಸೆನ್​ಸೆಕ್ಸ್ 29,909.62 ರಿಂದ 30,024.74ಕ್ಕೆ ಏರಿಕೆ ಕಂಡು ದಾಖಲೆ ಸೃಷ್ಟಿಸಿದೆ. 
* ನಿಫ್ಟಿ 9081ರಿಂದ ಹೆಚ್ಚಿನ 81 ಅಂಕಗಳಿಂದ 9119.20ರಷ್ಟು ಏರಿಕೆ ಕಂಡಿತು.

ರೆಪೋ ದರ ಇಳಿಸಿದ ಆರ್​ಬಿಐ; ಸಾಲದ ಬಡ್ಡಿದರವೂ ಇಳಿಯುವ ಸಾಧ್ಯತೆ


repo dara ilisidha aar​biai; saaladha baddidaravu(4 Mar) ಮುಂಬೈ: ಕೆಲ ದಿನಗಳ ಹಿಂದಷ್ಟೇ ರೆಪೋ ದರವನ್ನು ಕಡಿತಗೊಳಿಸಿದ್ದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಈಗ ಮತ್ತೊಮ್ಮೆ ರೆಪೋ ದರವನ್ನು ಶೇಕಡಾ 0.25ರಷ್ಟು ಕಡಿತಗೊಳಿಸಿದೆ.
* ಇದರಿಂದ ಗೃಹಸಾಲದ ಮೇಲಿನ ಬಡ್ಡಿದರಗಳು ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಹೆಚ್ಚಿದೆ. 
* ಆರ್​ಬಿಐ ರೆಪೋ ದರ ಕಡಿತ ಗೊಳಿಸಿದ ಬೆನ್ನಿಗೇ ಷೇರು ಮಾರುಕಟ್ಟೆ ಚೇತರಿಸಿಕೊಂಡಿದೆ. 
* ಸಂಕ್ರಾಂತಿ ಸಂದರ್ಭದಲ್ಲಿ ರೆಪೋ ದರ ಕಡಿತಗೊಳಿಸಿದ್ದ ಆರ್​ಬಿಐ ಬುಧವಾರ ಬೆಳಗ್ಗೆ ಶೇಕಡಾ 0.25ರಷ್ಟು ಕಡಿಮೆ ಮಾಡಿರುವುದನ್ನು ಪ್ರಕಟಿಸಿತು. 
* ಈತನಕ ಇದ್ದ ರೆಪೋ ದರವನ್ನು ಶೇಕಡಾ 7.75ರಿಂದ 7.50ಕ್ಕೆ ಇಳಿಸಿದ್ದು, ಪರಿಷ್ಕೃತ ದರ ಈ ಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದೆ. 
* ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್​ಬಿಐ ಗವರ್ನರ್ ರಘೂರಾಮ್​ರಾಜನ್, ಇದರಿಂದ ಹಣದುಬ್ಬರಕ್ಕೆ ಕಡಿವಾಣ ಬೀಳಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
* ಜತೆ ಜೊತೆಗೆ ಈಗ ಬ್ಯಾಂಕ್ ಸಾಲದ ಮೇಲಿನ ಬಡ್ಡಿದರಗಳು ಕಡಿಮೆಯಾಗುತ್ತದೆನ್ನುವ ಆಶಾವಾದ ಎಲ್ಲರಲ್ಲಿ ಮೂಡಲಾರಂಭಿಸಿದೆ.     
* ಅದರಲ್ಲೂ ಗೃಹ ಸಾಲದ ಮೇಲಿನ ಬಡ್ಡಿದರ ಕಡಿತಗೊಳ್ಳುವ ಸಾಧ್ಯತೆಯನ್ನು ಎಲ್ಲರೂ ನೀರಿಕ್ಷಿಸುತ್ತಿದ್ದಾರೆ. 
* ರೆಪೋ ದರ ಕಡಿಮೆ ಮಾಡಿದ ಬೆನ್ನಿಗೇ ಷೇರು ಮಾರುಕಟ್ಟೆ ಚೇತರಿಸಿಕೊಂಡಿದ್ದು, ಆರಂಭದ ವಹಿವಾಟಿನಲ್ಲೇ 30 ಸಾವಿರ ಗಡಿ ದಾಟಿದೆ. ನಿಫ್ಟಿ ಕೂಡ ಏರಿಕೆಯತ್ತ ಮುಖಮಾಡಿದೆ. ರೆಪೋ ಹಾಗಂದರೇನು: ಆರ್​ಬಿಐ ವಾಣಿಜ್ಯ

ಮಹಾರಾಷ್ಟ್ರದಲ್ಲಿ ಗೋಹತ್ಯೆ ನಿಷೇಧ


mahaaraashtradalli gohatye nishedha
* (4 Mar) * ಎತ್ತು, ಹೋರಿಗಳಿಗೂ ಅನ್ವಯ 
* ಕಾನೂನು ಉಲ್ಲಂಘಿಸಿದರೆ 5 ವರ್ಷ ಜೈಲು ಮುಂಬೈ: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯ ತಿದ್ದುಪಡಿ ಮಸೂದೆಯನ್ನು ಇತ್ತೀಚೆಗಷ್ಟೇ ಕಾಂಗ್ರೆಸ್ ಸರ್ಕಾರ ವಾಪಸ್ ಪಡೆದಿದ್ದರೆ, ಪಕ್ಕದ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧವನ್ನು ಅಧಿಕೃತವಾಗಿ ಜಾರಿಗೆ ತಂದಿದೆ. 
* ಕಳೆದ 19 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮಹಾರಾಷ್ಟ್ರ ಜಾನುವಾರು ಸಂರಕ್ಷಣಾ ತಿದ್ದುಪಡಿ ವಿಧೇಯಕಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಂಕಿತ ಹಾಕಿದ್ದಾರೆ. 
* ಮಹಾರಾಷ್ಟ್ರದಲ್ಲಿ ಗೋಹತ್ಯೆ ನಿಷೇಧಿಸಿ 1976ರಲ್ಲೇ ಕಾನೂನು ರೂಪಿಸಲಾಗಿತ್ತಾದರೂ, ಕೋಣ, ಎಮ್ಮೆ ಮತ್ತು ಎತ್ತುಗಳ ಹತ್ಯೆಗೆ ಅವಕಾಶವಿತ್ತು. 
* ಈ ಕಾಯ್ದೆಯ ತಿದ್ದುಪಡಿಗೆ ಈಗ ಅನುಮೋದನೆ ಲಭ್ಯವಾಗಿರುವುದರಿಂದ ಹಸು, ಗೂಳಿ ಮತ್ತು ಎತ್ತು, ಕೋಣ ಮತ್ತು ಎಮ್ಮೆಗಳ ಹತ್ಯೆಯೂ ಕಾನೂನುಬಾಹಿರವಾಗಿದೆ. 
* ಹೀಗಾಗಿ ಅಲ್ಲಿ ಗೋಮಾಂಸ ಮಾರಾಟ ಮಾಡುವುದು ಸಂಪೂರ್ಣ ನಿಷೇಧಕ್ಕೆ ಒಳಗಾಗಿದೆ. 
* ಈ ತಿದ್ದುಪಡಿಯನ್ನು 1995ರಲ್ಲಿ ಬಿಜೆಪಿ-ಶಿವಸೇನೆ ಸರ್ಕಾರ ರಾಷ್ಟ್ರಪತಿಗೆ ಕಳುಹಿಸಿತ್ತಾದರೂ, ತಾಂತ್ರಿಕ ಕಾರಣದಿಂದ ರಾಷ್ಟ್ರಪತಿ ವಾಪಸ್ ಕಳುಹಿಸಿದ್ದರು. 
* ನಂತರ ಬಂದ ಕಾಂಗ್ರೆಸ್-ಎನ್​ಸಿಪಿ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡಿರಲಿಲ್ಲ. ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರ ರೂಪಿಸಿದ್ದ ಗೋಹತ್ಯೆ ಕಾಯ್ದೆಯ ತಿದ್ದುಪಡಿ ಮಸೂದೆಯನ್ನು ಕಾಂಗ್ರೆಸ್ ಸರ್ಕಾರ ವಾಪಸ್

ಮೊತ್ತ ಮೊದಲ ಬಾರಿಗೆ 9000ದ ಗಡಿಗೆ ನಿಫ್ಟಿ


motta modala baarige 9000dha gadige nifti(3 Mar) ಮುಂಬೈ: ಇದೇ ಮೊತ್ತ ಮೊದಲ ಬಾರಿಗೆ ಮಂಗಳವಾರ ನಿಫ್ಟಿ 9000ದ ಗಡಿ ತಲುಪಿತು



'111' ಬಳಸಬೇಡಿ: ವೊಡಾಫೋನ್​ಗೆ ಟ್ರಾಯ್ ಆದೇಶ


'111' balasabedi: vodaafon​ge traay aadesha (2 Mar) ನವದೆಹಲಿ: ರಾಷ್ಟ್ರೀಯ ನಂಬರ್ ನೀಡಿಕೆ ಯೋಜನೆಯನ್ನು (ನ್ಯಾಷನಲ್ ನಂಬರಿಂಗ್ ಪ್ಲಾನ್) ಉಲ್ಲಂಘಿಸುವ ಕಾರಣ ಗ್ರಾಹಕ ಕಾಳಜಿ ಸೇವೆಗಳಿಗೆ '111' ಸಂಖ್ಯೆ ಬಳಸುವುದನ್ನು ಸ್ಥಗಿತಗೊಳಿಸುವಂತೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸೋಮವಾರ ವೊಡಾಪೋನ್​ಗೆ ನಿರ್ದೇಶನ ನೀಡಿದೆ. 
* ಈ ಬಗ್ಗೆ ಆದೇಶ ಪಾಲನೆ ವರದಿಯನ್ನು ಮಾರ್ಚ್ 10ರ ಒಳಗೆ ಸಲ್ಲಿಸುವಂತೆಯೂ ಟ್ರಾಯ್ ಸೂಚನೆ ನೀಡಿದೆ. ದೂರ ಸಂಪರ್ಕ ಇಲಾಖೆಯು 2003ರಲ್ಲೇ ರಾಷ್ಟ್ರೀಯ ನಂಬರ್ ನೀಡಿಕೆ ಯೋಜನೆಯನ್ನು ಜಾರಿಗೊಳಿಸಿದೆ. 
* ಇದರ ಪ್ರಕಾರ 111ರಿಂದ 115ವರೆಗಿನ ಸಂಖ್ಯೆಗಳನ್ನು ಯಾವುದೇ ರೀತಿಯ ಸೇವೆಗಳಿಗೆ ಮಂಜೂರು ಮಾಡಿಲ್ಲ. 
* ಅವುಗಳನ್ನು ಮೀಸಲು ಸಂಖ್ಯೆಗಳಾಗಿ ಇಟ್ಟುಕೊಳ್ಳಲಾಗಿದೆ ಎಂದು ಟ್ರಾಯ್ ತಿಳಿಸಿದೆ. 
* ಆದರೆ ವೊಡಾಫೋನ್ ವೆಬ್ ಸೈಟ್ ಜಾಹೀರಾತುಗಳಲ್ಲಿ ಗ್ರಾಹಕರನ್ನು ವಿವಿಧ ಇಂಟರ್​ನೆಟ್ ಸೆಟ್ಟಿಂಗ್​ಗಳಿಗಾಗಿ '111' ಸಂಖ್ಯೆಗೆ ಕರೆ ನೀಡುವಂತೆ ಸೂಚಿಸಿರುವುದು ಕಂಡು ಬಂದಿದೆ. 
* ಈ ಹಿನ್ನೆಲೆಯಲ್ಲಿ 111 ಸಂಖ್ಯೆಯನ್ನು ಬಳಸದಂತೆ ಸೂಚನೆ ನೀಡಲಾಗಿದೆ ಎಂದು ಟ್ರಾಯ್ ಹೇಳಿದೆ. 
* ಈ ಬಗ್ಗೆ ವೊಡಾಪೋನ್ ನಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ. 
* ಟ್ರಾಯ್ ಪ್ರಕಾರ ಈ ಬಗ್ಗೆ ಫೆಬ್ರುವರಿ 2ರಂದೇ ವೊಡಾಫೋನ್​ಗೆ ಷೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು ಎಂದು ಹೇಳಲಾಗಿದೆ.

ನಡಾಲ್​ಗೆ ಅರ್ಜೆಂಟೀನಾ ಓಪನ್ ಕಿರೀಟ


nadaal​ge arjentina opan kirita (2 Mar) ಬ್ಯೂನಸ್ ಐರಸ್ (ಅಜೆಂಟೀನಾ): ವಿಶ್ವದ ಶ್ರೇಷ್ಠ ಟೆನಿಸ್ ಆಟಗಾರರಲ್ಲಿ ಒಬ್ಬರಾದ, ಕ್ಲೇ ಕಿಂಗ್ ಎಂದೇ ಜನಪ್ರಿಯತೆ ಗಳಿಸಿಕೊಂಡಿರುವ ರಫೆಲ್ ನಡಾಲ್ ಅರ್ಜೆಂಟೀನಾ ಓಪನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 
* ಎದುರಾಳಿ ಜುವಾನ್ ಮೊನಾಕೋ ಅವರನ್ನು 6-4, 6-1 ಅಂತರದಿಂದ ಸೋಲಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಕಳೆದ 9 ತಿಂಗಳಿಂದೀಚೆಗೆ ರಫೆಲ್ ನಡಾಲ್ ಗೆದ್ದ ಮೊದಲ ಅಂತಾರಾಷ್ಟ್ರೀಯ ಪ್ರಶಸ್ತಿ ಇದಾಗಿದೆ

ಆಸ್ಟ್ರೇಲಿಯಾ ಓಪನ್​ನಿಂದ ನಡಾಲ್, ಹಲೆಪ್ ನಿರ್ಗಮನ


aastreliya opan​nindha nadaal, halep nirgamana (2 Feb) ಮೆಲ್ಬೋರ್ನ್: ಸ್ಪೇನ್ ತಾರೆ ರಾಫೆಲ್ ನಡಾಲ್ ವಿರುದ್ಧ ಆಡಿದ 17 ಪಂದ್ಯಗಳಲ್ಲೂ ಸೋಲು ಕಂಡಿದ್ದ ಜೆಕ್ ಗಣರಾಜ್ಯದ ಆಶಾಕಿರಣ ಥಾಮಸ್ ಬೆರ್ಡಿಕ್ ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ಗ್ರಾಂಡ್ ಸ್ಲಾಂ ಕಣದಲ್ಲಿ ಸೇಡು ತೀರಿಸಿಕೊಂಡಿದ್ದಾರೆ. 
* ಮಂಗಳವಾರ ನಡೆದ ಕ್ವಾರ್ಟರ್​ಫೈನಲ್​ನಲ್ಲಿ ಬೆರ್ಡಿಕ್ 14 ಗ್ರಾಂಡ್ ಸ್ಲಾಂ ವಿಜೇತ ನಡಾಲ್​ಗೆ ಆಘಾತ ನೀಡುವುದರೊಂದಿಗೆ ಸೆಮಿಫೈನಲ್ ಪ್ರವೇಶಿಸಿದರು. 
* ದಿನದ ಇನ್ನೊಂದು ಅಚ್ಚರಿಯ ಫಲಿತಾಂಶದಲ್ಲಿ ರಷ್ಯಾದ ಎಕಟರೀನಾ ಮಕರೋವಾ ರೊಮೆನಿಯ ಆಟಗಾರ್ತಿ ಸಿಮೋನಾ ಹಲೆಪ್​ರನ್ನು ಮಣಿಸಿದರು. 
* ಮರಿಯ ಶರಪೋವಾ ಏಳನೇ ಬಾರಿಗೆ ವರ್ಷದ ಮೊದಲ ಗ್ರಾಂಡ್ ಸ್ಲಾಂ ಟೂರ್ನಿಯ ಉಪಾಂತ್ಯಕ್ಕೇರಿದರು. 
* ಪುರುಷರ ಸಿಂಗಲ್ಸ್ ಕ್ವಾರ್ಟರ್​ಫೈನಲ್​ನ ದಿನದ ಅಂತಿಮ ಪಂದ್ಯದಲ್ಲಿ ಬ್ರಿಟನ್ ತಾರೆ ಆಂಡಿ ಮರ್ರೆ ಸ್ಥಳೀಯ ಆಶಾಕಿರಣ ಹಾಗೂ ಉತ್ಸಾಹಿ ಆಟಗಾರ ನಿಕ್ ರ್ಕಿಗಿಯೋಸ್​ರನ್ನು ನೇರ ಸೆಟ್​ಗಳಲ್ಲಿ ಮಣಿಸಿ ಮುನ್ನಡೆದರು. 
* ಬೌಚಾರ್ಡ್ ಟೆನಿಸ್ ಪಾಠ ಹೇಳಿಕೊಟ್ಟ ಶೆರ್ಪಿ: ಆಟ ಹಾಗೂ ಸೌಂದರ್ಯದಲ್ಲಿ ತನಗೆ ರಷ್ಯಾದ ಮರಿಯ ಶರಪೋವಾ ಆದರ್ಶ ಎಂದೆನ್ನುವ ಕೆನಡದ 20 ವರ್ಷದ ಆಟಗಾರ್ತಿ ಎಗುನಿ ಬೌಚಾರ್ಡ್ ಮಂಗಳವಾರದ ಪಂದ್ಯದಲ್ಲಿ ಅವರಿಂದಲೇ ಟೆನಿಸ್ ಪಾಠ ಹೇಳಿಸಿಕೊಂಡಿದ್ದು ವಿಶೇಷ. 2ನೇ ಶ್ರೇಯಾಂಕದ ಶರಪೋವಾ ಒಂದು ಗಂಟೆ 18 ನಿಮಿಷದ ಹೋರಾಟದಲ್ಲಿ 7ನೇ ಶ್ರೇಯಾಂಕದ ಬೌಚಾರ್ಡ್​ರನ್ನು ನೇರ ಸೆಟ್​ಗಳಲ್ಲಿ 6-3, 6-2 ರಿಂದ ಮಣಿಸಿ

ಸೈನಾ ನೆಹ್ವಾಲ್, ಕಷ್ಯಪ್​ಗೆ ಪ್ರಶಸ್ತಿ


saina nehvaal, kashyap​ge prashasti (3 Feb) ಲಖನೌ: ಭಾರತದ ಮೂರನೇ ಕ್ರಮಾಂಕಿತ ಪರಪ್ಪಳ್ಳಿ ಕಷ್ಯಪ್ ಅಗ್ರ ಕ್ರಮಾಂಕಿತ, ದೇಶಬಾಂಧವ ಕಿದಂಬಿ ಶ್ರೀಕಾಂತ್ ಅವರನ್ನು ಮಣಿಸಿ ಇಲ್ಲಿ ನಡೆಯುತ್ತಿದ್ದ ಸಯ್ಯೀದ್ ಮೋದಿ ಇಂಟರ್​ನ್ಯಾಷನಲ್ ಬ್ಯಾಡ್ಮಿಂಟನ್ ಚಾಂಪಿಯನ್​ಷಿಪ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 
* ಭಾನುವಾರ ಇಲ್ಲಿನ ಬಾಬು ಬನಾರಸಿ ದಾಸ್ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕಷ್ಯಪ್ 23-21, 23-21ರಿಂದ ಶ್ರೀಕಾಂತ್​ರನ್ನು ಸೋಲಿಸಿದರು. 
* ಇನ್ನು ಮಹಿಳಾ ಸಿಂಗಲ್ಸ್​ನಲ್ಲಿ ಅಗ್ರ ಕ್ರಮಾಂಕಿತ ಸೈನಾ ನೆಹ್ವಾಲ್ ಅತ್ಯಾಕರ್ಷಕ ಪ್ರದರ್ಶನದಿಂದ ಒಂದು ಗಂಟೆ 19 ನಿಮಿಷಗಳ ಕಾಲ ಆಡಿ ಸ್ಪೇನ್​ನ ವಿಶ್ವ ನಂ.7 ಆಟಗಾರ್ತಿ ಕರೋಲಿನಾ ಮರಿನ್ ಅವರನ್ನು 19-21, 25-23, 21-16 ಅಂತರದಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಒಲಂಪಿಕ್ಸ್​ನಲ್ಲಿ ಚಿನ್ನ ಗೆದ್ದವರಿಗೆ '75 ಲಕ್ಷ' ಬಹುಮಾನ!


olampiks​nalli chinna geddavarige '75 laksha' bahumaana!(6 Feb) ನವದೆಹಲಿ: ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಪದಕ ಗೆಲ್ಲುವವರಿಗೆ ನೀಡುವ ಪ್ರಶಸ್ತಿ ಮೊತ್ತದಲ್ಲಿ ಕೇಂದ್ರ ಸರ್ಕಾರವು ಭಾರೀ ಏರಿಕೆ ಮಾಡಿದ್ದು, 
* 2016ರ ರಿಯೋ ಒಲಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆಲ್ಲುವವರಿಗೆ 75 ಲಕ್ಷ ರೂ. ನಗದು ಬಹುಮಾನ ನೀಡಲು ಸರ್ಕಾರ ತೀರ್ಮಾನಿಸಿದೆ. 
* ಬೇಸಿಗೆ ಒಲಂಪಿಕ್ಸ್ ಮತ್ತು ಚಳಿಗಾಲದ ಒಲಂಪಿಕ್ಸ್​ನಲ್ಲಿ ಪದಕ ಗೆಲ್ಲುವವರಿಗೆ ನೀಡುವ ನಗದು ಬಹುಮಾನದ ಮೊತ್ತದಲ್ಲಿ ಏರಿಕೆ ಮಾಡಲಾಗಿದೆ. 
* ಪ್ರಸ್ತುತ ಚಿನ್ನದ ಪದಕ ಗೆದ್ದ ಕ್ರೀಡಾಪಟುವಿಗೆ 50 ಲಕ್ಷ ನೀಡಲಾಗುತ್ತಿದ್ದು ಏರಿಕೆಯ ನಂತರ 75 ಲಕ್ಷ ರೂ. ಬಹುಮಾನ ದೊರೆಯಲಿದೆ. 
* ಬೆಳ್ಳಿ ಪದಕ ಗೆದ್ದವರಿಗೆ 30 ಲಕ್ಷದಿಂದ 50 ಲಕ್ಷ ರೂ.ಗೆ ಮತ್ತು ಕಂಚಿನ ಪದಕ ಗೆದ್ದವರಿಗೆ 20 ಲಕ್ಷದಿಂದ 30 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. 
* ಏಷ್ಯನ್ ಮತ್ತು ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಪದಕ ಗೆಲ್ಲುವವರಿಗೂ ಸಹ ಬಹುಮಾನದ ಮೊತ್ತದಲ್ಲಿ ಏರಿಕೆ ಮಾಡಲಾಗಿದೆ. 
* ಚಿನ್ನದ ಪದಕ ಗೆದ್ದವರಿಗೆ 20 ಲಕ್ಷದಿಂದ 30 ಲಕ್ಷ ರೂ.ಗೆ, ಬೆಳ್ಳಿ ಪದಕ ಗೆದ್ದವರಿಗೆ 10 ಲಕ್ಷದಿಂದ 20 ಲಕ್ಷ ರೂ.ಗೆ ಮತ್ತು ಕಂಚಿನ ಪದಕ ಗೆದ್ದವರಿಗೆ 6 ಲಕ್ಷದಿಂದ 10 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. 
* ಪ್ಯಾರಾ ಒಲಂಪಿಕ್ಸ್ (ಬೇಸಿಗೆ ಮತ್ತು ಚಳಿಗಾಲ), ಪ್ಯಾರಾ ಏಷ್ಯನ್ ಗೇಮ್ಸ್ ಮತ್ತು ಕಾಮನ್​ವೆಲ್ತ್ ಗೇಮ್ಸ್ (ಪ್ಯಾರಾ ಅಥ್ಲಿಟ್​ಗಳು) ನಲ್ಲಿ ಗೆಲ್ಲುವ ಕ್ರೀಡಾ ಪಟುಗಳಿಗೆ ಒಲಂಪಿಕ್ಸ್, ಏಷ್ಯನ್ ಗೇಮ್ಸ್ ಮತ್ತು




ಹಿರಿಯ ಪತ್ರಕರ್ತ ಶಿವಾನಂದ ಜೋಶಿ ನಿಧನ


hiriya patrakarta shivaanandha joshi nidhana (24 Feb) ಹುಬ್ಬಳ್ಳಿ: ಟಿಯೆಸ್ಸಾರ್ ಪ್ರಶಸ್ತಿ ಪುರಸ್ಕೃತ, ಹಿರಿಯ ಪತ್ರಕರ್ತ, ವಿಜಯವಾಣಿ ಅಂಕಣಕಾರರಾಗಿದ್ದ ಶಿವಾನಂದ ಕಲ್ಲಂಭಟ್ ಜೋಶಿ (77) ಮಂಗಳವಾರ ನಿಧನ ಹೊಂದಿದರು.
* ಕ್ರೀಡಾ ಬರಹಗಳಿಂದ ಪ್ರಸಿದ್ಧರಾಗಿದ್ದ .
*  2007ರ ಸಾಲಿನ ಟಿಯೆಸ್ಸಾರ್ ಪ್ರಶಸ್ತಿ ಪಡೆದಿದ್ದ ಅವರು ಮಾಧ್ಯಮ ಅಕಾಡೆಮಿ ಪ್ರಶಸ್ತಿ (2006), 
* ಪಾಪು ಪುರಸ್ಕಾರ (2010), 
* ಮುಂಬೈ ಹವ್ಯಕ ಪ್ರಶಸ್ತಿ,
* ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪ್ರಶಸ್ತಿ, ರಾಜ್ಯ ಕ್ರೀಡಾ ಮಂಡಳಿ ಪ್ರಶಸ್ತಿಗೆ ಭಾಜನರಾಗಿದ್ದರು. 







logoblog

Thanks for reading current affairs 4/02/15

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *