ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ಭಾರತ ಸರ್ಕಾರದ ಯೋಜನೆಗಳು | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Wednesday, March 04, 2015

ಭಾರತ ಸರ್ಕಾರದ ಯೋಜನೆಗಳು

  Pundalik       Wednesday, March 04, 2015
ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ನಿಯೋಗ
ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಮಂತ್ರಾಲಯವು ಎಸ್ ಜಿಎಸ್ ವೈ ಯೋಜನೆಯನ್ನು ಪುನರ್ ರಚಿಸಿ ಆಜೀವಿಕ 
 –ನ್ಯಾಷನಲ್ ರೂರಲ್ ಲೈವ್ಲಿ ಹುಡ್ ಮಿಷನ್ (ಎನ್ ಆರ್ ಎಲ್ ಎಂ) 2010-11ರಿಂದ ಜಾರಿಗೊಳಿಸಿದೆ.
  ಇದರನ್ವಯ ರಾಜ್ಯ ಸರ್ಕಾರವು ರಾಜ್ಯದಲ್ಲಿ ಆಜೀವಿಕ ಯೋಜನೆಯನ್ನು “ಸಂಜೀವಿನಿ’’ ಹೆಸರಿನಲ್ಲಿ ಕರ್ನಾಟಕ
  ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ (ಕೆ.ಎಸ್.ಆರ್.ಎಲ್.ಪಿ.ಎಸ್) ಮೂಲಕ ಹಂತ ಹಂತವಾಗಿ
  ರಾಜ್ಯದಲ್ಲಿ ಜಾರಿಗೊಳಿಸಲಾಗುತ್ತಿದೆ



ರಾಷ್ಟ್ರೀಯ ಗ್ರಾಮೀಣ ಅಭಿವೃದ್ಧಿ ನೀರು ಸರಬರಾಜು ಕಾರ್ಯಕ್ರಮ

ರಾಜ್ಯ 59,753 ಗ್ರಾಮೀಣ ಜನವಸತಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಸುರಕ್ಷಿತ ಕುಡಿಯುವ ನೀರನ್ನು
 ಒದಗಿಸುವ ಮೂಲಕ ಜನರ ಜೀವನ ಮಟ್ಟವನ್ನು ಸುಧಾರಿಸಲು ಸರ್ಕಾರ ಹೆಚ್ಚಿನ ಮಹತ್ವನ್ನು ನೀಡಿದೆ. ಪ್ರತಿ ದಿನ ಪ್ರತಿ
 ವ್ಯಕ್ತಿಗೆ ತಲಾ 55 ಲೀಟರ್ ಕುಡಿಯುವ ನೀರು ಒದಗಿಸುವ ಉದ್ದೇಶವನ್ನು ಸರ್ಕಾರ ತಳೆದಿದೆ. ಗ್ರಾಮೀಣ
 ಪ್ರದೇಶಗಳಿಗೆ ಕೆಳಕಂಡ ಕಾರ್ಯಕ್ರಮಗಳ ಮೂಲಕ ಸುರಕ್ಷಿತ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.
 (ಎನ್.ಆರ್.ಡಿ.ಡಬ್ಲ್ಯೂ.ಪಿ ಮಾರ್ಗಸೂಚಿ -2013 ರಂತೆ)
  1. ಕೊಳವೆ ನೀರು ಸರಬರಾಜು ಯೋಜನೆ
  2. ಕಿರು ನೀರು ಸರಬರಾಜು ಯೋಜನೆ
  3. ಕೈಪಂಪು ಕೊಳವೆ ಬಾವಿ
  4. ಬಹುಗ್ರಾಮ ಪೂರೈಕೆ ಯೋಜನೆಗಳು
 


13ನೇ ಹಣಕಾಸು ಆಯೋಗದ ರಸ್ತೆಗಳು
13ನೇ ಹಣಕಾಸಿನ ಆಯೋಗದ ಅನುದಾನದಲ್ಲಿ ಗ್ರಾಮೀಣ ರಸ್ತೆಗಳ ನಿರ್ಮಾಣ ಮತ್ತು ಉನ್ನತ್ತೀಕರಣಕ್ಕಾಗಿ 
 ಒಟ್ಟಾರೆ ಅನುದಾನದ ಶೇ.20ರಷ್ಟು ಮೀರದಂತೆ ಕಾಮಗಾರಿಗಳನ್ನು ಕೈಗೊಳ‍್ಳಬಹುದಾಗಿದೆ. ಬಿಡುಗಡೆಯಾದ
 ಅನುದಾನದಲ್ಲಿ ಅಭಿವೃದ್ಧಿ ಯೋಜನೆಗಳಲ್ಲಿ ದೀರ್ಘಕಾಲ ಬಾಳಿಕೆ ಬರುವಂತಹ ಮೂಲಭೂತ ಸೌಕರ್ಯಗಳಿಗೆ ಆಧ್ಯತೆ
 ನೀಡುವುದು. 
13ನೇ ಹಣಕಾಸು ಆಯೋಗದ ಪಂಚಾಯತ್ ರಾಜ್ ಸಂಸ್ಥೆಗಳು

13ನೇ ಹಣಕಾಸು ಆಯೋಗದ ಶಿಫಾರಸ್ಸಿನನ್ವಯ, 5 ವರ್ಷಗಳ ಅವಧಿಗೆ ಅಂದರೆ 2010-11ನೇ ಸಾಲಿನಿಂದ
 2014-15ನೇ ಸಾಲಿನವರೆಗೆ ನಿಗದಿಪಡಿಸಲಾಗಿದೆ. ಸದರಿ ಅನುದಾನವನ್ನು ಪ್ರತಿ ವರ್ಷ 2ಕಂತುಗಳಲ್ಲಿ ಬಿಡುಗಡೆ
 ಮಾಡಲಾಗುತ್ತದೆ. ಇದನ್ನು ಎಲ್ಲಾ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಜನಸಂಖ್ಯೆಯ ಆಧಾರದ ಮೇಲೆ
 10:20:70(ಜಿ.ಪಂ.:ತಾ.ಪಂ.:ಗ್ರಾ.ಪಂ) ಅನುಪಾತದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಶಾಲೆ, ಅಂಗನವಾಡಿಗಳಿಗೆ
 ಡೆಸ್ಕ್, ಪೀಠೋಪಕರಣ ಕ್ರೀಡಾ ಸಾಮಾಗ್ರಿ, ಪೀಠೋಪಕರಣ ಪ್ರಯೋಗಾಲಯ ಸಾಮಾಗ್ರಿ ಉಪಕರಣಗಳನ್ನು
 ಖರೀದಿಸಲು ಬಳಸಬಹುದು. 

13ನೇ ಹಣಕಾಸಿನ ಆಯೋಗದ ಅನುದಾನದಲ್ಲಿ ಗ್ರಾಮೀಣ ರಸ್ತೆಗಳ ನಿರ್ಮಾಣ ಮತ್ತು ಉನ್ನತ್ತೀಕರಣಕ್ಕಾಗಿ
 ಒಟ್ಟಾರೆ ಅನುದಾನದ ಶೇ.20ರಷ್ಟು ಮೀರದಂತೆ ಕಾಮಗಾರಿಗಳನ್ನು ಕೈಗೊಳ‍್ಳಬಹುದಾಗಿದೆ. ಬಿಡುಗಡೆಯಾದ
 ಅನುದಾನದಲ್ಲಿ ಅಭಿವೃದ್ಧಿ ಯೋಜನೆಗಳಲ್ಲಿ ದೀರ್ಘಕಾಲ ಬಾಳಿಕೆ ಬರುವಂತಹ ಮೂಲಭೂತ ಸೌಕರ್ಯಗಳಿಗೆ ಆಧ್ಯತೆ
 ನೀಡುವುದು. 
ನಿರ್ಮಲ ಭಾರತ ಅಭಿಯಾನ

 ಗ್ರಾಮೀಣ ಪ್ರದೇಶಗಳಲ್ಲಿನ ಕೊಳಕು, ಗಲೀಜು, ವಾಸನೆ ಮುಂತಾದ ಅನೈರ್ಮಲ್ಯಗಳನ್ನು ತೊಡೆದುಹಾಕಿ,
 ಸಂಪೂರ್ಣ ಸ್ವಚ್ಛತೆಯನ್ನು ಸಾಧಿಸಲು ಹಮ್ಮಿಕೊಂಡಿರುವ ಕಾರ್ಯಕ್ರಮವೇ “ನಿರ್ಮಲ ಭಾರತ್ ಅಭಿಯಾನ’’. ಇದು
 ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ, ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ 2005 ರ
 ಅಕ್ಟೋಬರ್ 2 ರ ಗಾಂಧಿ ಜಯಂತಿಯ ದಿನದಿಂದ ಸಂಪೂರ್ಣ ಸ್ವಚ್ಛತಾ ಆಂದೋಲನ ಎಂಬ ಹೆಸರಿನಲ್ಲಿ
 ಜಾರಿಯಲ್ಲಿದ್ದು, ದಿನಾಂಕ:01.04.2012 ರಿಂದ ನಿರ್ಮಲ ಭಾರತ್ ಅಭಿಯಾನ ಎಂದು ಪುನರ್ ನಾಮಕರಣ ಮಾಡಿ
 ಜಾರಿಗೊಳಿಸಿದೆ. ಇದು ನಿರ್ದಿಷ್ಟ ಕಾಲಾವಧಿಯ ಯೋಜನೆಯಾಗಿದ್ದು, 2022 ರ ಅಂತ್ಯದ ವೇಳೆಗೆ ಶೇ.100 ರಷ್ಟು
 ಪ್ರಗತಿಯನ್ನು ಸಾಧಿಸುವ ಗುರಿ ಹೊಂದಲಾಗಿದೆ.

ಹಿಂದುಳಿದ ಪ್ರದೇಶಗಳ ಅಭಿವೃಧ್ದಿ ಅನುದಾನ


 ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಲು ಭಾರತ ಸರ್ಕಾರವು ಹಿಂದುಳಿದ ಪ್ರದೇಶಗಳ ಅನುದಾನ
 ನಿಧಿಯನ್ನು(BRGF) ಸ್ಥಾಪಿಸಿದ್ದು, ಈ ಯೋಜನೆಯ ಉದ್ಧೇಶವು, ಗುರುತಿಸಲ್ಪಟ್ಟಿರುವ ಪ್ರದೇಶಗಳ ಅಭಿವೃದ್ಧಿ
 ಕಾರ್ಯಕ್ರಮಗಳಿಗೆ ಹಣಕಾಸಿನ ನೆರವನ್ನು ನೀಡುವುದಾಗಿರುತ್ತದೆ. ಮೂಲಭೂತವಾಗಿ ಈ ಅನುದಾನವನ್ನು ಈ
 ಕೆಳಕಂಡ ಕಾರ್ಯಕ್ರಮಗಳಿಗೆ ವಿನಿಯೋಗಿಸಲು ಮಾರ್ಗಸೂಚಿಗಳನ್ನು ನೀಡಲಾಗಿದೆ.
 1. ಸ್ಥಳೀಯ ಮೂಲಭೂತ ಸೌಲಭ್ಯ ಹಾಗೂ ಇತರೆ ಅಭಿವೃದ್ಧಿ ಕಾರ್ಯಕ್ರಮಗಳ ನಡುವಿನ ಅಂತರವನ್ನು
      ತುಂಬುವುದು.
 2. ಪಂಚಾಯತ್ ರಾಜ್ ಸಂಸ್ಥೆಗಳು ಈ ಕಾರ್ಯವನ್ನು ನಿರ್ವಹಿಸಲು ಕ್ರಿಯಾತ್ಮಕವಾಗಿ ಭಾಗವಹಿಸುವಂತೆ
     ಕಾರ್ಯಕ್ರಮ ರೂಪಿಸುವುದು ಹಾಗೂ ಅದಕ್ಕೆ ಪೂರಕವಾಗಿ ಅನುಷ್ಠಾನ ಮತ್ತು ನಿರ್ವಹಣೆಯ ಬಗ್ಗೆ ಪರಿಣತಿಯನ್ನು
     ನೀಡುವುದು.
 ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಕರ್ನಾಟಕದಲ್ಲಿ ಗುಲ್ಬರ್ಗಾ, ಬೀದರ್, ಚಿತ್ರದುರ್ಗ, ದಾವಣಗೆರೆ ಮತ್ತು ರಾಯಚೂರು ಜಿಲ್ಲೆಗಳನ್ನು ಗುರುತಿಸಲಾಗಿದೆ. 
ರಾಜೀವ್ ಗಾಂಧಿ ಪಂಚಾಯತ್ ಸಶಕ್ತಿಕರಣ ಅಭಿಯಾನ

 ಭಾರತ ಸರ್ಕಾರದ ಪಂಚಾಯತ್ ರಾಜ್ ಮಂತ್ರಾಲಯವು ಹಾಲಿ ರಾಷ್ಟ್ರದಾದ್ಯಂತ ಅನುಷ್ಠಾನಗೊಳಿಸುತ್ತಿರುವ
 e-PANCHAYAT, ಪಂಚಾಯತ್ ಎಂಪರ್ ಮೆಂಟ್ ಅಂಡ್ ಅಕೌಂಟಬಿಲಿಟಿ ಇನ್ಸೆಂಟೀವ ಸ್ಕೀಮ್
 (PEAIS), ಪಂಚಾಯತ್ ಮಹಿಳಾ ಏವಂ ಯುವಶಕ್ತಿ ಅಭಿಯಾನ(PMEYSA) ಹಾಗೂ ಬ್ಯಾಕ್ ವರ್ಡ್ ರೀಜನ್ಸ್
 ಗ್ರಾಂಟ್ ಫಂಡ್ (BRGF ) ಯೋಜನೆಗಳಲ್ಲಿ ಅಳವಡಿಸಿಕೊಳ್ಳಲಾಗಿದ್ದ ಸಾಮರ್ಥ್ಯಾಭಿವೃದ್ಧಿ
 ಹಾಗೂ ತರಬೇತಿ ಕಾರ್ಯಕ್ರಮಗಳನ್ನು ಸಮ್ಮಿಳನಗೊಳಿಸಿ ಪಂಚಾಯತ್ ರಾಜ್ ಸಂಸ್ಥೆಗಳನ್ನು ಹಾಗೂ ಅದರಲ್ಲಿ
 ಕರ್ತವ್ಯ ನಿರ್ವಹಿಸುತ್ತಿರುವ ಪಂಚಾಯತ್ ರಾಜ್ ಚುನಾಯಿತ ಪ್ರತಿನಿಧಿಗಳು ಹಾಗೂ
 ಅಧಿಕಾರಿಗಳಿಗೆ  ಸಾಮರ್ಥ್ಯಾಭಿವೃದ್ಧಿಯನ್ನು ಬಲಪಡಿಸುವ ಉದ್ದೇಶದಿಂದ 2012-13ನೇ ಸಾಲಿನಿಂದ ನೂತನ
 ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೊಳಿಸಿದೆ. ಸದರಿ ಯೋಜನೆಯನ್ನು “ರಾಜೀವ್ ಗಾಂಧಿ
  ಪಂಚಾಯತ್  ಸಶಕ್ತೀಕರಣ ಅಭಿಯಾನ’’ (RGPSA) ಎಂದು ಕರೆಯಲಾಗಿದೆ. ಈ ಯೋಜನೆಯನ್ನು
 12ನೇ ಪಂಚವಾರ್ಷಿಕ  ಯೋಜನಾವಧಿಯಲ್ಲಿ ಅನುಷ್ಠಾನಗೊಳಿಸಲಾಗುವುದು
ಪಶ್ಚಿಮ ಘಟ್ಟಗಳ ಅಭಿವೃದ್ಧಿ ಯೋಜನೆ

 ಪಶ್ಚಿಮ ಘಟ್ಟಗಳ ಅಭಿವೃದ್ಧಿ ಯೋಜನೆಯ ಅನುಷ್ಠಾನವನ್ನು ನಿರ್ದೇಶಕರು, ಸುವರ್ಣ ಗ್ರಾಮೋದಯರವರ
 ಉಸ್ತುವಾರಿಯಲ್ಲಿ ನಿರ್ವಹಿಸಲಾಗುತ್ತಿದೆ. ಯೋಜನೆಯ ದೂರದೃಷ್ಟಿ, ನಿರ್ದಿಷ್ಟಪಡಿಸಿದ ಗುರಿ ಮತ್ತು 
 ಉದ್ದೇಶಗಳು :
 1. ಗುಡ್ಡಗಾಡು ಪ್ರದೇಶಗಳು ಅಭಿವೃದ್ಧಿ
 2. ಅರಣ್ಯ ಸಂರಕ್ಷಣೆ ಮತ್ತು ಪರಿಸರ ನಿರ್ವಹಣೆ
 3. ಗುಡ್ಡಗಾಡು ಪ್ರದೇಶಗಳಲ್ಲಿನ ಕೃಷಿಕರಿಗೆ ನೀರಾವರಿ ಸೌಲಭ್ಯಗಳನ್ನು ಒದಗಿಸುವುದು
 4. ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವವರಿಗೆ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಚಟುವಟಿಕೆಗಳನ್ನು
      ಒದಗಿಸುವುದು.
 5. ಈ ಪ್ರದೇಶಗಳಲ್ಲಿನ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸುವುದು.
 6. ಗುಡ್ಡಗಾಡು ಪ್ರದೇಶಗಳಲ್ಲಿ ಎರಡನೇ ಬೆಳೆಯನ್ನು ಬೆಳೆಯಲು ಅನುಕೂಲವಾಗುವಂತೆ ಕಿಂಡಿ
     ಅಣೆಕಟ್ಟು ಮತ್ತು ಕಾಲುಸಂಕಗಳ ನಿರ್ಮಾಣವನ್ನು ಕೈಗೊಳ್ಳುವುದು.

ಜೈವಿಕ ಇಂಧನ

 ರಾಜ್ಯದಲ್ಲಿ 2010-11ನೇ ಸಾಲಿನಲ್ಲಿ ಆರಂಭಗೊಂಡ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ
 ರಾಜ್ಯದಲ್ಲಿ ಜೈವಿಕ ಇಂಧನ ಕುರಿತು ಯೋಜನೆ ರೂಪಿಸುವ ಹಾಗೂ ಅನುಷ್ಠಾನಗೊಳಿಸುವ ಜವಾಬ್ದಾರಿ 
 ಹೊಂದಿದೆ. ಜೈವಿಕ ಇಂಧನ ಅಭಿವೃದ್ಧಿಗಾಗಿ ಮಂಡಳಿ ಕೆಳಗಿನ ಧ್ಯೇಯೋದ್ದೇಶ ಹೊಂದಿದೆ.
 1. ಜೈವಿಕ ಇಂಧನ ಮೂಲಗಳ ಅಭಿವೃದ್ಧಿ ಹಾಗೂ ನಿರಂತರ ಪೂರೈಕೆಗೆ ಅಗತ್ಯವಿರುವ ಪರಿಸರ ನಿರ್ಮಾಣ
      ಮಾಡುವುದು.
 2. ರಾಜ್ಯ ಜೈವಿಕ ಇಂಧನ ನೀತಿಯ ಸಮರ್ಪಕ ಅನುಷ್ಠಾನ.
 3. ವಿವಿಧ ಪ್ರಾಂತ್ಯಗಳಿಗೆ ಸೂಕ್ತವಿರುವ ಜೈವಿಕ ಇಂಧನ ಬೆಳೆಗಳನ್ನು ಗುರುತಿಸಿ, ಭೂಮಿ ಪತ್ತೆ ಹಚ್ಚಿ ನೆಡುತೋಪುನ್ನು
      ಬೆಳೆಸುವುದು.
 4. ಜೈವಿಕ ಇಂಧನಕ್ಕೆ ಅಗತ್ಯವಿರುವ ಮಾರುಕಟ್ಟೆ ವ್ಯವಸ್ಥೆ ರೂಪಿಸುವುದು.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ

 ಗ್ರಾಮೀಣ ರಸ್ತೆ ಸಂಪರ್ಕವು ಗ್ರಾಮೀಣ ಕ್ಷೇತ್ರದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಹೆಚ್ಚಿಸುವಲ್ಲಿ ಪ್ರಮುಖ
 ಅಂಶವೆಂಬುದು ಬಹಳ ಹಿಂದಿನಿಂದಲೂ ಗುರುತಿಸಲ್ಪಟ್ಟಿದ್ದರೂ ಸಹ ಅನೇಕ ವರ್ಷಗಳಿಂದ ಸಮರ್ಪಕವಾಗಿ
 ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಸಾಕಷ್ಟು ಪ್ರಾಶಸ್ತ್ಯ ದೊರಕಿಸಲು ಸಾಧ್ಯವಾಗಿರುವುದಿಲ್ಲ. ಗ್ರಾಮೀಣ ರಸ್ತೆಗಳ
 ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ತುರ್ತಾಗಿ ಗಣನೀಯ ಪ್ರಮಾಣದ ಬಂಡವಾಳ ಹೂಡಬೇಕಾದ ಅಗತ್ಯತೆ ಇರುತ್ತದೆ.
 ಪ್ರಸ್ತುತ ಪ್ರಮುಖವಾಗಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಗ್ರಾಮೀಣ ರಸ್ತೆಗಳನ್ನು
 ಅಭಿವೃದ್ಧಿ/ನಿರ್ವಹಣೆ ಮಾಡಲಾಗುತ್ತಿದೆ.















logoblog

Thanks for reading ಭಾರತ ಸರ್ಕಾರದ ಯೋಜನೆಗಳು

Previous
« Prev Post

1 comment:

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *