ಕಲ್ಲಿದ್ದಲು ಮಸೂದೆ ಅಂಗೀಕರಿಸಿದ ಲೋಕಸಭೆ
(4 Mar) ನವದೆಹಲಿ: ಲೋಕಸಭೆಯಲ್ಲಿ ಇಂದು ಕಲ್ಲಿದ್ದಲು ಸುಗ್ರೀವಾಜ್ಞೆಯನ್ನು ಬದಲಿಸಲು ಮಂಡಿಸಲಾಗಿದ್ದ ಕಲ್ಲಿದ್ದಲು ಮಸೂದೆಗೆ ಅಂಗೀಕಾರ ನೀಡಲಾಗಿದೆ. *
* 'ಕಲ್ಲಿದ್ದಲು ಗಣಿಗಾರಿಕೆ (ವಿಶೇಷ ಅವಕಾಶ) ಕಾಯ್ದೆ 2015' ಮಸೂದೆಯನ್ನು ಲೋಕಸಭೆಯು ಧ್ವನಿಮತದ ಮೂಲಕ ಅಂಗೀಕರಿಸಿದೆ.
* ಈ ಮಸೂದೆಯು ಕೇಂದ್ರ ಸರ್ಕಾರವು ಕಳೆದ ವರ್ಷ ಅಕ್ಟೋಬರ್ 21ರಂದು ಮತ್ತು ಡಿಸೆಂಬರ್ನಲ್ಲಿ ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ಕಾಯ್ದೆಯಾಗಿ ಬದಲಿಸಲಿದೆ.
* ನ್ಯಾಯಾಲಯವು 204 ಕಲ್ಲಿದ್ದಲು ಗಣಿಗಳ ಹಂಚಿಕೆಯನ್ನು ರದ್ದುಗೊಳಿಸಿದ ನಂತರ ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ಹೊರಡಿಸಿತ್ತು.
* ಮಸೂದೆ ಕುರಿತು ಮಾತನಾಡಿದ ಕಲ್ಲಿದ್ದಲು ಮತ್ತು ವಿದ್ಯುತ್ ಸಚಿವ ಪಿಯೂಷ್ ಗೋಯಲ್ ಕಾಯ್ದೆಯಿಂದ ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆಯು ಪಾರದರ್ಶಕವಾಗಲಿದೆ ಎಂದು ತಿಳಿಸಿದರು. ಕಾಯ್ದೆಯಿಂದಾಗಿ ಕಲ್ಲಿದ್ದಲು ಕ್ಷೇತ್ರದಲ್ಲಿನ ಸಮಸ್ಯೆ ನಿವಾರಿಸಲು ಅನುಕೂಲವಾಗಲಿದೆ.
ಮುಂದಿನ ಹಂತದ ಕಲ್ಲಿದ್ದಲು ಗಣೆ ಹರಾಜು ಶೀಘ್ರ ಪ್ರಾರಂಭ: ಗೋಯಲ್
(3 Mar) ನವದೆಹಲಿ: ಕಲ್ಲಿದ್ದಲು ಗಣಿಯ ಮುಂದಿನ ಹಂತದ ಹರಾಜು ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಕೇಂದ್ರ ಕಲ್ಲಿದ್ದಲು, ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
* ಮೊದ ಹಂತದಲ್ಲಿ ಸರ್ಕಾರವು 19 ಕಲ್ಲಿದ್ದಲು ಗಣಿಗಳನ್ನು ಹರಾಜು ಮಾಡಿದ್ದು, ಎರಡನೇ ಹಂತದ ಹರಾಜು ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು.
* ಸುಗ್ರೀವಾಜ್ಞೆ ಹೊರಡಿಸದಿದ್ದರೆ ಕಲ್ಲಿದ್ದಲು ಗಣಿಯನ್ನು ಹರಾಜು ಮಾಡಲು ಸಾಧ್ಯವಾಗುತ್ತಿರಲಿಲ್ಲ.
* ಸುಗ್ರೀವಾಜ್ಞೆಯ ಕಾರಣ 2004-14ರ ಅವಧಿಯಲ್ಲಿ ಕಲ್ಲಿದ್ದಲು ಗಣಿ ಹರಾಜು ಪ್ರಕ್ರಿಯೆ ನಡೆದಿರಲಿಲ್ಲ.
* ನಮ್ಮ ಸರ್ಕಾರ ಮೊದಲ ಹಂತದ ಹರಾಜಿನಲ್ಲಿ 19 ಗಣಿಗಳನ್ನು ಹರಾಜು ಮಾಡಿದೆ ಎಂದು ಗೋಯಲ್ ತಿಳಿಸಿದರು
ಕಲ್ಲಿದ್ದಲು ಹರಾಜು; ರಾಜ್ಯಗಳಿಗೆ 1.09 ಲಕ್ಷ ಕೋಟಿ
* 19 ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆಯಿಂದ ಛತ್ತೀಸ್ಘಡ, ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಸ್ಸಾ ಮತ್ತು ಮಹಾರಾಷ್ಟ್ರಗಳಿಗೆ ಸುಮಾರು 1.09 ಕೋಟಿ ಆದಾಯ ಸಿಗಲಿದೆ ಎಂದು ಕೆಂದ್ರ ಕಲ್ಲಿದ್ದಲು ಕಾರ್ಯದರ್ಶಿ ಅನಿಲ್ ಸ್ವರೂಪ್ ತಿಳಿಸಿದ್ದಾರೆ.
* ಇದರ ಜತೆಗೆ ರಾಯಲ್ಟಿ ರೂಪದಲ್ಲಿ ಸುಮಾರು 12,500 ಕೋಟಿ ರೂ. ಆದಾಯ ರಾಜ್ಯಗಳಿಗೆ ಸಿಗಲಿದೆ.
* 19 ಗಣಿಗಳ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದು, ಪಾರದರ್ಶಕ ಹರಾಜು ಪ್ರಕ್ರಿಯೆಯಿಂದ ಸಂತಸವಾಗಿದೆ.
* ಎಲ್ಲಾ 204 ಕಲ್ಲಿದ್ದಲು ಗಣಿಗಳನ್ನು 2016ರ ಮಾರ್ಚ್ 31ರೊಳಗೆ ಹಂಚಿಕೆ ಮಾಡಲಾಗುವುದು.
* ರಾಜ್ಯ ಸರ್ಕಾರದ ಉದ್ದಿಮೆಗಳು ಗಣಿ ಹಂಚಿಕೆ ಮಾಡಲಾಗುವುದು ಮತ್ತು ಖಾಸಗಿ ಉದ್ದಿಮೆಗಳಿಗೆ ಗಣಿ ಹರಾಜು ಮಾಡಲಾಗುವುದು ಎಂದು ಸ್ವರೂಪ್ ತಿಳಿಸಿದ್ದಾರೆ
ಕಲ್ಲಿದ್ದಲು ಹರಾಜು: ತಾಂತ್ರಿಕ ತಜ್ಞರ ಸಮಿತಿ ರಚನೆ
(2 Feb) ನವದೆಹಲಿ: ಕಲ್ಲಿದ್ದಲು ಗಣಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವವರ ತಾಂತ್ರಿಕ ಅರ್ಹತೆಯನ್ನು ಪರೀಕ್ಷಿಸಲು ಕೇಂದ್ರ ಸರ್ಕಾರವು 6 ಜನ ತಜ್ಞರ ಸಮಿತಿಯನ್ನು ರಚಿಸಲಿದೆ.
* ಕಲ್ಲಿದ್ದಲು ಗಣಿ ಹರಾಜು ವೇಳಾ ಪಟ್ಟಿ 1ರಲ್ಲಿ ಭಾಗವಹಿಸುವವರ ತಾಂತ್ರಿಕ ಅರ್ಹತೆಯನ್ನು ಪರೀಕ್ಷಿಸಲು ತಾಂತ್ರಿಕ ಮೌಲ್ಯಮಾಪನ ಸಮಿತಿಯನ್ನು ರಚಿಸಲು ನಿರ್ಧರಿಸಲಾಗಿದೆ.
* ಪಶ್ಚಿಮ ಬಂಗಾಳದ ರಾಜ್ಯ ವಿಚಕ್ಷಣಾ ಆಯುಕ್ತ ಕೆ.ಎಸ್.ರಾಮಸುಬ್ಬನ್ ಸಮಿತಿಯ ಅಧ್ಯಕ್ಷರಾಗಲಿದ್ದಾರೆ.
* ಉಳಿದಂತೆ ಕೇಂದ್ರ ವಿದ್ಯುತ್ ಪ್ರಾಧಿಕಾರ,
* ವಿದ್ಯುತ್ ಸಚಿವಾಲಯ ಮತ್ತು
* ರಾಷ್ಟ್ರೀಯ ಎರಡನೇ ಹಂತದ ಉಕ್ಕು ತಂತ್ರಜ್ಞಾನ ಸಂಸ್ಥೆ,
* ಉಕ್ಕು ಸಚಿವಾಲಯ ಮತ್ತು ಇತರರು ಇರಲಿದ್ದಾರೆ.
* ಕಲ್ಲಿದ್ದಲು ಗಣಿ ಹರಾಜು ಪ್ರಕ್ರಿಯೆ ಫೆಬ್ರವರಿ 14 ರಿಂದ ಫೆಬ್ರವರಿ 22ರವರೆಗೆ ನಡೆಯಲಿದೆ.
* ಈ ಹರಾಜು ಪ್ರಕ್ರಿಯೆಯಲ್ಲಿ ಸರ್ಕಾರವು 46 ಗಣಿಗಳನ್ನು ಖಾಸಗಿಯವರಿಗೆ ಹರಾಜು ಮಾಡಲಿದೆ.
* ಎರಡನೇ ಹಂತದ ಹರಾಜು ಪ್ರಕ್ರಿಯೆಯಲ್ಲಿ 23 ಕಲ್ಲಿದ್ದಲು ಗಣಿಗಳನ್ನು ಹರಾಜು ಮಾಡಲಾಗುವುದು.
* ಈ 23 ಗಣಿಗಳು ಮತ್ತು ಉಳಿದಂತೆ ಮೂರನೇ ಹಂತದ 23 ಗಣಿಗಳನ್ನು ಫೆಬ್ರವರಿ 25 ರಿಂದ ಮಾರ್ಚ್ 5ರೊಳಗೆ ಹರಾಜು ಮಾಡಲಾಗುತ್ತದೆ. ಉಳಿದಂತೆ 36 ಗಣಿಗಳನ್ನು ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಹಂಚಿಕೆ ಮಾಡಲಾಗುತ್ತದೆ
No comments:
Post a Comment