ಗದಗ:ಇಂದು ವಿಜ್ಞಾನ, ತಂತ್ರಜ್ಞಾನ ಎಷ್ಟೆಲ್ಲ ಪ್ರಗತಿಹೊಂದುತ್ತಿದ್ದರೂ ಗುರುವಿನ ಸ್ಥಾನ ಮಾತ್ರ ಈತನಕ ಉನ್ನತ ಮಟ್ಟದಲ್ಲಿಯೇ ಇದೆ ಎಂದು
ಸ್ಥಳೀಯ ಅಡವೇಂದ್ರಸ್ವಾಮಿ ಮಠದ ಹೊಸಳ್ಳಿ ಮಹೇಶ್ವರ ಸ್ವಾಮೀಜಿ ಹೇಳಿದರು.
ಕನ್ನಡ ಜನಾಭಿವೃದ್ಧಿ ವೇದಿಕೆ ಆಶ್ರಯದಲ್ಲಿ ಬೆಟಗೇರಿ ಮಂಜು ಶಿಕ್ಷಣ ಸಂಸ್ಥೆಯ ಬುದ್ದಿಮಾಂದ್ಯ ಮಕ್ಕಳ ಶಾಲೆಯಲ್ಲಿ ನಡೆದ ರಾಜ್ಯ ವಿಶೇಷ ಶಿಕ್ಷಕ ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿತರಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶಿಕ್ಷಕ ರಾಷ್ಟ್ರ ರಕ್ಷಕನಾಗಿದ್ದು, ಗುರುವಿಗೆ ತನ್ನದೇ ಮಹತ್ವವಿದೆ. ಹಾಗಾಗಿ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕನ ಪಾತ್ರ ಮಹತ್ವದ್ದಾಗಿದೆ ಎಂದರು.
ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ಎನ್.ಬಳ್ಳಾರಿ ಮಾತನಾಡಿ, ಶಿಕ್ಷಕರಿಗೆ ಸಮಾಜ ಗೌರವಿಸಿದಾಗ ಮಾತ್ರ ಶಿಕ್ಷಕರಿಂದ ಉತ್ತಮ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಸಮಾಜ ಶಿಕ್ಷಕರಲ್ಲಿನ ಕ್ರಿಯಾಶೀಲತೆ ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.
ಪ್ರೊ.ಎಂ.ಕೆ.ಲಮಾಣಿ ಮಾತನಾಡಿ, ಶಿಕ್ಷಕ ಸಮಾಜದ ಸೌಂದರ್ಯ ಹೆಚ್ಚಿಸುವ ರೂವಾರಿಯಾಗಿದ್ದಾನೆ. ಸಮಾಜಕ್ಕೆ ಬೆಳಕು ನೀಡುವ ಚೆತನ್ಯ ಶಕ್ತಿ ಶಿಕ್ಷಕನಿಗಿದೆ. ಈ ಹಿನ್ನೆಲೆಯಲ್ಲಿ ಮನಸ್ಸು ಕಟ್ಟುವ ಕೆಲಸ ಶಿಕ್ಷಕನಿಂದ ಮಾತ್ರ ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ 30ಕ್ಕೂ ಅಧಿಕ ಶಿಕ್ಷಕರನ್ನು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕನ್ನಡ ಜನಾಭಿವದ್ಧಿಯ ರಾಜ್ಯ ಗೌರವ ಅಧ್ಯಕ್ಷ ಮಂಜುನಾಥ ಇಟಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ ಹೂಗಾರ, ತಾಲೂಕು ಗ್ರಾಮೀಣ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಎಸ್.ತಳವಾರ, ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ, ಶಂಕರಸಿಂಗ್ ರಜಪೂತ ಮಾತನಾಡಿದರು. ಕನ್ನಡ ಜನಾಭಿವೃದ್ಧಿ ವೇದಿಕೆಯ ರಾಜ್ಯಾಧ್ಯಕ್ಷ ಹುಲ್ಲೇಶ ಭಜಂತ್ರಿ, ವೆ.ಡಿ.ರತ್ನಗಿರಿ, ಮಂಜು ಶಿ.ಮುಳಗುಂದ, ಬಸವರಾಜ ಪೊಲೀಸ್ ಪಾಟೀಲ, ಮಾರುತಿ ಕವಲೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕನ್ನಡ ಜನಾಭಿವೃದ್ಧಿ ವೇದಿಕೆ ಆಶ್ರಯದಲ್ಲಿ ಬೆಟಗೇರಿ ಮಂಜು ಶಿಕ್ಷಣ ಸಂಸ್ಥೆಯ ಬುದ್ದಿಮಾಂದ್ಯ ಮಕ್ಕಳ ಶಾಲೆಯಲ್ಲಿ ನಡೆದ ರಾಜ್ಯ ವಿಶೇಷ ಶಿಕ್ಷಕ ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿತರಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶಿಕ್ಷಕ ರಾಷ್ಟ್ರ ರಕ್ಷಕನಾಗಿದ್ದು, ಗುರುವಿಗೆ ತನ್ನದೇ ಮಹತ್ವವಿದೆ. ಹಾಗಾಗಿ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕನ ಪಾತ್ರ ಮಹತ್ವದ್ದಾಗಿದೆ ಎಂದರು.
ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ಎನ್.ಬಳ್ಳಾರಿ ಮಾತನಾಡಿ, ಶಿಕ್ಷಕರಿಗೆ ಸಮಾಜ ಗೌರವಿಸಿದಾಗ ಮಾತ್ರ ಶಿಕ್ಷಕರಿಂದ ಉತ್ತಮ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಸಮಾಜ ಶಿಕ್ಷಕರಲ್ಲಿನ ಕ್ರಿಯಾಶೀಲತೆ ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.
ಪ್ರೊ.ಎಂ.ಕೆ.ಲಮಾಣಿ ಮಾತನಾಡಿ, ಶಿಕ್ಷಕ ಸಮಾಜದ ಸೌಂದರ್ಯ ಹೆಚ್ಚಿಸುವ ರೂವಾರಿಯಾಗಿದ್ದಾನೆ. ಸಮಾಜಕ್ಕೆ ಬೆಳಕು ನೀಡುವ ಚೆತನ್ಯ ಶಕ್ತಿ ಶಿಕ್ಷಕನಿಗಿದೆ. ಈ ಹಿನ್ನೆಲೆಯಲ್ಲಿ ಮನಸ್ಸು ಕಟ್ಟುವ ಕೆಲಸ ಶಿಕ್ಷಕನಿಂದ ಮಾತ್ರ ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ 30ಕ್ಕೂ ಅಧಿಕ ಶಿಕ್ಷಕರನ್ನು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕನ್ನಡ ಜನಾಭಿವದ್ಧಿಯ ರಾಜ್ಯ ಗೌರವ ಅಧ್ಯಕ್ಷ ಮಂಜುನಾಥ ಇಟಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ ಹೂಗಾರ, ತಾಲೂಕು ಗ್ರಾಮೀಣ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಎಸ್.ತಳವಾರ, ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ, ಶಂಕರಸಿಂಗ್ ರಜಪೂತ ಮಾತನಾಡಿದರು. ಕನ್ನಡ ಜನಾಭಿವೃದ್ಧಿ ವೇದಿಕೆಯ ರಾಜ್ಯಾಧ್ಯಕ್ಷ ಹುಲ್ಲೇಶ ಭಜಂತ್ರಿ, ವೆ.ಡಿ.ರತ್ನಗಿರಿ, ಮಂಜು ಶಿ.ಮುಳಗುಂದ, ಬಸವರಾಜ ಪೊಲೀಸ್ ಪಾಟೀಲ, ಮಾರುತಿ ಕವಲೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.
'ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯ'
Published: 12 Sep 2013 02:00 AM IST
No comments:
Post a Comment