ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Saturday, March 07, 2015

  Pundalik       Saturday, March 07, 2015


ಗದಗ:ಇಂದು ವಿಜ್ಞಾನ, ತಂತ್ರಜ್ಞಾನ ಎಷ್ಟೆಲ್ಲ ಪ್ರಗತಿಹೊಂದುತ್ತಿದ್ದರೂ ಗುರುವಿನ ಸ್ಥಾನ ಮಾತ್ರ ಈತನಕ ಉನ್ನತ ಮಟ್ಟದಲ್ಲಿಯೇ ಇದೆ ಎಂದು
ಸ್ಥಳೀಯ ಅಡವೇಂದ್ರಸ್ವಾಮಿ ಮಠದ ಹೊಸಳ್ಳಿ ಮಹೇಶ್ವರ ಸ್ವಾಮೀಜಿ ಹೇಳಿದರು.

ಕನ್ನಡ ಜನಾಭಿವೃದ್ಧಿ ವೇದಿಕೆ ಆಶ್ರಯದಲ್ಲಿ ಬೆಟಗೇರಿ ಮಂಜು ಶಿಕ್ಷಣ ಸಂಸ್ಥೆಯ ಬುದ್ದಿಮಾಂದ್ಯ ಮಕ್ಕಳ ಶಾಲೆಯಲ್ಲಿ ನಡೆದ ರಾಜ್ಯ ವಿಶೇಷ ಶಿಕ್ಷಕ ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿತರಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಶಿಕ್ಷಕ ರಾಷ್ಟ್ರ ರಕ್ಷಕನಾಗಿದ್ದು, ಗುರುವಿಗೆ ತನ್ನದೇ ಮಹತ್ವವಿದೆ. ಹಾಗಾಗಿ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕನ ಪಾತ್ರ ಮಹತ್ವದ್ದಾಗಿದೆ ಎಂದರು.

ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ಎನ್.ಬಳ್ಳಾರಿ ಮಾತನಾಡಿ, ಶಿಕ್ಷಕರಿಗೆ ಸಮಾಜ ಗೌರವಿಸಿದಾಗ ಮಾತ್ರ ಶಿಕ್ಷಕರಿಂದ ಉತ್ತಮ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಸಮಾಜ ಶಿಕ್ಷಕರಲ್ಲಿನ ಕ್ರಿಯಾಶೀಲತೆ ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.

ಪ್ರೊ.ಎಂ.ಕೆ.ಲಮಾಣಿ ಮಾತನಾಡಿ, ಶಿಕ್ಷಕ ಸಮಾಜದ ಸೌಂದರ್ಯ ಹೆಚ್ಚಿಸುವ ರೂವಾರಿಯಾಗಿದ್ದಾನೆ. ಸಮಾಜಕ್ಕೆ ಬೆಳಕು ನೀಡುವ ಚೆತನ್ಯ ಶಕ್ತಿ ಶಿಕ್ಷಕನಿಗಿದೆ. ಈ ಹಿನ್ನೆಲೆಯಲ್ಲಿ ಮನಸ್ಸು ಕಟ್ಟುವ ಕೆಲಸ ಶಿಕ್ಷಕನಿಂದ ಮಾತ್ರ ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ 30ಕ್ಕೂ ಅಧಿಕ ಶಿಕ್ಷಕರನ್ನು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕನ್ನಡ ಜನಾಭಿವದ್ಧಿಯ ರಾಜ್ಯ ಗೌರವ ಅಧ್ಯಕ್ಷ ಮಂಜುನಾಥ ಇಟಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ ಹೂಗಾರ, ತಾಲೂಕು ಗ್ರಾಮೀಣ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಎಸ್.ತಳವಾರ, ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ, ಶಂಕರಸಿಂಗ್ ರಜಪೂತ ಮಾತನಾಡಿದರು. ಕನ್ನಡ ಜನಾಭಿವೃದ್ಧಿ ವೇದಿಕೆಯ ರಾಜ್ಯಾಧ್ಯಕ್ಷ ಹುಲ್ಲೇಶ ಭಜಂತ್ರಿ, ವೆ.ಡಿ.ರತ್ನಗಿರಿ, ಮಂಜು ಶಿ.ಮುಳಗುಂದ, ಬಸವರಾಜ ಪೊಲೀಸ್ ಪಾಟೀಲ, ಮಾರುತಿ ಕವಲೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.


'ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯ'


ಹಾಸನ: ಯಾವುದೇ ಅಧಿಕಾರಿ ಕಾರ್ಯದ ಸಮಯ ಕೇವಲ ಕಚೇರಿ ವೇಳೆಯಾಗಿರುತ್ತದೆ. ಆದರೆ ಶಿಕ್ಷಕ ಮಾತ್ರ 24 ಗಂಟೆಯೂ ವೃತ್ತಿಪರನಾಗಿರುತ್ತಾನೆ ಹಾಗೂ ನಿರಂತರವಾಗಿ ವಿದ್ಯಾರ್ಥಿಯ ವ್ಯಕ್ತಿತ್ವ ರೂಪಿಸುವಲ್ಲಿ ಕಾರಣನಾಗಿದ್ದಾನೆ ಎಂದು ಸಾಹಿತಿ ಚಂದ್ರಕಾಂತ ಪಡೆಸೂರ್ ಅಭಿಪ್ರಾಯಪಟ್ಟರು.
ನಗರದ ಬಿಳಿಯಮ್ಮ ಈರೇಗೌಡ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೋಣಿ, ಏಣಿ ಹಾಗೂ ಶಿಕ್ಷಕನ ಗುರಿ ಒಂದೇ. ದೋಣಿ ದಡದಿಂದ ದಡಕ್ಕೆ ದಾಟಿಸುತ್ತದೆ, ತಾನು ಮಾತ್ರ ಹಾಗೆಯೇ ಉಳಿಯುತ್ತದೆ. ಹಾಗೆ ಏಣಿ ಮೇಲೇರುವ ವ್ಯಕ್ತಿಗೆ ನೆರವಾಗಿ ತಾನು ಹಾಗೆಯೇ ಅದೇ ಸ್ಥಾನದಲ್ಲಿ ಉಳಿಯುವಂತೆ ಶಿಕ್ಷಕ ವಿದ್ಯಾರ್ಥಿಗಳನ್ನು ಗುರಿ ತಲುಪಿಸಲು ಶ್ರಮಿಸುತ್ತಾನೆ ಎಂದರು.
ಪ್ರಾಧ್ಯಾಪಕ ಅಜಿತ್ಪ್ರಸಾದ್ ಮಾತನಾಡಿ, ಗುರುವಿನ ಅಗತ್ಯ ಕೇವಲ ಮಾನವರಿಗಷ್ಟೇ ಅಲ್ಲದೇ, ದೇವ ಮಾನವರೂ ಕೂಡ ಗುರುವಿನಿಂದ ಮಾರ್ಗದರ್ಶನ ಪಡೆಯುತ್ತಾರೆ ಎಂದು ತಿಳಿಸಿದರು.
ಡಾ. ಸರ್ವಪಲ್ಲಿ ರಾಧಕೃಷ್ಣನ್ ಶಿಕ್ಷಕ ವೃತ್ತಿಯಿಂದ ದೇಶದ ಉಪ ರಾಷ್ಟ್ರಪತಿಯಾಗಿ, ರಾಷ್ಟ್ರಪತಿಯಾಗಿ ಶಿಕ್ಷಕ ಸಮುದಾಯದ ಮಹತ್ವವನ್ನು ಜಗತ್ತಿಗೆ ತೋರಿಸಿದರು ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಬಿ.ಈ. ಜಗದೀಶ್ ಮಾತನಾಡಿ, ಗುರು ಮತ್ತು ಗುರು ಪರಂಪರೆಯ ಬಗ್ಗೆ ತಿಳಿಸಿದರು. ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ರಾಷ್ಟ್ರಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ ಶಿಕ್ಷಕನ ಪಾತ್ರ ಬಹಳ ಮುಖ್ಯವೆಂದು ಹೇಳಿದರು.
ನಿವೃತ್ತ ಶಿಕ್ಷಕ ಎ. ವೇಣುಗೋಪಲ್ ಹಾಗೂ ಚಂದ್ರಕಾಂತ್ ಪಡೆಸೂರ್
logoblog

Thanks for reading

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *