ಜೈಶಂಕರ್ ಆಫ್ಘಾನ್ ಭೇಟಿ; ಅಧ್ಯಕ್ಷ ಅಶ್ರಫ್ ಘನಿ ಜತೆ ಚರ್ಚೆ
(4 Mar) ಕಾಬೂಲ್: ಸಾರ್ಕ್ ಯಾತ್ರೆಯ ಅಂಗವಾಗಿ ಇಂದು ಆಫ್ಘಾನಿಸ್ತಾನದ ಕಾಬೂಲ್ಗೆ ಭೇಟಿ ನೀಡಿರುವ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಆಫ್ಘಾನಿಸ್ತಾನದಲ್ಲಿ ಭಾರತ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳು ಮತ್ತು ಆಫ್ಘಾನಿಸ್ತಾನದ ಅಂತರಿಕ ಸುರಕ್ಷತೆಯ ವಿಚಾರದ ಕುರಿತು ಚರ್ಚೆ ನಡೆಸಿದರು.
*ಸಾರ್ಕ್ ದೇಶಗಳ ನಡುವೆ ಪ್ರಾದೇಶಿಕ ಮತ್ತು ದ್ವಿಪಕ್ಷೀಯ ಸಹಕಾರವನ್ನು ವೃದ್ಧಿಸುವ ಸಲುವಾಗಿ ಜೈಶಂಕರ್ 'ಸಾರ್ಕ್ ಯಾತ್ರೆ' ಕೈಗೊಂಡಿದ್ದಾರೆ. ಮಂಗಳವಾರ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಜೈಶಂಕರ್ ಇಂದು ಇಸ್ಲಾಮಾಬಾದ್ನಿಂದ ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್ಗೆ ಆಗಮಿಸಿದರು. ಜೈಶಂಕರ್ ಆಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಮತ್ತು ಆಫ್ಘಾನಿಸ್ತಾನ ಸಿಇಒ ಅಬ್ದುಲ್ಲಾ ಅಬ್ದುಲ್ಲಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಭಾರತವು ಆಫ್ಘಾನಿಸ್ತಾನ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳು, ದೇಶದಲ್ಲಿ ಸಂಪರ್ಕ ವ್ಯವಸ್ಥೆ ವೃದ್ಧಿಸಲು ಹಾಗೂ ಆಂತರಿಕ ಸುರಕ್ಷತೆಯ ವಿಚಾರವಾಗಿ ಭಾರತ ನೆರವು ನೀಡುತ್ತಿರುವ ವಿಚಾರದ ಕುರಿತು ಚರ್ಚೆ ನಡೆಸಲಾಯಿತು. ಆಫ್ಘಾನಿಸ್ತಾನಿ ನಾಯಕರು ಭಾರತವು ಆಫ್ಘಾನಿಸ್ತಾನದೊಂದಿಗೆ ಉತ್ತಮ ಭಾಂದವ್ಯ ಹೊಂದಿರುವ ಕುರಿತು ಸಂತಸ ವ್ಯಕ್ತಪಡಿಸಿದರು. ನಂತರ ಆಫ್ಘಾನಿಸ್ತಾನ ವಿದೇಶಾಂಗ ಕಾರ್ಯದರ್ಶಿ ಸಲಾಹುದೀನ್ ರಬ್ಬಾನಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ನಂತರ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ, ಉಪ ವಿದೇಶಾಂಗ ಸಚಿವ
*ಸಾರ್ಕ್ ದೇಶಗಳ ನಡುವೆ ಪ್ರಾದೇಶಿಕ ಮತ್ತು ದ್ವಿಪಕ್ಷೀಯ ಸಹಕಾರವನ್ನು ವೃದ್ಧಿಸುವ ಸಲುವಾಗಿ ಜೈಶಂಕರ್ 'ಸಾರ್ಕ್ ಯಾತ್ರೆ' ಕೈಗೊಂಡಿದ್ದಾರೆ. ಮಂಗಳವಾರ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಜೈಶಂಕರ್ ಇಂದು ಇಸ್ಲಾಮಾಬಾದ್ನಿಂದ ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್ಗೆ ಆಗಮಿಸಿದರು. ಜೈಶಂಕರ್ ಆಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಮತ್ತು ಆಫ್ಘಾನಿಸ್ತಾನ ಸಿಇಒ ಅಬ್ದುಲ್ಲಾ ಅಬ್ದುಲ್ಲಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಭಾರತವು ಆಫ್ಘಾನಿಸ್ತಾನ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳು, ದೇಶದಲ್ಲಿ ಸಂಪರ್ಕ ವ್ಯವಸ್ಥೆ ವೃದ್ಧಿಸಲು ಹಾಗೂ ಆಂತರಿಕ ಸುರಕ್ಷತೆಯ ವಿಚಾರವಾಗಿ ಭಾರತ ನೆರವು ನೀಡುತ್ತಿರುವ ವಿಚಾರದ ಕುರಿತು ಚರ್ಚೆ ನಡೆಸಲಾಯಿತು. ಆಫ್ಘಾನಿಸ್ತಾನಿ ನಾಯಕರು ಭಾರತವು ಆಫ್ಘಾನಿಸ್ತಾನದೊಂದಿಗೆ ಉತ್ತಮ ಭಾಂದವ್ಯ ಹೊಂದಿರುವ ಕುರಿತು ಸಂತಸ ವ್ಯಕ್ತಪಡಿಸಿದರು. ನಂತರ ಆಫ್ಘಾನಿಸ್ತಾನ ವಿದೇಶಾಂಗ ಕಾರ್ಯದರ್ಶಿ ಸಲಾಹುದೀನ್ ರಬ್ಬಾನಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ನಂತರ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ, ಉಪ ವಿದೇಶಾಂಗ ಸಚಿವ
No comments:
Post a Comment