ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆ ಅಡಿ ಮಂಗಳೂರಿನ ಸಮಗ್ರ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನದಲ್ಲಿ 15 ಕೋಟಿ ರೂ.ಗಳನ್ನು ಕುದ್ರೋಳಿ ಕಸಾಯಿಖಾನೆ ಅಭಿವೃದ್ಧಿಗೆ ನೀಡುವುದಾಗಿ ಘೋಷಿಸಿರುವ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ನಡೆ ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಗೋಶಾಲೆ ನಿರ್ಮಾಣ, ನಿರ್ವಹಣೆಗೆ ಆಸಕ್ತಿ ತೋರದೆ ಅನುದಾನವನ್ನೂ ನೀಡದ ರಾಜ್ಯ ಸರ್ಕಾರ ಜಾನುವಾರುಗಳನ್ನು ಅಕ್ರಮ ಸಾಗಾಟ ಮಾಡಿ ಗೋಹತ್ಯೆ ನಡೆಸಲಾಗುತ್ತಿದೆ ಎಂಬ ಆರೋಪವಿರುವ ಕಸಾಯಿಖಾನೆಗೆ ಅನುದಾನದ ಭರವಸೆ ನೀಡಿರುವುದು ಚರ್ಚೆಗೊಳಪಟ್ಟಿದೆ.
15 ಕೋಟಿ ರೂ. ಏಕೆ?:
ಲಭ್ಯ ಮಾಹಿತಿ ಪ್ರಕಾರ ಸ್ಮಾರ್ಟ್ಸಿಟಿ ಯೋಜನೆಯಡಿ ನಿರ್ವಿುಸಲು ಹೊರಟಿರುವ ಸುಸಜ್ಜಿತ ಅತ್ಯಾಧುನಿಕ ಕಸಾಯಿಖಾನೆ ಇದಾಗಿದೆ. ಇದರ ತ್ಯಾಜ್ಯ ಸಂಸ್ಕರಣಾ ಸ್ಥಾವರಕ್ಕೆ 5 ಕೋಟಿ ರೂ. ಅಗತ್ಯವಿದೆ. ಸುಸಜ್ಜಿತ ಕಟ್ಟಡ, ವಧಾಗೃಹ, ಪ್ರಾಣಿಗಳನ್ನು ಕಟ್ಟಿ ಹಾಕುವ ಜಾಗ ಮತ್ತಿತರ ಉದ್ದೇಶಕ್ಕೆಂದು ಒಟ್ಟಾರೆಯಾಗಿ 15 ಕೋಟಿ ರೂ. ಕ್ರಿಯಾಯೋಜನೆ ರೂಪಿಸಲಾಗಿದೆ. ವಿಸõತ ಕಾರ್ಯಯೋಜನೆ- ಡಿಪಿಆರ್ ಇನ್ನೂ ಆಗಿಲ್ಲ. ಇದಕ್ಕೆ ಸ್ಮಾರ್ಟ್ಸಿಟಿ ಉನ್ನತ ಸಮಿತಿಯಿಂದ ಅನುಮೋದನೆಯೂ ದೊರಕಬೇಕಿದೆ ಎನ್ನುವುದು ಸ್ಮಾರ್ಟ್ಸಿಟಿ ಅಧಿಕಾರಿಗಳು ನೀಡುವ ವಿವರಣೆ.
ಗೋಶಾಲೆಗಳ ಕಡೆಗಣನೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12ಕ್ಕೂ ಅಧಿಕ ಗೋಶಾಲೆಗಳಿದ್ದು, ಇವುಗಳಿಗೆ ಸರಿಯಾಗಿ ಅನುದಾನ ಬರುತ್ತಿಲ್ಲ. ಎಲ್ಲ ಅರ್ಹತೆಗಳಿದ್ದರೂ 2008ರಲ್ಲಿ ಸುವರ್ಣ ಕರ್ನಾಟಕ ಗೋತಳಿ ಸಂರಕ್ಷಣಾ ಯೋಜನೆಯಡಿ ಅನುದಾನ ಪಡೆಯಲಾಗಿದೆ ಎಂಬ ನೆಪದಲ್ಲಿ ಈಗ ನಿರ್ವಹಣೆಗೆ ಅನುದಾನ ನಿರಾಕರಿಸಲಾಗುತ್ತಿದೆ. ಸರಿಯಾಗಿ ಹಣ ವಿತರಣೆಯಾಗದ ಹಿನ್ನೆಲೆಯಲ್ಲಿ ಈ ಬಾರಿ 6 ಗೋಶಾಲೆಗಳಷ್ಟೇ ಅನುದಾನಕ್ಕೆ ಅರ್ಜಿ ಸಲ್ಲಿಸಿದ್ದು, ಇದರಲ್ಲಿ 2 ಅರ್ಜಿ ತಡೆಯಲಾಗಿದೆ.
ಪಜೀರು ಗೋ ವನಿತಾಶ್ರಯ ಟ್ರಸ್ಟ್ ಗೋಶಾಲೆ ಮತ್ತು ವಿಟ್ಲದ ಮುಳಿಯದಲ್ಲಿರುವ ಗೋಗ್ರಾಸ ಮಂಡಳಿ ಅಮೃತಧಾರೆ ಗೋಶಾಲೆ ಅನುದಾನದಿಂದ ವಂಚಿತವಾಗಿವೆ. ಪಜೀರು ಗೋಶಾಲೆಯಲ್ಲಿ 300ಕ್ಕೂ ಅಧಿಕ ಗೋವುಗಳಿವೆ. ಇದರಲ್ಲಿ ಬಹುತೇಕ ಗೊಡ್ಡು ದನಗಳು ಹಾಗೂ ಎತ್ತುಗಳು. ಹಾಲು ಕರೆಯುವಂತಹವು 30ರಷ್ಟಿವೆ. ಇವುಗಳಿಗೆ ಮಾಸಿಕ ಖರ್ಚಿಗೆ 6.5 ಲಕ್ಷ ರೂ. ಬೇಕು. ಅಂತಹ ದನಗಳನ್ನು ಪೊಲೀಸರು ಇಲ್ಲಿ ತಂದು ಬಿಡುತ್ತಾರೆ. ಆದರೆ ಇದರ ನಿರ್ವಹಣೆಗೆ ನೆರವು ನೀಡುತ್ತಿಲ್ಲ. ಹೆಚ್ಚಿನ ಗೋ ಶಾಲೆಗಳ ಸ್ಥಿತಿ ಇದೇ ಆಗಿದೆ ಎನ್ನುತ್ತಾರೆ ಟ್ರಸ್ಟ್ ಸಂಚಾಲಕ ಡಾ.ಪಿ.ಅನಂತಕೃಷ್ಣ ಭಟ್. ಮುಳಿಯದ ಗೋಶಾಲೆಯ ಪರಿಸ್ಥಿತಿಯೂ ಇದೇ. ಇಲ್ಲಿ 50ಕ್ಕೂ ಅಧಿಕ ಅಧಿಕ ದನಗಳಿವೆ. 2008ರಲ್ಲಿ ತಳಿ ಅಭಿವೃದ್ಧಿಗೆ ಹೊರತುಪಡಿಸಿ ನಿರ್ವಹಣೆ ವೆಚ್ಚವಾಗಿ ಪ್ರತಿ ದನಕ್ಕೆ 17 ರೂ.ನಂತೆ ಸಿಗುತ್ತಿಲ್ಲ. ನಾವು ಅಂದು ಅನುದಾನ ಪಡೆದಿದ್ದು, ತಳಿ ಅಭಿವೃದ್ಧಿಗೆ. ಈಗ ನಿರ್ವಹಣೆಗೆ ಹಣ ಕೇಳುತ್ತಿದ್ದೇವೆ. ಆದರೆ ಸರ್ಕಾರ ತಳಿ ಅಭಿವೃದ್ಧಿಗಾಗಿ ಪಡೆದಿದ್ದನ್ನು ತೋರಿಸಿ ಈಗ ನಿರಾಕರಿಸುತ್ತಿದೆ ಎನ್ನುತ್ತಾರೆ ಅಮೃತಧಾರೆಯ ಕಾರ್ಯದರ್ಶಿ ದೇಲಂತಬೆಟ್ಟು ನಾರಾಯಣ ಭಟ್.
ಉಡುಪಿ ಜಿಲ್ಲೆಯಲ್ಲಿ 3 ನೋಂದಾಯಿತ ಗೋಶಾಲೆಗಳಿವೆ. ಶಿರೂರು, ನೀಲಾವರ ಹಾಗೂ ಕಾರ್ಕಳ ವೆಂಕಟರಮಣ ಗೋಶಾಲೆಗಳಿಗೆ ಕಳೆದ ಸಾಲಿನಲ್ಲಿ ಸರ್ಕಾರ ಒಟ್ಟು 20 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ. ಸ್ಥಳೀಯ ತಳಿಗಳ ಅಭಿವೃದ್ಧಿ ಮತ್ತು ಸಾಕಾಣಿಕೆಗೆ ಸರ್ಕಾರ ಪ್ರತಿವರ್ಷ ಅನುದಾನ ನೀಡುತ್ತದೆ. ಶಿರೂರು ಗೋಶಾಲೆಯಲ್ಲಿ 80, ನೀಲಾವರದಲ್ಲಿ 600, ಕಾರ್ಕಳದಲ್ಲಿ 60 ಸ್ಥಳೀಯ ದನಗಳಿವೆ. ಉಳಿದ ದನಗಳ ಖರ್ಚುವೆಚ್ಚವನ್ನು ಆಯಾ ಟ್ರಸ್ಟ್ಗಳೇ ಭರಿಸಬೇಕಾಗಿದೆ.
No comments:
Post a Comment