ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ಸಪ್ತ ನಗರಗಳು ಸ್ಮಾರ್ಟ್‌ ಸಿಟಿಗಳು ಆಗುವುದು ಯಾವಾಗ | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Tuesday, September 18, 2018

ಸಪ್ತ ನಗರಗಳು ಸ್ಮಾರ್ಟ್‌ ಸಿಟಿಗಳು ಆಗುವುದು ಯಾವಾಗ

  Pundalik       Tuesday, September 18, 2018

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2015ನೇ ಜೂನ್‌25ರಂದು ಚಾಲನೆ ನೀಡಿದ ಸ್ಮಾರ್ಟ್‌ ಸಿಟಿ ಅಭಿಯಾನ ವ್ಯವಸ್ಥಿತವಾಗಿ ಬಳಕೆಯಾಗಿದ್ದರೆ, ಸಾಲದ ಸುಳಿಯಲ್ಲಿರುವ ಇಲ್ಲವೇ ಆರ್ಥಿಕ ಸಂಕಷ್ಟದಲ್ಲಿರುವ ನಮ್ಮ ಎರಡನೇ ಸ್ತರದ ನಗರಗಳ ಸ್ಥಳೀಯಾಡಳಿತ ಸಂಸ್ಥೆಗಳ ಪಾಲಿಗೆ ವರದಾನವಾಗಬೇಕಿತ್ತು. ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ಪ್ರತಿ ವರ್ಷ ನೂರು ಕೋಟಿ ರೂ. ಪಡೆಯಲು ಅವಕಾಶವಿರುವ ಈ ಯೋಜನೆ ಭಾರತದ ಇತರೆ ನಗರಗಳಂತೆ ಕರ್ನಾಟಕದಲ್ಲೂ ಯಶಸ್ವಿಯಾಗಿಲ್ಲ. ವಿಜಯ ಕರ್ನಾಟಕ ನಡೆಸಿದ ರಿಯಾಲಿಟಿ ಚೆಕ್‌ ಕೂಡ, ಇಡೀ ಸ್ಮಾರ್ಟ್‌ ಯೋಜನೆಯಲ್ಲಿ ಅಡಕವಾಗಿರುವ ವಿಚಿತ್ರ ವೈರುಧ್ಯದ ಮೇಲೆ ಬೆಳಕು ಚೆಲ್ಲಿದೆ. ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹಣ ನೀಡಲು ಕೇಂದ್ರ ಸರಕಾರ ಸಿದ್ಧವಿದ್ದರೂ, ಅದಕ್ಕಾಗಿ ಸರಿಯಾದ ಯೋಜನೆ-ಯೋಜನೆ ಸಿದ್ಧಪಡಿಸಲು ಸ್ಥಳೀಯ ಆಡಳಿತಗಳಿಗೆ ಸಾಧ್ಯವಾಗುತ್ತಿಲ್ಲ. ಸುವ್ಯವಸ್ಥಿತ ನಗರಗಳನ್ನು ಕಟ್ಟಲು ನಗರ ಯೋಜನಾ ತಜ್ಞರೇ ಇಲ್ಲ . ಕರ್ನಾಟಕದ ಏಳು ನಗರಗಳಲ್ಲಿ ಸ್ಮಾರ್ಟ್‌ ಸಿಟಿಯ ಸ್ಥಿತಿ ಗತಿ ಏನಾಗಿದೆ ಎಂಬುದರ ಕುರಿತು ಒಂದು ನೋಟ: 

ಅನುಷ್ಠಾನ ವಿಧಿ ವಿಧಾನ ಹೇಗೆ? 

ಯೋಜನೆಯಲ್ಲಿ ಸಾವಿರಾರು ಕೋಟಿ ರೂ. ಹರಿದಾಡುವುದರಿಂದ ಹಾಗೂ ಈ ಹಣ ಪ್ರಾಮಾಣಿಕವಾಗಿ ಸದ್ಬಳಕೆಯಾಗಲೆಂದು ಕೇಂದ್ರ ಸರಕಾರ ಸ್ಮಾರ್ಟ್‌ ಸಿಟಿ ಯೋಜನೆ ಕಾಮಗಾರಿ ಕೈಗೆತ್ತಿಕೊಳ್ಳಲು ವಿಶೇಷ ವ್ಯವಸ್ಥೆ ರೂಪಿಸಿದೆ. ಅದರ ಪ್ರಕಾರ, ಈ ಯೋಜನೆಗೆ ಆಯ್ಕೆಯಾದ ನಗರಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಪ್ರತ್ಯೇಕವಾದ ವಿಶೇಷ ಉದ್ದೇಶ ವಾಹಕ (ಸ್ಪೆಷಲ್‌ ಪರ್ಪಸ್‌ ವೆಹಿಕಲ್‌) ಹೆಸರಲ್ಲಿ ನೋಂದಾಯಿತ ಕಂಪನಿ ಸ್ಥಾಪಿಸಿ, ಇದಕ್ಕೆ ಐಎಎಸ್‌/ಕೆಎಎಸ್‌ ದರ್ಜೆಯ ಪೂರ್ಣಾವಧಿ ಅಧಿಕಾರಿಯನ್ನು ಎಂಡಿ ಆಗಿ ನೇಮಿಸಬೇಕು. ಜತೆಗೆ ಸ್ಥಳೀಯ ಸಂಸ್ಥೆ, ರಾಜ್ಯ ಹಾಗೂ ಕೇಂದ್ರ ಸರಕಾರ ಪ್ರತಿನಿಧಿಸುವ 15 ಜನ ನಿರ್ದೇಶಕರು ಇರಬೇಕು. ಈ ಕಚೇರಿಗೆ ಪ್ರತ್ಯೇಕ ಸಿಬ್ಬಂದಿ, ಕಚೇರಿಯೂ ಇರಬೇಕು. ಬಳಿಕವಷ್ಟೇ ಆರ್ಥಿಕ ಅಧಿಕಾರ ಸಿಗುತ್ತೆ. ಯೋಜನೆ ಮೇಲ್ವಿಚಾರಣೆಗೆ ಪಿಎಂಸಿ(ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್‌ ಕನ್ಸಲ್‌ಟೆಂಟ್‌) ಆಯ್ಕೆಯಾಗಬೇಕು. ಸ್ಮಾರ್ಟ್‌ ಸಿಟಿ ಕಾಮಗಾರಿಗಳ ಯೋಜನೆ, ಮಂಜೂರಾತಿ, ಅನುದಾನ ಬಳಕೆ, ಕೇಂದ್ರ-ರಾಜ್ಯ ಸರಕಾರಗಳೊಂದಿಗೆ ವ್ಯವಹಾರ- ಎಲ್ಲವನ್ನೂ ಈ ಎಸ್‌ಪಿವಿ ಕಂಪನಿಯೇ ನಿರ್ವಹಿಸಬೇಕು. 

ಸ್ಮಾರ್ಟ್‌ ಅಂದ್ರೆ ಅರ್ಥವಾಗಿಲ್ಲ ! 

ಶಿವಮೊಗ್ಗದಲ್ಲಿ ಸ್ಮಾರ್ಟ್‌ ಸಿಟಿ ಬಗ್ಗೆ ಅಧಿಕಾರಿಗಳನ್ನು ಮಾತನಾಡಿಸಿದರೆ, ಇಡೀ ಯೋಜನೆ ಬಗ್ಗೆ ಅವರಿಗೆ ಸ್ಪಷ್ಟ ಕಲ್ಪನೆಯೇ ಇಲ್ಲ ಎಂಬುದು ಅರಿವಿಗೆ ಬರುತ್ತದೆ. ನಗರದ ಸೌಂದರ್ಯ ಹೆಚ್ಚಿಸಲು ಒಂದು ಕ್ಲಾಕ್‌ ಟವರ್‌, ರಸ್ತೆ ಕಾಮಗಾರಿಗಳು, ನೆಹರೂ ಕ್ರೀಡಾಂಗಣದಲ್ಲಿ ವಾಲಿಬಾಲ್‌, ಹಾಕಿ ಕೋರ್ಟ್‌ ನಿರ್ಮಾಣ, ಮುಂಜಾನೆಯ ವಾಹು ವಿಹಾರಕ್ಕಾಗಿ ವಾಕಿಂಗ್‌ ಪಾಥ್‌ ಸೇರಿದಂತೆ ನಾನಾ ಕಾಮಗಾರಿಗಳನ್ನು ಈ ಯೋಜನೆಯಡಿ ಆರಂಭಿಸುವ ಲಕ್ಷಣಗಳು ಕಾಣುತ್ತಿವೆ. ಆದರೆ, ಈ ಎಲ್ಲ ಯೋಜನೆಗಳು ಹೇಗಿವೆ ? ಅವುಗಳ ಸ್ವರೂಪ ಹೇಗಿದೆ ಎಂಬುದರ ಬಗ್ಗೆ ಅಧಿಕಾರಿಗಳಿಗೆ ಸ್ಪಷ್ಟತೆ ಇಲ್ಲ. ಎಸ್‌ವಿಪಿ ರಚನೆಯಾಗಿದೆಯಾದರೂ ಪ್ರತ್ಯೇಕ ಎಂಡಿ ನೇಮಕವಾಗಿಲ್ಲ. ಪಾಲಿಕೆ ಆಯುಕ್ತರೇ ಎಂಡಿ ಆಗಿ ಹೆಚ್ಚುವರಿ 

ಗೊಂದಲವೋ ಗೊಂದಲ! 

ಬೆಳಗಾವಿಯನ್ನು ಸ್ಮಾರ್ಟ್‌ ಸಿಟಿ ಮಾಡಲು 396 ಕೋಟಿ ರೂ. ಬಿಡುಗಡೆಯಾಗಿದ್ದು, ಈಗಾಗಲೇ 11 ಕೋಟಿ ರೂ. ಖರ್ಚಾಗಿದೆ. ಉಳಿದಂತೆ 116 ಕೋಟಿ ರೂ. ಕಾಮಗಾರಿ ಆರಂಭವಾಗಿದ್ದು, 250 ಕೋಟಿ ಟೆಂಡರ್‌ ಆಗಿದೆ ಎಂದು ಅಧಿಕಾರಿಗಳು ಅಂಕಿ-ಸಂಖ್ಯೆಯ ವಿವರಣೆ ನೀಡುತ್ತಾರೆ. 

ಆದರೆ, ಕಾಮಗಾರಿಗಳು ತಡವಾಗುತ್ತಿವೆ ಏಕೆ ಎಂದರೆ ಅವರ ಬಳಿ ಉತ್ತರವಿಲ್ಲ. ಸ್ಪೆಷಲ್‌ ಪರ್ಪಸ್‌ ವೆಹಿಕಲ್‌(ಕಂಪನಿ) ಕಾರ್ಯನಿರ್ವಹಣೆ ಬಗ್ಗೆಯೇ ಅಧಿಕಾರಿಗಳಿಗೆ ಗೊಂದಲವಿದೆ. ಯೋಜನೆ ಮೇಲ್ವಿಚಾರಣೆಗಾಗಿ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್‌ ಕನ್ಸಲ್‌ಟೆಂಟ್‌ ನೇಮಕ ಮಾಡಿಕೊಳ್ಳಲು ವರ್ಷವೇ ಬೇಕಾಯಿತು. ಈ ನಡುವೆ ಪದೇಪದೆ ಉಸ್ತುವಾರಿ ಅಧಿಕಾರಿಗಳು ಬದಲಾದರು. ಕೆಲವು ಚುನಾಯಿತ ಪ್ರತಿನಿಧಿಗಳಂತೂ ಸ್ಮಾರ್ಟ್‌ ಬಗ್ಗೆ ಸಣ್ಣತನದಲ್ಲಿ ಯೋಚಿಸಿದರು. 

''ಬೆಳಗಾವಿ ಸುಂದರಗೊಂಡರೆ ಇದರ ಶ್ರೇಯಸ್ಸು ಕೇಂದ್ರ ಸರಕಾರಕ್ಕೆ ಸಲ್ಲುತ್ತದೆ,'' ಎಂಬ ತಾತ್ಸಾರವೂ ಕೆಲಸ ಮಾಡಿತು. ಸ್ಥಳೀಯ ಜನಪ್ರತಿನಿಧಿಗಳ ತೀವ್ರ ಹಸ್ತಕ್ಷೇಪದಿಂದ ಕಾಮಗಾರಿಗಳ ಡಿಪಿಆರ್‌ಗಳು ಪದೇ ಪದೆ ಬದಲಾದವು. ಚುನಾವಣೆ ಮತ್ತು ಮಳೆಗಾಲವೂ ವಿಳಂಬಕ್ಕೆ ಕಾರಣವಾಯಿತು ! 

ಅರ್ಹ ಗುತ್ತಿಗೆದಾರರೇ ಇಲ್ಲ 

ಸ್ಮಾರ್ಟ್‌ ಸಿಟಿ ಅಭಿಯಾನದ ಗುಣಮಟ್ಟಕ್ಕೆ ತಕ್ಕಂತೆ ಕಾಮಗಾರಿ ಕೈಗೆತ್ತಿಕೊಳ್ಳಲು ಅರ್ಹ ಗುತ್ತಿಗೆದಾರರೇ ಇಲ್ಲವಂತೆ! ಯೋಜನೆ ತಡವೇಕೆ ಎಂದು ಪ್ರಶ್ನಿಸಿದರೆ ಅಧಿಕಾರಿಯೊಬ್ಬರು ನೀಡಿದ ಉತ್ತರವಿದು. ''ಈ ಕಾಮಗಾರಿ ನಡೆಸಲು ಸ್ಮಾರ್ಟ್‌ ಸಿಟಿಯಂತಹ ಪ್ರಾಜೆಕ್ಟ್ ನಿರ್ವಹಿಸಿದ ಪ್ರಥಮ ದರ್ಜೆ ಗುತ್ತಿಗೆದಾರರೇ ಬೇಕು. ಅಂದರೆ ಕೋಟ್ಯಂತರ ರೂ. ವಹಿವಾಟು ಹೊಂದಿರುವ ಗುತ್ತಿಗೆದಾರರು ಬೇಕಾಗುತ್ತದೆ. ಸ್ಥಳೀಯ ಗುತ್ತಿಗೆದಾರರಿಗೆ ಇದು ಸಾಧ್ಯವಿಲ್ಲ. ಸ್ಮಾರ್ಟ್‌ ಸಿಟಿ ನೀತಿ ನಿಯಮಗಳೇ ಯೋಜನೆಗೆ ಅಡ್ಡಿಯಾಗಿವೆ. ವಿದ್ಯುತ್‌ ಚಿತಾಗಾರ ಟೆಂಡರ್‌ಗೆ ಇದುವರೆಗೂ ಯಾವ ಗುತ್ತಿಗೆದಾರರು ಮುಂದೆ ಬಂದಿಲ್ಲ. ನಾವೇನು ಮಾಡುವುದು,'' ಎಂಬುದು ಅವರ ಅಸಹಾಯಕ ಪ್ರಶ್ನೆ. 

ಹುಬ್ಬಳ್ಳಿ ಧಾರವಾಡದಲ್ಲಿ ಗುತ್ತಿಗೆದಾರರು ರಸ್ತೆ, ಗಟಾರು, ತಗ್ಗು ಗುಂಡಿ ಮುಚ್ಚುವುದು, ಯುಜಿಡಿ ಕಾಮಗಾರಿಗಳನ್ನೇ ಹೆಚ್ಚಾಗಿ ನಿರ್ವಹಿಸುತ್ತಿದ್ದಾರೆ.ಆ ಕಾಮಗಾರಿ ಗುಣಮಟ್ಟದ ಬಗ್ಗೆ ವ್ಯಾಪಕ ಆಕ್ಷೇಪಗಳಿವೆ. ಇವರನ್ನು ನಂಬುವಂತಿಲ್ಲ. ಅರ್ಹ ಗುತ್ತಿಗೆದಾರರು ಸಿಗುತ್ತಿಲ್ಲ . ಯೋಜನೆ ವಿಳಂಬಕ್ಕೆ ಇದೂ ಒಂದು ಕಾರಣ! 

ಅನುಮೋದನೆಯೇ ವಿಳಂಬ! 

''ತುಮಕೂರು 2ನೇ ಹಂತದ ಸ್ಮಾರ್ಟ್‌ಸಿಟಿ ಯೋಜನೆಗೆ ಆಯ್ಕೆಯಾಗಿ 210 ಕೋಟಿ ರೂ. ಅನುದಾನ ಪಡೆದಿದೆ. ಆದರೆ, ಕಾಮಗಾರಿಗಳಿಗೆ ಅನುಮೋದನೆ ದೊರೆಯುವುದು ಮತ್ತು ಕಾಮಗಾರಿಗೆ ಸಂಬಂಧಿಸಿದಂತೆ ಸರ್ವೆ ಕಾರ್ಯಗಳು ವಿಳಂಬವಾಗಿವೆ. ಹಾಗಾಗಿ ಕಾಮಗಾರಿಗಳು ಅಷ್ಟಾಗಿ ನಡೆದಿಲ್ಲ,'' ಎಂಬುದು ತುಮಕೂರು ಅಧಿಕಾರಿಯೊಬ್ಬರ ವಿವರಣೆ. 

ಅನುದಾನ ದುರ್ಬಳಕೆಯಾಗಬಾರದೆಂಬ ಕಾರಣಕ್ಕೆ ಎಸ್ವಿಪಿ ಎಂಡಿಯಾಗಿ ಕೆಎಎಸ್‌ ದರ್ಜೆ ಅಧಿಕಾರಿ ನೇಮಕವಾಗಿದ್ದಾರೆ. ಮೇಲ್ವಿಚಾರಣೆ ಸಂಬಂಧ ಪ್ರಾಜೆಕ್ಟ್ ಮ್ಯಾನೇಜ್‌ ಮೆಂಟ್‌ ಕನ್ಸಲ್‌ಟೆಂಟ್‌ ಪ್ರಕ್ರಿಯೆಯೂ ಆಗಿದೆ. ಆದರೂ ವಿಳಂಬವಾಗುತ್ತಿರುವುದು ಏಕೆ ಎಂಬುದು ಯಕ್ಷಪ್ರಶ್ನೆ. 

ವೇತನ, ಡಿಪಿಆರ್‌ಗೆ 16 ಕೋಟಿ ಖರ್ಚು 

ದಾವಣಗೆರೆ ನಗರ 2016ರ ಮೊದಲ ಹಂತದ ಘೋಷಣೆಯಲ್ಲಿಯೇ ಸ್ಮಾರ್ಟ್‌ಸಿಟಿಗೆ ಆಯ್ಕೆಯಾಯಿತು. ಜನವರಿಗೆ ಮೂರು ವರ್ಷ ಆಗಲಿದ್ದು, ಇನ್ನೂ ಯಾವ ಸ್ಮಾರ್ಟ್‌ ಕಾಮಗಾರಿಯೂ ಆರಂಭವಾಗಿಲ್ಲ. ಈಗ 398 ಕೋಟಿ ರೂ. ಅನುದಾನ ಬಂದಿದ್ದು, ಈವರೆಗೂ ಕೇವಲ ಡಿಪಿಆರ್‌ ತಯಾರಿಕೆ, ನೌಕರರ ವೇತನ, ಭತ್ಯೆ ಎಂದು 16 ಕೋಟಿ ರೂ. ಮಾತ್ರ ಖರ್ಚಾಗಿದೆ. 

ನಗರದಲ್ಲಿ ಮೂರು ರಸ್ತೆ ಕಾಮಗಾರಿ ಅಲ್ಲಿನ ಡ್ರೈನೇಜ್‌ ಕಾಮಗಾರಿ, ಮಂಡಕ್ಕಿ ಭಟ್ಟಿಯಲ್ಲಿ ಶೌಚಾಲಯ ನಿರ್ಮಾಣ ಕೆಲಸಗಳು ಆರಂಭವಾಗಿದ್ದು ಮೂರು ತಿಂಗಳಾಗಿದೆ. ಶೇ. 30ರಷ್ಟು ಕೆಲಸ ಕೂಡ ಆಗಿಲ್ಲ. ಪುನರ್‌ ನಿರ್ಮಾಣ, ಹೊಸದಾಗಿ ಸೌಲಭ್ಯ ಕಲ್ಪಿಸುವುದು ಸೇರಿ ಒಟ್ಟು 44 ಯೋಜನೆಗಳ ಕ್ರಿಯಾ ಯೋಜನೆಯಿದೆ. ಇದರಲ್ಲಿ ರಸ್ತೆ, ಡ್ರೈನೇಜ್‌ನಂತಹ 10 ಕಾಮಗಾರಿ ಆರಂಭ ಆಗಿರುವುದು ಬಿಟ್ಟರೆ ಇನ್ನೂ ಕೆಲ ಕಾಮಗಾರಿಗೆ ಟೆಂಡರ್‌ ಕೂಡ ಆಗಿಲ್ಲ. ಇನ್ನೂ ಕೆಲ ಕಾಮಗಾರಿಗಳಿಗೆ ತಾಂತ್ರಿಕ ಮಂಜೂರಾತಿ ದೊರೆಯಬೇಕಿದೆ. ಹತ್ತು ಕಾಮಗಾರಿಗಳಿಗೆ ಕ್ರಿಯಾ ಯೋಜನೆ ತಯಾರಾಗಬೇಕಿದೆ. ಸ್ಮಾರ್ಟ್‌ಸಿಟಿ ಕೆಲಸಗಳಿಗಾಗಿ ದೇಶಾದ್ಯಂತ ಎಸ್‌ಪಿವಿ ಹೆಸರಲ್ಲಿ ಕಂಪನಿ ಸ್ಥಾಪಿಸಿರುವಂತೆ ಇಲ್ಲಿಯೂ ಕಂಪನಿ ಮಾಡಲಾಗಿದೆ. ಕೆಲಸ ಕೆಲ ನಿಯಮಗಳ ಬದಲಾವಣೆಯಿಂದ ಕಾಮಗಾರಿ ಶುರುವಾಗುವುದು ತಡವಾಯಿತು ಎಂದು ಎಂಡಿ ಹೇಳುತ್ತಾರೆ. 

ಕಳೆದ ವರ್ಷ ಸಂಸದರು ಒಂದು ಕಡೆ ಸ್ಮಾರ್ಟ್‌ ಸಿಟಿ ಕಾಮಗಾರಿಗೆ ಚಾಲನೆ ನೀಡಿದರೆ, ಆ ಹೊತ್ತಿಮ ಕಾಂಗ್ರೆಸ್‌ ಶಾಸಕರು ಮತ್ತೊಂದು ಕಡೆ ಕಾಮಗಾರಿಗೆ ಚಾಲನೆ ನೀಡಿ ಸ್ಮಾರ್ಟ್‌ನಲ್ಲೂ ರಾಜಕಾರಣ ಮಾಡಿದರು! ಉಳಿದಂತೆ ಯೋಜನೆಗೆ ಪಡೆದುಕೊಂಡ ಪ್ರಚಾರಕ್ಕೆ ತಕ್ಕಂತೆ ಇಲ್ಲಿ ಕೆಲಸ ಆಗುತ್ತಿಲ್ಲ, ಮಾಮೂಲಿ ರಸ್ತೆ ಕಾಮಗಾರಿಯಂತಿದೆ ಕೆಲಸವಿದೆ ಬಿಟ್ಟರೆ ಸ್ಮಾರ್ಟ್‌ಸಿಟಿ ನಿರ್ಮಾಣಕ್ಕೆ ರೂಪಿಸಿದ ಪರಿಕಲ್ಪನೆಯಡಿ ಸ್ಮಾರ್ಟ್‌ ಕೆಲಸಗಳೂ ಆಗುತ್ತಿಲ್ಲ. 

ಅನುದಾನ ಕ್ಯಾಶ್‌ ಆಗಿಲ್ಲ 

ಎಸ್‌ಪಿವಿ ಕಂಪನಿಗೆ ಪ್ರತ್ಯೇಕ ಐಎಎಸ್‌ ಅಧಿಕಾರಿ ಎಂಡಿ ಆಗದಿದ್ದರೂ ಪಾಲಿಕೆ ಆಯುಕ್ತರೇ ಆ ಕಾರ್ಯ ನಿರ್ವಹಿಸುತ್ತಿರುವ ಕೊರತೆಯೊಂದನ್ನು ಹೊರತುಪಡಿಸಿ, ಸ್ಮಾರ್ಟ್‌ ಸಿಟಿಗೆ ಸಂಬಂಧಿಸಿ ಏನೆಲ್ಲಾ ಆಗಬೇಕು ಆ ಎಲ್ಲ ಪ್ರಕ್ರಿಯೆ ತಕ್ಕಮಟ್ಟಿಗೆ ಆಗಿದೆ. 2015-16ನೇ ಸಾಲಿನವರೆಗೆ 219 ಕೋಟಿ ರೂ. ಅನುದಾನ ಮಂಗಳೂರು ಸ್ಮಾರ್ಟ್‌ಗೆ ಬಿಡುಗಡೆಯಾಗಿದೆ. ಆದರೆ ಈ ಪೈಕಿ ಖರ್ಚಾಗಿರುವ ಹಣ ಮಾತ್ರ 5.35 ಕೋಟಿ ರೂ. ಮಾತ್ರ. 

''ಕ್ಲಾಕ್‌ ಟವರ್‌, ಸ್ಮಾರ್ಟ್‌ರಸ್ತೆ ಕಾಮಗಾರಿ ಸೇರಿದಂತೆ 5 ಕಾಮಗಾರಿ ಆರಂಭವಾಗಿದ್ದು, ಎರಡು ಕಾಮಗಾರಿಗೆ ವರ್ಕ್‌ ಆರ್ಡರ್‌ ನೀಡಲಾಗಿದೆ. ಮೂರು ಕಾಮಗಾರಿ ಟೆಂಡರ್‌ ಹಂತದಲ್ಲಿದೆ,'' ಎಂಬುದು ಅಧಿಕಾರಿಯೊಬ್ಬರು ನೀಡುವ ವಿವರಣೆ. ಆದರೂ ತಡವಾಗುತ್ತಿದೆ ಏಕೆ ಎಂದು ಪ್ರಶ್ನಿಸಿದರೆ ''ಕೇಂದ್ರ ಹಾಗೂ ರಾಜ್ಯ ಸರಕಾರಗಳ ಅನುದಾನ ಬಿಡುಗಡೆ ವಿಳಂಬದಿಂದ ಸ್ಮಾರ್ಟ್‌ಸಿಟಿ ಪ್ರಕ್ರಿಯೆ ವಿಳಂಬಗೊಂಡಿದೆ,'' ಎನ್ನುತ್ತಾರೆ ಅದೇ ಅಧಿಕಾರಿ. ಎಲ್ಲವೂ ಸುಸೂತ್ರವಾಗಿದ್ದರೆ ಹಣ ಖರ್ಚಾಗುವುದು ಸಲೀಸಂತಲ್ಲ ಎಂದು ಮರುಪ್ರಶ್ನೆ ಎಸೆದರೆ, ಈ ಸ್ಮಾರ್ಟ್‌ ಆರ್ಥವಾಗುತ್ತಿಲ್ಲ ಎಂದು ಹಣೆ ಮೇಲೆ ಕೈ ಸವರುತ್ತಾರೆ ! 

ರಾಜಧಾನಿಗೆ ಸಿಕ್ಕಿರುವುದು ಬರೀ 50 ಕೋಟಿ 

ಕೇಂದ್ರ ಸರಕಾರವು ಸ್ಮಾರ್ಟ್‌ ಸಿಟಿ ಯೋಜನೆಯಡಿ ಬೆಂಗಳೂರಿಗೆ 50 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ. ಬಿಬಿಎಂಪಿಯು ಯೋಜನೆಯ ಕಾಮಗಾರಿಗಳ ಅನುಷ್ಠಾನಕ್ಕಾಗಿ ವಿಶೇಷ ಉದ್ದೇಶದ ಘಟಕ (ಎಸ್‌ಪಿವಿ) ಸ್ಥಾಪಿಸಿದೆ. ಸ್ಮಾರ್ಟ್‌ ಸಿಟಿಯ ಪ್ರದೇಶ ಆಧಾರಿತ ಅಭಿವೃದ್ಧಿ ಯೋಜನೆಯಡಿ ಎಂಟು ಕಾಮಗಾರಿಗಳಿಗೆ ಅನುಮತಿ ಸಿಕ್ಕಿದೆ. ಶಿವಾಜಿನಗರ ಬಸ್‌ ನಿಲ್ದಾಣ, ರಸೆಲ್‌ ಮಾರುಕಟ್ಟೆ, ಕೆ.ಆರ್‌.ಮಾರುಕಟ್ಟೆ, ಮಲ್ಲೇಶ್ವರ ಮಾರುಕಟ್ಟೆ, ಕಬ್ಬನ್‌ಪಾರ್ಕ್‌, ಕೆ.ಸಿ.ಜನರಲ್‌ ಆಸ್ಪತ್ರೆ, ಗಾಂಧಿನಗರದ ಸ್ವತಂತ್ರಪಾಳ್ಯ ಕೊಳೆಗೇರಿ, ಟೆಂಡರ್‌ಶ್ಯೂರ್‌ನಡಿ 23 ರಸ್ತೆಗಳು ಮತ್ತು ಕೆಂಪಾಂಬುದಿ ಕೆರೆಯನ್ನು ಅಭಿವೃದ್ಧಿಪಡಿಸಲು ಸಮಗ್ರ ಯೋಜನಾ ವರದಿಯನ್ನು (ಡಿಪಿಆರ್‌) ಸಿದ್ಧಪಡಿಸಲಾಗಿದೆ. ಇದಕ್ಕೆ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ (ಕೆಯುಐಡಿಎಫ್‌ಸಿ) ತಾಂತ್ರಿಕ ಸಮಿತಿಯು ಅನುಮೋದನೆ ನೀಡಿದ ಬಳಿಕ ಟೆಂಡರ್‌ ಕರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. 


Friends, If you like this post,kindly comment below the post and do share your Response, (Thanks for Reading....)
logoblog

Thanks for reading ಸಪ್ತ ನಗರಗಳು ಸ್ಮಾರ್ಟ್‌ ಸಿಟಿಗಳು ಆಗುವುದು ಯಾವಾಗ

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *