ಹಿರಿಯಡಕ ಗೋಪಾಲ್ ರಾವ್ಗೆ ಕಾರಂತ ಪುರಸ್ಕಾರ
ಗೋಪಾಲ್ ರಾವ್
ಪ್ರಜಾವಾಣಿ ವಾರ್ತೆ
ಸಾಲಿಗ್ರಾಮ (ಬ್ರಹ್ಮಾವರ): ಸಾಲಿ
ಗ್ರಾಮ ಕಾರ್ಕಡದ ಗೆಳೆಯರ ಬಳಗದ ವತಿಯಿಂದ ಡಾ.
ಶಿವರಾಮ ಕಾರಂತರ ಹುಟ್ಟುಹಬ್ಬದ ಆಚ
ರಣೆಯ ಸಂದರ್ಭ ನೀಡಲಾಗುವ ಗೆಳೆಯರ ಬಳಗ ಕಾರಂತ ಪುರಸ್ಕಾರಕ್ಕೆ ಹಿರಿಯ ಯಕ್ಷಗಾನ ಕಲಾವಿದ, ಮದ್ದಳೆಗಾರ ಹಾಗೂ ಕಾರಂತರ ಒಡನಾಡಿ ಹಿರಿಯಡಕ ಗೋಪಾಲ ರಾವ್ ಆಯ್ಕೆಯಾಗಿದ್ದಾರೆ.
ಗ್ರಾಮ ಕಾರ್ಕಡದ ಗೆಳೆಯರ ಬಳಗದ ವತಿಯಿಂದ ಡಾ.
ಶಿವರಾಮ ಕಾರಂತರ ಹುಟ್ಟುಹಬ್ಬದ ಆಚ
ರಣೆಯ ಸಂದರ್ಭ ನೀಡಲಾಗುವ ಗೆಳೆಯರ ಬಳಗ ಕಾರಂತ ಪುರಸ್ಕಾರಕ್ಕೆ ಹಿರಿಯ ಯಕ್ಷಗಾನ ಕಲಾವಿದ, ಮದ್ದಳೆಗಾರ ಹಾಗೂ ಕಾರಂತರ ಒಡನಾಡಿ ಹಿರಿಯಡಕ ಗೋಪಾಲ ರಾವ್ ಆಯ್ಕೆಯಾಗಿದ್ದಾರೆ.
ಅ.12ರಂದು ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆಯ ಪಾರ್ವತಿ ಎಸ್.ಹೊಳ್ಳ ರಂಗ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
‘ಕಾರಂತರ ಒಡನಾಡಿಯಾಗಿದ್ದು, ಕಾರಂತರ ಸಾಹಿತ್ಯ ಹಾಗೂ ಇತರ ಚಟುವಟಿಕೆಗಳಲ್ಲಿ ದುಡಿದ ವ್ಯಕ್ತಿಗೆ ಈ
ಪುರಸ್ಕಾರವನ್ನು ನೀಡಲಾಗುತ್ತದೆ. ಪ್ರಶಸ್ತಿಯು ₹5 ಸಾವಿರ ನಗದು ಮತ್ತು ಸನ್ಮಾನ ಪತ್ರ, ಶಾಲು, ಸ್ಮರಣಿಕೆ ಒಳಗೊಂಡಿದೆ’ ಎಂದು ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ತಿಳಿಸಿದ್ದಾರೆ.
ಪುರಸ್ಕಾರವನ್ನು ನೀಡಲಾಗುತ್ತದೆ. ಪ್ರಶಸ್ತಿಯು ₹5 ಸಾವಿರ ನಗದು ಮತ್ತು ಸನ್ಮಾನ ಪತ್ರ, ಶಾಲು, ಸ್ಮರಣಿಕೆ ಒಳಗೊಂಡಿದೆ’ ಎಂದು ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ತಿಳಿಸಿದ್ದಾರೆ.
Friends, If you like this post,kindly comment below the post and do share your Response, (Thanks for Reading....)
No comments:
Post a Comment