ವಿಶೇಷ
ತಾಯ್ನೆಲದಲ್ಲೇ ಅತಂತ್ರರು; ಗುರಿಯಿಲ್ಲದ ಈ ಪಯಣಿಗರು
ಮೊದಲಿಗೆ ಆಫ್ಘನ್ ಕುಟುಂಬಗಳ ಮನೆಗಳ ಮೇಲೆ ಲಾಠಿ ಹಿಡಿದ ಪೊಲೀಸರಿಂದ ದಾಳಿ ನಡೆಯಿತು. ಬಳಿಕ ಮನೆಗಳಲ್ಲಿದ್ದ ಜನರನ್ನು ಜೈಲಿಗೆ ತಳ್ಳಲಾಯಿತು. ಸಂಬಂಧಿಕರು ಲಂಚ ಕೊಟ್ಟ ಮೇಲಷ್ಟೇ ಅವರನ್ನು ಬಿಡುಗಡೆಗೊಳಿಸಲಾಯಿತು. ಲಂಚ ಕೊಡಲು ಅವರಲ್ಲಿ ಏನೂ ಉಳಿದಿಲ್ಲ ಎಂದಾಗ ಪಾಕಿಸ್ತಾನದಿಂದ ಶಾಶ್ವತವಾಗಿ ಕಾಲು ಕೀಳಬೇಕು ಮತ್ತು ಆಫ್ಘಾನಿಸ್ತಾನಕ್ಕೆ ತೆರಳಬೇಕು ಎಂದು ತಿಳಿಸಲಾಯಿತು.
ಆಫ್ಘಾನಿಸ್ತಾನ ಅವರೆಲ್ಲರ ಅಧಿಕೃತ ದೇಶ. ಆದರೆ ಅಲ್ಲಿ ತಲೆಮಾರುಗಳಿಂದ ನಡೆಯುತ್ತಿರುವ ಸಂಘರ್ಷಗಳಿಂದ ನಿರಾಶ್ರಿತರಾದ ಹಲವರಿಗೆ ಆಫ್ಘಾನಿಸ್ತಾನ ಎಂಬುದು ಇಂದು ವಿದೇಶಿ ನೆಲ. ಕಳೆದ ಡಿಸೆಂಬರ್ನಲ್ಲಿ ಪೆಶಾವರದಲ್ಲಿನ ಶಾಲೆಯ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ನಂತರ, ಪಾಕಿಸ್ತಾನದಲ್ಲಿ ನೆಲೆಸಿರುವ ಆಫ್ಘನ್ನರಿಗೆ ಇಂತಹ ಅನುಭವ ಹೆಚ್ಚು ಹೆಚ್ಚು ಆಗತೊಡಗಿದೆ. ಪಾಕಿಸ್ತಾನಿ ತಾಲಿಬಾನ್ಗಳು ಈ ದಾಳಿ ನಡೆಸಿದ್ದಾಗಿ ಹೇಳಿಕೊಂಡಿದ್ದರೂ ತಮ್ಮ ವಿರುದ್ಧ ಅಸಮಾಧಾನದ ಅಲೆ ಹಬ್ಬಲು ಇದೊಂದು ಪ್ರಮುಖ ಕಾರಣವಾಗಿ ಮಾರ್ಪಟ್ಟಿದೆ ಎಂದು ಆಫ್ಘನ್ ನಿರಾಶ್ರಿತರು ಹೇಳುತ್ತಿದ್ದಾರೆ.
ಅಲ್ಲಿಂದೀಚೆಗೆ ಪ್ರತಿದಿನ ಬಹುತೇಕ ಒಂದು ಸಾವಿರ ಆಫ್ಘನ್ನರು ತೋರ್ಖಂ ಗಡಿಯಲ್ಲಿ ಆಫ್ಘಾನಿಸ್ತಾನಕ್ಕೆ ತೆರಳುತ್ತಿರುವುದು ಕಂಡುಬಂದಿದೆ. ತಮ್ಮನ್ನು ಬಲಾತ್ಕಾರದಿಂದ ಹೊರಗೆ ಕಳುಹಿಸಲಾಗುತ್ತಿದೆ ಎಂಬುದು ಹೆಚ್ಚಿನವರ ಅಳಲು. ಪಾಕಿಸ್ತಾನದಲ್ಲಿ ಇರುವ ಇತರ ನಿರಾಶ್ರಿತರೂ ತಮ್ಮನ್ನು ಬಲಾತ್ಕಾರದಿಂದ ಹೊರಗೆ ಕಳುಹಿಸುವ ಆತಂಕದಲ್ಲಿದ್ದಾರೆ.
ಆಫ್ಘನ್ ನಿರಾಶ್ರಿತರು ಪಾಕಿಸ್ತಾನ ಬಿಟ್ಟು ತೆರಳುವಂತೆ ಒತ್ತಡ ಬರುತ್ತಿರುವುದು ದೇಶದಲ್ಲಿ ವ್ಯಾಪಕವಾಗಿರುವ ನೀತಿಯಿಂದಾಗಿಯೋ ಅಥವಾ ಸದ್ಯ ಉದ್ಭವಿಸಿರುವ ಪರಿಸ್ಥಿತಿಯ ಲಾಭ ಪಡೆದುಕೊಂಡು ಅನಪೇಕ್ಷಿತ ನಿರಾಶ್ರಿತರನ್ನು ಹೊರಗಟ್ಟಲು ಸ್ಥಳೀಯ ಅಧಿಕಾರಿಗಳು ಮಾಡಿರುವ ಹುನ್ನಾರದಿಂದಲೋ ಎಂಬುದು ಸ್ಪಷ್ಟವಾಗಿಲ್ಲ. ಇದು ಸ್ಥಳೀಯ ಅಧಿಕಾರಿಗಳ ಹುನ್ನಾರದ ಫಲ ಎಂದೇ ಅನೇಕ ನಿರಾಶ್ರಿತರು ಭಾವಿಸಿದ್ದಾರೆ. ಆದರೆ ದಿನಕಳೆದಂತೆ ಆಫ್ಘನ್ ನಿರಾಶ್ರಿತರನ್ನು ಹೊರಗಟ್ಟುವ ಬೆಳವಣಿಗೆ ಹೆಚ್ಚುತ್ತಿದೆ.
ತೋರ್ಖಾಂನಲ್ಲಿ ಸಂಚಾರವನ್ನು ಗಮನಿಸುತ್ತಿರುವ ಆಫ್ಘಾನಿಸ್ತಾನದ ಅಧಿಕಾರಿಗಳ ಪ್ರಕಾರ, 2015ರ ಮೊದಲ ಆರು ವಾರಗಳಲ್ಲಿ ದಾಖಲಾತಿ ಇಲ್ಲದ 33 ಸಾವಿರ ಆಫ್ಘನ್ನರು ಪಾಕಿಸ್ತಾನದಿಂದ ಹಿಂದಿರುಗಿದ್ದಾರೆ. ಇದು 2014ರ ಇಡೀ ವರ್ಷದಲ್ಲಿ ನಡೆದ ನಿರಾಶ್ರಿತರ ನಿರ್ಗಮನಕ್ಕಿಂತ ಅಧಿಕ. ಆಫ್ಘಾನಿಸ್ತಾನಕ್ಕೆ ಬರುವ ಲಾರಿಗಳ ಹಿಂಬದಿ ತುಂಬಿದ್ದ ಜನರೇ ಇದಕ್ಕೆ ಸಾಕ್ಷಿ ಹೇಳುತ್ತಿದ್ದರು. ಆದರೂ ಇವರಲ್ಲಿ ಕೆಲವರು ಎದೆಯುಬ್ಬಿಸಿ ದೇಶಪ್ರೇಮ ಮೆರೆಯಲೂ ಮರೆಯುವುದಿಲ್ಲ.
‘ನನ್ನ ದೇಶಕ್ಕೆ ಹಿಂದಿರುಗುವುದು ನನ್ನ ಪಾಲಿಗೆ ಒದಗಿದ ಗೌರವ’ ಎಂದು 32ರ ಹರೆಯದ ವಜೀರ್ ಖಾನ್ ಹೇಳಿದರು. ಆಫ್ಘಾನಿಸ್ತಾನಕ್ಕೆ ತೆರಳಲು ಸಾಲುಗಟ್ಟಿ ನಿಂತಿದ್ದ ಬಣ್ಣಬಣ್ಣದ ಸರಕು ಸಾಗಣೆ ವಾಹನಗಳ ಸಾಲಿನಲ್ಲಿ ಆತನ ಕುಟುಂಬವೂ ಸೇರಿಕೊಂಡಿತ್ತು. ಖಾನ್ ಪಾಕಿಸ್ತಾನದಲ್ಲೇ ಹುಟ್ಟಿದವರು. ಆಫ್ಘಾನಿಸ್ತಾನದಲ್ಲಿ ಅವರ ಏಕೈಕ ಜೀವದ ಸೆಲೆ ಎಂದರೆ ಅವರ ಎಡ ಅಂಗೈಯಲ್ಲಿ ಮೂಡಿದ್ದ ನೀಲಿ ಶಾಯಿ ಮಾತ್ರ. ಅದು ಆಫ್ಘನ್ ಗಡಿ ದಾಟಿದ ನಂತರ ತಾನು ಸಂಪರ್ಕಿಸಲು ಉದ್ದೇಶಿಸಿರುವ ಸಂಬಂಧಿಯೊಬ್ಬರ ಮೊಬೈಲ್ ಫೋನ್ ನಂಬರ್. ಆದರೂ ‘ಇದೊಂದು ಸಂತಸದ ಕ್ಷಣ’ ಎಂದೇ ಅವರು ಹೇಳುತ್ತಾರೆ.
ವಿಶ್ವಸಂಸ್ಥೆಯ ಪ್ರಕಾರ ಪಾಕಿಸ್ತಾನದಲ್ಲಿ ಸುಮಾರು 15 ಲಕ್ಷದಷ್ಟು ನೋಂದಾಯಿತ ಆಫ್ಘನ್ ನಿರಾಶ್ರಿತರಿದ್ದಾರೆ ಹಾಗೂ ನೋಂದಣಿಗೊಳ್ಳದ ಸಾವಿರಾರು ನಿರಾಶ್ರಿತರಿದ್ದಾರೆ. ಆಫ್ಘನ್ನರು ತಮ್ಮ ದೇಶಕ್ಕೆ ಹಿಂದಿರುಗುವುದನ್ನು ನಾವು ಎದುರು ನೋಡುತ್ತಿದ್ದೇವೆ, ಅವರು ಪಾಕಿಸ್ತಾನದಲ್ಲಿ ಇದ್ದಷ್ಟೂ ಸಮಯ ಅವರ ಭದ್ರತೆಯ ವಿಚಾರದಲ್ಲಿ ಆತಂಕ ಇದ್ದೇ ಇರುತ್ತದೆ ಎಂದು ಪಾಕಿಸ್ತಾನದ ಅಧಿಕಾರಿಗಳು ಮೊದಲಿನಿಂದಲೂ ಹೇಳುತ್ತಲೇ ಇದ್ದಾರೆ.
ಕಳೆದ ಎರಡು ತಿಂಗಳಿಂದೀಚೆಗೆ ಪಾಕಿಸ್ತಾನದಿಂದ ಹೊರಗೆ ಕಳುಹಿಸಲಾದ ನಿರಾಶ್ರಿತರಲ್ಲಿ ನೋಂದಾಯಿತ ನಿರಾಶ್ರಿತರೂ ಇದ್ದಾರೆ ಎಂಬ ಮಾತು ಕೇಳಿಬಂದಿದೆ. ಸಲೀಂ (35) ಅವರೇ ಇದಕ್ಕೆ ನಿದರ್ಶನ. ಅವರು ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ನೆಲೆಸಿದ್ದವರು. ಪೊಲೀಸರು ಅವರ ಮನೆ ಮೇಲೆ ದಾಳಿ ನಡೆಸಿದಾಗ ಸಲೀಂ ತಮ್ಮ ನಿರಾಶ್ರಿತ ಚೀಟಿಯನ್ನು ತೋರಿಸಿದ್ದರು. ಒಬ್ಬ ಪೊಲೀಸ್ ಅಧಿಕಾರಿ ಆ ಚೀಟಿಯನ್ನು ಕಿತ್ತೆಸೆದಿದ್ದರು ಎನ್ನಲಾಗಿದೆ.
ಇದು ನಿಜವೇ ಆಗಿದ್ದರೆ ಇದು ಅಂತರರಾಷ್ಟ್ರೀಯ ನಿಯಮದ ಉಲ್ಲಂಘನೆಯಾಗುತ್ತದೆ. ಪೆಶಾವರ ದಾಳಿಯ ನಂತರ ಇಂತಹ ಪ್ರಕರಣಗಳು ನಡೆಯುತ್ತಿರುವ ಬಗ್ಗೆ ವಿಶ್ವಸಂಸ್ಥೆಯ ನಿರಾಶ್ರಿತ ಏಜೆನ್ಸಿ ಪಾಕಿಸ್ತಾನ ಸರ್ಕಾರಕ್ಕೆ ದೂರು ಸಲ್ಲಿಸಿದೆ. ‘ಪೆಶಾವರ ದಾಳಿಯ ಬಳಿಕ ಪೊಲೀಸರು ಆರಂಭಿಸಿದ ಕಾರ್ಯಾಚರಣೆಯಲ್ಲಿ ನೋಂದಾಯಿತ ಆಫ್ಘನ್ ನಿರಾಶ್ರಿತರನ್ನು ಸಹ ಪೊಲೀಸರು ಪ್ರಶ್ನಿಸುತ್ತಿರುವ ವಿಷಯ ನಮಗೆ ಗೊತ್ತಾಗಿದೆ.
ಇದರ ಬಗ್ಗೆ ನಮ್ಮ ಆತಂಕವನ್ನು ಇಸ್ಲಾಮಾಬಾದ್ನಲ್ಲಿ ಪಾಕಿಸ್ತಾನ ಸರ್ಕಾರದ ಸಹೋದ್ಯೋಗಿಗಳಿಗೆ ಮನವರಿಕೆ ಮಾಡಿದ್ದೇವೆ’ ಎಂದು ನಿರಾಶ್ರಿತರಿಗಾಗಿ ಇರುವ ವಿಶ್ವಸಂಸ್ಥೆಯ ಹೈಕಮಿಷನರ್ ಅವರ ವಕ್ತಾರ ಬಾಬರ್ ಬಲೋಚ್ ಇ– ಮೇಲ್ ಮೂಲಕ ತಿಳಿಸಿದ್ದಾರೆ. ‘ಪೆಶಾವರ ದಾಳಿ ನಡೆದ ಬಳಿಕ ಪೊಲೀಸರು ಆಫ್ಘನ್ನ ನೋಂದಾಯಿತ ನಿರಾಶ್ರಿತರನ್ನು ಗುರಿಯಾಗಿ ಮಾಡುತ್ತಿರುವುದಕ್ಕೆ ನಮ್ಮ ಏಜೆನ್ಸಿ ತಕ್ಷಣ ಸ್ಪಂದಿಸಿ ನಮ್ಮ ಆಕ್ಷೇಪ ವ್ಯಕ್ತಪಡಿಸಿದೆ’ ಎಂದು ಅವರು ಹೇಳುತ್ತಾರೆ.
ಹೊರತಳ್ಳುವ ಪ್ರಕ್ರಿಯೆ: ಪಾಕಿಸ್ತಾನದಲ್ಲಿ ನೆಲೆಸಿರುವ ಆಫ್ಘನ್ ನಿರಾಶ್ರಿತರನ್ನು ಹೊರಗೆ ಕಳುಹಿಸುವುದಕ್ಕೆ ಅಧಿಕೃತ ಬೆಂಬಲ ನೀಡಲಾಗಿದೆ ಎಂಬುದನ್ನು ಪಾಕಿಸ್ತಾನ ಅಲ್ಲಗಳೆದರೂ, ನಿರಾಶ್ರಿತರನ್ನು ಹೊರಗಟ್ಟುವುದಕ್ಕೆ ಒಂದು ರೀತಿಯ ಔಪಚಾರಿಕ ಪ್ರಯತ್ನ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.
ಪಾಕಿಸ್ತಾನದ ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರೆ ತಸ್ನಿಂ ಅಸ್ಲಾಂ ಖಾನ್ ಅವರು ಈಚೆಗೆ ಪತ್ರಿಕಾಗೋಷ್ಠಿ ನಡೆಸಿದಾಗ, ಈ ವರ್ಷದ ಅಂತ್ಯದೊಳಗೆ ನೋಂದಾಯಿತ ನಿರಾಶ್ರಿತರು ಪಾಕಿಸ್ತಾನದಿಂದ ಹೊರಗೆ ಹೋಗಲಿದ್ದಾರೆ ಎಂಬ ಸುಳಿವು ನೀಡಿದ್ದರು. ‘ಅವರು ಘನತೆಯಿಂದ ಮತ್ತು ಸ್ವಯಂಪ್ರೇರಿತವಾಗಿ ತಮ್ಮ ದೇಶಕ್ಕೆ ನಿರ್ಗಮಿಸುವುದನ್ನು ನಾವು ಎದುರು ನೋಡುತ್ತಿದ್ದೇವೆ’ ಎಂದಿದ್ದರು.
‘ನೋಂದಾಯಿಸಿಕೊಳ್ಳದ ಆಫ್ಘನ್ ನಿರಾಶ್ರಿತರು ಅಧಿಕ ಸಂಖ್ಯೆಯಲ್ಲಿ ಇರುವ ಸ್ಥಳಗಳನ್ನು ಭಯೋತ್ಪಾದಕರ ಅಡಗುದಾಣವಾಗಿ ಬಳಸಿಕೊಳ್ಳಲಾಗುತ್ತಿದೆ, ಅದರ ಬಗ್ಗೆ ನಾವು ಕ್ರಮ ಕೈಗೊಳ್ಳಲೇಬೇಕಿದೆ’ ಎಂದು ಈ ವಕ್ತಾರೆ ಹೇಳಿದ್ದರು. ಪಾಕಿಸ್ತಾನದಿಂದ ಮರಳಿ ಆಫ್ಘಾನಿಸ್ತಾನದತ್ತ ತೆರಳುವ ಕೆಲವರಿಗೆ ಅಲ್ಲಿ ಸಂಬಂಧಿಕರು ಇದ್ದಾರೆ, ಇವರನ್ನು ತಮ್ಮೊಂದಿಗೆ ಸೇರಿಸಿಕೊಳ್ಳುತ್ತಾರೆ. ಆದರೆ ಇನ್ನೂ ಅದೆಷ್ಟೋ ಮಂದಿಗೆ ಅಲ್ಲಿ ಯಾರೂ ಇಲ್ಲ.
ತೋರ್ಖಂಗೆ ಸಮೀಪದ ದೊಡ್ಡ ನಗರ ಜಲಾಲಾಬಾದ್ನಲ್ಲಿ ಕಾಲುವೆಯೊಂದರ ಬದಿಯಲ್ಲಿ 15 ಕುಟುಂಬಗಳು ಟೆಂಟ್ ಹಾಕಿಕೊಂಡಿವೆ. ಹೊಟ್ಟೆ ಹೊರೆಯುವುದಕ್ಕೆ ಅವರ ಮಕ್ಕಳು ಪಕ್ಕದ ಗದ್ದೆಯಲ್ಲಿನ ಟರ್ನಿಪ್ ಗೆಡ್ಡೆಗಳನ್ನು ಕೀಳುತ್ತಿರುವುದು ಕಂಡುಬಂತು. ಈ ನಿರಾಶ್ರಿತ ಕುಟುಂಬದ ಆಹಾರದ ಮೂಲ ಅದೊಂದೇ. ಅವರೆಲ್ಲ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ನಿರಾಶ್ರಿತ ಕಾಲೊನಿಗಳಿಂದ ಬಂದವರು. ಸೋವಿಯತ್ ಆಕ್ರಮಣದಿಂದ ಬಚಾವಾಗಲು 35 ವರ್ಷಗಳ ಹಿಂದೆ ಆಫ್ಘಾನಿಸ್ತಾನ ಬಿಟ್ಟು ಬಂದವರು ಇವರು.
ಈ ನಿರಾಶ್ರಿತರ ಜೇಬಲ್ಲಿ ಇರುವುದು ಸರ್ಕಾರದ ಮೊಹರು ಇರುವ ಕೈಬರಹದ ಚೀಟಿಗಳು ಮಾತ್ರ. ಪೊಲೀಸರಿಂದ ಬಂಧನಕ್ಕೊಳಗಾದ ಬಳಿಕ ಪೊಲೀಸ್ ಠಾಣೆಯೊಂದರಿಂದ ಪಡೆದ ಚೀಟಿಗಳು ಇವು. ಪಾಕಿಸ್ತಾನ ಬಿಟ್ಟು ತೆರಳಲು ಒಪ್ಪಂದವಾಗಿದೆ ಎಂದು ಅವುಗಳಲ್ಲಿ ಬರೆದಿದೆ. ಕೆಲವು ಚೀಟಿಗಳಲ್ಲಿ ಇವರು ಆಫ್ಘಾನಿಸ್ತಾನಕ್ಕೆ ತೆರಳುತ್ತಿದ್ದಾರೆ ಎಂಬ ಉಲ್ಲೇಖವೂ ಇದೆ.
ಗಡಿಯಿಂದ ಕೆಲವು ಮೈಲುಗಳ ದೂರದಲ್ಲಿ ಅಂತರ ಸರ್ಕಾರಿ ಗುಂಪು ಅಂತರ ರಾಷ್ಟ್ರೀಯ ವಲಸಿಗರ ಸಂಘಟನೆಯಿಂದ ನಡೆಯುತ್ತಿರುವ ನಿರಾಶ್ರಿತ ಶಿಬಿರದಲ್ಲಿ ಖತಜ್ ಎಂಬ 8 ವರ್ಷದ ಬಾಲಕ ತನ್ನ ತಾಯಿಯ ಬಳಿ ‘ನಾವು ಎಲ್ಲಿಗೆ ಹೋಗುತ್ತಿದ್ದೇವೆ?’ ಎಂದು ಮುಗ್ಧನಾಗಿ ಕೇಳುತ್ತಿದ್ದ. ‘ನಮ್ಮ ತಾಯ್ನೆಲದತ್ತ’ ಎಂದು ಅವನ ತಾಯಿ ಪರಿ ಗುಲ್ ಉತ್ತರಿಸಿದ್ದರು. ಆದರೆ ಅವರು ತಮ್ಮ ದುಗುಡವನ್ನು ಬಚ್ಚಿಟ್ಟು ಬಾಲಕನಿಗೆ ಈ ಉತ್ತರ ನೀಡಿದ್ದರು.
‘ನಾವು ನಮ್ಮ ಮನೆಯಿಂದಲೇ ಹೊರಗೆ ಹಾಕಿಸಿಕೊಂಡಂತೆ ಭಾಸವಾಗುತ್ತಿದೆ. ನಮಗೆ ಗೊತ್ತು ಗುರಿಯೇ ಇಲ್ಲವಾಗಿದೆ’ ಎಂದು ಅವರು ಮಕ್ಕಳಿಂದ ದೂರ ಬಂದು ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು. ತಮ್ಮ ಆರು ಮಕ್ಕಳ ಭವಿಷ್ಯ ನೆನೆದು ಆಕೆ ಬಹಳ ಆತಂಕದಲ್ಲಿದ್ದರು.
‘ನಾವು ನಮ್ಮ ಮಕ್ಕಳಿಗೆ ಈ ದೇಶದ ಬಗ್ಗೆ ಒಂದೇ ಒಂದು ಮಾತನ್ನೂ ಆಡಿಲ್ಲ. ಅವರಿಗೆ ಈ ದೇಶದ ಯಾವ ವಿಚಾರವೂ ಗೊತ್ತಿಲ್ಲ. ಅವರು ಒಂದು ರೀತಿಯಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಂತೆಯೇ ಇದ್ದಾರೆ’ ಎಂದು ಅವರು ಹೇಳುತ್ತಾರೆ.
‘ನಾವು ನಮ್ಮ ಮಕ್ಕಳಿಗೆ ಈ ದೇಶದ ಬಗ್ಗೆ ಒಂದೇ ಒಂದು ಮಾತನ್ನೂ ಆಡಿಲ್ಲ. ಅವರಿಗೆ ಈ ದೇಶದ ಯಾವ ವಿಚಾರವೂ ಗೊತ್ತಿಲ್ಲ. ಅವರು ಒಂದು ರೀತಿಯಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಂತೆಯೇ ಇದ್ದಾರೆ’ ಎಂದು ಅವರು ಹೇಳುತ್ತಾರೆ.
ವಿಶೇಷ
ಯೆಮನ್: ಬಂಡುಕೋರರ ಪ್ರಾಬಲ್ಯ ಅನಿರೀಕ್ಷಿತವಲ್ಲ!
ಸನಾ: 2010ರಲ್ಲಿ ನಾನು ಇಲ್ಲಿಗೆ ಸ್ಥಳಾಂತರಗೊಂಡಾಗ ಒಬ್ಬನೇ ಒಬ್ಬಹೀಗಾಗಿ ಹಿಂಸಾಚಾರ ಬಹುತೇಕ ಇರಲೇ ಇಲ್ಲ. ಬಂದೂಕುಧಾರಿಯೂ ಬೀದಿಯಲ್ಲಿ ಕಾಣುತ್ತಿರಲಿಲ್ಲ. ಬಂದೂಕು ನಿಗ್ರಹ ಕಾನೂನುಗಳನ್ನು ಪೊಲೀಸರು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದರು.
ಆದರೆ ಈಗ ನನ್ನ ಹೆಂಡತಿ ಸೂಪರ್ಮಾರ್ಕೆಟ್ಗೆ ಹೋಗಬೇಕೆಂದರೆ ಬೆಂಗಾವಲಾಗಿ ನಾನೂ ಜೊತೆಗಿರುತ್ತೇನೆ. ಅದೂ ಸ್ವಯಂಚಾಲಿತ ಬಂದೂಕು ಮತ್ತು 9 ಮಿಲಿಮೀಟರ್ನ ಪಿಸ್ತೂಲು ಸಮೇತನಾಗಿ.
ಕಳೆದ ವಾರ ಇಲ್ಲಿನ ಸರ್ಕಾರ ಉರುಳಿತು. ಅಧ್ಯಕ್ಷ ಅಬ್ದು ರಬ್ಬು ಮನ್ಸೌರ್ ಹದಿ ರಾಜೀನಾಮೆ ಕೊಟ್ಟರು. ಪ್ರಧಾನಿಯೊಟ್ಟಿಗೆ ಮಂತ್ರಿಮಂಡಲವೂ ಅವರನ್ನು ಅನುಸರಿಸಿತು. ದಶಕಕ್ಕಿಂತ ಹಿಂದಿನಿಂದಲೂ ಸರ್ಕಾರದ ವಿರುದ್ಧ ರಕ್ತಸಿಕ್ತ ಹೋರಾಟಗಳನ್ನು ನಡೆಸಿಕೊಂಡೇ ಬಂದಿದ್ದ, ದೇಶದ ಉತ್ತರ ಭಾಗದ ಶಿಯಾ ಉಗ್ರರ ಗುಂಪಿಗೆ ಸೇರಿದ ಹೌಥಿಗಳು ಈಗ ರಾಜಧಾನಿಯ ಮೇಲೆ ನಿಯಂತ್ರಣ ಸಾಧಿಸಿದ್ದಾರೆ. ಬೀದಿಯ ಮೂಲೆ ಮೂಲೆಗಳಲ್ಲಿ ಅವರ ಬಾವುಟಗಳು ಹಾರಾಡುತ್ತಿವೆ. ನಗರ ಪ್ರವೇಶ ಮಾರ್ಗದ ತಪಾಸಣಾ ಕೇಂದ್ರಗಳನ್ನು ಶಸ್ತ್ರಸಜ್ಜಿತ ಬಂಡುಕೋರರು ನಿರ್ವಹಿಸುತ್ತಿದ್ದಾರೆ.
ಈ ಬೆಳವಣಿಗೆಯು ವಿದೇಶಿ ಅಧಿಕಾರಿಗಳಿಗೆ ಆಘಾತ ಉಂಟುಮಾಡಿದೆ. ಆದರೆ ಇಲ್ಲೇ ಇರುವ ನಮ್ಮಂಥವರಿಗೆ ಇದರಿಂದ ಅಷ್ಟೇನೂ ಅಚ್ಚರಿಯಾಗಿಲ್ಲ. 2011ರಲ್ಲಿ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆದಾಗ, ಆಗಿನ ಅಧ್ಯಕ್ಷ ಅಲಿ ಅಬ್ದುಲ್ಲ ಸಲೇಹ್ ಅವರು ವಿಶ್ವಸಂಸ್ಥೆಯ ಒತ್ತಡಕ್ಕೆ ಮಣಿದು ಪದತ್ಯಾಗ ಮಾಡಿದ್ದರು. ನಂತರ ಚುನಾವಣೆ ನಡೆದು, ಏಕೈಕ ಅಭ್ಯರ್ಥಿಯಾಗಿದ್ದ ಮತ್ತು ಸಲೇಹ್ ಅವರ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದ ಹದಿ ಅಧ್ಯಕ್ಷರಾಗಿ ಆಯ್ಕೆಯಾದರು.
‘ಅಹಿಂಸಾತ್ಮಕ ರಾಜಕೀಯ ಪರಿವರ್ತನೆಯಾದ ಈ ಯೆಮನ್ ಮಾದರಿಯು ಅರಬ್ನ ಇತರ ಸಮಸ್ಯಾತ್ಮಕ ರಾಷ್ಟ್ರಗಳಿಗೂ ಆದರ್ಶಪ್ರಾಯವಾದ ಪ್ರಕ್ರಿಯೆ’ ಎಂದು ಆಗ ರಾಜತಾಂತ್ರಿಕರು ಈ ಬೆಳವಣಿಗೆಯನ್ನು ಶ್ಲಾಘಿಸಿದ್ದರು. ಆದರೆ ‘ಹೆತ್ತಮ್ಮನ ಕಣ್ಣಿಗೆ ಮಂಗನೂ ಕಸ್ತೂರಿ ಮೃಗದಂತೆಯೇ ಕಾಣುತ್ತದೆ’ ಎಂಬುದು ಯೆಮನ್ನ ಒಂದು ನಾಣ್ಣುಡಿ.
ಇಂತಹ ರಾಜಕೀಯ ಸ್ಥಿತ್ಯಂತರದೊಟ್ಟಿಗೆ ಹಿಂಸೆಯೂ ದಿನನಿತ್ಯದ ಸಂಗತಿಯಾಯಿತು. ರಾಷ್ಟ್ರವು ನಿಧಾನವಾಗಿ ವಿಭಜನೆಯಾಗುತ್ತಾ ಬಂದಿತು. ವಿಶ್ವಸಂಸ್ಥೆಯ ಪ್ರತಿನಿಧಿ ಜಮಾಲ್ ಬೆನೊಮರ್ ನೇತೃತ್ವದ ಈ ಪರಿವರ್ತನಾ ಪ್ರಕ್ರಿಯೆಯು ತಪ್ಪು ಗ್ರಹಿಕೆಗಳು ಮತ್ತು ಅಸಮರ್ಪಕ ನಿರ್ವಹಣೆಗಳಿಂದ ಸಂಪೂರ್ಣವಾಗಿ ವಿಫಲವಾಯಿತು.
ಯೆಮನ್ನ ತೈಲೋದ್ಯಮ ಬಹುತೇಕ ಮುಚ್ಚಿಹೋಯಿತು. ಹಲವು ವರ್ಷಗಳಿಂದ ನನ್ನ ಸಲಹೆ ಪಡೆಯುತ್ತಿದ್ದವರೂ ಸೇರಿದಂತೆ ವಿದೇಶಿ ಬಂಡವಾಳ ಹೂಡಿಕೆದಾರರು ವಾಪಸಾದರು. ತೈಲ ಸಂಪದ್ಭರಿತವಾದ ಮಾರಿಬ್ ಪ್ರಾಂತ್ಯದ ಆದಿವಾಸಿಗಳು ‘ರೆಡ್ ಸೀ’ ಕಚ್ಛಾ ತೈಲ ರಫ್ತು ಪೈಪ್ಲೈನ್ ಅನ್ನು ಪದೇ ಪದೇ ಸ್ಫೋಟಿಸಿದರು. ತಮ್ಮ ಸ್ಥಳೀಯ ಅಭಿವೃದ್ಧಿ ಬೇಡಿಕೆಗಳನ್ನು ನಿರ್ಲಕ್ಷಿಸಿದ ಅಧ್ಯಕ್ಷರ ವಿರುದ್ಧ ಅವರು ತಿರುಗಿಬಿದ್ದಿದ್ದರು. ಹಧ್ರಮೌಟ್ ಪ್ರದೇಶದ ಆದಿವಾಸಿಗಳೂ ತಮ್ಮ ಬೇಡಿಕೆಯ ನಿರ್ಲಕ್ಷ್ಯ ಖಂಡಿಸಿ ತೈಲ ನಿಕ್ಷೇಪಗಳ ಮೇಲೆ ನಿಯಂತ್ರಣ ಸಾಧಿಸಿದರು.
ಹಣಕ್ಕಾಗಿ ವಿದೇಶಿಯರು ಮತ್ತು ಸ್ಥಳೀಯರ ಅಪಹರಣ ಪ್ರಕರಣಗಳ ಸಂಖ್ಯೆ ಏರಿತು. ಉತ್ತರ ಯೆಮನ್ ಪೂರ್ತಿಯಾಗಿ ಹೌಥಿಗಳು ಮತ್ತು ಯೆಮನ್ ಸೇನಾ ಪಡೆ ನಡುವಿನ ವ್ಯಾಪಕ ಆಂತರಿಕ ಯುದ್ಧದಲ್ಲಿ ನಲುಗಿಹೋಯಿತು. ಅರಾಜಕತೆಗೆ ಪುರಾವೆ ಎಂಬಂತೆ, ಶಸ್ತ್ರಸಜ್ಜಿತ ಬಣಗಳ ನಡುವಿನ ಕಾಳಗದಲ್ಲಿ ನೂರಕ್ಕೂ ಹೆಚ್ಚು ಅಧಿಕಾರಿಗಳು ಹತ್ಯೆಗೊಳಗಾದರು.
ಕಳೆದ ವರ್ಷ ಆರು ತಿಂಗಳ ಕಾಲ ಹೌಥಿಗಳು ಆಕ್ರಮಣ ನಡೆಸಿದ್ದರು. ಈ ಸಂದರ್ಭದಲ್ಲಿ ಅವರ ವಿರುದ್ಧ ಸೆಣಸಲು ಉತ್ತರ ಭಾಗಕ್ಕೆ ಸೇನಾಪಡೆಯನ್ನು ನಿಯೋಜಿಸಲು ಹದಿ ನಿರಾಕರಿಸಿದರು. ಬದಲಿಗೆ ಕದನ ವಿರಾಮಗಳನ್ನು ಘೋಷಿಸುತ್ತಾ, ಹೌಥಿಗಳು ರಾಜಕೀಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ನಿರಂತರವಾಗಿ ಮಧ್ಯಸ್ಥಿಕೆ ನಿಯೋಗಗಳನ್ನು ನೇಮಿಸುವುದರಲ್ಲೇ ನಿರತರಾದರು.
ಆಂತರಿಕ ಯುದ್ಧವನ್ನು ಸಂಪೂರ್ಣವಾಗಿ ತಡೆದು ರಾಜತಾಂತ್ರಿಕ ಮಾರ್ಗ ಅನುಸರಿಸಿದರೆ ಯಶಸ್ಸು ಕಾಣಬಹುದು ಎಂಬುದೇ ಹದಿ ಮತ್ತು ವಿಶ್ವಸಂಸ್ಥೆಯ ಬಲವಾದ ನಂಬಿಕೆಯಾಗಿತ್ತು. ಆದರೆ ದೇಶದಲ್ಲಿ ಆದದ್ದೇ ಬೇರೆ. ಹೌಥಿಗಳ ಆಕ್ರಮಣಕ್ಕೆ ಕಡಿವಾಣ ಹಾಕಲು ವಿಫಲರಾದದ್ದು ಮತ್ತು ಶಾಂತಿ ಪರವಾದ ನಿರುತ್ಸಾಹದ ಕರೆ ಹದಿ ಅವರ ದೌರ್ಬಲ್ಯದಂತೆ ಕಾಣಿಸತೊಡಗಿತು.
ಇದರಿಂದಾಗಿ ಕದನವಿರಾಮದ ಪ್ರತಿ ಒಪ್ಪಂದವನ್ನೂ ಹೌಥಿ ಉಗ್ರರು ನಿರ್ಭಯವಾಗಿ ಉಲ್ಲಂಘಿಸುತ್ತಾ ಬಂದರು. ಕೇವಲ ಆರೇ ತಿಂಗಳುಗಳಲ್ಲಿ ದೇಶ ತನ್ನ ಬೃಹತ್ ಸೇನಾ ಶಸ್ತ್ರಾಸ್ತ್ರ ಮತ್ತು ಉತ್ತರದ ನಾಲ್ಕು ಪ್ರಾಂತ್ಯಗಳ ಮೇಲಿನ ಹಿಡಿತವನ್ನು ಕಳೆದುಕೊಂಡಿತು.
ನೂರಾರು ಸೈನಿಕರ ಸಾವಿಗೆ ಕಾರಣರಾದ ಹೌಥಿಗಳನ್ನು ಶಿಕ್ಷಿಸಲು ನಿರಾಕರಿಸಿದ ಹದಿ ಅವರ ನಿಲುವಿನ ವಿರುದ್ಧ ಸೇನಾಪಡೆಯಲ್ಲಿ ಅಸಮಾಧಾನ ಭುಗಿಲೆದ್ದಿತು. ಹೀಗಾಗಿ ಸೆಪ್ಟೆಂಬರ್ನಲ್ಲಿ ಹೌಥಿ ಉಗ್ರರು ರಾಜಧಾನಿ ಸನಾವನ್ನು ಪ್ರವೇಶಿಸಿ ತಮ್ಮ ನಿಯಂತ್ರಣ ಸಾಧಿಸಿದ್ದು ಅಚ್ಚರಿಯ ಸಂಗತಿಯೇನೂ ಆಗಿರಲಿಲ್ಲ. ಹೌಥಿಗಳ ಹೋರಾಟದ ಬಗ್ಗೆ ಅನುಕಂಪ ಹೊಂದಿದ್ದವರು ಅವರ ಕಾರ್ಯಾಚರಣೆಯನ್ನು ಸದ್ದಿಲ್ಲದೇ ಬೆಂಬಲಿಸಿದರು. ಸೇನಾಪಡೆಯು ಹೌಥಿಗಳ ವಿರುದ್ಧ ಹೋರಾಡಲು ನಿರಾಕರಿಸಿತು. ಈ ಮೂಲಕ, ಎಲ್ಲವನ್ನೂ ಸಹಿಸಿಕೊಂಡು ಹೋಗುವ ತಮ್ಮದೇ ನೀತಿಯ ರುಚಿಯನ್ನು ಹದಿಯವರಿಗೆ ಅದು ತೋರಿಸಿಕೊಟ್ಟಿತ್ತು. ಸರ್ಕಾರ ಮತ್ತಷ್ಟು ರಾಜತಾಂತ್ರಿಕ ತಂತ್ರಗಳನ್ನು ಪ್ರಯೋಗಿಸಿ ನೋಡಿತು. ಬೆನೋಮರ್ ಅವರು ಹೌಥಿಗಳೊಂದಿಗೆ ಒಪ್ಪಂದಕ್ಕೆ ಮುಂದಾದರು. ಆದರೆ ಇದು ಪೂರ್ತಿ ಅವಾಸ್ತವಿಕವಾಗಿತ್ತು. 35 ಜನರನ್ನು ಬಲಿ ತೆಗೆದುಕೊಂಡ ಆತ್ಮಾಹುತಿ ದಾಳಿ ಸೇರಿದಂತೆ ನಗರದಲ್ಲಿ ಹಲವು ಹಿಂಸಾಕೃತ್ಯಗಳು ನಡೆದವು. ಇವಕ್ಕೆಲ್ಲ ಹೌಥಿಗಳನ್ನು ವಿರೋಧಿಸುವ ಸ್ಥಳೀಯ ಅಲ್ ಖೈದಾ ಘಟಕವೇ ಕಾರಣ ಎಂಬ ಆರೋಪಗಳು ಕೇಳಿಬಂದವು.
ನೂರಾರು ಸೈನಿಕರ ಸಾವಿಗೆ ಕಾರಣರಾದ ಹೌಥಿಗಳನ್ನು ಶಿಕ್ಷಿಸಲು ನಿರಾಕರಿಸಿದ ಹದಿ ಅವರ ನಿಲುವಿನ ವಿರುದ್ಧ ಸೇನಾಪಡೆಯಲ್ಲಿ ಅಸಮಾಧಾನ ಭುಗಿಲೆದ್ದಿತು. ಹೀಗಾಗಿ ಸೆಪ್ಟೆಂಬರ್ನಲ್ಲಿ ಹೌಥಿ ಉಗ್ರರು ರಾಜಧಾನಿ ಸನಾವನ್ನು ಪ್ರವೇಶಿಸಿ ತಮ್ಮ ನಿಯಂತ್ರಣ ಸಾಧಿಸಿದ್ದು ಅಚ್ಚರಿಯ ಸಂಗತಿಯೇನೂ ಆಗಿರಲಿಲ್ಲ. ಹೌಥಿಗಳ ಹೋರಾಟದ ಬಗ್ಗೆ ಅನುಕಂಪ ಹೊಂದಿದ್ದವರು ಅವರ ಕಾರ್ಯಾಚರಣೆಯನ್ನು ಸದ್ದಿಲ್ಲದೇ ಬೆಂಬಲಿಸಿದರು. ಸೇನಾಪಡೆಯು ಹೌಥಿಗಳ ವಿರುದ್ಧ ಹೋರಾಡಲು ನಿರಾಕರಿಸಿತು. ಈ ಮೂಲಕ, ಎಲ್ಲವನ್ನೂ ಸಹಿಸಿಕೊಂಡು ಹೋಗುವ ತಮ್ಮದೇ ನೀತಿಯ ರುಚಿಯನ್ನು ಹದಿಯವರಿಗೆ ಅದು ತೋರಿಸಿಕೊಟ್ಟಿತ್ತು. ಸರ್ಕಾರ ಮತ್ತಷ್ಟು ರಾಜತಾಂತ್ರಿಕ ತಂತ್ರಗಳನ್ನು ಪ್ರಯೋಗಿಸಿ ನೋಡಿತು. ಬೆನೋಮರ್ ಅವರು ಹೌಥಿಗಳೊಂದಿಗೆ ಒಪ್ಪಂದಕ್ಕೆ ಮುಂದಾದರು. ಆದರೆ ಇದು ಪೂರ್ತಿ ಅವಾಸ್ತವಿಕವಾಗಿತ್ತು. 35 ಜನರನ್ನು ಬಲಿ ತೆಗೆದುಕೊಂಡ ಆತ್ಮಾಹುತಿ ದಾಳಿ ಸೇರಿದಂತೆ ನಗರದಲ್ಲಿ ಹಲವು ಹಿಂಸಾಕೃತ್ಯಗಳು ನಡೆದವು. ಇವಕ್ಕೆಲ್ಲ ಹೌಥಿಗಳನ್ನು ವಿರೋಧಿಸುವ ಸ್ಥಳೀಯ ಅಲ್ ಖೈದಾ ಘಟಕವೇ ಕಾರಣ ಎಂಬ ಆರೋಪಗಳು ಕೇಳಿಬಂದವು.
ಕಳೆದ ವಾರ ಸರ್ಕಾರ ರಾಜೀನಾಮೆ ನೀಡಿದಾಗಿನಿಂದಲೂ ತಮ್ಮ ನಿಯಂತ್ರಣವನ್ನು ಬಿಗಿಗೊಳಿಸಿರುವ ಹೌಥಿಗಳು, ಹದಿ ಹಾಗೂ ಇತರ ಸಚಿವರನ್ನು ಗೃಹಬಂಧನದಲ್ಲಿ ಇರಿಸಿದ್ದಾರೆ. ಅಧ್ಯಕ್ಷರ ರಾಜೀನಾಮೆಯಿಂದ ಸ್ವತಃ ಹೌಥಿಗಳೇ ಅಚ್ಚರಿಗೊಳಗಾದಂತೆ ಕಾಣುತ್ತದೆ. ಅಧಿಕಾರವನ್ನು ಇಷ್ಟೊಂದು ಸುಲಭವಾಗಿ ವಶಪಡಿಸಿಕೊಳ್ಳಬಹು ದೆಂದು ಅವರು ಸಹ ನಿರೀಕ್ಷಿಸಿರಲಿಲ್ಲ. ವಿಶ್ವಸಂಸ್ಥೆ ನಿಯೋಗವು ಮತ್ತೆ ಹೊಸ ರಾಜಕೀಯ ಒಪ್ಪಂದ ಏರ್ಪಡಿಸುವವರೆಗೂ ನಾವು ಕಾಯುತ್ತೇವೆ.
ಏತನ್ಮಧ್ಯೆ, ರಾಜಧಾನಿಯ ಆಡಳಿತದ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ. ಸೂಪರ್ಮಾರ್ಕೆಟ್ನ ಪಾರ್ಕಿಂಗ್ ಸ್ಥಳಗಳು ಬೃಹತ್ ಶಸ್ತ್ರಸಜ್ಜಿತ ಪಹರೆಯವರಿಂದ ತುಂಬಿಹೋಗಿವೆ. ಗ್ರಾಹಕರು ಭುಜಕ್ಕೆ ಬಂದೂಕು ನೇತುಹಾಕಿಕೊಂಡು ನಡುದಾರಿಗಳಲ್ಲಿ ನಡೆದಾಡುತ್ತಾರೆ. ಸನಾದಲ್ಲಿನ ಬಹುತೇಕ ಟ್ಯಾಕ್ಸಿ ಚಾಲಕರ ಆಸನಗಳ ಕೆಳಗೆ ಪಿಸ್ತೂಲು ಇರುತ್ತದೆ. ಪ್ರಬಲ ಬಂಡುಕೋರರ ವಿರುದ್ಧ ತೋರಿದ ನಿಷ್ಕ್ರಿಯತೆ, ದೇಶದಾದ್ಯಂತ ಕಾನೂನು ಮತ್ತು ಭದ್ರತೆ ಜಾರಿಗೊಳಿಸುವಲ್ಲಿ ಇಚ್ಛಾಶಕ್ತಿಯ ಕೊರತೆ, ಜನಸಾಮಾನ್ಯರ ಜೀವನಮಟ್ಟ ಸುಧಾರಿಸುವಲ್ಲಿನ ವೈಫಲ್ಯದಂತಹ ಸತತ ಲೋಪಗಳಿಂದ ಅಂತಿಮವಾಗಿ ಹದಿ ಅವರ ಸರ್ಕಾರ ಉರುಳಿತು. ದೇಶದ ನಾಗರಿಕರು 2011ರಲ್ಲಿ ಬೀದಿಗಿಳಿದು ಹೋರಾಡಿ ತಂದಿದ್ದಷ್ಟು ಬದಲಾವಣೆಯನ್ನು ಸಹ ತರಲು ಹದಿಯವರಿಗೆ ಮತ್ತು ವಿಶ್ವಸಂಸ್ಥೆಗೆ ಸಾಧ್ಯವಾಗಲಿಲ್ಲ.
ಹೀಗೆ ‘ಯೆಮನ್ ಮಾದರಿ’ಯ ಜಾಗದಲ್ಲಿ ‘ಹಿಂಸಾಚಾರ ಲಾಭದಾಯಕ’ ಎಂಬ ತನ್ನ ಸರಳವಾದ ನಾಣ್ಣುಡಿಯೊಂದಿಗೆ ‘ಹೌಥಿ ಮಾದರಿ’ ಬಂದು ಕುಳಿತಿದೆ.
ಹೀಗೆ ‘ಯೆಮನ್ ಮಾದರಿ’ಯ ಜಾಗದಲ್ಲಿ ‘ಹಿಂಸಾಚಾರ ಲಾಭದಾಯಕ’ ಎಂಬ ತನ್ನ ಸರಳವಾದ ನಾಣ್ಣುಡಿಯೊಂದಿಗೆ ‘ಹೌಥಿ ಮಾದರಿ’ ಬಂದು ಕುಳಿತಿದೆ.
ವಿಶೇಷ
ಪ್ರಖರ ರಾಜಕೀಯ ಚಿಂತಕ ರಜನಿ ಕೊಠಾರಿ
ಶಿಕ್ಷಣ ತಜ್ಞ, ರಾಜಕೀಯ ಚಿಂತಕ, ನಾಗರಿಕ ಹಕ್ಕುಗಳ ಹೋರಾಟಗಾರ, ಯೋಜನಾ ಆಯೋಗದ ಸದಸ್ಯ, ಹಲವಾರು ಮೌಲಿಕ ಗ್ರಂಥಗಳ ರಚನೆಕಾರ – ಹೀಗೆ ಬಹುಮುಖ ವ್ಯಕ್ತಿತ್ವದ ರಜನಿ ಕೊಠಾರಿ (1928–- 2015) ಅವರ ನಿಧನದಿಂದ ದೇಶದ ರಾಜಕೀಯ ವಿಜ್ಞಾನ ಕ್ಷೇತ್ರವು ಬಡವಾಗಿದೆ.
20ನೇ ಶತಮಾನದ ಶ್ರೇಷ್ಠ ರಾಜಕೀಯ ಚಿಂತಕರಲ್ಲಿ ಒಬ್ಬರಾಗಿದ್ದ, ಪ್ರಜಾಪ್ರಭುತ್ವ ಪರ ತಾತ್ವಿಕ ಸಿದ್ಧಾಂತ ಪ್ರತಿಪಾದಿಸಿದ್ದ, ಜನಪರ ಚಳವಳಿಗಳ ಮಾರ್ಗದರ್ಶಕ, ರಾಜಕೀಯ ತತ್ವಜ್ಞಾನಿಯಾಗಿದ್ದ ಕೊಠಾರಿ ಅವರ ಅಗಲಿಕೆಯಿಂದ ರಾಜಕೀಯ ಚಿಂತಕನ ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದೆ. ಹಲವಾರು ಪುಸ್ತಕಗಳು, ಸಂಶೋಧನಾ ಪ್ರಬಂಧಗಳು, ಸೈದ್ಧಾಂತಿಕ ಸೋಪಜ್ಞತೆ ಮುಂತಾದವು ಇವರನ್ನು ದೇಶದ ರಾಜಕೀಯ ವ್ಯವಸ್ಥೆಯ ಪ್ರಭಾವಿ ಚಿಂತಕರನ್ನಾಗಿ ರೂಪಿಸಿದ್ದವು.
ಅಕಾಡೆಮಿಕ್ ಚಟುವಟಿಕೆಗಳಿಗಷ್ಟೇ ಇವರು ತಮ್ಮ ವ್ಯಕ್ತಿತ್ವವನ್ನು ಸೀಮಿತಗೊಳಿಸಿಕೊಂಡಿರಲಿಲ್ಲ. ರಾಜಕೀಯದಲ್ಲಿಯೂ ಸಕ್ರಿಯವಾಗಿ ತೊಡಗಿಕೊಂಡಿದ್ದರು. ಒಂದು ಹಂತದಲ್ಲಿ ರಾಜಕೀಯದಿಂದ ಭ್ರಮನಿರಸನಗೊಂಡು ಮಾನವ ಹಕ್ಕುಗಳ ಹೋರಾಟಗಾರರಾಗಿ ತಮ್ಮ ಬದುಕಿನ ಧ್ಯೇಯವನ್ನೇ ಬದಲಿಸಿಕೊಂಡಿದ್ದರು. ಜಾತಿ ವ್ಯವಸ್ಥೆಯನ್ನು ಎಡೆಬಿಡದೆ ಪರಾಮರ್ಶಿಸಿದ ದಣಿವರಿಯದ ಹೋರಾಟಗಾರ ಎಂದೂ ಖ್ಯಾತರಾಗಿದ್ದರು.
ಮಹತ್ವದ ಮತ್ತು ವಿವಾದಾತ್ಮಕ ವಿಷಯಗಳಲ್ಲಿ ತಮಗೆ ಸರಿ ಕಂಡಿದ್ದನ್ನು ದಿಟ್ಟವಾಗಿ ಹೇಳುವ ಎದೆಗಾರಿಕೆ ಇವರದಾಗಿತ್ತು. ತಾವು ತಳೆದಿರುವ ಕಠಿಣ ನಿಲುವು ಅಧಿಕಾರಸ್ಥರಿಗೆ ಅಪಥ್ಯವಾಗಿದ್ದರೂ ಅವರೆಂದೂ ತಮ್ಮ ಧೋರಣೆ ಬದಲಿಸುತ್ತಿರಲಿಲ್ಲ.
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಯಾಗಿ ಸಮರ್ಥಿಸುತ್ತಿದ್ದ ಇವರು, ದೇಶದಲ್ಲಿ ರಾಜಕೀಯ ಬದಲಾವಣೆಯನ್ನೂ ಅಷ್ಟೇ ಪ್ರಬಲವಾಗಿ ಪ್ರತಿಪಾದಿಸುತ್ತಿದ್ದರು. ತಮ್ಮ ಹಲವಾರು ಕೃತಿಗಳ ಮೂಲಕ ದೇಶದ ರಾಜಕೀಯ ವ್ಯವಸ್ಥೆಯ ಅಧ್ಯಯನದ ಮೇಲೆ ವಿಶೇಷ ಛಾಪು ಮೂಡಿಸಿದ್ದರು. ‘ಪೊಲಿಟಿಕ್ಸ್ ಇನ್ ಇಂಡಿಯಾ’, ‘ಕಾಸ್ಟ್ ಇನ್ ಇಂಡಿಯನ್ ಪೊಲಿಟಿಕ್ಸ್’, ‘ರಿಥಿಂಕಿಂಗ್ ಡೆವಲಪ್ಮೆಂಟ್: ಇನ್ ಸರ್ಚ್ ಆಫ್ ಹ್ಯೂಮನ್ ಆಲ್ಟರ್ನೇಟಿವ್ಸ್’ ಮುಂತಾದವು ಅವರ ಕೃತಿಗಳಲ್ಲಿ ಪ್ರಮುಖವಾದವುಗಳು.
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಯಾಗಿ ಸಮರ್ಥಿಸುತ್ತಿದ್ದ ಇವರು, ದೇಶದಲ್ಲಿ ರಾಜಕೀಯ ಬದಲಾವಣೆಯನ್ನೂ ಅಷ್ಟೇ ಪ್ರಬಲವಾಗಿ ಪ್ರತಿಪಾದಿಸುತ್ತಿದ್ದರು. ತಮ್ಮ ಹಲವಾರು ಕೃತಿಗಳ ಮೂಲಕ ದೇಶದ ರಾಜಕೀಯ ವ್ಯವಸ್ಥೆಯ ಅಧ್ಯಯನದ ಮೇಲೆ ವಿಶೇಷ ಛಾಪು ಮೂಡಿಸಿದ್ದರು. ‘ಪೊಲಿಟಿಕ್ಸ್ ಇನ್ ಇಂಡಿಯಾ’, ‘ಕಾಸ್ಟ್ ಇನ್ ಇಂಡಿಯನ್ ಪೊಲಿಟಿಕ್ಸ್’, ‘ರಿಥಿಂಕಿಂಗ್ ಡೆವಲಪ್ಮೆಂಟ್: ಇನ್ ಸರ್ಚ್ ಆಫ್ ಹ್ಯೂಮನ್ ಆಲ್ಟರ್ನೇಟಿವ್ಸ್’ ಮುಂತಾದವು ಅವರ ಕೃತಿಗಳಲ್ಲಿ ಪ್ರಮುಖವಾದವುಗಳು.
ಸಮಾಜ ವಿಜ್ಞಾನ ಕ್ಷೇತ್ರದಲ್ಲಿ ಮಾರ್ಕ್ಸ್ವಾದಿ ಚಿಂತನೆಯ ಪ್ರಭಾವವೇ ಹೆಚ್ಚಿಗೆ ಇದ್ದ ದಿನಗಳಲ್ಲಿ, ಇವರು ಅಂತಹ ಆಲೋಚನೆಗಳಿಗೆ ಪರ್ಯಾಯವಾಗಿ ಹೊಸ ದಿಕ್ಕು ತೋರಿಸಿದರು. 1970ರ ದಶಕದ ಆರಂಭದಲ್ಲಿ ಇವರ ಈ ಹೊಸ ಚಿಂತನೆಗಳನ್ನು ರಾಜಕಾರಣಿಗಳು ಮತ್ತು ಬುದ್ಧಿಜೀವಿಗಳು ಸಂದೇಹದಿಂದಲೇ ನೋಡಿದ್ದರು. ದಿನಗಳು ಉರುಳಿದಂತೆ ಜಾತಿ ಆಧಾರದ ಮೇಲೆ ರಾಜಕೀಯ ಪಕ್ಷಗಳನ್ನು ಸಂಘಟಿಸುವ ಪ್ರವೃತ್ತಿ ರೂಢಿಗೆ ಬರುತ್ತಿದ್ದಂತೆ ಇವರ ಚಿಂತನೆಗಳು ಹೆಚ್ಚೆಚ್ಚು ಪ್ರಸ್ತುತವಾಗತೊಡಗಿದವು. ಭಾರತದ ರಾಜಕೀಯ ವಿಜ್ಞಾನದ ರಾಯಭಾರಿ ಎಂದೇ ಪರಿಗಣಿಸಲಾಗಿರುವ ರಜನಿ ಕೊಠಾರಿ, ಪ್ರತಿಷ್ಠಿತ ಸಂಸ್ಥೆಗಳ ಸ್ಥಾಪಕರಾಗಿಯೂ ಇತಿಹಾಸದಲ್ಲಿ ತಮ್ಮದೇ ಆದ ಛಾಪು ಬಿಟ್ಟು ಹೋಗಿದ್ದಾರೆ.
ಹಲವಾರು ಪ್ರತಿಕೂಲಗಳ ಮಧ್ಯೆಯೂ ‘ಸಿಎಸ್ಡಿಎಸ್’ ಅಸ್ತಿತ್ವ ಉಳಿಸಿಕೊಳ್ಳುವುದರ ಜತೆಗೆ, ಈ ಸಂಸ್ಥೆಯು ಪ್ರಭಾವಶಾಲಿ ಪಾತ್ರ ನಿರ್ವಹಿಸುವಲ್ಲಿಯೂ ಇವರ ಕೊಡುಗೆ ಗಮನಾರ್ಹವಾಗಿತ್ತು. ಸಂಸ್ಥೆಯ ಕಾರ್ಯವೈಖರಿಯು ಬರೀ ಸೈದ್ಧಾಂತಿಕ ಮಟ್ಟಕ್ಕೆ ಸೀಮಿತಗೊಳಿಸದೇ, ಪ್ರಯೋಗಾತ್ಮಕ ಕಾರ್ಯಕ್ರಮಗಳ ಮೂಲಕವೂ ತನ್ನ ಅಸ್ತಿತ್ವ ಸಾಬೀತುಪಡಿಸುವಲ್ಲಿಯೂ ಪ್ರಮುಖ ಪಾತ್ರ ನಿರ್ವಹಿಸಿದ್ದರು. ದೇಶದ ಚುನಾವಣೆಗಳಲ್ಲಿ ಸಂಸ್ಥೆಯ ಲೋಕನೀತಿ ಕಾರ್ಯಕ್ರಮಗಳೂ ಗಮನಾರ್ಹ ಪಾತ್ರ ನಿರ್ವಹಿಸಿವೆ.
ಸಾಮಾಜಿಕ ಕಾರ್ಯಕರ್ತರು ಮತ್ತು ಬುದ್ಧಿಜೀವಿಗಳ ಮಧ್ಯೆ ಸಂವಹನ ನಡೆಸುವ ಉದ್ದೇಶಕ್ಕೆ ‘ಲೋಕಯಾನ’ ವೇದಿಕೆಯನ್ನೂ ರಚಿಸಿದ್ದರು. ಇದಕ್ಕೆ 1985ರಲ್ಲಿ ‘ಪರ್ಯಾಯ ನೊಬೆಲ್’ ಎಂದೇ ಖ್ಯಾತವಾಗಿರುವ ‘ರೈಟ್ ಲೈವ್ಲಿ ಹುಡ್’ ಪ್ರಶಸ್ತಿ ದೊರೆತಿತ್ತು. ಜೈನ ವ್ಯಾಪಾರಿಯ ಏಕೈಕ ಮಗನಾಗಿ ಜನಿಸಿದ್ದ ಕೊಠಾರಿ, ಬರೋಡಾ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ವೃತ್ತಿ ಬದುಕು ಆರಂಭಿಸಿದ್ದರು.
60ರ ದಶಕದಲ್ಲಿ ‘ಇಕನಾಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ’ಯಲ್ಲಿ ದೇಶದ ರಾಜಕೀಯ ವ್ಯವಸ್ಥೆ ಬಗ್ಗೆ ಹೊಸ ಚಿಂತನೆಗೆ ಹಚ್ಚುವ ಸರಣಿ ಲೇಖನಗಳನ್ನು ಬರೆಯುವುದರ ಮೂಲಕ ಗಮನ ಸೆಳೆದಿದ್ದರು. ರೊಮೇಶ್ ಥಾಪರ್ ಅವರು ಪ್ರಕಟಿಸುತ್ತಿದ್ದ ‘ಸೆಮಿನಾರ್’ ನಿಯತಕಾಲಿಕೆಗೂ ಲೇಖನಗಳನ್ನು ಬರೆಯುತ್ತಿದ್ದರು. ಪ್ರೊ. ಶ್ಯಾಮಾ ಚರಣ್ ದುಬೆ ಅವರ ಆಹ್ವಾನದ ಮೇರೆಗೆ ಮಸ್ಸೂರಿಯಲ್ಲಿನ ಸಮುದಾಯ ಅಭಿವೃದ್ಧಿ ರಾಷ್ಟ್ರೀಯ ಸಂಸ್ಥೆಯ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಲು ತೆರಳಿದ್ದರು. 1963ರಲ್ಲಿ ದೆಹಲಿಗೆ ಬಂದ ಕೊಠಾರಿ, ಏಷ್ಯಾ ಫೌಂಡೇಷನ್ನಿನ ಭಾರತದ ಘಟಕದ ಹಣಕಾಸು ನೆರವಿನಿಂದ ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (ಸಿಎಸ್ಡಿಎಸ್) ಸ್ಥಾಪಿಸಿದರು.
ಕಾಲಕ್ರಮೇಣ ಈ ಸಂಸ್ಥೆಯು ಸಮಾಜ ವಿಜ್ಞಾನ ಸಂಶೋಧನಾ ಕೇಂದ್ರವಾಗಿ ಬೃಹತ್ತಾಗಿ ಬೆಳೆಯುವುದರ ಜತೆಗೆ, ಹಲವಾರು ಹೊಸ ಚಿಂತಕರೂ ಬೆಳಕಿಗೆ ಬರಲು ವೇದಿಕೆಯಾಯಿತು.
ಕಾಲಕ್ರಮೇಣ ಈ ಸಂಸ್ಥೆಯು ಸಮಾಜ ವಿಜ್ಞಾನ ಸಂಶೋಧನಾ ಕೇಂದ್ರವಾಗಿ ಬೃಹತ್ತಾಗಿ ಬೆಳೆಯುವುದರ ಜತೆಗೆ, ಹಲವಾರು ಹೊಸ ಚಿಂತಕರೂ ಬೆಳಕಿಗೆ ಬರಲು ವೇದಿಕೆಯಾಯಿತು.
ರಾಜಕೀಯ ಚಿಂತನೆಗಳಿಗಷ್ಟೇ ಇವರ ವ್ಯಕ್ತಿತ್ವ ಸೀಮಿತವಾಗಿರಲಿಲ್ಲ. ಕಾಂಗ್ರೆಸ್ ಪಕ್ಷದ ಸಂಘಟನೆ ಮತ್ತು ದೇಶ ನಿರ್ಮಾಣದತ್ತಲೂ ಇವರು ಆಸಕ್ತರಾಗಿದ್ದರು. ಜಾತಿ ವ್ಯವಸ್ಥೆಯು ಕ್ರಮೇಣ ಬದಲಾಗುತ್ತ, ಪ್ರಜಾಪ್ರಭುತ್ವ ವ್ಯವಸ್ಥೆಯ ರಾಜಕೀಯದ ಅವಿಭಾಜ್ಯ ಅಂಗವಾಗಿ ಬೆಳೆಯುವ ಬಗೆಯನ್ನು ಅವರು ಸೂಕ್ಷ್ಮವಾಗಿ ಗಮನಿಸಿ ವಿಭಿನ್ನ ನೆಲೆಯಲ್ಲಿ ವಿಶ್ಲೇಷಿಸುತ್ತಿದ್ದರು. ದೇಶದ ರಾಜಕೀಯದಲ್ಲಿ ಜಾತಿಯು ಪ್ರಮುಖ ಪಾತ್ರ ನಿರ್ವಹಿಸಲಿರುವುದರ ಬಗ್ಗೆ ಆರಂಭದ ಹಂತದಲ್ಲಿಯೇ ತಿಳಿದುಕೊಂಡವರಲ್ಲಿ ಇವರು ಪ್ರಮುಖರಾಗಿದ್ದರು.
ಕಾಂಗ್ರೆಸ್ ಪಕ್ಷದ ಕಟ್ಟಾ ಅಭಿಮಾನಿಯೂ ಆಗಿದ್ದ ಅವರು, ಪಕ್ಷದಲ್ಲಿ ಇಂದಿರಾ ಗಾಂಧಿ ಅವರ ಕಿರಿಯ ಮಗ ಸಂಜಯ್ ಗಾಂಧಿ ಪ್ರವರ್ಧಮಾನಕ್ಕೆ ಬರುತ್ತಿದ್ದಂತೆ ಮತ್ತು ತುರ್ತು ಪರಿಸ್ಥಿತಿ ಕಾಲದ ಅತಿರೇಕಗಳಿಂದ ಬೇಸತ್ತು ಪಕ್ಷದ ಜತೆಗಿನ ನಂಟು ಕಡಿದುಕೊಂಡಿದ್ದರು.
80ರ ದಶಕದಲ್ಲಿ ಅವರು ನಾಗರಿಕ ಹಕ್ಕುಗಳು ಮತ್ತು ಜನಪರ ಚಳವಳಿಗಳಿಂದ ಹೆಚ್ಚು ಪ್ರಭಾವಿತರಾದರು. ಹೀಗಾಗಿ ನಂತರದ ವರ್ಷಗಳಲ್ಲಿ ರಾಜಕೀಯ ಪಕ್ಷಗಳಿಂದ ಹೊರತಾದ ಚಳವಳಿಗಳಲ್ಲಿ ಹೆಚ್ಚು ಸಕ್ರಿಯವಾಗಿ ಪಾಲ್ಗೊಂಡರು. ಎರಡು ದಶಕಗಳ ಕಾಲ ಸಾಮಾಜಿಕ ವಿಜ್ಞಾನ ಕ್ಷೇತ್ರದಲ್ಲಿ ಗಮನಾರ್ಹ ಬಗೆಯಲ್ಲಿ ಕೆಲಸ ನಿರ್ವಹಿಸಿದರು. ಈ ಹಂತದಲ್ಲಿ ಅವರ ರಾಜಕೀಯ ಲೇಖನಗಳು ಇನ್ನಷ್ಟು ಮೊನಚಾಗಿರುತ್ತಿದ್ದವು.
1970ರಲ್ಲಿ ‘ಪೊಲಿಟಿಕ್ಸ್ ಇನ್ ಇಂಡಿಯಾ’ ಗ್ರಂಥ ಪ್ರಕಟಿಸಿದ ಕೊಠಾರಿ, ಅದರಲ್ಲಿ ಭಾರತದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಬರೀ ಒಂದು ರಾಜಕೀಯ ಪಕ್ಷವಾಗಿರದೇ ಅದೊಂದು ವ್ಯವಸ್ಥೆಯಾಗಿದೆ ಎಂದು ಪ್ರತಿಪಾದಿಸಿದ್ದರು. ಆನಂತರ ಅವರು 1973ರಲ್ಲಿ ‘ಕಾಸ್ಟ್ ಇನ್ ಇಂಡಿಯನ್ ಪೊಲಿಟಿಕ್ಸ್’ ಮತ್ತು 1974ರಲ್ಲಿ ‘ಫುಟ್ಸ್ಟೆಪ್ಸ್ ಇನ್ ಟು ದ ಫ್ಯೂಚರ್’ ಪ್ರಮುಖ ಕೃತಿಗಳನ್ನು ಹೊರತಂದಿದ್ದರು.
1975ರ ತುರ್ತುಪರಿಸ್ಥಿತಿ ಘೋಷಣೆ ನಂತರ ರಾಜಕೀಯ ಪಕ್ಷಗಳ ನಂಟು ಕಡಿದುಕೊಂಡು ನಾಗರಿಕ ಹಕ್ಕುಗಳ ಹೋರಾಟಗಾರರಾಗಿ ಬದಲಾದರು. ಜಯಪ್ರಕಾಶ್ ನಾರಾಯಣ ಅವರ ಜತೆ ಗುರುತಿಸಿಕೊಂಡಿದ್ದರು. 1980ರಲ್ಲಿ ಹೋರಾಟಗಾರರು, ಚಿಂತಕರು ಮತ್ತು ಬುದ್ಧಿ ಜೀವಿಗಳಿಗಾಗಿ ‘ಲೋಕಯಾನ’ ವೇದಿಕೆ ಸ್ಥಾಪಿಸಿದರು. ಧರ್ಮ, ಕೃಷಿ, ಆರೋಗ್ಯ, ರಾಜಕಾರಣ ಮತ್ತು ಶಿಕ್ಷಣ ರಂಗದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಈ ವೇದಿಕೆಯು ನೆರವಾಯಿತು.
ನಾಗರಿಕ ಹಕ್ಕುಗಳ ಸಂಘಟನೆ (People's Union for Civil Liberties– -PUCL) ಮತ್ತು ‘ಸಿಟಿಜನ್ಸ್ ಫಾರ್ ಡೆಮಾಕ್ರಸಿ’ ಜತೆಗೂ ಗುರುತಿಸಿಕೊಂಡಿದ್ದರು. ‘ಪಿಯುಸಿಎಲ್’ನ ಪ್ರಧಾನ ಕಾರ್ಯದರ್ಶಿ ಮತ್ತು ಅಧ್ಯಕ್ಷರಾಗಿಯೂ (1982–-84) ಕಾರ್ಯನಿರ್ವಹಿಸಿದ್ದರು. ದಿನಪತ್ರಿಕೆಗಳ ಅಂಕಣಕಾರರೂ ಆಗಿದ್ದ ರಜನಿ ಕೊಠಾರಿ, 2002ರಲ್ಲಿ ತಮ್ಮ ಆತ್ಮಕಥೆಯನ್ನು ‘ಮೆಮೊಯರ್ಸ್: ಅನ್ಈಸಿ ಈಸ್ ದ ಲೈಫ್ ಆಫ್ ದ ಮೈಂಡ್’ ಹೆಸರಿನಲ್ಲಿ ಬರೆದಿದ್ದರು. ಫೋರ್ಡ್ ಫೌಂಡೇಷನ್ ಮತ್ತು ರತನ್ ಟಾಟಾ ಟ್ರಸ್ಟ್ ಸಹಯೋಗದಲ್ಲಿ ‘ಸಿಎಸ್ಡಿಎಸ್’ನಲ್ಲಿ ‘ರಜನಿ ಕೊಠಾರಿ ಅಧ್ಯಯನ ಪೀಠ’ ಸ್ಥಾಪಿಸಿರುವುದು ಇವರಿಗೆ ಸಂದ ಗೌರವವಾಗಿದೆ.
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೊಟ್ಟ ಮೊದಲ ಪ್ರಭಾವಿ ಚಿಂತಕ, ವಿಜ್ಞಾನಿ (political scientist) ಎಂದು ಯೋಗೇಂದ್ರ ಯಾದವ್ ಇವರನ್ನು ಬಣ್ಣಿಸಿರುವುದರಲ್ಲಿ ಅತಿಶಯೋಕ್ತಿ ಏನೂ ಇಲ್ಲ.
ವಿಶೇಷ›
ರೇಗನ್, ಒಬಾಮ ಮತ್ತು ಅಸಮಾನತೆ
1970ರ ದಶಕದ ನಂತರ ಅಮೆರಿಕದ ಒಟ್ಟು ವ್ಯವಸ್ಥೆಯಲ್ಲಿ ಸಾಕಷ್ಟು ಗಂಭೀರವಾದ ತಪ್ಪುಗಳಾಗಿವೆ. ಅಸಮಾನತೆ ಹೆಚ್ಚಿದೆ. ಶೈಕ್ಷಣಿಕ ಪ್ರಗತಿ ಕುಂಠಿತಗೊಂಡಿದೆ. ಬಂಧನ ಪ್ರಕರಣಗಳು ಐದು ಪಟ್ಟು ಹೆಚ್ಚಾಗಿವೆ. ಕೌಟುಂಬಿಕ ಬಿರುಕುಗಳು ಅಧಿಕಗೊಂಡಿವೆ. ಕುಟುಂಬಗಳ ಸರಾಸರಿ ಆದಾಯ ನಿಂತ ನೀರಾಗಿದೆ.
‘ಅಮೆರಿಕದಲ್ಲಿ ಮತ್ತೆ ಅರುಣೋದಯವಾಗಿದೆ’- – ೧೯೮೪ರಲ್ಲಿ ಅಧ್ಯಕ್ಷ ರೊನಾಲ್ಡ್ ರೇಗನ್ ಅವರ ಚುನಾವಣಾ ಪ್ರಚಾರದ ಘೋಷವಾಕ್ಯ ಇದು. ಆದರೆ, ನಡೆದದ್ದೇ ಬೇರೆ. ದೇಶದ ಸಾಮಾಜಿಕ ವ್ಯವಸ್ಥೆಯ ದಾರಿ ತಪ್ಪಿಸುವಂಥ ಅಸಮಾನತೆ, ಜಡತ್ವ ರೇಗನ್ ಅವರ ಆಡಳಿತಾವಧಿಯ ಆರಂಭದ ದಿನಗಳಲ್ಲೇ ಹುಟ್ಟಿಕೊಂಡವು. ಆಳವಾಗಿ ಬೇರೂರಿದ ಇವುಗಳನ್ನು ಅಲುಗಾಡಿಸಲು ಇನ್ನೂ ಸಾಧ್ಯವಾಗಿಲ್ಲ. ೨೦೦೦ನೇ ಇಸವಿಯಿಂದೀಚೆಗಂತೂ ಅಧ್ಯಕ್ಷ ಬರಾಕ್ ಒಬಾಮ ಅವರ ಆಡಳಿತದಲ್ಲಿ ಅಸಮಾನತೆ ಇನ್ನಷ್ಟು ಹೆಚ್ಚಿದೆ.
ಜಾರಿಯಾಗದ ಪ್ರಸ್ತಾವ: ಒಬಾಮ ಅವರು ಅಧಿಕಾರ ವಹಿಸಿಕೊಂಡ ನಂತರ ದೇಶದ ಆರ್ಥಿಕ ಸ್ಥಿತಿಗತಿ ಸುಧಾರಣೆಗೆ ಪ್ರಸ್ತಾಪಿಸಿದ ಬಹುಪಾಲು ಯೋಜನೆ ಗಳು ಕಾರ್ಯರೂಪಕ್ಕೆ ಬಂದಿಲ್ಲ. ಅವು ಜಾರಿ ಆಗುವುದಿರಲಿ, ಕಾಂಗ್ರೆಸ್ನಲ್ಲಿ ಮಂಡನೆಯಾಗುವುದಕ್ಕೂ ಮೊದಲೇ ಪ್ರಾಮುಖ್ಯ ಕಳೆದುಕೊಂಡಿವೆ.
ಕಾಂಗ್ರೆಸ್ ಜಂಟಿ ಅಧಿವೇಶನ ಉದ್ದೇಶಿಸಿ 2014ರಲ್ಲಿ ಒಬಾಮ ಮಾಡಿದ ಭಾಷಣ ಯಾರಿಗಾದರೂ ನೆನಪಿದೆಯೇ? ಖಂಡಿತವಾಗಿಯೂ ಇರಲಿಕ್ಕಿಲ್ಲ! ಆ ಭಾಷಣದಲ್ಲಿ ಅವರು ೧೮ ಯೋಜನೆ ಗಳನ್ನು ಪ್ರಸ್ತಾಪಿಸಿದ್ದರು. ಪಿಬಿಎಸ್ (ಸಾರ್ವಜನಿಕ ಪ್ರಸಾರ ಸೇವೆ) ಪ್ರಕಾರ, ಈ ಪೈಕಿ ಅನುಷ್ಠಾನಗೊಂಡಿದ್ದು ಕೇವಲ ಎರಡು. ೨೦೧೩ರಲ್ಲಿ ‘ಬಂದೂಕು ಹಿಂಸಾಚಾರ’ವನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅವರು ಆವೇಶಭರಿತರಾಗಿ ಮಾತನಾಡಿದ್ದರು. ಹಿಂಸಾಚಾರ ತಡೆಗೆ ಕೈಗೊಳ್ಳಬೇಕಾದ ಕ್ರಮಗಳನ್ನೂ ಪ್ರಸ್ತಾಪಿಸಿದ್ದರು. ಇದರಿಂದ ಏನಾದರೂ ಬದಲಾವಣೆ ಆಗಿದೆಯೇ ಎಂದರೆ ಫಲಿತಾಂಶ ಶೂನ್ಯ. ಈ ಬಾರಿಯಂತೂ ಅವರ ಬಾಯಲ್ಲಿ ‘ಬಂದೂಕು’ ಎಂಬ ಪದವೇ ಕೇಳಿಬರಲಿಲ್ಲ.
ರಾಷ್ಟ್ರೀಯ ಕಾರ್ಯಸೂಚಿಗೆ ಸಂಬಂಧಿಸಿದಂತೆ ಒಬಾಮ ಅವರ ನಿಲುವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆದರೆ, ಅಸಮಾನತೆಯ ವಿಷಯದಲ್ಲಿ ಅವರು ಕೇಳಿರುವ, ‘ಕೇವಲ ಬೆರಳೆಣಿಕೆಯಷ್ಟು ಮಂದಿ ಅತ್ಯಂತ ಧನಿಕರಾಗಿರುವ ಆರ್ಥಿಕ ವ್ಯವಸ್ಥೆಯನ್ನು ನಾವು ಒಪ್ಪಿಕೊಳ್ಳಬೇಕೆ?’ ಎಂಬ ಪ್ರಶ್ನೆ ಸಮಂಜಸವಾಗಿದೆ.
೨೦ನೇ ಶತಮಾನದ ಮೊದಲ ಏಳೂವರೆ ದಶಕಗಳ ಅವಧಿಯಲ್ಲಿ ಅಮೆರಿಕದ ಸಾಮಾಜಿಕ ಸ್ಥಿತಿಗತಿ ಅತ್ಯುತ್ತಮವಾಗಿಯೇ ಇತ್ತು. ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿತ ಇದ್ದುದರ ನಡುವೆಯೂ ಅಮೆರಿಕನ್ನರ ಆದಾಯ ಏರುಗತಿಯಲ್ಲೇ ಸಾಗಿತ್ತು. ಶಿಕ್ಷಣ ವ್ಯವಸ್ಥೆ ಪ್ರಗತಿಯ ಹಾದಿಯಲ್ಲಿತ್ತು. ಅಸಮಾನತೆ ಪ್ರಮಾಣ ಕಡಿಮೆಯಾಗುತ್ತಾ ಬಂದಿತ್ತು. ಲಾಭಾಂಶವನ್ನು ಬಡವರು, ಸಿರಿವಂತರು ಸಮನಾಗಿ ಹಂಚಿಕೊಳ್ಳುತ್ತಿದ್ದರು. ಪ್ರೌಢಶಿಕ್ಷಣದ ಪ್ರಮಾಣವೂ ಹೆಚ್ಚಿತ್ತು. ಶೈಕ್ಷಣಿಕ ಸಾಧನೆಯಲ್ಲಿ ಅಮೆರಿಕ ಜಗತ್ತಿಗೇ ನಾಯಕನಾಗಿತ್ತು. ಗಮನಾರ್ಹವಾದ ಈ ಅವಧಿಯಲ್ಲಿ ಆದಾಯ ತೆರಿಗೆ ಪ್ರಮಾಣ ಕೂಡ
ಶೇ ೯೦ ದಾಟಿತ್ತು. ಆದರೆ, ೧೯೭೦ರ ಅಂತ್ಯದ ವೇಳೆಗೆ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಯಿತು.
ಶೇ ೯೦ ದಾಟಿತ್ತು. ಆದರೆ, ೧೯೭೦ರ ಅಂತ್ಯದ ವೇಳೆಗೆ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಯಿತು.
ಆರ್ಥಿಕ ತಜ್ಞ ಜೇಮ್ಸ್ ಕೆ.ಗಾಲ್ಬ್ರೆತ್ ಅವರು ‘ಸಹಜ ಸ್ಥಿತಿಯ ಅಂತ್ಯ’ ಎಂಬ ತಮ್ಮ ಕೃತಿಯಲ್ಲಿ ಈ ವಿಷಯವನ್ನು ವಿವರವಾಗಿ ವಿಶ್ಲೇಷಿಸಿದ್ದಾರೆ. ನಂತರ ದೇಶದ ಅರ್ಥ ವ್ಯವಸ್ಥೆ ಪ್ರಗತಿ ಕಾಣಲು ಆರಂಭಿಸಿತಾದರೂ, ಸಮಾಜ ದಲ್ಲಿ ಆರ್ಥಿಕ ಅಸಮಾನತೆ ಹೆಚ್ಚಾಯಿತು. ಸಂಪತ್ತು ಉಳ್ಳವರಲ್ಲೇ ಶೇಖರಗೊಂಡಿತೇ ವಿನಾ ಶೇ ೯೦ರಷ್ಟು ಪ್ರಮಾಣದಲ್ಲಿರುವ ಆರ್ಥಿಕ ದುರ್ಬಲರಿಗೆ ಸಿಗಲಿಲ್ಲ. ಇಂದು ಅಮೆರಿಕದ ಕುಟುಂಬಗಳ ಸರಾಸರಿ ಆದಾಯ ೧೯೭೯ರಲ್ಲಿ ಇದ್ದುದಕ್ಕಿಂತ ಸ್ವಲ್ಪ ಹೆಚ್ಚಾಗಿರಬಹುದು. ಆದರೆ ಹೋಲಿಸಿ ನೋಡಿದರೆ, ಅಮೆರಿಕದ ಕುಟುಂಬಕ್ಕಿಂತ ಕೆನಡಾ ಕುಟುಂಬದ ಜೀವನ ಮಟ್ಟ ಉತ್ತಮವಾಗಿದೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.
ಶೈಕ್ಷಣಿಕ ಪ್ರಗತಿ ಕುಂಠಿತವಾಗಿರುವುದು ಇದಕ್ಕೆ ಮುಖ್ಯ ಕಾರಣ. ಅಮೆರಿಕದ ಇಂದಿನ ಯುವಕರಲ್ಲಿ ಶೇ ೨೯ರಷ್ಟು ಮಂದಿ ತಮ್ಮ ಪೋಷಕರಿಗಿಂತಲೂ ಕಡಿಮೆ ಶಿಕ್ಷಣ ಪಡೆದಿದ್ದರೆ, ಶೇ 20ರಷ್ಟು ಯುವಕರು ಮಾತ್ರ ಹೆಚ್ಚು ಶಿಕ್ಷಣ ಪಡೆದಿದ್ದಾರೆ. ಜಗತ್ತಿನ ಪ್ರಮುಖ ಕೈಗಾರಿಕಾ ರಾಷ್ಟ್ರಗಳಲ್ಲಿ ಮೂರು ವರ್ಷದ ಶೇ ೭೦ರಷ್ಟು ಮಕ್ಕಳು ಪೂರ್ವ ಪ್ರಾಥಮಿಕ ಶಾಲೆಗಳಿಗೆ ಹೋಗುತ್ತಾರೆ. ಆದರೆ, ಅಮೆರಿಕದಲ್ಲಿ ಈ ಪ್ರಮಾಣ ಶೇ ೩೮ರಷ್ಟು ಮಾತ್ರ. ದುಡಿಮೆಯನ್ನು ಉತ್ತೇಜಿಸಲು ಸಾಕಷ್ಟು ಆಕರ್ಷಕವಾದ ಪ್ರಸ್ತಾವಗಳನ್ನು ಒಬಾಮ ಇಟ್ಟಿದ್ದರು. ಆದರೆ ‘ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆ’ಗೆ ಸೇರಿದ
34 ರಾಷ್ಟ್ರಗಳ ಪೈಕಿ ವೇತನ ರಹಿತ ಹೆರಿಗೆ ರಜೆ ನೀಡುತ್ತಿರುವ ಏಕೈಕ ದೇಶ ಅಮೆರಿಕ.
34 ರಾಷ್ಟ್ರಗಳ ಪೈಕಿ ವೇತನ ರಹಿತ ಹೆರಿಗೆ ರಜೆ ನೀಡುತ್ತಿರುವ ಏಕೈಕ ದೇಶ ಅಮೆರಿಕ.
ಐದು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಅಮೆರಿಕದಲ್ಲಿ ಉತ್ತಮ ಶಿಕ್ಷಣ ದೊರಕುತ್ತಿಲ್ಲ. ರಾಷ್ಟ್ರೀಯ ಮಟ್ಟದಲ್ಲಿ ಅಲ್ಲದಿದ್ದರೂ, ಕನಿಷ್ಠ ರಾಜ್ಯ ಮಟ್ಟದಲ್ಲಾದರೂ ಪೂರ್ವ ಪ್ರಾಥಮಿಕ ಶಾಲೆಗಳಿಗೆ ಉತ್ತೇಜನ ನೀಡುವ ಕೆಲಸ ಆಗಬೇಕಾಗಿದೆ.
ಹದಿಹರೆಯದ ಬಾಲಕಿಯರು ಗರ್ಭಿಣಿಯರಾಗುವ ಪ್ರಮಾಣ ಕುಂಠಿತವಾಗಿರುವುದು ಸಂತಸದ ವಿಚಾರ. ಇದು ಸರ್ಕಾರದ ನೀತಿಗಳಿಂದ ಸಾಧ್ಯವಾಯಿತು ಎಂದು ಒಬಾಮ ಹೇಳಿ ಕೊಳ್ಳುತ್ತಿದ್ದಾರೆ. ಆದರೆ, ಇದರಲ್ಲಿ ಅವರ ಪಾತ್ರ ಕಡಿಮೆ. (ಎಂಟಿವಿಯ ‘೧೬ ಮತ್ತು ಗರ್ಭಧಾರಣೆ’ ಕಾರ್ಯಕ್ರಮ ಇದರ ಹಿಂದೆ ಪ್ರಮುಖ ಪಾತ್ರ ವಹಿಸಿದೆ!) ಆದರೂ, ೧೯ ವರ್ಷ ವಯಸ್ಸಿನ ಶೇ ೩೦ರಷ್ಟು ಬಾಲಕಿಯರು ಈಗಲೂ ಗರ್ಭವತಿ ಯರಾಗುತ್ತಿದ್ದಾರೆ.
ಹದಿಹರೆಯದ ಬಾಲಕಿಯರು ಗರ್ಭಿಣಿಯರಾಗುವ ಪ್ರಮಾಣ ಕುಂಠಿತವಾಗಿರುವುದು ಸಂತಸದ ವಿಚಾರ. ಇದು ಸರ್ಕಾರದ ನೀತಿಗಳಿಂದ ಸಾಧ್ಯವಾಯಿತು ಎಂದು ಒಬಾಮ ಹೇಳಿ ಕೊಳ್ಳುತ್ತಿದ್ದಾರೆ. ಆದರೆ, ಇದರಲ್ಲಿ ಅವರ ಪಾತ್ರ ಕಡಿಮೆ. (ಎಂಟಿವಿಯ ‘೧೬ ಮತ್ತು ಗರ್ಭಧಾರಣೆ’ ಕಾರ್ಯಕ್ರಮ ಇದರ ಹಿಂದೆ ಪ್ರಮುಖ ಪಾತ್ರ ವಹಿಸಿದೆ!) ಆದರೂ, ೧೯ ವರ್ಷ ವಯಸ್ಸಿನ ಶೇ ೩೦ರಷ್ಟು ಬಾಲಕಿಯರು ಈಗಲೂ ಗರ್ಭವತಿ ಯರಾಗುತ್ತಿದ್ದಾರೆ.
ಇದನ್ನು ತಡೆಯುವ ನಿಟ್ಟಿನಲ್ಲಿ ವಿಶ್ವಾಸಾರ್ಹ ಜನನ ನಿಯಂತ್ರಣ ಕ್ರಮಗಳು ಜಾರಿಯಾಗಬೇಕಾಗಿದೆ. ಅಮೆರಿಕದಲ್ಲಿ ಸಬ್ಸಿಡಿ ಪಡೆಯುವ ಖಾಸಗಿ ವಿಮಾನಗಳಿವೆ, ದೊಡ್ಡ ಬ್ಯಾಂಕ್ ಗಳಿವೆ, ಹಣಕಾಸು ವ್ಯವಸ್ಥಾಪಕರಿದ್ದಾರೆ. ಒಂದು ವೇಳೆ, ಇವರಿಂದ ಹೆಚ್ಚು ತೆರಿಗೆ ಸಂಗ್ರಹಿಸಿದರೆ, ಆ ಮೊತ್ತವನ್ನು ಉತ್ತಮ ಶಿಕ್ಷಣ, ಮೂಲಸೌಕರ್ಯ, ಉದ್ಯೋಗ ಸೃಷ್ಟಿಗಾಗಿ ಬಳಸಿಕೊಳ್ಳಬಹುದು.
ಕಾಂಗ್ರೆಸ್ನ ರಿಪಬ್ಲಿಕನ್ ಪಕ್ಷದ ಸದಸ್ಯರು, ಇಂದಿನ ತೈಲ ಬೆಲೆಯಲ್ಲಿ ಆರ್ಥಿಕವಾಗಿ ಹೊರೆಯಾಗಿರುವ ಪೈಪ್ಲೈನ್ ನಿರ್ಮಾಣ ಯೋಜನೆಗೇ ಹೆಚ್ಚು ಗಮನ ನೀಡುತ್ತಿರುವಂತೆ ಕಾಣುತ್ತದೆ. ಇದೆಲ್ಲ ಏನೇ ಇದ್ದರೂ, ಒಬಾಮ ಅವರು ಹೇಳುವಂತೆ ರಾಷ್ಟ್ರೀಯ ಕಾರ್ಯಸೂಚಿ ಇನ್ನಷ್ಟು ವಿಸ್ತಾರಗೊಂಡು, ಈ ೩೫ ವರ್ಷಗಳಲ್ಲಿ ಆಗಿರುವ ತಪ್ಪುಗಳು ಮತ್ತೆ ಮರುಕಳಿಸಬಾರದು ಎಂಬುದೇ ಎಲ್ಲರ ಆಶಯ.
ವಿಶೇಷ
ಆಧುನಿಕತೆ ವಿರೋಧದಲ್ಲಿ ಒಡಮೂಡಿದ ಧಾರ್ಮಿಕ ಮೂಲಭೂತವಾ
ಪಾಕಿಸ್ತಾನದಲ್ಲಿ ತಾಲಿಬಾನ್ ಉಗ್ರರು 148 ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಕಗ್ಗೊಲೆ ಮಾಡಿರುವುದನ್ನು ‘ಅಮಾನವೀಯ’ ಅಥವಾ ‘ಮಧ್ಯಯುಗೀನ’ ಕೃತ್ಯ ಎಂದು ವಿವರಿಸೋಣ ಎಂಬ ತುಡಿತ ಉಂಟಾಗುತ್ತದೆ. ಆದರೆ ಹತ್ಯಾಕಾಂಡ ಇನ್ನಷ್ಟು ಭಯಾನಕ ಎನಿಸಲು ಕಾರಣ ಇದು ಅವೆರಡೂ ಅಲ್ಲದಿರುವುದು. ಈ ಹತ್ಯೆ ‘ಮಾನವೀಯ’ ಮತ್ತು ನಮ್ಮ ಕಾಲದ್ದೇ ಆಗಿದೆ.
ಪೆಶಾವರ ಹತ್ಯಾಕಾಂಡ ಹೇಯವಾದುದು. ಆದರೆ ಕಳೆದ ಐದು ವರ್ಷಗಳ ಅವಧಿಯಲ್ಲಿ ತಾಲಿಬಾನ್ ಕನಿಷ್ಠ ಸಾವಿರ ಶಾಲೆಗಳ ಮೇಲೆ ದಾಳಿ ನಡೆಸಿದೆ. ಚರ್ಚು ಮತ್ತು ಮಸೀದಿಗಳ ಮೇಲೆ ಆತ್ಮಹತ್ಯಾ ದಾಳಿಗಳ ಮೂಲಕ ನೂರಾರು ಜನರನ್ನು ಅವರು ಕೊಂದಿದ್ದಾರೆ. ಪಾಕಿಸ್ತಾನದ ಹೊರಗೂ ಇಸ್ಲಾಮಿಕ್ ಸ್ಟೇಟ್, ಬೊಕೊ ಹರಮ್ ಮತ್ತು ಶಬಬ್ನಂತಹ ಗುಂಪುಗಳ ಕ್ರೌರ್ಯ ಇದೆ.
ಇವರೆಲ್ಲರನ್ನೂ ಒಂದುಗೂಡಿಸುವ ಅಂಶವೆಂದರೆ, ಇವರೆಲ್ಲರೂ ಇಸ್ಲಾಂನ ಹೆಸರಲ್ಲಿ ಇದನ್ನು ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಇಂದಿನ ಹಲವು ದುಷ್ಟ ಸಂಘರ್ಷಗಳಲ್ಲಿ ಇಸ್ಲಾಂ ಮೂಲಭೂತವಾದಿಗಳು ಒಳಗೊಂಡಿರುವಂತೆ ಕಾಣಿಸುತ್ತಿರುವುದು ಏಕೆ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಮೂಲಭೂತವಾದಿ ಇಸ್ಲಾಂ ಗುಂಪುಗಳು ಏಕೆ ಇಷ್ಟೊಂದು ದುಷ್ಟ, ಹಿಂಸಾಸಕ್ತ ಮತ್ತು ಕೆಡುಕಿನದ್ದಾಗಿವೆ?.
ಧರ್ಮದ ಹೆಸರಿನಲ್ಲಿ ಕ್ರೌರ್ಯದಲ್ಲಿ ತೊಡಗಿರುವವರು ಮುಸ್ಲಿಂ ಮೂಲಭೂತವಾದಿಗಳು ಮಾತ್ರವಲ್ಲ; ಮಧ್ಯ ಆಫ್ರಿಕಾ ಗಣರಾಜ್ಯದಲ್ಲಿ ಕ್ರೈಸ್ತ ಮೂಲಭೂತವಾದಿಗಳು ತಮ್ಮ ಶತ್ರುಗಳನ್ನು ಕೊಂದು ತಿನ್ನುತ್ತಾರೆ ಎಂಬ ವರದಿಗಳಿವೆ. ಮ್ಯಾನ್ಮಾರ್ನಲ್ಲಿ ಬೌದ್ಧ ಭಿಕ್ಕುಗಳು ಮುಸ್ಲಿಂ ವಿರೋಧಿ ಹತ್ಯಾಕಾಂಡಗಳನ್ನು ನಡೆಸುತ್ತಾರೆ. ಹೀಗೆ ಜಗತ್ತಿನಲ್ಲಿ ಕ್ರೌರ್ಯಕ್ಕೆ ಕೊರತೆಯೇ ಇಲ್ಲ. ಹಾಗೆಯೇ ಇಂತಹ ವಿಕಟ ಕೃತ್ಯಗಳನ್ನು ಎಸಗುವವರು ಧಾರ್ಮಿಕ ಮೂಲಭೂತವಾದಿಗಳು ಮಾತ್ರ ಅಲ್ಲ. ಆದರೆ, ಇಸ್ಲಾಂ ಮೂಲಭೂತವಾದಿಗಳಿಗೆ ಹಿಂಸೆ, ಭಯೋತ್ಪಾದನೆ ಮತ್ತು ಕಿರುಕುಳ ನೀಡಿಕೆಯಲ್ಲಿ ನಿರ್ದಿಷ್ಟ ಸಾಮರ್ಥ್ಯವೇ ಇದೆ ಎಂದು ವಿಶ್ಲೇಷಕರು ವಾದಿಸುತ್ತಾರೆ.
ಇವು ಸ್ಫೋಟಕ ವಿಚಾರಗಳಾಗಿದ್ದು, ಅತ್ಯಂತ ನಾಜೂಕಿನಿಂದ ಇವನ್ನು ನಿರ್ವಹಿಸಬೇಕಿದೆ. ಸಮಸ್ಯೆ ಏನೆಂದರೆ ಈ ಇಡೀ ಸಂವಾದವೇ ಧರ್ಮಾಂಧತೆ ಮತ್ತು ಭೀತಿಯ ನಡುವೆ ಸಿಲುಕಿಕೊಂಡಿದೆ. ಇಸ್ಲಾಮಿಕ್ ಸ್ಟೇಟ್ ಅಥವಾ ತಾಲಿಬಾನ್ನಂತಹ ಗುಂಪುಗಳ ಕೃತ್ಯಗಳು ಹಲವರಿಗೆ ಮುಸ್ಲಿಂ ವಿರೋಧಿ ಚಿಂತನೆಯನ್ನು ಹರಡಲು ನೆರವಾಗುತ್ತವೆ.
ಇಸ್ಲಾಮಿಕ್ ಸ್ಟೇಟ್ ಅಥವಾ ತಾಲಿಬಾನ್ ‘ನೈಜ ಇಸ್ಲಾಮ್’ ಅನ್ನು ಪ್ರತಿನಿಧಿಸುವುದಿಲ್ಲ ಎನ್ನುವ ಮೂಲಕ ಹಲವು ಉದಾರವಾದಿಗಳು ಸಂವಾದದಿಂದ ಹೊರಗುಳಿಯಲು ಬಯಸುತ್ತಾರೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತು ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರು ಇತ್ತೀಚೆಗೆ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಉಗ್ರಗಾಮಿ ಗುಂಪುಗಳ ಕೃತ್ಯಗಳಿಗೆ ಕಾರಣ ರಾಜಕಾರಣವೇ ಹೊರತು ಧರ್ಮ ಅಲ್ಲ ಎಂದು ವಾದಿಸುವ ಹಲವರಿದ್ದಾರೆ.
ಇವುಗಳಲ್ಲಿ ಯಾವ ವಾದವೂ ವಿಶ್ವಾಸಾರ್ಹವಲ್ಲ. ಧರ್ಮವೊಂದು ವ್ಯಾಖ್ಯಾನಗೊಳ್ಳುವುದು ಅದರ ಧರ್ಮಗ್ರಂಥದಿಂದ ಮಾತ್ರವಲ್ಲ; ಧರ್ಮದ ಅನುಯಾಯಿಗಳು ಈ ಗ್ರಂಥವನ್ನು ಹೇಗೆ ವ್ಯಾಖ್ಯಾನಿಸುತ್ತಾರೆ, ಅಂದರೆ ಅವರ ನಡವಳಿಕೆಗಳು ಹೇಗಿರುತ್ತವೆ ಮತ್ತು ಅವರು ಹೇಗೆ ಜೀವಿಸುತ್ತಾರೆ ಎಂಬ ಮೂಲಕವೇ ಧರ್ಮ ವ್ಯಾಖ್ಯಾನಗೊಳ್ಳುತ್ತದೆ. ಮುಸ್ಲಿಂ ಉಗ್ರರು ಉದಾರವಾದಿಗಳಿಗೆ ನಡುಕ ಹುಟ್ಟುವ ರೀತಿಯಲ್ಲಿ ಧರ್ಮವನ್ನು ಅನುಸರಿಸುತ್ತಾರೆ ಎಂಬ ಕಾರಣಕ್ಕೆ ಅವರು ಅನುಸರಿಸುವ ಧರ್ಮ ಕಡಿಮೆ ವಾಸ್ತವಿಕ ಎಂದು ಹೇಳಲು ಸಾಧ್ಯವಿಲ್ಲ.
ತಾಲಿಬಾನ್ ಅಥವಾ ಇಸ್ಲಾಮಿಕ್ ಸ್ಟೇಟ್ ಉಗ್ರರು ಕೇವಲ ರಾಜಕೀಯಕ್ಕಾಗಿ ಅಥವಾ ಬರೇ ಧರ್ಮದ ಕಾರಣಕ್ಕಾಗಿ ಇದನ್ನು ಮಾಡುತ್ತಿದ್ದಾರೆ ಎಂದು ಹೇಳುವುದು ಸರಿಯಲ್ಲ. ಮೂಲಭೂತವಾದಿ ಇಸ್ಲಾಂ ಎಂಬ ಧಾರ್ಮಿಕ ರೂಪ ಅನಾಗರಿಕ ರಾಜಕೀಯ ವೈಷಮ್ಯವಾಗಿ ಅಭಿವ್ಯಕ್ತಿಗೊಳ್ಳುತ್ತಿದೆ.
ಪಶ್ಚಿಮ ದೇಶಗಳ ವಿರುದ್ಧದ ರಾಜಕೀಯ ವೈಷಮ್ಯ ಇಂತಹ ಕ್ರೌರ್ಯದ ರೂಪವನ್ನು ಏಕೆ ಪಡೆದುಕೊಳ್ಳುತ್ತಿದೆ? ಮೂಲಭೂತವಾದಿ ಇಸ್ಲಾಂ ಮೂಲಕವೇ ಇದು ಏಕೆ ವ್ಯಕ್ತವಾಗುತ್ತಿದೆ?
ಇತ್ತೀಚಿನ ದಶಕಗಳಲ್ಲಿ ಪಶ್ಚಿಮ ದೇಶಗಳ ವಿರುದ್ಧದ ಭಾವನೆಯ ಸ್ವರೂಪವೇ ಬದಲಾಗಿದೆ. 1790ರ ಹೈಟಿ ಕ್ರಾಂತಿಯಿಂದ ತೊಡಗಿ, 1960– -70ರ ಆಫ್ರಿಕಾ, ಏಷ್ಯಾ ಖಂಡಗಳಲ್ಲಿನ ಸ್ವಾತಂತ್ರ್ಯ ಚಳವಳಿಗಳವರೆಗೆ ಸಾಮ್ರಾಜ್ಯಶಾಹಿ ವಿರೋಧಿ ಆಂದೋಲನಗಳಿಗೆ ದೀರ್ಘ ಇತಿಹಾಸವೇ ಇದೆ. ಈ ಆಂದೋಲನಗಳು ಪಶ್ಚಿಮದ ಅಧಿಕಾರವನ್ನು ಪ್ರಶ್ನಿಸಿವೆ ಮತ್ತು ಅದನ್ನು ವಿರೋಧಿಸಲು ಹಿಂಸಾತ್ಮಕ ದಾರಿಯನ್ನೂ ಹಿಡಿದಿವೆ. ಆದರೆ ನಿರ್ದಿಷ್ಟವಾಗಿ ನೋಡಿದರೆ ಇವು ಯಾವುವೂ ‘ಪಶ್ಚಿಮ ವಿರೋಧಿ’ ಆಗಿರಲಿಲ್ಲ. ಇಂತಹ ಆಂದೋಲನಗಳ ಮುಖಂಡರು ಪಶ್ಚಿಮದಿಂದಲೇ ಬಂದ ಕ್ರಾಂತಿಕಾರಕ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದರು. ಜೊತೆಗೆ, ಐರೋಪ್ಯ ಜ್ಞಾನೋದಯ ಪರಂಪರೆಗೆ ಸೇರಿದವರು ತಾವು ಎಂದು ಅವರು ಪ್ರಜ್ಞಾಪೂರ್ವಕವಾಗಿಯೇ ಹೇಳಿಕೊಳ್ಳುತ್ತಿದ್ದರು.
ರಾಜಕೀಯ ಮತ್ತು ಆರ್ಥಿಕವಾಗಿ ಪಶ್ಚಿಮೇತರ ದೇಶಗಳನ್ನು ಆಧುನಿಕಗೊಳಿಸುವುದು ತಮ್ಮ ವಿಸ್ತೃತ ರಾಜಕೀಯ ಯೋಜನೆಯ ಭಾಗ ಎಂದು ಹಿಂದಿನ ಸಾಮ್ರಾಜ್ಯಶಾಹಿ ವಿರೋಧಿಗಳು ನಂಬಿದ್ದರು. ಆದರೆ ಇಂದು ವಿಸ್ತೃತ ರಾಜಕೀಯ ಯೋಜನೆ ಎಂಬುದನ್ನೇ ಒಂದು ಸಮಸ್ಯೆಯಾಗಿ ನೋಡಲಾಗುತ್ತಿದೆ. ಆಧುನಿಕತೆಯ ಹಲವು ಅಂಶಗಳ ಬಗ್ಗೆ ಇದ್ದ ಭ್ರಮೆ ಈಗ ಕಳಚಿ ಹೋಗಿದೆ. ಮುರಿದುಹೋದ ಸಾಂಪ್ರದಾಯಿಕ ಸಂಸ್ಕೃತಿಗಳು, ಛಿದ್ರಗೊಂಡ ಸಮಾಜಗಳು, ಮಬ್ಬಾದ ನೈತಿಕ ಗಡಿ ಗೆರೆಗಳು ಮುಂತಾದ ಅಂಶಗಳು ಸಮಕಾಲೀನ ಜಗತ್ತಿನ ಆತ್ಮರಹಿತ ಸ್ಥಿತಿಗೆ ಕಾರಣವೆಂಬಂತೆ ಗೋಚರಿಸುತ್ತಿವೆ.
ಆಧುನಿಕತೆಯು ಪಶ್ಚಿಮದ ಆಸ್ತಿ ಎಂದು ಹಿಂದೆಲ್ಲ ಜನಾಂಗೀಯವಾದಿಗಳು ನೋಡುತ್ತಿದ್ದರು. ಪಶ್ಚಿಮೇತರರಿಗೆ ಆಧುನಿಕಗೊಳ್ಳುವ ಸಾಮರ್ಥ್ಯ ಇಲ್ಲ ಎಂದು ನಂಬಿದ್ದರು. ಇಂದು ಮೂಲಭೂತವಾದಿಗಳು ಆಧುನಿಕತೆಯನ್ನು ಪಶ್ಚಿಮದ ಸ್ವತ್ತು ಎಂದು ಪರಿಗಣಿಸುತ್ತಾರೆ ಹಾಗೂ ಆಧುನಿಕತೆ ಮತ್ತು ಪಶ್ಚಿಮಗಳೆರಡನ್ನೂ ಕಳಂಕಿತ ವಸ್ತುಗಳು ಎಂದು ತಿರಸ್ಕರಿಸುತ್ತಾರೆ.
ಇದರ ಪರಿಣಾಮವಾಗಿ, ರಾಜಕೀಯ ಸವಾಲು ಎಂಬಂತಿದ್ದ ಪಶ್ಚಿಮ ವಿರೋಧಿ ಭಾವನೆ ನಂತರ ಸಾಮ್ರಾಜ್ಯಶಾಹಿ ವಿರೋಧಿ ನೀತಿಯಾಗಿ ಈಗ ಆಧುನಿಕತೆ ವಿರುದ್ಧ ಆಕ್ರೋಶವಾಗಿ ಹೊರಹೊಮ್ಮಿದೆ. ಎಡ ಮತ್ತು ಬಲ ಪಂಥೀಯ ಸಮಕಾಲೀನ ಚಿಂತನೆಯ ಹಲವು ಎಳೆಗಳು ಕೂಡ ಈ ಅತೃಪ್ತಿಯನ್ನು ಹೊಂದಿವೆ. ಆದರೆ ಇಸ್ಲಾಂ ಮೂಲಭೂತವಾದಿಗಳು ಮಾತ್ರ ಈ ಆಕ್ರೋಶವನ್ನು ಪ್ರದರ್ಶನ ಮಾಡುತ್ತಿದ್ದಾರೆ.
ತಾಲಿಬಾನ್ನಿಂದ ಹಮಾಸ್ವರೆಗೆ ಮತ್ತು ಮುಸ್ಲಿಂ ಬ್ರದರ್ಹುಡ್ನಿಂದ ಬೊಕೊ ಹರಮ್ವರೆಗೆ ಇಸ್ಲಾಂ ಮೂಲಭೂತವಾದದ ಹಲವು ರೂಪಗಳಿವೆ. ಇವರೆಲ್ಲರಲ್ಲಿ ಇರುವ ಸಮಾನ ಅಂಶವೆಂದರೆ, ಪಶ್ಚಿಮದ ವಿರುದ್ಧ ದ್ವೇಷ ಮೂಡಿಸುವುದಕ್ಕೆ ಇರುವ ಸಾಮರ್ಥ್ಯ ಮತ್ತು ಆಧುನಿಕತೆಯ ದ್ವೇಷ. ಈ ಎರಡಕ್ಕೂ ಪರ್ಯಾಯ ಒದಗಿಸುವಲ್ಲಿಯೂ ಅವರು ಸಮರ್ಥರಾದಂತೆ ಕಾಣಿಸುತ್ತಿದೆ.
ಜಾಗತೀಕರಣಕ್ಕೆ ತೀವ್ರ ವಿರೋಧದ ಜೊತೆಗೆ ಜಾಗತಿಕ ಮುಸ್ಲಿಂ ಸಮುದಾಯ ಸೃಷ್ಟಿಯ ಉದ್ದೇಶವನ್ನು ಅವರು ಹೊಂದಿದ್ದಾರೆ. ಈ ಮೂಲಕ ಅವರು ತಮ್ಮ ಆಧುನಿಕತೆಯ ಬಗೆಗಿನ ಆಕ್ರೋಶದ ವಿರೋಧಾಭಾಸವನ್ನು ತಮ್ಮ ಶಕ್ತಿಯಾಗಿ ಪರಿವರ್ತಿಸಿಕೊಳ್ಳುತ್ತಾರೆ.
ಜಿಹಾದಿವಾದವು ಮೂಲಭೂತವಾದಿ ಸಿದ್ಧಾಂತಕ್ಕೆ ಸೇನಾ ಸ್ವರೂಪವನ್ನು ಒದಗಿಸುತ್ತದೆ ಮತ್ತು ಆ ಮೂಲಕ ಅದನ್ನೊಂದು ಜಾಗತಿಕ ಸಾಮಾಜಿಕ ಚಳವಳಿಯಾಗಿ ಪರಿವರ್ತಿಸುತ್ತದೆ. ಸಾಮ್ರಾಜ್ಯಶಾಹಿ ವಿರೋಧಿ ಚಳವಳಿಗೆ ಮಾರ್ಗದರ್ಶಕವಾಗಿದ್ದ ನೈತಿಕ ಮತ್ತು ತಾತ್ವಿಕ ಚೌಕಟ್ಟು ಜಿಹಾದಿವಾದದ ದೊಡ್ಡ ಕೊರತೆಯಾಗಿದೆ. ಹೀಗಾಗಿ ಜಗತ್ತಿನ ವಿರುದ್ಧ ಆಕ್ರೋಶವನ್ನಷ್ಟೇ ವ್ಯಕ್ತಪಡಿಸುವ ಜಿಹಾದಿಗಳು ಭಯೋತ್ಪಾದನೆಯನ್ನೇ ತಮ್ಮ ಧ್ಯೇಯವಾಗಿ ಮಾಡಿಕೊಂಡಿದ್ದಾರೆ.
ಜಿಹಾದಿವಾದವು ಮೂಲಭೂತವಾದಿ ಸಿದ್ಧಾಂತಕ್ಕೆ ಸೇನಾ ಸ್ವರೂಪವನ್ನು ಒದಗಿಸುತ್ತದೆ ಮತ್ತು ಆ ಮೂಲಕ ಅದನ್ನೊಂದು ಜಾಗತಿಕ ಸಾಮಾಜಿಕ ಚಳವಳಿಯಾಗಿ ಪರಿವರ್ತಿಸುತ್ತದೆ. ಸಾಮ್ರಾಜ್ಯಶಾಹಿ ವಿರೋಧಿ ಚಳವಳಿಗೆ ಮಾರ್ಗದರ್ಶಕವಾಗಿದ್ದ ನೈತಿಕ ಮತ್ತು ತಾತ್ವಿಕ ಚೌಕಟ್ಟು ಜಿಹಾದಿವಾದದ ದೊಡ್ಡ ಕೊರತೆಯಾಗಿದೆ. ಹೀಗಾಗಿ ಜಗತ್ತಿನ ವಿರುದ್ಧ ಆಕ್ರೋಶವನ್ನಷ್ಟೇ ವ್ಯಕ್ತಪಡಿಸುವ ಜಿಹಾದಿಗಳು ಭಯೋತ್ಪಾದನೆಯನ್ನೇ ತಮ್ಮ ಧ್ಯೇಯವಾಗಿ ಮಾಡಿಕೊಂಡಿದ್ದಾರೆ.
ಪೆಶಾವರದ ಹತ್ಯಾಕಾಂಡ ಮತ್ತು ಇಸ್ಲಾಮಿಕ್ ಸ್ಟೇಟ್ ನಡೆಸುವ ಸಾಮೂಹಿಕ ಶಿರಚ್ಛೇದಗಳು ಸಮಕಾಲೀನ ಇಸ್ಲಾಂ ಮತ್ತು ಇಸ್ಲಾಂವಾದದ ಸ್ವರೂಪದ ಬಗ್ಗೆ ಒಂದಷ್ಟನ್ನು ನಮಗೆ ತಿಳಿಸಿಕೊಡುತ್ತವೆ. ಹಾಗೆಯೇ ಸಮಕಾಲೀನ ರಾಜಕೀಯ ಮತ್ತು ವಿಶೇಷವಾಗಿ ಮೂಲಭೂತವಾದಿ ರಾಜಕಾರಣದ ಬಗ್ಗೆ ಇನ್ನೂ ಹೆಚ್ಚಿನದನ್ನು ಹೇಳುತ್ತವೆ.
ವಿಶೇಷ
ಭಯೋತ್ಪಾದನೆ: ಅವಮಾನದ ವಿರಾಟ್ ರೂಪ
ದಿನಪತ್ರಿಕೆಗಳ ಆನ್ಲೈನ್ ಆವೃತ್ತಿಯಲ್ಲಿ ಪ್ರಕಟಗೊಂಡ ಅಂಕಣಗಳಿಗೆ ಓದುಗರು ನೀಡುವ ಪ್ರತಿಕ್ರಿಯೆಗಳನ್ನು ಗಮನಿಸಿ. ಸಾಮಾನ್ಯವಾಗಿ ಅವು ಕಟು ವಿಮರ್ಶೆಗಳಿಂದ ಕೂಡಿರುತ್ತವೆ. ಅವುಗಳಲ್ಲಿ ನಿಂದನಾತ್ಮಕವಾದ, ಲೇಖಕನನ್ನು ಅವಮಾನಿಸುವ ಅಂಶಗಳೂ ಇರುತ್ತವೆ. ಇಂತಹ ಪ್ರತಿಕ್ರಿಯೆಗಳನ್ನು ಎದುರಿಸುವುದಕ್ಕೆ ನಾನು ಕಂಡುಕೊಂಡಿರುವ ದಾರಿ ಯಾವುದು ಗೊತ್ತೇ? ‘ನಿಮ್ಮ ಶತ್ರುಗಳನ್ನು ಪ್ರೀತಿಸಿ’ ಎಂಬ ಗಾದೆ ಮಾತು ಪಾಲಿಸುವುದು!
ನನ್ನ ಪ್ರತಿಭೆ, ನಡವಳಿಕೆ ಮತ್ತು ವೃತ್ತಿ ಕೌಶಲವನ್ನು ಮೌಲ್ಯಮಾಪನ ಮಾಡುವ ಈ ಪ್ರತಿಕ್ರಿಯೆಗಳು ಮಾನಸಿಕವಾಗಿ ಸಾಕಷ್ಟು ಹಾನಿ ಮಾಡುವುದೇನೋ ನಿಜ. ಆದರೆ ನನ್ನ ಸ್ನೇಹಿತರು ಉಡುಗೊರೆಗಳ ರೂಪದಲ್ಲಿ ಈ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ ಎಂಬ ವಾಸ್ತವವಲ್ಲದ ದೃಷ್ಟಿಕೋನದಲ್ಲಿ ಅವುಗಳನ್ನು ನೋಡಿದರೆ ಅವಮಾನ, ದೂಷಣೆಗಳಿಂದಲೂ ಏನನ್ನಾದರೂ ಕಲಿಯಲು ಅವಕಾಶ ಇರುತ್ತದೆ.
ಈ ಸಮಸ್ಯೆಯನ್ನು ಪತ್ರಿಕೆಗಳ ಅಂಕಣಕಾರರು ಮಾತ್ರ ಎದುರಿಸುತ್ತಿಲ್ಲ. ಅಂತರ್ಜಾಲದಲ್ಲಿ ತೊಡಗಿಕೊಂಡಿರುವ ಪ್ರತಿಯೊಬ್ಬರೂ ಸಾಮಾನ್ಯವಾಗಿ ಇನ್ನೊಬ್ಬರಿಂದ ಅವಮಾನ, ನಿಂದನೆ, ದ್ವೇಷ, ಕ್ರೌರ್ಯ ಮತ್ತು ಮೂದಲಿಕೆಗೆ ಒಳಗಾಗುತ್ತಿದ್ದಾರೆ. ಆನ್ಲೈನ್ ಮೂಲಕ ನಡೆಯುವ ಈ ಹಲ್ಲೆಗಳು ಇನ್ನೊಬ್ಬರ ಮೇಲೆ ಪ್ರಾಬಲ್ಯ ಸಾಧಿಸುವ ಯತ್ನಗಳು. ಗುರಿಯಾಗಿಸಿಕೊಂಡಿರುವ ವ್ಯಕ್ತಿಯ ಮೇಲೆ ತನ್ನ ಪ್ರಾಬಲ್ಯ ಸಾಧಿಸುವುದಕ್ಕಾಗಿ ನಿಂದಕರು ಅಂತರ್ಜಾಲದಲ್ಲಿ ಅವಮಾನ ಮಾಡುವಂತಹ ಲೇಖನಗಳನ್ನೋ ಅಥವಾ ಪ್ರತಿಕ್ರಿಯೆಗಳನ್ನೋ ಬರೆಯುತ್ತಾರೆ.
ಇದಕ್ಕೆ ಸಹಜವಾಗಿ ಪ್ರತಿಕ್ರಿಯೆ ನೀಡುವುದರ ಮೂಲಕ ಸ್ಥಾನಮಾನದ ಪ್ರಾಬಲ್ಯಕ್ಕಾಗಿ ನಡೆಯುವ ಹೋರಾಟದ ಅಖಾಡಕ್ಕೆ ನೀವು ಇಳಿಯುತ್ತೀರಿ. ಅಲ್ಲಿ ಸ್ಥಾನಮಾನದ ಮೇಲಾಟಗಳಿಗಾಗಿ ಅಹಂಗಳ ಸಂಘರ್ಷವಾಗುತ್ತದೆ. ಆತ ತನ್ನನ್ನು ಸಮರ್ಥಿಸಿಕೊಂಡರೆ, ನೀವು ನಿಮ್ಮನ್ನು ಸಮರ್ಥಿಸಿಕೊಳ್ಳುವುದರಲ್ಲಿ ಹಿಂದೆ ಬೀಳುವುದಿಲ್ಲ. ಆಗ ನಿಮ್ಮ ಸ್ಥಾನಮಾನವು ಚರ್ಚೆಯ ಕೇಂದ್ರ ಬಿಂದುವಾಗಿ ಮಾರ್ಪಡುತ್ತದೆ. ‘ಮುಯ್ಯಿಗೆ ಮುಯ್ಯಿ’ ತೀರಿಸಲು ಹೊರಟು ಕೊನೆಗೆ ನಿಮ್ಮ ಅಹಂಗೆ ಭಾರಿ ಪೆಟ್ಟು ಬೀಳುತ್ತದೆ. ಇದು ಅಪಾಯಕಾರಿಯಾದದ್ದು. ಮಾನಸಿಕವಾಗಿ ಸಾಕಷ್ಟು ಕುಗ್ಗಿಹೋಗುತ್ತೀರಿ.
ನಿಜ ಹೇಳಬೇಕೆಂದರೆ, ಈ ಅಹಂಗಳ ಸಂಘರ್ಷದಿಂದ ದೂರ ಇರುವುದು ಯಾವತ್ತಿಗೂ ಅತ್ಯಂತ ಒಳ್ಳೆಯದು. ದ್ವೇಷ ಕಾರುವುದು ಅತ್ಯಂತ ಕೆಟ್ಟ ಮನಸ್ಥಿತಿ. ಸಂಘರ್ಷಕ್ಕೆ ಹೋಗದೆ ಸುಮ್ಮನೆ ಕೂರುವ ವ್ಯಕ್ತಿ ಜಗತ್ತನ್ನು ಸ್ಪಷ್ಟವಾಗಿ ಕಾಣಬಲ್ಲ. ವಿಷಯವನ್ನು ಸರಿಯಾಗಿ ಅರ್ಥೈಸಬಲ್ಲ ಮತ್ತು ಪರಿಸ್ಥಿತಿಯನ್ನು ಅವಲೋಕಿಸಿ ಹಿಡಿತಕ್ಕೆ ತೆಗೆದುಕೊಳ್ಳಬಲ್ಲ. ಅಂತಹ ವ್ಯಕ್ತಿಗಳು ಎಲ್ಲರ ಮೆಚ್ಚುಗೆಗೂ ಪಾತ್ರರಾಗುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ.
ಇತ್ತೀಚಿನ ದಿನಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ (ಐಎಸ್) ಉಗ್ರ ಸಂಘಟನೆಯಿಂದ ಬರುತ್ತಿರುವ ಭಯೋತ್ಪಾದನಾ ಬೆದರಿಕೆಗಳು, ಅಂತರ್ಜಾಲದಲ್ಲಿ ನಡೆಯುವ ಸಂಘರ್ಷಗಳಿಗಿಂತ ಸಂಪೂರ್ಣ ಭಿನ್ನವಾಗಿರುವಂತಹವು. ಆದರೆ, ಶಿರಚ್ಛೇದ ಮಾಡುವುದು, ಮನುಷ್ಯರನ್ನು ಸಜೀವವಾಗಿ ದಹಿಸುವ ಪೈಶಾಚಿಕ ಕೃತ್ಯಗಳು ಜನರಲ್ಲಿ ಆಂತರಿಕವಾಗಿ ಪ್ರತಿಕ್ರಿಯೆಗಳನ್ನು ಹುಟ್ಟುಹಾಕುವ ನಿಟ್ಟಿನಲ್ಲಿ ಮಾಡುವ ಅವಮಾನಗಳೇ ಆಗಿರುತ್ತವೆ. ಇವು ಮತ್ತೊಂದು ರೀತಿಯಲ್ಲಿ ಪ್ರಾಬಲ್ಯ ಸಾಧಿಸುವ ವಿಧಾನ. ತಮ್ಮ ಶಕ್ತಿ ಹಾಗೂ ಸ್ಥಾನಮಾನವನ್ನು ಜಗತ್ತು ಪರಿಗಣಿಸಬೇಕು ಎಂಬ ಕಾರಣಕ್ಕೆ ಕೆಲವು ಕ್ಷುದ್ರ ವ್ಯಕ್ತಿಗಳು ಮಾಡುವ ಪೈಶಾಚಿಕ ಕೃತ್ಯಗಳಿವು.
ಸಹೋದ್ಯೋಗಿಗಳಿಂದ ಶಹಬ್ಬಾಸ್ಗಿರಿ ಸಿಗುತ್ತದೆ, ಜಗತ್ತಿನ ಗಮನ ಇತ್ತ ಹರಿಯುತ್ತದೆ, ಇತರರು ಭಯದಿಂದ ಗೌರವ ನೀಡುತ್ತಾರೆ ಎಂಬ ಉದ್ದೇಶಕ್ಕಾಗಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಒತ್ತೆಯಾಳುಗಳನ್ನು ಜೀವಂತವಾಗಿ ಸುಡುತ್ತಿದ್ದಾರೆ. ಭಯೋತ್ಪಾದನೆ ಒಂದು ರೀತಿಯಲ್ಲಿ ಯುದ್ಧ ಎಂದು ನಾವು ಆಗಾಗ ಹೇಳುತ್ತೇವೆ. ಆದರೆ ಅದು ತಪ್ಪು. ಭಯೋತ್ಪಾದನೆಯು ಮೂದಲಿಕೆಯ ಅಥವಾ ಅವಮಾನದ ವಿರಾಟ್ ರೂಪ. ನಾವೆಲ್ಲ ದುರ್ಬಲರು, ಭೀತಿಗೆ ಒಳಗಾಗಿರುವವರು ಎಂಬ ಭಾವನೆಯನ್ನು ನಮ್ಮಲ್ಲಿ ಮೂಡಿಸುವ ಯತ್ನವಾಗಿ ಐಎಸ್ ಉಗ್ರರು ಒತ್ತೆಯಾಳುಗಳನ್ನು ಹತ್ಯೆ ಮಾಡುವ ವಿಡಿಯೊಗಳನ್ನು ಬಿಡುಗಡೆ ಮಾಡುತ್ತಿದ್ದಾರೆ.
ಉರಿಯುವ ಬೆಂಕಿಗೆ ತುಪ್ಪ ಸುರಿಯುವುದು ಅಥವಾ ‘ಮುಯ್ಯಿಗೆ ಮುಯ್ಯಿ’ ಎಂಬ ಸಿದ್ಧಾಂತದ ಅಡಿಯಲ್ಲಿ ಈ ಉಗ್ರರಿಗೆ ಪ್ರತಿಕ್ರಿಯಿಸುವುದು ಯಾವತ್ತಿಗೂ ಒಳ್ಳೆಯದಲ್ಲ. ‘ಅವರು ಒಬ್ಬರನ್ನು ಹತ್ಯೆ ಮಾಡಿದರೆ, ನಾವು ಇಬ್ಬರನ್ನು ಮಾಡುತ್ತೇವೆ’ ಎಂದು ಜೋರ್ಡನ್ ಇಬ್ಬರು ಉಗ್ರರನ್ನು ಗಲ್ಲಿಗೇರಿಸಿದೆ. ‘ಅವರು ಎದೆಯುಬ್ಬಿಸಿದರೆ, ನಾವೂ ಎದೆಯುಬ್ಬಿಸುತ್ತೇವೆ. ಅವರು ಕೊಂದರೆ, ನಾವೂ ಕೊಲ್ಲುತ್ತೇವೆ’ ಎನ್ನುವ ವಾದ ಕೊನೆ ಮುಟ್ಟುವುದಿಲ್ಲ.
ಈ ರೀತಿಯ ತಂತ್ರಗಾರಿಕೆ ಐಎಸ್ ಉಗ್ರರಿಗೆ ನೇಮಕಾತಿಯ ಮಾರ್ಗವಾಗಿದೆ. ‘ಸೇಡಿಗೆ ಸೇಡು’ ಪ್ರವೃತ್ತಿಯನ್ನು ನಾವು ಕೂಡ ಅನುಸರಿಸಿರುವುದರಿಂದ ಉಗ್ರರು ನಡೆಸುವ ಸಿದ್ಧಾಂತ ರಹಿತ ಸ್ಥಾನಮಾನ ಸಂಘರ್ಷದ ಅಖಾಡಕ್ಕೆ ನಮ್ಮನ್ನೂ ದೂಡುವಂತೆ ಮಾಡಿದೆ.
ಅವರು ಮಾಡುವ ಅನಾಗರಿಕ ಕ್ರಿಯೆಗೆ ನಾವು ಪ್ರತಿಕ್ರಿಯೆ ನೀಡಬೇಕಿಲ್ಲ. ಇದರಿಂದ ದೂರ ಉಳಿಯುವುದು ಮತ್ತು ನಮ್ಮ ಪ್ರವೃತ್ತಿಗಳಿಗೆ ಕಡಿವಾಣ ಹಾಕುವುದು ಅತ್ಯಂತ ಉತ್ತಮವಾದ ಮಾರ್ಗ. ನಾವು ನಮ್ಮ ಆದ್ಯತೆಗಳ ಬಗ್ಗೆ ಗಮನಹರಿಸಬೇಕು. ಇಸ್ಲಾಮಿಕ್ ಸ್ಟೇಟ್ನಲ್ಲಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ವ್ಯವಸ್ಥೆ ಸ್ಥಾಪನೆಯಾಗಬೇಕಾದ ಅವಶ್ಯಕತೆ ಇದೆ. ಜಗತ್ತಿನ ರಾಷ್ಟ್ರಗಳು ಆ ನಿಟ್ಟಿನಲ್ಲಿ ಯೋಚಿಸಬೇಕು.
ಆದರೆ, ಉಗ್ರರನ್ನು ಸೋಲಿಸುವುದಕ್ಕಾಗಿ ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ವಿರುದ್ಧ ಮಧ್ಯಪ್ರಾಚ್ಯದಲ್ಲಿ ಈಗ ನಡೆಯುತ್ತಿರುವ ಯುದ್ಧವು ನಮ್ಮ ಆದ್ಯತೆಗಳ ಸಾಕಾರಕ್ಕೆ ಅಡ್ಡಿಯಾಗಿದೆ. ನೈತಿಕ ದಾರಿಯನ್ನು ತೊರೆಯದೆ ಜಗತ್ತಿನ ರಾಷ್ಟ್ರಗಳು ತಮ್ಮ ಸಾಮರ್ಥ್ಯದಿಂದ ಇಸ್ಲಾಮಿಕ್ ಸ್ಟೇಟ್ ಅನ್ನು ನಾಶಪಡಿಸಬೇಕು. ಪ್ರಜಾಪ್ರಭುತ್ವದ ಸಿದ್ಧಾಂತದಲ್ಲಿ ಹೆಚ್ಚಿನ ಜನ ನಂಬಿಕೆ ಕಳೆದುಕೊಂಡಿದ್ದಾರೆ. ಆದರೆ ಆ ಸಿದ್ಧಾಂತವಿಲ್ಲದೇ ಹೋರಾಟ ನಡೆಸಿದರೆ, ಅನಾಗರಿಕವಾದ ಈ ಸಂಘರ್ಷದಲ್ಲಿ ನಾವು ಇನ್ನೊಂದು ಸೇನಾಪಡೆಯಂತೆ ಆಗುತ್ತೇವೆ ಅಷ್ಟೆ.
No comments:
Post a Comment