ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ಪ್ರಧಾನಮಂತ್ರಿ ಅನ್ನದಾತ ಆಯ್‌ ಸಂಕರ್ಷನ್‌ ಅಭಿಯಾನ | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Thursday, September 13, 2018

ಪ್ರಧಾನಮಂತ್ರಿ ಅನ್ನದಾತ ಆಯ್‌ ಸಂಕರ್ಷನ್‌ ಅಭಿಯಾನ

  Pundalik       Thursday, September 13, 2018
ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ನಿಟ್ಟಿನಲ್ಲಿ ಕೇಂದ್ರ ಸಂಪುಟ 15,053 ಕೋಟಿ ರೂ. ಮೌಲ್ಯದ ಹೊಸ ಖರೀದಿ ನೀತಿ ಅಂಗೀಕರಿಸಿದೆ. ಪ್ರಧಾನಮಂತ್ರಿ ಅನ್ನದಾತ ಆಯ್‌ ಸಂಕರ್ಷನ್‌ ಅಭಿಯಾನ (ಪಿಎಂ-ಆಶಾ) ಎಂದು ಅದಕ್ಕೆ ಹೆಸರನ್ನು ಇರಿಸಲಾಗಿದೆ. ಈ ಯೋಜನೆ ವ್ಯಾಪ್ತಿಯಲ್ಲಿ ರಾಜ್ಯ ಸರಕಾರಗಳು ರೈತರಿಗೆ ಅನುಕೂಲಕರವಾದ ರೀತಿಯಲ್ಲಿ ಬೆಂಬಲ ಬೆಲೆ ನೀಡಲು ಅನುಕೂಲ ಕಲ್ಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಬುಧವಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಕೇಂದ್ರ ಕೃಷಿ ಸಚಿವ ರಾಧಾಮೋಹನ್‌ ಸಿಂಗ್‌ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಹೊಸ ಯೋಜನೆ- ಪಿಎಂ-ಆಶಾ ಯೋಜನೆ ವ್ಯಾಪ್ತಿಯಲ್ಲಿ ರಾಜ್ಯ ಸರಕಾರಗಳಿಗೆ ಮೂರು ಆಯ್ಕೆ ನೀಡಲಾಗಿದೆ. ಹಾಲಿ ದರ ಬೆಂಬಲ ಯೋಜನೆ (ಪಿಎಸ್‌ ಎಸ್‌), ದರ ಕುಸಿತ ಪಾವತಿ ಯೋಜನೆ(ಪ್ರೈಸ್‌ ಡೆμàಶಿಯನ್ಸಿ ಪೇಮೆಂಟ್‌ ಸ್ಕೀಂ),  ಯೋಗಿಕವಾಗಿ ಖಾಸಗಿ ಸಂಸ್ಥೆಗಳು ಬೆಳೆ ಸಂಗ್ರಹಣಾ ಯೋಜನೆ (ಪ್ರೈವೇಟ್‌ ಪ್ರೊಕ್ಯೂರ್‌ವೆುಂಟ್‌ ಸ್ಟಾಕಿಸ್ಟ್ಸ್ ಸ್ಕೀಂ) ಯೋಜನೆಗಳ ವ್ಯಾಪ್ತಿಯಲ್ಲಿ ಬೆಳೆಗಳ ಬೆಲೆ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆಯಾದಲ್ಲಿ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ ಸಚಿವ ರಾಧಾಮೋಹನ್‌ ಸಿಂಗ್‌. ಈ ಯೋಜನೆಗಾಗಿ ಮುಂದಿನ 2 ಹಣಕಾಸು ವರ್ಷಗಳಿಗೆ 15,053 ಕೋಟಿ ರೂ.ನಿಗದಿ ಮಾಡಲಾಗಿದೆ. ಈ ಮೊತ್ತದಿಂದ ಮುಂದಿನ ಒಂದು ವರ್ಷದ ಅವಧಿಯಲ್ಲಿ 6,250 ಕೋಟಿ ರೂ. ವಿನಿಯೋಗ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಅನುಗುಣವಾಗಿ ಈ ಯೋಜನೆ ಘೋಷಣೆ ಮಾಡಿರುವುದು ಮಹತ್ವ ಪಡೆದಿದೆ. ಇದೇ ವೇಳೆ ಎಣ್ಣೆ ಕಾಳುಗಳ ಬೆಳೆಗಳಿಗಾಗಿ ಮಧ್ಯಪ್ರದೇಶದಲ್ಲಿ ಜಾರಿಯಲ್ಲಿರುವ ದರ ಕುಸಿತ ಪಾವತಿ ಯೋಜನೆ (ಪಿಡಿಪಿಎಸ್‌) ಅನ್ವಯವೇ ಜಾರಿ ಮಾಡಲಾಗಿದೆ. ಇದಲ್ಲದೆ ಬೆಳೆಗಳ ಸಂಗ್ರಹಣಾ ಸಂಸ್ಥೆಗಳಿಗೆ ನೀಡಲಾಗುವ ಸರಕಾರಿ ಖಾತರಿ ಮಿತಿಯನ್ನು 16,550 ಕೋಟಿ ರೂ.ಗಳಿಗೆ ಏರಿಕೆ ಮಾಡಲಾಗಿದೆ. ರಾಜ್ಯಗಳು ಪ್ರಾಯೋಗಿಕವಾಗಿ ಖಾಸಗಿ ಸಂಸ್ಥೆಗಳ ಮೂಲಕ ಬೆಳೆ ಖರೀದಿ ಕೇಂದ್ರಗಳ ಆರಂಭಕ್ಕೂ ಸಮ್ಮತಿ ಸೂಚಿಸಲಾಗಿದೆ.
13 ಸಾವಿರ ಕಿ.ಮೀ. ವಿದ್ಯುದೀಕರಣ: 

ಮತ್ತೊಂದು  ಮಹತ್ವದ ತೀರ್ಮಾನದಲ್ಲಿ ದೇಶದಲ್ಲಿ 13 ಸಾವಿರ ಕಿ.ಮೀ. ರೈಲು ಮಾರ್ಗವನ್ನು ವಿದ್ಯುದೀಕರಣ ಮಾಡಲು ಸಂಪುಟ ಅನುಮೋದನೆ ನೀಡಿದೆ. 2021-22ನೇ ಸಾಲಿನಲ್ಲಿ ಈ ಯೋಜನೆ ಮುಕ್ತಾಯವಾಗಲಿದೆ. 
ಇಥೆನಾಲ್‌ ಬೆಲೆ ಹೆಚ್ಚಳ: 

ಸಕ್ಕರೆ ಕಾರ್ಖಾನೆಗಳಿಂದ ಖರೀದಿ ಮಾಡಲಾಗುವ ಇಥೆನಾಲ್‌ ದರವನ್ನು ಪ್ರತಿ ಹಾಲಿ 47.49 ರೂ.ಗಳಿಂದ 52.43 ರೂ.ಗೆ ಹೆಚ್ಚಿಸಲು ಸಂಪುಟ ಅನುಮೋದನೆ ನೀಡಿದೆ.
ಮಹಾರಾಷ್ಟ್ರದಲ್ಲಿ ವಿಶೇಷ ಯೋಜನೆ
ಮಹಾರಾಷ್ಟ್ರ ಸರಕಾರ ಕೃಷಿ ಉತನ್ನಗಳ ಮಾರಾಟದಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ವಿಶೇಷ ಯೋಜನೆ ರೂಪಿಸಲು ಮುಂದಾಗಿದೆ. ಉತ್ಪನ್ನಗಳ ಖರೀದಿಗೆ ಗೃಹ ಸಹಕಾರ ಸಂಘಗಳಿಗೆ ಉತ್ತೇಜನ ನೀಡಲು ಮುಂದಾಗಿದೆ. ಈ ಬಗ್ಗೆ ಶೀಘ್ರವೇ ಆದೇಶ ಹೊರಡಿಸಲು ಮುಂದಾಗಿದೆ. ರೈತರಿಗೆ ಉತ್ತಮ ಬೆಲೆ ಮತ್ತು ಗ್ರಾಹಕರಿಗೆ ಕೂಡ ಕೈಗೆಟಕುವ ದರದಲ್ಲಿ ವಿವಿಧ ವಸ್ತುಗಳು ಸಿಗುವಂತಾಗಲಿದೆ. ವಿವಿಧ ಗೃಹ ಸಹಕಾರ ಸಂಘಗಳಲ್ಲಿ ನಿಗದಿತ ಸ್ಥಳವನ್ನು ಸ್ವಸಹಾಯ ಸಂಘಗಳಿಗೆ ಮಾರಾಟ ಮತ್ತು ಖರೀದಿಗೆ ಅವಕಾಶ ಕಲ್ಪಿಸಬೇಕಾಗುತ್ತದೆ.


Friends, If you like this post,kindly comment below the post and do share your Response, (Thanks for Reading....)
logoblog

Thanks for reading ಪ್ರಧಾನಮಂತ್ರಿ ಅನ್ನದಾತ ಆಯ್‌ ಸಂಕರ್ಷನ್‌ ಅಭಿಯಾನ

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *