ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ, ದೇಶವನ್ನು ನಡೆಸಲು ಸಹಜವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಯಿತು. ಸ್ವಾತಂತ್ರ್ಯ ಹೋರಾಟ ಮತ್ತು ಸತ್ಯಾಗ್ರಹಗಳ ಮೂಲ ಸೆಲೆಯೇ ಪ್ರಜಾಪ್ರಭುತ್ವ. ಭಾರತದ ಅಗಾಧ ಜನಸಂಖ್ಯೆ, ವಿವಿಧ ರಾಜ್ಯಗಳು ಮತ್ತು ವಿಭಿನ್ನತೆಯ ಹಿನ್ನೆಲೆಯಲ್ಲಿ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾಗಿ ಹೊರಹೊಮ್ಮಿದ ಭಾರತವನ್ನು ಕಂಡು, ಮುಂದುವರಿದ ದೇಶಗಳಿಗೆ ವಿಸ್ಮಯ, ದಿಗಿಲು, ಗೊಂದಲ ಎಲ್ಲವೂ ಉಂಟಾದವು. ಕೋಟಿಗಟ್ಟಲೆ ಜನರಿರುವ, ಅವರಲ್ಲಿ ಬಹುಪಾಲು ಜನ ಅನಕ್ಷರಸ್ಥ ಅಥವಾ ಅರೆ ಅಕ್ಷರಸ್ಥರಾಗಿರುವ ಸಂದರ್ಭದಲ್ಲಿ, ಈ ದೇಶದಲ್ಲಿ ಪ್ರಜಾಪ್ರಭುತ್ವ ಮಾದರಿ ಯಶಸ್ವಿಯಾದೀತೆ? ಈ ಪ್ರಶ್ನೆಯನ್ನು ಹಲವು ಪಾಶ್ಚಾತ್ಯ ಚಿಂತಕರು ಮತ್ತು ಯುರೋಪಿಯನ್ ಬುದ್ಧಿಜೀವಿಗಳು ಮುಂದೊಡ್ಡಿದರು. ೧೯೭೦ರ ಹೊತ್ತಿಗೆ ಭಾರತದ ಪ್ರಜಾಪ್ರಭುತ್ವದಲ್ಲಿ ಬಿರುಕು ಕಂಡುಬಂದು, ಪ್ರಜಾಪ್ರಭುತ್ವ ಅರ್ಥ ಕಳೆದುಕೊಳ್ಳುತ್ತದೆ ಎಂದೇ ಹಲವು ಪಾಶ್ಚಾತ್ಯ ದೇಶಗಳ ವಾದವಾಗಿತ್ತು. ಅವರೆಲ್ಲರ ವಿಶ್ಲೇಷಣೆ ಮತ್ತು ಭವಿಷ್ಯವನ್ನು ಸುಳ್ಳುಮಾಡುವಂತೆ, ಏಳು ದಶಕಗಳ ನಂತರವೂ ಭಾರತದ ಪ್ರಜಾಪ್ರಭುತ್ವ ಭದ್ರವಾಗಿದೆ, ಬಲಶಾಲಿಯಾಗಿದೆ, ಸುದೃಢವಾಗಿದೆ, ಸುಗಮವಾಗಿದೆ. ಅಲ್ಲಲ್ಲಿ ಕೆಲವು ಕುಂದು ಕೊರತೆಗಳ ಹೊರತಾಗಿಯೂ, ಭಾರತ ದೇಶ ಮತ್ತು ಇಲ್ಲಿನ ರಾಜ್ಯಗಳು ಪ್ರಜಾಪ್ರಭುತ್ವದ ತಳಹದಿಯಲ್ಲಿ ಯಶಸ್ವಿಯಾಗಿ ಮುನ್ನಡೆದಿವೆ. ವಿಶ್ವದ ಇತರ ದೇಶಗಳಿಗೆ ಪ್ರಜಾಪ್ರಭುತ್ವದ ಕುರಿತು ಮಾದರಿ ದೇಶವಾಗಿದೆ ಭಾರತ.
ಈ ಒಂದು ಸಾಧನೆಗೆ, ವಿಸ್ಮಯಕ್ಕೆ ಮುಖ್ಯ ಧಾತು ಭಾರತದ ಸಾರ್ವಜನಿಕ ಚುನಾವಣಾ ಪ್ರಕ್ರಿಯೆ. ವಿವಿಧ ಪಂಗಡ, ಮತ, ಜಾತಿ, ಅಕ್ಷರಸ್ಥ, ಅನಕ್ಷರಸ್ಥ ಜನರಿಂದ ತುಂಬಿರುವ ಭಾರತದಲ್ಲಿ ನಡೆಯುವ ಚುನಾವಣೆಗಳು ಒಂದು ಅಭೂತಪೂರ್ವ ವಿದ್ಯಮಾನ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಭಾರತದ ಮತದಾರರ ಸಂಖ್ಯೆ ಎಷ್ಟು ದೊಡ್ಡದೆಂದರೆ, ಎರಡನೆಯ, ಮೂರನೆಯ ಮತ್ತು ನಾಲ್ಕನೆಯ ಅತಿದೊಡ್ಡ ಪ್ರಜಾಪ್ರಭುತ್ವ ದೇಶಗಳ (ಅಮೆರಿಕ, ಇಂಡೋನೇಷ್ಯಾ, ಬ್ರೆಜಿಲ್) ಒಟ್ಟು ಮತದಾರರ ಸಂಖ್ಯೆಯೇ ಅದಕ್ಕಿಂತ ಕಡಿಮೆ. ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಅರ್ಹ ಮತದಾರರ ಸಂಖ್ಯೆ ಸುಮಾರು ೮೧ ಕೋಟಿ. ಆ ವರ್ಷ ಮೊದಲಬಾರಿ ಮತ ಚಲಾಯಿಸಲು ಅರ್ಹತೆ ಪಡೆದ ಮತದಾರರ ಸಂಖ್ಯೆಯೇ ೧೦ ಕೋಟಿ ಮೀರಿತ್ತು. ಅದೆಷ್ಟೋ ಮುಂದುವರಿದ ದೇಶಗಳ ಒಟ್ಟು ಜನಸಂಖ್ಯೆಗಿಂತ ಈ ಸೇರ್ಪಡೆಗೊಂಡ ಮತದಾರರ ಸಂಖ್ಯೆ ದೊಡ್ಡದು. ಈ ಸಂಖ್ಯೆ ಯಾಕೆ ಮಹತ್ವ ಎಂದರೆ, ಇಷ್ಟೊಂದು ಜನ ಮತದಾರರು ಸಮರ್ಪಕವಾಗಿ ಮತ ಚಲಾಯಿಸಲು, ತಮ್ಮ ಆಯ್ಕೆಯನ್ನು ಸೂಚಿಸಲು ಇಲ್ಲಿ ಮಾಡಿಕೊಡುತ್ತಿರುವ ವ್ಯವಸ್ಥೆಯಾದರೂ ಎಂಥದ್ದು! ಮತದಾನವು ಅದೆಷ್ಟು ವ್ಯವಸ್ಥಿತವಾಗಿ, ಸುಸಂಬದ್ಧವಾಗಿ, ಅರ್ಥಪೂರ್ಣವಾಗಿ, ವೃತ್ತಿಪರವಾಗಿ ಇರಬೇಕು! ಕೋಟಿಗಟ್ಟಲೆ ಜನರು ಒಂದೆರಡು ವಾರಗಳ ಅಂತರದಲ್ಲಿ ನಿರ್ಭೀತಿಯಿಂದ ಮತ ಚಲಾಯಿಸಿ, ಆ ಮತದಾನದ -ಲಿತಾಂಶವನ್ನು ನಿಷ್ಕರ್ಷಿಸಿ, -ಲಿತಾಂಶವನ್ನು ಘೋಷಿಸುವ ಪ್ರಕ್ರಿಯೆಯ ಮೇಲುಸ್ತುವಾರಿ ನಡೆಸುವುದಾದರೂ ಹೇಗೆ? ಆ ಒಂದು ವಿದ್ಯಮಾನವೇ ಒಂದು ವಿಸ್ಮಯ, ಅಚ್ಚರಿ. ವಿಶ್ವದ ಹಲವು ದೇಶಗಳು ಭಾರತದ ಚುನಾವಣೆ ಮತ್ತು -ಲಿತಾಂಶ ಘೋಷಣೆ ದಕ್ಷತೆಯನ್ನು ಕಂಡು, ‘ಇದೊಂದು ಪವಾಡ ಸದೃಶ ಸಾಧನೆ’ ಎಂದು ಬೆರಗು ವ್ಯಕ್ತಪಡಿಸುತ್ತಾರೆ. ಅಂಥದೊಂದು ಮೆಚ್ಚುಗೆಗೆ ಭಾರತದ ಈ ಹೆಮ್ಮೆಯ ಸಾಧನೆ ನಿಜಕ್ಕೂ ಅರ್ಹ.
೧೯೪೭ರಲ್ಲಿ ಸ್ವಾತಂತ್ರ್ಯ ಗಳಿಸಿದ ಭಾರತದಲ್ಲಿ, ಮೊದಲ ಲೋಕಸಭಾ ಚುನಾವಣೆ ನಡೆದದ್ದು ೧೯೫೧-೫೨ರಲ್ಲಿ. ಅಂದು ೪೮೯ ಕ್ಷೇತ್ರಗಳಲ್ಲಿ ಚುನಾವಣೆ ನಡೆದು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ೩೬೪ ಸ್ಥಾನ ಪಡೆದು, ನೆಹರೂ ಮೊದಲ ಪ್ರಧಾನಮಂತ್ರಿಯಾದರು. ಆ ಚುನಾವಣೆಯಲ್ಲಿ ಎರಡನೆಯ ಸ್ಥಾನ ಪಡೆದದ್ದು ಸಿಪಿಐ (೧೬) ಎಂಬ ವಿಚಾರವು ಇಂದಿನವರಿಗೆ ಅಚ್ಚರಿ ಎನಿಸೀತು. ಅದೇನಿದ್ದರೂ, ದೇಶದ ಅಂದಿನ ಸ್ಥಿತಿಯನ್ನು ಗಮನಿಸಿದರೆ ಮೊದಲ ಚುನಾವಣೆಯು ಸಾಕಷ್ಟು ನಿಷ್ಪಕ್ಷಪಾತವಾಗಿ ನಡೆಯಿತೆಂಬುದರಲ್ಲಿ ಅನುಮಾನವಿಲ್ಲ. ಮೊದಲ ಲೋಕಸಭಾ ಚುನಾವಣೆಯ ಪ್ರಕ್ರಿಯೆಯನ್ನು ಭಾರತ ಮತ್ತು ಇಡೀ ವಿಶ್ವವೇ ಕಾತರದಿಂದ ಗಮನಿಸುತ್ತಿತ್ತು. ಏಕೆಂದರೆ, ಅಂದಿನ ಪರಿಸ್ಥಿತಿಯಲ್ಲಿ ಚುನಾವಣೆ ನಡೆದು ಸರ್ವ ಸಮ್ಮತವಾದ ಒಂದು ಪಕ್ಷ ವಿಜಯಿಯಾಗಿ ಹೊರಹೊಮ್ಮಿದ್ದೇ ಒಂದು ಪವಾಡ, ವಿಸ್ಮಯ. ಏಕೆಂದರೆ, ೧೯೫೧ರಲ್ಲಿ ಭಾರತದ ವಾಸ್ತವಸ್ಥಿತಿ ಚಿಂತಾಜನಕವಾಗಿತ್ತು. ದೇಶ ಸ್ಥಿರತೆಯನ್ನು ಕಂಡುಕೊಂಡಿರಲಿಲ್ಲ. ದಶಕಗಳ ಕಾಲ ಭಾರತವನ್ನು ವಸಾಹತನ್ನಾಗಿಸಿಕೊಂಡು, ಆಳ್ವಿಕೆ ಮಾಡಿದ್ದ ಬ್ರಿಟನ್, ಇಲ್ಲಿನ ಸಂಪತ್ತನ್ನು ತನ್ನ ದೇಶಕ್ಕೆ ಸಾಗಿಸಿದ್ದು ಮಾತ್ರವಲ್ಲದೇ, ಇಲ್ಲಿನ ಎಷ್ಟೋ ಕ್ಷೇತ್ರಗಳನ್ನು ಹಾಳುಗೆಡವಿತ್ತು. ಸಾಲದ್ದಕ್ಕೆ, ದೇಶವನ್ನು ವಿಭಜನೆ ಮಾಡಿ ಹೋಗಿತ್ತು. ಆಗ ನಡೆದ ಉತ್ಪಾತ, ಗೊಂದಲ, ದೊಂಬಿ, ಅಸ್ಥಿರತೆ, ಮತೀಯ ಗಲಭೆಗಳಿಂದ ಆಗತಾನೆ ಚೇತರಿಸಿಕೊಳ್ಳುತ್ತಿದ್ದ ದೇಶದಲ್ಲಿ ೧೯೫೧ರಲ್ಲಿ ಚುನಾವಣೆ ನಡೆಸಿದ್ದೇ ಒಂದು ಸಾಧನೆ, ಪವಾಡ. ಆ ಪವಾಡವು ಈ ಏಳುದಶಕಗಳ ತನಕ ಮುಂದುವರಿದಿರುವುದು, ಭದ್ರವಾಗಿರುವುದು ಇನ್ನೊಂದು ಪವಾಡ. ಈಗಿನ ದಿನಗಳಲ್ಲಿ ಇದು ತಮಾಷೆ ಎನಿಸಬಹುದು, ೧೯೫೦ – ೧೯೭೦ರ ದಶಕಗಳಲ್ಲಿ ಮತದಾನ ನಡೆಸುವುದು, ಜನರನ್ನು ಮತಗಟ್ಟೆಗೆ ಕರೆತಂದು ಮತ ಚಲಾಯಿಸುವಂತೆ ಮನವೊಲಿಸುವುದು ನಿಜಕ್ಕೂ ವಿಶೇಷ ಎನಿಸುತ್ತಿತ್ತು. ಅಷ್ಟೆಲ್ಲ ಎಡರು-ತೊಡರುಗಳಿದ್ದೂ ಭಾರತದ ‘ಬಡ ಜನರು’ ಮತ ಚಲಾಯಿಸಿ, ಪಕ್ಷವೊಂದನ್ನು ಗೆಲ್ಲಿಸಿ, ಈ ದೇಶದ ಪ್ರಜಾಪ್ರಭುತ್ವಕ್ಕೆ ಒಂದು ನಿಜವಾದ ಅರ್ಥವನ್ನು, ಶಕ್ತಿಯನ್ನು ಕೊಟ್ಟಿದ್ದಂತೂ ಸುಳ್ಳಲ್ಲ.
ಈ ಎಲ್ಲದರ ಶ್ರೇಯ ಭಾರತೀಯ ಚುನಾವಣಾ ಆಯೋಗಕ್ಕೆ ಸೇರಬೇಕು. ೧೯೫೦ರಲ್ಲಿ ಅಸ್ತಿತ್ವಕ್ಕೆ ಬಂದ ಭಾರತೀಯ ಚುನಾವಣಾ ಆಯೋಗಕ್ಕೆ ಅಂದು ಇದ್ದದ್ದು ಒಬ್ಬರೇ ಆಯುಕ್ತರು. ಅವರನ್ನು ನೇಮಿಸುವ ಜವಾಬ್ದಾರಿ ರಾಷ್ಟ್ರಪತಿಗಳದ್ದು. ಆದರೆ, ಒಮ್ಮೆ ನೇಮಕಗೊಂಡ ನಂತರ, ಮುಖ್ಯ ಚುನಾವಣಾ ಆಯುಕ್ತರು ರಾಷ್ಟ್ರಪತಿಗಳ ಅಂಕೆಯಲ್ಲಿ ಇರುವುದಿಲ್ಲ. ನಿಷ್ಪಕ್ಷಪಾತ, ನಿರ್ಭೀತ, ಆಮಿಷರಹಿತ ಚುನಾವಣೆಗಳನ್ನು ನಡೆಸಲು ಅಗತ್ಯವಿರುವ ಯಾವುದೇ ಕ್ರಮವನ್ನು ಕೈಗೊಳ್ಳಲು ಅವರಿಗೆ ಅಽಕಾರ ಇದೆ. ಚುನಾವಣೆಯ ಸಮಯದಲ್ಲಿ ಸರಕಾರಿ ಅಽಕಾರಿಗಳು, ಉದ್ಯೋಗಿಗಳು ನಿಯುಕ್ತರಾಗುತ್ತಾರೆ. ಚುನಾವಣೆ ಮುಗಿಯುವ ತನಕ ಅವರೆಲ್ಲರೂ ಚುನಾವಣಾ ಆಯೋಗ ಹೇಳಿದಂತೆ ಕಾರ್ಯನಿರ್ವಹಿಸಬೇಕು. ತಪ್ಪಿದಲ್ಲಿ ಅವರ ಮೇಲೆ ಕ್ರಮ ಜರುಗಿಸಲು ಚುನಾವಣಾ ಆಯೋಗಕ್ಕೆ ಅಽಕಾರವಿದೆ.
ಒಬ್ಬರೇ ಆಯುಕ್ತರಿದ್ದ ವ್ಯವಸ್ಥೆ ೧೯೮೯ರ ತನಕ ಇತ್ತು. ೧೯೮೯ರಿಂದ ೧.೧.೧೯೯೦ ರ ತನಕ ಇಬ್ಬರು ಆಯುಕ್ತರಿದ್ದರು. ೧೯೯೦ರಲ್ಲಿ ಪುನಃ ಒಬ್ಬರೇ ಆಯುಕ್ತರಿದ್ದರು. ೧೯೯೩ರಲ್ಲಿ, ನರಸಿಂಹರಾವ್ ಪ್ರಧಾನಿಯಾಗಿದ್ದಾಗ, ಚುನಾವಣಾ ಆಯೋಗವನ್ನು ತ್ರಿಸದಸ್ಯರಿರುವ ಸಂಸ್ಥೆಯನ್ನಾಗಿ ಬದಲಾಯಿಸಲಾಯಿತು. ನಮ್ಮ ದೇಶದ ಗಾತ್ರ, ವೈವಿಧ್ಯ, ಮತದಾರರ ಸಂಖ್ಯೆ ಮೊದಲಾದವನ್ನು ಗಮನಿಸಿದಾಗ, ಚುನಾವಣಾ ಆಯೋಗವು ಕಾರ್ಯನಿರ್ವಹಿಸುತ್ತಿರುವ ವೈಖರಿ ದಕ್ಷ, ಅದ್ಭುತ ಎನ್ನಬೇಕು. ಚುನಾವಣಾ ಪ್ರಕ್ರಿಯೆ ಸುಸೂತ್ರವಾಗಿ ಪೂರ್ಣಗೊಳ್ಳುವುದರ ಜವಾಬ್ದಾರಿ ಹೊತ್ತಿರುವ ಮುಖ್ಯ ಚುನಾವಣಾ ಆಯುಕ್ತರ ಅಽಕಾರ, ಕೆಲವು ಸಂದರ್ಭಗಳಲ್ಲಿ ಅಪರಿಮಿತ. ಕಾಲದಿಂದ ಕಾಲಕ್ಕೆ ಆಗಬೇಕಾದ ಕಾರ್ಯಗಳ ವೇಳಾಪಟ್ಟಿಯು ವ್ಯತ್ಯಯವಾಗದಂತೆ ನೋಡಿಕೊಳ್ಳುವುದು ಅವರ ಕರ್ತವ್ಯ. ಸರಕಾರಿ ಅಽಕಾರಿಗಳು ಮತ್ತು ಉದ್ಯೋಗಿಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಾರೆ ಮತ್ತು ಚುನಾವಣಾ ಆಯೋಗದ ಆಶಯವನ್ನು ಪಾಲಿಸುವುದು ಅವರ ಕರ್ತವ್ಯ. ಇದರಲ್ಲಿ ಎಡವಿದರೆ ಅಥವಾ ನಿರ್ಲಕ್ಷ್ಯ ತೋರಿದರೆ, ಅವರು ಯಾವುದೇ ಇಲಾಖೆಗೆ ಸೇರಿದ ಯಾವುದೇ ಹುದ್ದೆಯವರಾಗಿರಲಿ, ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಚುನಾವಣಾ ಆಯೋಗಕ್ಕೆ ಅಽಕಾರವಿದೆ. ಚುನಾವಣಾ ಕರ್ತವ್ಯಲೋಪ ಎಸಗಿದ ಸರಕಾರಿ ನೌಕರರು ಜೈಲುವಾಸ ಅನುಭವಿಸಿದ ಉದಾಹರಣೆಗಳೂ ಉಂಟು. ಇಂತಹ ಬಿಗಿ ಚೌಕಟ್ಟಿನಲ್ಲಿ ನಡೆಯುವದರಿಂದಲೇ, ಭಾರತದ ಚುನಾವಣೆಗಳು ಯಶಸ್ವಿಯಾಗಿ, ಜಗತ್ತಿಗೆ ಮಾದರಿಯಾಗಿವೆ ಎನ್ನಬಹುದು.
ಇದಕ್ಕೆ ಅನುಗುಣವಾಗಿ ದೇಶದ ಮತದಾನ ಪ್ರಕ್ರಿಯೆಯೂ ತನ್ನದೇ ರೀತಿಯಲ್ಲಿ ಕಾಲದಿಂದ ಕಾಲಕ್ಕೆ ಉತ್ತಮಗೊಳ್ಳುತ್ತಾ ಬಂದಿದೆ. ಒಂದು ಉದಾಹರಣೆ ಎಂದರೆ, ೧೯೫೦ರ ದಶಕದಲ್ಲಿ, ಸುಮಾರು ೨.೮ ಮಿಲಿಯನ್ ಮಹಿಳೆಯರಿಗೆ ಮತದಾನದ ಹಕ್ಕನ್ನು ನಿರಾಕರಿಸಲಾಯಿತು. ಏಕೆ ಗೊತ್ತೆ? ಅವರೆಲ್ಲರೂ ತಮ್ಮ ಹೆಸರನ್ನು ಬರೆಸುವಾಗ, ನಿಜವಾದ ಹೆಸರನ್ನು ಬರೆಸದೇ, ಇಂಥವರ ಹೆಂಡತಿ, ಇಂಥವರ ತಾಯಿ ಎಂದು ಬರೆಸಿದ್ದರು! ಹಾಗಾಗಿ ಮತದಾನ ಮಾಡುವ ಹಕ್ಕನ್ನು ಕಳೆದುಕೊಂಡರು. ಇದರಿಂದಾದ ಒಳಿತೇನೆಂದರೆ ಮುಂದಿನ ಚುನಾವಣೆಯ ಸಮಯದಲ್ಲಿ ಅವರೆಲ್ಲರೂ ತಮ್ಮ ಸ್ವಂತ ಹೆಸರನ್ನು ಬರೆಸಿದ್ದು!
ಮತಯಂತ್ರಗಳು ಬಳಕೆಗೆ ಬಂದದ್ದು ಭಾರತದ ಚುನಾವಣಾ ಪ್ರಕ್ರಿಯೆಯಲ್ಲಿ ಒಂದು ಮೈಲಿಗಲ್ಲು. ಮತಪತ್ರಗಳ ಮೇಲೆ ಗುರುತು ಮಾಡುವ ಪದ್ಧತಿಯಲ್ಲಿ ಸಾಕಷ್ಟು ಲೋಪದೋಷಗಳಿದ್ದವು. ಅದರ ಸುಧಾರಣೆ ಪ್ರಯತ್ನವಾಗಿ ಮತಯಂತ್ರಗಳು ಬಳಕೆಗೆ ಬಂದಾಗ, ವಿಶ್ವವೇ ಮತ್ತೊಮ್ಮೆ ನಿಬ್ಬೆರಗಾಯಿತು! ಪ್ರಾಯೋಗಿಕವಾಗಿ ಭಾರತದಲ್ಲಿ ಮತಯಂತ್ರಗಳ ಬಳಕೆ ಆರಂಭವಾದದ್ದು ೧೯೮೪ರಲ್ಲಿ. ಈ ಯಂತ್ರಗಳಿಗೆ ಅಽಕೃತ ಮಾನ್ಯತೆ ದೊರೆತದ್ದು ೧೯೯೮ರಲ್ಲಿ. ೨೦೦೪ರಲ್ಲಿ ಇಡೀ ದೇಶದಲ್ಲಿ ಮತಯಂತ್ರಗಳ ಬಳಕೆ ಆರಂಭವಾಯಿತು. ಮತದಾರರು ಹಾಕಿದ ಮತವು ಸಮರ್ಪಕವಾಗಿ, ಅವರು ಇಷ್ಟಪಟ್ಟ ಅಭ್ಯರ್ಥಿಗೇ ಚಲಾವಣೆ ಆಗಿದೆಯೋ ಎಂದು ಪರಿಶೀಲಿಸಲು ವಿವಿಪ್ಯಾಟ್ ಚೀಟಿಯ ಸೌಲಭ್ಯ ಆರಂಭವಾದದ್ದು ೨೦೧೩ರಲ್ಲಿ. ಈ ಚೀಟಿಯನ್ನು ಪರಿಶೀಲಿಸಿದರೆ, ಮತದಾರನು ಯಾವ ಅಭ್ಯರ್ಥಿಗೆ ಮತ ಹಾಕಿದ್ದಾನೆ ಎಂದು ಖಚಿತಪಡಿಸಿಕೊಳ್ಳಬಹುದು. ಮತಯಂತ್ರಗಳ ಮೇಲೆ ಅನುಮಾನ ಪಡುವವರಿಗೆ ಕೊಡಲಾದ ಸಮರ್ಪಕ ಉತ್ತರವೇ ವಿವಿಪ್ಯಾಟ್.
ಮತದಾನ ಪ್ರಕ್ರಿಯೆಯಲ್ಲಿ ಮತಯಂತ್ರಗಳು ತಂದ ಬದಲಾವಣೆ ನಿಜಕ್ಕೂ ಕ್ರಾಂತಿಕಾರಿ. ಇದರಿಂದ ಮತದಾನವು ಇನ್ನಷ್ಟು ಪಾರದರ್ಶಕವಾಗಿ ನಡೆಯತೊಡಗಿತು. ಆದರೆ, ಕೆಲವು ಪ್ರಮುಖ ಪ್ರತಿಪಕ್ಷಗಳು ಮತಯಂತ್ರಗಳ ಕುರಿತು ಹುಯಿಲೆಬ್ಬಿಸಿದ್ದು ಒಂದು ವಿಪರ್ಯಾಸ. ಹಲವು ಚಿಂತಕರು ಮತ್ತು ಬುದ್ಧಿಜೀವಿಗಳು ಈ ಕುರಿತು ಟೀಕೆಗಳನ್ನು ವ್ಯಕ್ತಪಡಿಸಿದ್ದು, ಒಟ್ಟಾರೆ ಮತದಾನ ಪ್ರಕ್ರಿಯೆಯ ಮೇಲೆ ಅನುಮಾನ ಹುಟ್ಟುವಂತೆ ಮಾಡಿದ್ದು ಸುಳ್ಳಲ್ಲ. ವಿಶೇಷವೆಂದರೆ, ದೇಶದ ಪ್ರತಿಪಕ್ಷದ ಹಲವು ಪ್ರಮುಖ ರಾಜಕೀಯ ನಾಯಕರು ‘ಮತಯಂತ್ರಗಳು ಮೋಸ ಮಾಡುತ್ತಿವೆ’ ಎಂದು ಸಾರ್ವಜನಿಕವಾಗಿ, ಮಾಧ್ಯಮಗಳಲ್ಲಿ ಪದೇಪದೆ ಹೇಳಿಕೆ ನೀಡಿ, ಜನಮಾನಸದಲ್ಲೂ ಗೊಂದಲ ಉಂಟುಮಾಡುವಲ್ಲಿ ಯಶಸ್ವಿಯಾದರೆಂದೇ ಹೇಳಬಹುದು. ಚುನಾವಣೆಯನ್ನು ನಡೆಸುವ ಜವಾಬ್ದಾರಿ ಹೊತ್ತಿರುವ ಚುನಾವಣಾ ಆಯೋಗಕ್ಕೆ ಇದೊಂದು ದೊಡ್ಡ ಸವಾಲಾಗಿ ಪರಿಣಮಿಸಿದ್ದೂ ನಿಜ. ನಿಷ್ಪಕ್ಷಪಾತವಾಗಿ, ಸಮರ್ಪಕವಾಗಿ ಚುನಾವಣೆಗಳನ್ನು ನಡೆಸಿಕೊಂಡು ಬಂದಿದ್ದ ಆಯೋಗದ ಸಾಕ್ಷಿಪ್ರeಯನ್ನೇ ಪ್ರಶ್ನಿಸುವ ಆರೋಪ ಇದು. ಮತಯಂತ್ರಗಳು ವೈಜ್ಞಾನಿಕವಾಗಿವೆ, ಸಮರ್ಪಕವಾಗಿವೆ ಎಂದು ಆಯೋಗವು ಹೇಳಿಕೆ ನೀಡಿದರೂ, ಕೆಲವು ಪ್ರಸಿದ್ಧ ನಾಯಕರು ಆರೋಪ ಮಾಡುವುದನ್ನು ನಿಲ್ಲಿಸಲಿಲ್ಲ.
ಆಗ ಚುನಾವಣಾ ಆಯೋಗ ನೀಡಿದ್ದೇ, ‘ಹ್ಯಾಕಥಾನ್ ೨೦೧೭’ ಎಂಬ ಸವಾಲು. ಮತಯಂತ್ರಗಳನ್ನು ಹ್ಯಾಕ್ ಮಾಡಿತೋರಿಸಲು, ೩.೬.೨೦೧೭ರಂದು ದಿನಾಂಕ ನಿಗದಿ ಮಾಡಲಾಯಿತು. ಚುನಾವಣೆಗೆ ಉಪಯೋಗಿಸುತ್ತಿರುವ ಮತಯಂತ್ರಗಳನ್ನು ದೋಷಗಳನ್ನು ತೋರಿಸಿ ಎಂದು ಟೀಕಾಕಾರನ್ನು ಆಹ್ವಾನಿಸಿತು. ಇದರಲ್ಲಿ ಭಾಗವಹಿಸಲು ಎರಡು ಪ್ರಮುಖ ಪ್ರತಿ ಪಕ್ಷಗಳು ತಮ್ಮ ಹೆಸರನ್ನು ಬರೆಸಿದವು, ಆದರೆ ರಹಸ್ಯ ಭೇದಿಸಲು ಸಾಧ್ಯ ಎಂದು ಸಾಬೀತು ಪಡಿಸಬಹುದಾದ ‘ಹ್ಯಾಕಥಾನ್’ನಲ್ಲಿ ಭಾಗವಹಿಸಲಿಲ್ಲ. ಅಲ್ಲಿಗೆ, ವಿದ್ಯುನ್ಮಾನ ಮತಯಂತ್ರಗಳು ಸಮರ್ಪಕವಾಗಿವೆ ಎಂದು ಟೀಕಾಕಾರರೇ ಒಪ್ಪಿಕೊಂಡಂತಾಯಿತು ಎಂದು ಪರಿಗಣಿಸಬಹುದು.
ಭಾರತದ ಚುನಾವಣೆಯಲ್ಲಿ ಮತಗಟ್ಟೆಗಳನ್ನು ಯಾವ ರೀತಿ ಗುರುತಿಸಿದ್ದಾರೆಂದರೆ, ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಪ್ರತಿ ಮತದಾರನಿಗೂ ೨ ಕಿಮೀ ಒಳಗೆ ಮತ ಚಲಾಯಿಸುವ ಅನುಕೂಲತೆ ಇದೆ. ಆದರೆ, ದುರ್ಗಮ ಪ್ರದೇಶಗಳಲ್ಲಿ, ಕಾಡುಗಳಲ್ಲಿ, ನೀರಿನಿಂದಾವೃತವಾದ ಸ್ಥಳಗಳಲ್ಲಿ ಮತಗಟ್ಟೆಗಳನ್ನು ಸ್ಥಾಪಿಸುವುದೇ ದೊಡ್ಡ ಸವಾಲು. ಅರುಣಾಚಲ ಪ್ರದೇಶದ ಕೆಲವು ಮತಗಟ್ಟೆಗಳನ್ನು ತಲುಪಲು ಮತದಾರರು ೧೦ ರಿಂದ ೨೦ ಕಿಮೀ ನಡೆಯುವ ಅವಶ್ಯಕತೆ ಇದೆ. ಈ ಮತಗಟ್ಟೆಗಳನ್ನು ಸ್ಥಾಪಿಸಲು ಚುನಾವಣಾ ಅಽಕಾರಿಗಳು ಸಹ ಅದೇರೀತಿ ಶ್ರಮಿಸಬೇಕಾದ ಅನಿವಾರ್ಯತೆ. ಚುನಾವಣೆ ನಡೆಸುವ ಸಿಬ್ಬಂದಿ ಆನೆಯ ಮೇಲೆ, ಒಂಟೆಯ ಮೇಲೆ, ದೋಣಿಯ ಮೇಲೆ ಸಂಚರಿಸಿ, ಮತಗಟ್ಟೆಯನ್ನು ಸ್ಥಾಪಿಸಿದ ಉದಾಹರಣೆಗಳು ಹಲವು. ಗುಜರಾತ್ನ ಗಿರ್ ಅರಣ್ಯ ಪ್ರದೇಶದಲ್ಲಿ ಕೇವಲ ಒಂದು ಮತ ಚಲಾಯಿಸಲು ಅನುಕೂಲವಾಗುವಂತೆ, ಮತಗಟ್ಟೆಯನ್ನು ಸ್ಥಾಪಿಸಿದ ಉದಾಹರಣೆಯೂ ಇದೆ.
೨೧ನೆ ಶತಮಾನದ ಮೊದಲ ವರ್ಷಗಳಲ್ಲಿ ಜಾರಿಗೊಳಿಸಿದ ‘ಮತದಾರರ ಗುರುತಿನ ಚೀಟಿ’ ಇನ್ನೊಂದು ದೊಡ್ಡ ಸಾಧನೆ. ದೇಶದ ೭೦ಕೋಟಿಗೂ ಹೆಚ್ಚಿನ ಮತದಾರರ ಛಾಯಾಚಿತ್ರ ತೆಗೆದು, ವಿವರಗಳನ್ನು ದಾಖಲು ಮಾಡುವ ಬೃಹತ್ ಕಾರ್ಯ ಸಾಂಗವಾಗಿ ನಡೆದಿದೆ. ಮತದಾನದ ಸಮಯದಲ್ಲಿ ತಮ್ಮ ಗುರುತಿನ ಚೀಟಿಯನ್ನು ತೋರಿಸಿ ಮತ ಚಲಾಯಿಸುವಂತಾದದ್ದು, ಅದೆಷ್ಟೋ ಅಕ್ರಮಗಳಿಗೆ ಕೊನೆ ಹಾಡಿದೆ. ಈ ಚೀಟಿಯು ಇತರ ಉದ್ದೇಶಗಳಿಗೂ ಸದುಪಯೋಗವಾಗುತ್ತಿರುವುದು ಇನ್ನೊಂದು ವಿಶೇಷ. ಇದರ ಜೊತೆಯಲ್ಲಿ, ಮತಚಲಾಯಿಸಿದವರ ಕೈ ಬೆರಳಿಗೆ ಶಾಯಿ ಗುರುತು ಹಚ್ಚುವ ಕ್ರಮ ಸಹ, ಅನಽಕೃತ ಮತ ಚಲಾವಣೆಯನ್ನು ತಪ್ಪಿಸುವಲ್ಲಿ ಸಹಕಾರಿ. ಕೈ ಬೆರಳಿಗೆ ಗುರುತು ಮಾಡಲು ಉಪಯೋಗಿಸುವ ಶಾಯಿಯನ್ನು ಮೈಸೂರಿನಲ್ಲಿ ತಯಾರಿಸಲಾಗುತ್ತಿದ್ದು, ದೇಶದ ಯಾವುದೇ ಭಾಗದಲ್ಲಿ ಚುನಾವಣೆ ನಡೆದರೂ ಮೈಸೂರಿನಿಂದಲೇ ಶಾಯಿಯ ಪೂರೈಕೆ.
ಮತಯಂತ್ರಗಳಲ್ಲಿ ಮತಚಲಾಯಿಸುವುದು ಜಾರಿಗೆ ಬಂದ ನಂತರ, ಚುನಾವಣಾ ಆಯೋಗ ಅಳವಡಿಸಿದ ಒಂದು ಮಹತ್ವದ ಕ್ರಮ ಎಂದರೆ ನೋಟಾ. ಭಾರತೀಯ ಚುನಾವಣಾ ಪ್ರಕ್ರಿಯೆಯು ಇನ್ನಷ್ಟು ಉತ್ತಮಗೊಳ್ಳುತ್ತಲೇ ಇದೆ ಎನ್ನುವುದಕ್ಕೆ ಒಂದು ಪುರಾವೆ ನೋಟಾ. ಮತದಾರನಿಗೆ ಯಾವ ಅಭ್ಯರ್ಥಿಗೂ ಮತಚಲಾಯಿಸುವ ಇಷ್ಟ ಇಲ್ಲ ಎಂದಾದರೆ, ಅದನ್ನು ಪ್ರಯೋಗಕ್ಕೆ ತರುವುದು ಹೇಗೆ? ಪ್ರಜಾಪ್ರಭುತ್ವದಲ್ಲಿ ಇಂತಹ ಮನಸ್ಥಿತಿಯನ್ನು ಮತದಾರನು ಅಭಿವ್ಯಕ್ತಿಗೊಳಿಸುವ ಅವಶ್ಯಕತೆ ಇದೆ ಎಂದು ಮನಗಂಡ ಚುನಾವಣಾ ಆಯೋಗ, ‘ಯಾವ ಅಭ್ಯರ್ಥಿಗೂ ಮತ ಚಲಾಯಿಸಲಾರೆ’ ಎಂದು ಸೂಚಿಸುವ ನೋಟಾ ಅವಕಾಶವನ್ನು ಮತಯಂತ್ರದಲ್ಲಿ ಅಳವಡಿಸಿತು. ಅದೆಷ್ಟೋ ಚುನಾವಣೆಗಳಲ್ಲಿ ‘ನೋಟಾ’ಕ್ಕೆ ಚಲಾವಣೆಯಾದ ಮತಗಳು ನಿರ್ಣಾಯಕ ಎನಿಸುವಷ್ಟಿದ್ದವು. ಅಂದರೆ, ಗೆದ್ದ ಮತ್ತು ಸೋತ ಅಭ್ಯರ್ಥಿ ಗಳಿಸಿದ ಮತಗಳ ಅಂತರಕ್ಕಿಂತ ನೋಟಾ ಮತಗಳು ಹೆಚ್ಚಾಗಿದ್ದು, ಅಭ್ಯರ್ಥಿಗಳಿಗೆ ಒಳ್ಳೆಯ ಪಾಠವನ್ನೇ ಕಲಿಸಿದವು ಎನ್ನಬಹುದು.
ಭಾರತೀಯ ಚುನಾವಣಾ ಪ್ರಕ್ರಿಯೆಯಲ್ಲಿ ಒಂದೊಂದು ಮತವೂ ಪ್ರಮುಖ ಎನ್ನುವುದು ಸ್ಪಷ್ಟ. ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ ೨೦೦೮ರ ರಾಜಸ್ತಾನದ ಚುನಾವಣೆ. ಸಿ.ಪಿ.ಜೋಷಿ ಎಂಬುವವರು ಒಂದು ಮತದಿಂದ ಸೋತರು. ಆದರೆ ಅವರ ಪಕ್ಷ ಗೆದ್ದು ಅಽಕಾರ ಹಿಡಿದಿತ್ತು! ಆ ಚುನಾವಣೆಯಲ್ಲಿ ಅವರ ತಾಯಿ ಮತ್ತು ಹೆಂಡತಿ ಮತಚಲಾಯಿಸಲಿಲ್ಲ! ಒಂದು ಓಟಿನಿಂದ ಏನು ಮಹಾ ವ್ಯತ್ಯಾಸ ಆಗುತ್ತೆ ಎಂಬ ನಿರ್ಲಕ್ಷ್ಯದಿಂದ ಇರಬಹುದು. ಅವರಿಬ್ಬರೂ ಮತಗಟ್ಟೆಗೆ ಬಂದು ಇವರಿಗೆ ಓಟು ಮಾಡಿದ್ದರೆ, ಸಿ.ಪಿ.ಜೋಷಿ ಗೆಲ್ಲುತ್ತಿದ್ದರು!
ಭಾರತದ ಪ್ರಜಾಪ್ರಭುತ್ವ ಗಟ್ಟಿಗೊಳ್ಳಲು ಚುನಾವಣೆಯಲ್ಲಿ ನಡೆದ ಅಕ್ರಮಗಳ ವಿರುದ್ಧ ನ್ಯಾಯಾಂಗ ಕೈಗೊಂಡ ಕೆಲವು ಗಂಭೀರ ಕ್ರಮಗಳೂ ಕಾರಣ. ೧೯೭೫ರಲ್ಲಿ ಅಂದಿನ ಪ್ರಧಾನಿಯಾಗಿದ್ದ ಇಂದಿರಾಗಾಂಽಯವರು ರಾಯ್ಬರೇಲಿ ಚುನಾವಣೆಯಲ್ಲಿ ಅಕ್ರಮ ಎಸಗಿದ್ದು ಮತ್ತು ಸರಕಾರಿ ಅಽಕಾರಿಗಳನ್ನು ಚುನಾವಣಾ ಪ್ರಚಾರಕ್ಕೆ ಉಪಯೋಗಿಸಿಕೊಂಡಿದ್ದು ಸಾಬೀತಾಗಿದ್ದರಿಂದ, ಅವರ ಆಯ್ಕೆ ಅಸಿಂಧು ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯ ಘೋಷಿಸಿತು. ಈ ತೀರ್ಪು, ಮುಂದೆ ತುರ್ತುಪರಿಸ್ಥಿತಿ ಎಂಬ ಕರಾಳ ಅಧ್ಯಾಯಕ್ಕೆ ದಾರಿಮಾಡಿಕೊಟ್ಟಿತು. ಆದರೆ, ಆನಂತರದ ಚುನಾವಣೆಯಲ್ಲಿ ಮತದಾರನು ತನ್ನ ಶಕ್ತಿಯನ್ನು ಪ್ರದರ್ಶಿಸಿ, ಇಂದಿರಾಗಾಂಽಯವರನ್ನು ಮತ್ತು ಅವರ ಪಕ್ಷವನ್ನು ಸೋಲಿಸಿದ್ದು ಈಗ ಇತಿಹಾಸ. ಇತ್ತೀಚೆಗೆ, ಅಂದರೆ ೨೦೦೫ರಲ್ಲಿ ೧೦ ಜನ ಲೋಕಸಭಾ ಸದಸ್ಯರನ್ನು ಅಮಾನತು ಮಾಡಿದ ಘಟನೆಯೂ ಇಲ್ಲಿ ಪ್ರಸ್ತುತ. ಪಾರ್ಲಿಮೆಂಟಿನಲ್ಲಿ ಪ್ರಶ್ನೆಕೇಳಲು ಹಣ ಪಡೆಯುತ್ತಿದ್ದುದಕ್ಕೆ ಈ ಕ್ರಮ ಜರುಗಿಸಲಾಯಿತು. ಇಂತಹ ವಿದ್ಯಮಾನಗಳು ಪ್ರಜಾಪ್ರಭುತ್ವ ಮತ್ತು ಚುನಾವಣಾ ಪ್ರಕ್ರಿಯೆಯ ಹಿರಿಮೆಯನ್ನು ಹೆಚ್ಚಿಸಿವೆ.
Friends, If you like this post,kindly comment below the post and do share your Response, (Thanks for Reading....)
No comments:
Post a Comment