ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 67 ವರ್ಷಗಳಿಂದ ಬಂಧಿಯಾಗಿರುವ ಆನೆ ಬಿಡುಗಡೆಗೆ ಶ್ರೀಲಂಕಾ ಅಧ್ಯಕ್ಷರಿಗೆ ಮೇನಕಾ ಪತ್ರ | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Tuesday, September 18, 2018

67 ವರ್ಷಗಳಿಂದ ಬಂಧಿಯಾಗಿರುವ ಆನೆ ಬಿಡುಗಡೆಗೆ ಶ್ರೀಲಂಕಾ ಅಧ್ಯಕ್ಷರಿಗೆ ಮೇನಕಾ ಪತ್ರ

  Pundalik       Tuesday, September 18, 2018
ಕೊಲೊಂಬೊ: ಶ್ರೀಲಂಕಾದ ದೆಹಿವಾಲ ಮೃಗಾಲಯದಲ್ಲಿ ಸುಮಾರು 67 ವರ್ಷಗಳಿಂದ ಸರಪಳಿಗಳ ಸಂಕೋಲೆಯಲ್ಲೇ ಜೀವನ ದೂಡುತ್ತಿರುವ 69 ವರ್ಷ ವಯಸ್ಸಿನ ಆನೆಯನ್ನು ಬಂಧಮುಕ್ತಗೊಳಿಸುವಂತೆ ಭಾರತ ಸರ್ಕಾರದ ಮಂತ್ರಿ ಮೇನಕಾ ಗಾಂಧಿ ಅವರು ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
1949ರಲ್ಲಿ ಜನಿಸಿರುವ ಬಂಡುಲ ಎಂಬ ಆನೆಯನ್ನು ಶ್ರೀಲಂಕಾದ ದೆಹಿವಾಲ ಮೃಗಾಲಯದಲ್ಲಿ 1951ರಿಂದಲೂ ಸರಪಳಿಗಳಿಂದ ಬಂಧಿಸಿಡಲಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಸಚಿವೆಯಾದ ಮೇನಕಾ ಗಾಂಧಿ ಅವರು ಶ್ರೀಲಂಕಾ ಅಧ್ಯಕ್ಷರಿಗೆ ಪತ್ರ ಬರೆದ್ದಾರೆ.
ಬಂಡುಲ ಆನೆಯೂ ಸೇರಿದಂತೆ ಏಳು ಆನೆಗಳನ್ನೂ ಬಂಧಮುಕ್ತಗೊಳಿಸಿ ಅಭಯಾರಣ್ಯದಲ್ಲಿ ಮುಕ್ತವಾಗಿ ಜೀವಿಸಲು ಅನುವು ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದ್ದಾರೆ. ಅಲ್ಲದೆ, ತಮ್ಮ ಪತ್ರದಲ್ಲಿ ಭಾರತದ ಉದಾಹರಣೆಯನ್ನೂ ಅವರು ಉಲ್ಲೇಖಿಸಿದ್ದಾರೆ.
“ದೆಹಿವಾಲದಲ್ಲಿರುವ ಆನೆಗಳನ್ನು ಬಿಡುಗಡೆ ಮಾಡಿ ರಿದಿಯಗಾಮಾ ಸಫಾರಿಯಲ್ಲಿ ಮುಕ್ತವಾಗಿ ಜೀವಿಸಲು ಅವಕಾಶ ಮಾಡಿಕೊಡಬೇಕೆಂದು ನಾನು ತಮ್ಮಲ್ಲಿ ಕೋರುತ್ತೇನೆ. ಆನೆಗಳನ್ನು ಮೃಗಾಲಯಗಳಲ್ಲಿ ಬಂಧಿಸಿಡುವುದನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಬಂಧನದಲ್ಲಿಡುವುದರಿಂದ ಅವುಗಳು ಹೆಚ್ಚು ಒತ್ತಡಕ್ಕೀಡಾಗುತ್ತವೆ. ಅಲ್ಲದೆ, ಹಲವು ಆನೆಗಳಿಗೆ ಮತಿ ಭ್ರಮಣೆಯೂ ಆಗುತ್ತದೆ. ಇತ್ತೀಚೆಗೆ ಭಾರತದಲ್ಲಿ ಆರು ಆನೆಗಳನ್ನು ಬಂಧಮುಕ್ತಗೊಳಿಸಿ ಸಫಾರಿಗೆ ರವಾನಿಸಿದ್ದೇವೆ. ಹೀಗೆ ಬಿಡುಗಡೆಯಾದ ಆನೆಗಳಿಗೆ ಅದಾಗಲೇ ವಯಸ್ಸಾಗಿತ್ತಾದರೂ, ನಂತರದಲ್ಲಿ ಅವು ನವ ಚೈತನ್ಯದಿಂದ ಕಂಗೊಳಿಸುತ್ತಿವೆ. ಆದ್ದರಿಂದ ದಯವಿಟ್ಟು ತಾವು ಇದೇ ನಡೆಯನ್ನು ಅನುಸರಿಸಿ ದೆಹಿವಾಲ ಮೃಗಾಲಯದ ಏಳೂ ಆನೆಗಳನ್ನೂ ಬಂಧಮುಕ್ತಗೊಳಿಸಬೇಕು ಎಂದು ಕೋರುತ್ತೇನೆ,” ಎಂದು ಅವರು ಮನವಿ ಮಾಡಿದ್ದಾರೆ.
ಶ್ರೀಲಂಕಾದಲ್ಲಿ 200 ರಿಂದ 250 ಆನೆಗಳು ಬಂಡುಲ ಮಾದರಿಯಲ್ಲೇ ಮೃಗಾಲಯಗಳಲ್ಲಿ ಬಂಧಿಯಾಗಿವೆ ಎನ್ನಲಾಗಿದೆ.
Friends, If you like this post,kindly comment below the post and do share your Response, (Thanks for Reading....)
logoblog

Thanks for reading 67 ವರ್ಷಗಳಿಂದ ಬಂಧಿಯಾಗಿರುವ ಆನೆ ಬಿಡುಗಡೆಗೆ ಶ್ರೀಲಂಕಾ ಅಧ್ಯಕ್ಷರಿಗೆ ಮೇನಕಾ ಪತ್ರ

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *