ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ವಾತಾವರಣದಲ್ಲಿ ತೇವಾಂಶ ನಷ್ಟ, ಕೃಷಿಗೆ ಸಂಕಷ್ಟ | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Tuesday, September 11, 2018

ವಾತಾವರಣದಲ್ಲಿ ತೇವಾಂಶ ನಷ್ಟ, ಕೃಷಿಗೆ ಸಂಕಷ್ಟ

  Pundalik       Tuesday, September 11, 2018

ಮಳೆಗಾಲದಲ್ಲೂ 26– 30 ಡಿಗ್ರಿ ಸೆಲ್ಸಿಯಸ್ ತಲುಪಿದ ತಾಪಮಾನ

ವಾತಾವರಣದಲ್ಲಿ ತೇವಾಂಶ ನಷ್ಟ, ಕೃಷಿಗೆ ಸಂಕಷ್ಟ!

ಪ್ರಜಾವಾಣಿ ವಾರ್ತೆ
ಬೆಂಗಳೂರು:ವಾತಾವರಣದಲ್ಲಿ ತೇವಾಂಶದ ಕೊರತೆ ಮತ್ತು ಚಳಿ ಮಾಯವಾಗಿರುವುದರಿಂದ ರಾಜ್ಯದ ಉತ್ತರ ಒಳನಾಡಿನ ಬಹುತೇಕ ಬೆಳೆಗಳು ಒಣಗುವ ಸ್ಥಿತಿಯಲ್ಲಿವೆ.
ತೇವಾಂಶದಿಂದ ಕೂಡಿದ ಚಳಿಯ ವಾತಾವರಣ ಹಲವು ಬೆಳೆಗಳಿಗೆ ಅದರಲ್ಲೂ ತೊಗರಿ, ಜೋಳ, ಕಡಲೆಗೆ ಅತ್ಯಗತ್ಯ. ಆದರೆ, ವಾತಾವರಣವೇ ಪ್ರತಿಕೂಲವಾಗಿರುವುದರಿಂದ ಬೆಳೆ ರೈತರ ಕೈಗೆ ಸಿಗುವುದು ಕಷ್ಟವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಪ್ರಭುಲಿಂಗಪ್ಪ  ‘ಪ್ರಜಾವಾಣಿ’ಗೆ ತಿಳಿಸಿದರು.
ಸಾಮಾನ್ಯವಾಗಿ ಸೆಪ್ಟಂಬರ್‌ನಲ್ಲಿ ತೇವಾಂಶ ಇರುವುದರಿಂದ ರಾಜ್ಯದಲ್ಲಿ ಉಷ್ಣಾಂಶ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್‌ನಿಂದ ಗರಿಷ್ಠ 24 ಡಿಗ್ರಿ ಸೆಲ್ಸಿಯಸ್‌ ಒಳಗಿರುತ್ತದೆ. ಆದರೆ ಈ ಬಾರಿ ಕನಿಷ್ಠ 26 ಡಿಗ್ರಿ ಸೆಲ್ಸಿಯಸ್‌ನಿಂದ 30 ಡಿಗ್ರಿ ಸೆಲ್ಸಿಯಸ್‌ಗೆ 
ತಲುಪಿದೆ.
ಈ ವಾರದಲ್ಲಿ ಒಂದೆರಡು ದಿನಗಳು ಮಳೆ ಆಗುವ ನಿರೀಕ್ಷೆ ಇದೆ. ಒಂದು ವೇಳೆ ಮಳೆ ಬಿದ್ದರೆ ವಾತಾವರಣದಲ್ಲಿ ತೇವಾಂಶ ಸಂಚಯವಾಗಿ ತಂಪಾಗುತ್ತದೆ. ಇಲ್ಲವಾದರೆ, ಉಷ್ಣಾಂಶದ ಏರಿಕೆ ಪ್ರವೃತ್ತಿ ಮುಂದುವರೆಯುತ್ತದೆ. ಮುಂದಿನ ಹಂತದಲ್ಲಿ ಹಿಂಗಾರು ಮಳೆ ಕೂಡಾ ಬಹು ಮುಖ್ಯ. ಉತ್ತರ ಮತ್ತು ದಕ್ಷಿಣ ಒಳನಾಡಿನ ಬಹತೇಕ ಕೃಷಿಕರು ಈ ಮಳೆಯನ್ನೇ ನೆಚ್ಚಿಕೊಂಡಿದ್ದಾರೆ. ಈಗ ತೇವಾಂಶ ಇಲ್ಲದೇ ಇರುವುದರಿಂದ ರಾಜ್ಯದಲ್ಲಿ ಹಿಂಗಾರು ಮಳೆಯ ಸ್ಥಿತಿ ಏನಾಗಬಹುದು ಎಂಬುದನ್ನು ಈಗಲೇ ಊಹಿಸುವುದು ಕಷ್ಟ ಎಂಬುದು ಅವರ ಅಭಿಪ್ರಾಯ.
ಹಿಂದಿನ ವರ್ಷಗಳಲ್ಲಿ ಹಿಂಗಾರು ಮಳೆಗೆ ಮೊದಲೇ ವಾತಾವರಣದಲ್ಲಿ ತೇವಾಂಶ ಹೆಚ್ಚಿನ ಪ್ರಮಾಣದಲ್ಲಿ ಇರುತ್ತಿತ್ತು. ಇದರಿಂದ ಮಳೆಯೂ ಉತ್ತಮವಾಗಿರುತ್ತಿತ್ತು ಎಂದು ಪ್ರಭುಲಿಂಗಪ್ಪ ತಿಳಿಸಿದರು.
ಒಣಗುತ್ತಿರುವ ಬೆಳೆಗಳು: ಪ್ರತಿಕೂಲ ಹವಾಮಾನದಿಂದಾಗಿ ಉತ್ತರ ಒಳನಾಡಿನಲ್ಲಿ ಬೆಳೆಗಳು ಈಗಾಗಲೇ ಒಣಗಲಾರಂಭಿಸಿವೆ. ಕಲಬುರ್ಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಕಟಾವಿಗೆ ಬರಬೇಕಾಗಿದ್ದ
ತೊಗರಿಯ ಮೇಲೂ ಹವಾಮಾನ ಪರಿಣಾಮ ಬೀರಿದೆ. ಆರಂಭದಲ್ಲಿ ಮುಂಗಾರು ಉತ್ತಮವಾಗಿದ್ದರಿಂದ ರೈತರು ಉತ್ತಮ ಬೆಳೆಯ ನಿರೀಕ್ಷೆಯಲ್ಲಿ ಅಧಿಕ ಬಿತ್ತನೆ ಮಾಡಿದ್ದರು. 
ಆದರೆ, ಶುಷ್ಕ ಹವೆಯಿಂದ ರೈತರು ಕಂಗಾಲಾಗಿದ್ದಾರೆ. ಆಗಸ್ಟ್‌ ಕೊನೆಯಲ್ಲಿ ಬಾಗಲಕೋಟೆ ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಬೆಳೆ ಸಂಪೂರ್ಣ ಒಣಗಿ ಹೋಗಿತ್ತು ಎಂದು ಅವರು ವಿವರಿಸಿದರು. 
ಬೆಂಗಳೂರಿನಲ್ಲಿ ಬಾರದ ಮಳೆ
ಸೆಪ್ಟೆಂಬರ್‌ನಲ್ಲಿ ಈ ಬಾರಿ ವಾಡಿಕೆಗಿಂತ ಉತ್ತಮ ಮಳೆ ಆಗಬಹುದು ಎಂಬುದಾಗಿ ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದರು. ಆದರೆ, 10 ದಿನವಾದರೂ ಬೆಂಗಳೂರಿಗೆ ಬರಬೇಕಿದ್ದ ಮಳೆ ಬಂದಿಲ್ಲ. ಇದಕ್ಕೂ ತೇವಾಂಶ ಕೊರತೆಯೇ ಕಾರಣ ಎಂದು ಅವರು ಹೇಳಿದರು.

Friends, If you like this post,kindly comment below the post and do share your Response, (Thanks for Reading....)
logoblog

Thanks for reading ವಾತಾವರಣದಲ್ಲಿ ತೇವಾಂಶ ನಷ್ಟ, ಕೃಷಿಗೆ ಸಂಕಷ್ಟ

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *