ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Sunday, March 15, 2015

  Pundalik       Sunday, March 15, 2015

ಜೀವನದೃಷ್ಟಿ ಗದ್ಯಪಾಠ-3, 10ನೇ ತರಗತಿ ಕನ್ನಡ (Jeevanadrushti 10th Kannada lesson)



ಜೀವನದೃಷ್ಟಿ ಗದ್ಯಪಾಠ-3, 10ನೇ ತರಗತಿ ಕನ್ನಡ
   
ಡಾವಿ.ಕೃಗೋಕಾಕ್
ಜನನ: ೧೦--೧೯೦೯
ನಿಧನ: ೨೮--೧೯೯೨
       ಕನ್ನಡ ಸಾಹಿತ್ಯದಲ್ಲಿ ನವ್ಯ ಕಾವ್ಯ ಪ್ರವರ್ತಕರೆಂದೇ ಪ್ರಸಿದ್ಧರಾಗಿದ್ದ ವಿನಾಯಕ ಕೃಷ್ಣ ಗೋಕಾಕರು ಹುಟ್ಟಿದ್ದುಧಾರವಾಡ ಜಿಲ್ಲೆಯ ಸವಣೂರಿನಲ್ಲಿತಂದೆ ಕೃಷ್ಣಗೋಕಾಕತಾಯಿ ಸುಂದರಮ್ಮಪ್ರಾರಂಭಿಕ ಶಿಕ್ಷಣ ಸವಣೂರಿನಲ್ಲಿ.ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಪದವಿ೧೯೩೬ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡ್ಗೆ ಪಯಣ.
ಭಾರತಕ್ಕೆ ಹಿಂದಿರುಗಿದ ನಂತರ ೧೯೪೦ರಲ್ಲಿ ಸಾಂಗ್ಲಿಯ ವಿಲಿಂಗ್ಡನ್ ಕಾಲೇಜಿನಲ್ಲಿ೧೯೪೬ರಲ್ಲಿ ಗುಜರಾತಿನವೀಸನಗರ೧೯೪೯ರಲ್ಲಿ ಕೊಲ್ಹಾಪುರದ ರಾಜಾರಾಮ್ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ೧೯೫೨ರಲ್ಲಿ ಧಾರವಾಡದಕರ್ನಾಟಕ ಕಾಲೇಜಿನಲ್ಲಿ ಪ್ರಾಚಾರ್ಯರ ಹುದ್ದೆ ವಹಿಸಿಕೊಂಡರುನಂತರ ೧೯೫೯ರಲ್ಲಿ ಹೈದರಾಬಾದಿನ ಸೆಂಟ್ರಲ್ಇನ್ಸ್ಟಿಟ್ಯೂಟ್ ಸಂಸ್ಥೆಯ ನಿರ್ದೇಶಕರಾಗಿ ೧೯೬೬ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿ ೧೯೭೮ರಲ್ಲಿಕೇಂದ್ರ ಸಾಹಿತ್ಯ ಅಕಾಡಮಿಯ ಉಪಾಧ್ಯಕ್ಷರಾಗಿ೧೯೮೩ರಲ್ಲಿ ಅಧ್ಯಕ್ಷರಾಗಿ೧೯೮೫ರಲ್ಲಿ ಪುಟಪರ್ತಿ ಶ್ರೀ ಸತ್ಯಸಾಯಿವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಸಲ್ಲಿಸಿದ ಸೇವೆ.
     ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆ ಪ್ರಾರಂಭಮೊದಲ ಕವನ ಸಂಕಲನ THE SKY LINE ೧೯೨೫ರಲ್ಲಿ ಸಿದ್ಧ. ‘ಕಲೋಪಾಸಕ’ ಕನ್ನಡದ ಮೊದಲ ಕವನ ಸಂಕಲನ ೧೯೩೪ರಲ್ಲಿ ಪ್ರಕಟಿತನಂತರ ಪಯಣಸಮುದ್ರ ಗೀತೆಗಳು,ತ್ರಿವಿಕ್ರಮರ ಆಕಾಶಗಂಗೆಬಾಳದೇಗುಲದಲ್ಲಿದ್ಯಾವಾಪೃಥಿವಿಕಾಶ್ಮೀರಭಾವರಾಗಪಾರಿಜಾತದಡಿಯಲ್ಲಿಮುಂತಾದುವುನಾಟಕಗಳುಜನನಾಯಕಯುಗಾಂತರಪ್ರಬಂಧ ಸಂಕಲನ-ಜೀವನಪಾಠಚೆಲುವಿನ ನಿಲವು.ಪ್ರವಾಸ ಸಾಹಿತ್ಯ-ಸಮುದ್ರದಾಚೆಯಿಂದಸಮುದ್ರದೀಚೆಯಿಂದವಿಮರ್ಶೆ-ಕವಿಕಾವ್ಯ ಮಹೋನ್ನತಿನವ್ಯತೆ ಹಾಗೂಕಾವ್ಯ ಜೀವನಕಾವ್ಯಮೀಮಾಂಸೆನವ್ಯತೆಇಂಗ್ಲಿಷ್ನಲ್ಲಿ-ದಿ ಸಾಂಗ್ ಆಫ್ ಲೈಫ್ ಅಂಡ್ ಪೊಯಮ್ದಿ ಪೊಯೆಟಿಕ್ಅಪ್ರೋಚ್ ಟು ಲ್ಯಾಂಗ್ವೇಜ್ಇಂಗ್ಲಿಷ್ ಇನ್ ಇಂಡಿಯಾ : ಇಟ್ಸ್ ಪ್ರೆಸೆಂಟ್ ಅಂಡ್ ಫ್ಯೂಚರ್ಇನ್ ಲೈಫ್ಸ್ ಟೆಂಪಲ್,ಎಸ್ಸೆಸ್ ಇನ್ ಇಂಡೋ ಆಂಗ್ಲಿಯನ್ ಲಿಟರೇಚರ್ ಮುಂತಾದುವು ಸೇರಿ ೭೫ ಕೃತಿಗಳ ರಚನೆಭಾರತ ಸಿಂಧುರಶ್ಮಿಮಹಾಕಾವ್ಯಸಮರಸವೇ ಜೀವನ ಬೃಹತ್ಕಾದಂಬರಿ.
     ಸಂದ ಗೌರವ ಪ್ರಶಸ್ತಿಗಳು ಹೇರಳಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯಿಂದ ಹಿಡಿದುಹಲವಾರು ಸಮ್ಮೇಳನಗೋಷ್ಠಿಗಳ ಅಧ್ಯಕ್ಷತೆಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ,ರಾಜಾಜಿ ಪ್ರಶಸ್ತಿಕೇಂದ್ರ ಸರಕಾರದ ಪದ್ಮಶ್ರೀಜ್ಞಾನಪೀಠ ಪ್ರಶಸ್ತಿಕರ್ನಾಟಕ ವಿಶ್ವವಿದ್ಯಾಲಯ ಮತ್ತು ಅಮೆರಿಕದಪೆಸಿಫಿಕ್ವಿ.ವಿಗೌರವ ಡಾಕ್ಟರೇಟ್.
INDIAN RESPONSE TO POETRY IN ENGLISH ಸೇರಿದಂತೆ ಹಿತೈಷಿಗಳು ಅರ್ಪಿಸಿದ್ದು ಇಂಗ್ಲಿಷ್ನಲ್ಲಿ ,ಕನ್ನಡದಲ್ಲಿ ೨೧ ಗೌರವ ಗ್ರಂಥಗಳು.

ಜೀವನ ದೃಷ್ಟಿ ಸರಳ ವಿಮರ್ಶೆ  [ಕೃಪೆ-ಪ್ರತೀಕ್ಷಾ ಬ್ಲಾಗ್]


ಮನುಷ್ಯ ಸಮಾಜಜೀವಿಸಮಾಜದಲ್ಲಿ ಜೀವಿಸುವಾಗ ಕೇವಲ ತನಗಾಗಿ ಜೀವಿಸದೆ ಕೆಲವೊಮ್ಮೆ ತನ್ನವರಿಗಾಗಿಯೂ ಇನ್ನೂ ಕೆಲವೊಮ್ಮೆ ಬೇರೆಯವರಿಗಾಗಿಯೂ ಬದುಕುವುದುಆಲೋಚಿಸುವುದು ಅನಿವಾರ್ಯ ಹೇಗೋ ಅಗತ್ಯ ಕೂಡ. ಸಮಾಜದಲ್ಲಿ ಜೀವಿಸುವಾಗ ಪ್ರತಿಯೊಬ್ಬನೂ ಇಲ್ಲಿ ಇರುವುದು ತಾನೊಬ್ಬನೇ ಅಲ್ಲನನ್ನ ಸುತ್ತ ಸಮಾಜದ ಸದಸ್ಯರಿದ್ದಾರೆ ಎನ್ನುವುದನ್ನು ಮನಗಂಡಿರಬೇಕುಮನಗಂಡಿರುತ್ತಾನೆ ಕೂಡಹಾಗಾಗಿ ಅವನ ಆಲೋಚನೆಗಳುವರ್ತನೆಗಳು ಅವನ ಸುತ್ತ ಅಥವಾ ಅವನಿಗೆ ಮಾತ್ರ ಕೇಂದ್ರೀಕೃತವಾಗಿರದೇ ಬೇರೆಯವರಿಗಾಗಿಯೂ ರೂಪಿಸಲ್ಪಡುತ್ತವೆಸಮಾಜ ತನ್ನನ್ನು ಗಮನಿಸುತ್ತಿದೆ ಎಂದಾಗ ಸಮಾಜಕ್ಕೋಸ್ಕರವೇ ಕೆಲವೊಮ್ಮೆ ನಮ್ಮ ನಡುವಳಿಕೆಗಳು ವ್ಯಕ್ತಿತ್ವ ನಿರ್ದೇಶಿಸಲ್ಪಡುತ್ತವೆ. ಈ ಎಲ್ಲ ದೃಷ್ಟಿಯಿಂದ ಅವಲೋಕಿಸಿದಾಗ ನಮ್ಮಜೀವನದಲ್ಲಿ ನಮ್ಮ ಕುರಿತಾದ ಅನ್ಯರ ದೃಷ್ಟಿಕೋನ ಪ್ರಧಾನ ಪಾತ್ರವಹಿಸುತ್ತದೆ. ಹಾಗೆಯೇ ಅನ್ಯರಿಗೂ..
 ಅಂತರ್ಜೀವಿಯು ಮೊದಲಿಗೆ ತನ್ನನ್ನು ತಾನು ಪರಿಪೂರ್ಣಗೊಳಿಸಿಕೊಳ್ಳಬಯಸುವುದರಿಂದ ಅವನ ವಿಚಾರವು ಕೆಲವೊಮ್ಮೆ ಅವನ ಸುತ್ತಲೇ ಸುತ್ತುತ್ತಿರುತ್ತದೆ. ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದರಲ್ಲೇತನ್ನ ದೋಷವನ್ನು ಗುರುತಿಸಿ ಅದನ್ನು ಸರಿಪಡಿಸಿಕೊಳ್ಳವುದರಲ್ಲೇ ಅವನ ಜೀವನದ ಸಮಯ ಕಳೆದು ಹೋಗುತ್ತಿರುತ್ತದೆ. ಅದರಲ್ಲೆ ಅವನಶಕ್ತಿ ವ್ಯಯವಾಗುತ್ತಿರುತ್ತದೆಏಕೆಂದರೆ ಅಂತರಂಗದ ಭವ್ಯತೆಯ ಸಾಧನೆ ಅವನ ಗುರಿಅದರ ಸಂತೃಪ್ತಿಯ ತುಡಿತ ಅವನಲ್ಲಿ ಮುಖ್ಯವಾಗಿರುತ್ತದೆ. ಹಾಗಾಗಿ ಇತರರ ಬಗ್ಗೆ ಪ್ರೀತಿ ಇದ್ದರೂಅವನು ಪರಾಂತಃಕರಣಪ್ರವೇಶಿಯಾಗಿ ಅವರಭಾವನೆಗಳು, ಆಸೆಗಳು, ದುಗುಡ ದುಮ್ಮಾನಗಳು ಅರ್ಥೈಸಿಕೊಂಡರೂ ಅದನ್ನು ಬಗೆಹರಿಸಲು ಅವನಿಗೆಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲ ತನ್ನ ಯೋಗಕ್ಷೇಮವನ್ನೂ ಕೂಡ ಅವನು ದೇವರ ಮೇಲೆ ಹೊರಿಸಲಾರ. ಈರೀತಿಯಾಗಿ ತನ್ನ ಗುಂಗಿನಲ್ಲಿಯೇ ಇರುವ ಅವನಿಗೆ ಪರರ ಹಂಗಿಲ್ಲ.
 ಹಿರಿಯ ಸಾಹಿತಿಯೊಬ್ಬರು ಹೇಳುವ ಹಾಗೆ ಕಲೋಪಾಸಕನಲ್ಲಿ ಸಮಾಜದ ಕಲ್ಯಾಣವನ್ನು ಪೋಷಿಸುವ ಶಕ್ತಿ ಇದೆ. ಸಮಾಜದಲ್ಲಿ ಅವನಿಗೆ ಇನ್ನು ಯಾವುದೇ ಹೊಣೆ ಹೊರಿಸಬಾರದು. ಬದಲಾಗಿ ಅವನನ್ನು ಸಮಾಜವೇ ಪೋಷಿಸಬೇಕು. ಆದರೆ ಕಲೋಪಾಸಕನೂ ಸಮಾಜದ ಘಟಕ. ಸಮಾಜಕ್ಕೆ ಅವನು ಸಲ್ಲಿಸಬೇಕಾದ ಜವಾಬ್ದಾರಿಯಿದೆ.ಕಲಾಸೇವೆಯನ್ನು ಮಾಡಿದ ಮಾತ್ರಕ್ಕೆ ಅವನು ತನ್ನವರಿಗಾಗಲಿ ಅಥವಾ ಸಮಾಜಕ್ಕೇ ಆಗಲಿ ಸಲ್ಲಿಸಬೇಕಾದ ಸೇವೆಯಿಂದ ಮುಕ್ತನಾಗುವುದು ಸರಿಯೇ? ಅವನ ವ್ಯಕ್ತಿತ್ವ ವಿಕಾಸವಾಗುವುದು ಸಮಾಜದಿಂದಲೇ ಆಗಿರುವುದರಿಂದತನಗೆ ಸಂಬಂಧಿಸಿದ ವ್ಯಕ್ತಿಗಳ ಅಥವಾ ಸಮಾಜದ ಅಂತಃಕರಣವನ್ನು ಅರಿತು ಅವರಿಗೆ ನೋವಾಗದಂತೆತನ್ನ ವ್ಯಕ್ತಿತ್ವ ವಿಕಸನಕ್ಕೆ ಕಾರಣರಾದವರಿಗೆ ತನ್ನಿಂದಾದ ಸಹಾಯ ಸಲ್ಲಿಸುವುದು ಅವನ ಕರ್ತವ್ಯವೇ ಆಗಿದೆ.
 ಧರ್ಮಗಳಲ್ಲಿ ಸೂಚಿಸಿದ ಹಾಗೆ ಅಂತರ್ಜೀವಿಗಳನ್ನುಸಾಧಕರನ್ನು ಸಮಾಜವೇ ಸಲಹಬೇಕು.ಪೋಷಿಸಬೇಕು. ಹಿಂದೆ ರಾಜಾಶ್ರಯವಿದ್ದಂತೆ ಇಂದು ಧರ್ಮಶಾಲೆಗಳು, ಮಠಗಳು, ಅನ್ನಛತ್ರಗಳು ಸಾಧಕರನ್ನು ಕಲಾವಿದರನ್ನು ಪೋಷಿಸುವ ಕಾರ್ಯವನ್ನು ಮಾಡುತ್ತಿವೆ. ಆದರೆ ಸಮಾಜದಿಂದ ಉಪಕೃತನಾದ ಸಾಧಕನಿಗೂಅವನದೇ ಆದ ಕರ್ತವ್ಯವಿದೆ. ಅವನು ಇನ್ನೊಬ್ಬರಿಗೆ ಹೊರೆಯಾಗಬಾರದಲ್ಲವೇ? ತಾನಾಗಿಯೇ ಇನ್ನೊಬ್ಬರಿಂದಏನನ್ನೂ ತೆಗೆದು ಕೊಳ್ಳಬಾರದುಬಯಸಬಾರದುದಾನ ಕೊಡುತ್ತಿರುವವರ ಅಂತರಂಗ ಪರೀಕ್ಷಿಸಿ ತೆಗೆದು ಕೊಳ್ಳಬೇಕುಬೇರೆಯವರ ಮೇಲೆ ಅವಲಂಬಿತವಾದ ಸಾಧನೆಬದುಕು 'ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ'ಆಶ್ರಯ ತಪ್ಪಿದಾಗ ನೆಲ ಕಚ್ಚಬಹುದು..
 ಹಿಂದೆ ಅಂತರ್ಜೀವಿಗಳು ಸಮಾಜದಿಂದಕುಟುಂಬದಿಂದ (ಉದಾಹರಣೆಗೆ ಬುದ್ಧಪ್ರತ್ಯೇಕವಾಗಿಜೀವಿಸಿದಂತೆ ಇಂದಿನ ದಿನಗಳಲ್ಲಿ ಸಾಧಕರಿಗೆ ಪ್ರತ್ಯೇಕವಾಗಿ (ಬೇರೆಯಾಗಿಬದುಕು ಕುವುದು ಸಾಧ್ಯವಿಲ್ಲ. ಅವನುಸಮಾಜದ ಮಧ್ಯೆಯೇ ಬದುಕಬೇಕುಜೀವನ ನಿರ್ವಹಣೆಗಾಗಿ ಪ್ರವೃತ್ತಿಯೊಂದೇ ಸಾಲದು ಅವನಿಗೆ ವೃತ್ತಿಯೂ ಬೇಕು.ಯೋಗಸ್ಥನಾಗಿರುವುದರ ಜೊತೆ ಗೃಹಸ್ಥನೂ ಆಗಿಯೆ ಬದುಕುವ ಅನಿವಾರ್ಯತೆ ಇದೆ. ಗೃಹಸ್ಥಾಶ್ರಮವು ಧನ್ಯವೆಂದುಕಾಳಿದಾಸನೂ ಸ್ವತಃ ಹೇಳದಿದ್ದರೂ ಅವನಿಂದ ಸೃಷ್ಟಿಸಲ್ಪಟ್ಟ ಆರಣ್ಯಕನೆಂಬ ಋಷಿ ಈ ಮಾತನ್ನು ಹೇಳಿದ್ದಾನೆ. ದೂರದ ಬೆಟ್ತ ಕಣ್ಣಿಗೆ ನುಣ್ಣಗೆ ಎನ್ನುವಂತೆ ಗೃಹಸ್ಥಾಶ್ರಮದ ಅನುಭವವೇ ಇಲ್ಲದ ಆರಣ್ಯಕರಿಗೆ ಗೃಹಸ್ಥಾಶ್ರಮದ ಸಾಧಕ ಬಾಧಕಗಳು ಅರ್ಥವಾಗುವುದು ಹೇಗೆ ಸಾಧ್ಯ?
 ಹಾಗೆ ನೋಡಿದರೆ ಗೃಹಸ್ಥಾಶ್ರಮದಿಂದ ಧನ್ಯತೆ ಸಾಧ್ಯ. ಗೃಹಸ್ಥಾಶ್ರಮದಲ್ಲಿದ್ದು ಕೊಂಡೇ ಕಾರ್ಯಮಾಡುವ ಸಾಧಕನಿಗೆ ಅವನ ಸಾಧನೆಯನ್ನು ಪುನಃ ಪರೀಕ್ಷಿಸುವ, ವಿಮರ್ಶಿಸುವ ರತ್ನರಸಿಕರು (ವಿಮರ್ಶಕರುಪರೀಕ್ಷಕರು) ಸುತ್ತ ಇದ್ದೇ ಇರುತ್ತಾರೆ. ಹೆಜ್ಜೆ ಹೆಜ್ಜೆಗೂ ಅವನ ಪರೀಕ್ಷೆಯಾಗುವುದರಿಂದ ಅವನು ಯೋಚಿಸಿ ಹೆಜ್ಜೆಯಿಡಬೇಕಾಗುತ್ತದೆ.ಇಲ್ಲವಾದಲ್ಲಿ ತಪ್ಪಡಿಯಿಟ್ಟರೂ ದಂಡಕೆಲವೊಮ್ಮೆ ತಪ್ಪಿಲ್ಲದೆಯೂ ದಂಡ ತೆರಬೇಕಿರುವ ಸಾಧ್ಯತೆಯಿದೆ. ಹಾಗಾಗಿಏನನ್ನು ಮಾಡಬೇಕಿದ್ದರೂ ಯೋಚಿಸಿಯೇ ಮಾಡಬೇಕಾದ ಅನಿವಾರ್ಯತೆ ಇದೆ. ಇದು ಅವನ ವ್ಯಕ್ತಿತ್ವ ವಿಕಸನಕ್ಕೆಅನುಕೂಲ ಕೂಡ.
ಪರೋಪಕಾರಾರ್ಥಂ ಇದಂ ಶರೀರಂ ಎನ್ನುವಂತೆ. ಅನ್ಯರ ಹಿತಚಿಂತನೆ ಪರಮಾತ್ಮನ ಉಪಾಸನೆಯ ಒಂದುಭಾಗ. ತನ್ನಂತೆ ಪರರು ಎಂದು ಬಗೆದ ಮಾತ್ರಕ್ಕೆ ಆ ಮಟ್ಟದ ಉದಾರತೆಯಿಂದ ಮಾತ್ರವೇ ಬದುಕಲುಸಾಧ್ಯವಿದೆಯೇ? ಮನುಷ್ಯನಲ್ಲಿ ತನ್ನನ್ನು ರೂಪಿಸಿಕೊಳ್ಳುವಬೆಳೆಸಿಕೊಳ್ಳುವ ಮತ್ತು ಬದುಕಲು ಅತೀ ಅವಶ್ಯವಾಗಿಬೇಕಿರುವ ವ್ಯವಹಾರ ಕುಶಲತೆಯೂ ಬೇಕಲ್ಲವೇ? ಸಮಾಜದ ಪುನರ್ಘಟನೆಗೆ ಪರಿಶ್ರಮ ಮತ್ತು ಭಕ್ತಿ (ಸಮತಾವಾದಮತ್ತು ಆಧ್ಯಾತ್ಮವಾದ) ಹೇಗೆ ಅವಶ್ಯವೋ ಹಾಗೆಯೆ ಸಾಧಕನಲ್ಲೆ ಆಗಲಿ ಸಾಮಾನ್ಯನಲ್ಲೆ ಆಗಲಿ ಸ್ವಹಿತ ಮತ್ತು ಪರಹಿತ ಈ ಎರಡರ ಅಗತ್ಯವೂ ಇದೆ. 'ಶಕ್ತಿಯೇ ಜೀವನ; ಸತ್ವವೇ ಜೀವನ'. ಆದರೆ ಇದು ಅಹಂ ಆಗಿ ಪರಿಣಮಿಸಬಾರದು.ಅದರ ಸೂಕ್ಷ್ಮತೆ ವಿಶಾಲತೆಗಳ ಅರಿವು ನಮಗೆ ಬೇಕುಸಮರಸವೇ ಸಹ ಜೀವನ. ಜೀವನದ ರಥ ಸರಾಗವಾಗಿ ಸಾಗಲು ಕೇವಲ ನಮ್ಮ ಅನುಭವಗಳಷ್ಟೇ ಸಾಲದು. ಸಹಾನುಭೂತಿಯೂ ಬೇಕುಪರಸ್ಪರ ಸಹಕಾರಹೊಂದಾಣಿಕೆಪ್ರೀತಿಕರುಣೆ ಈ ಎಲ್ಲವುಗಳ ಅಗತ್ಯತೆ ಇದೆ.
ಪರರ ಅನುಭವವಗಳನ್ನು ನಮ್ಮ ಅನುಭವಗಳೊಂದಿಗೆ ಹೊಂದಿಸಿಕೊಂಡು ಬಾಳಲು ಎರಡು ಚಿಂತನೆಗಳುಅಗತ್ಯ. ಒಂದು ತನ್ನಿಂದ ಬೇರೆಯವರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದು.(ನಿರುಪದ್ರವಿಯಾಗಿರುವುದುಎರಡನೆಯದು ಸಾಧ್ಯವಾದಷ್ಟೂ ಸಂದರ್ಭಗಳಲ್ಲಿ ಅನ್ಯರಿಗೆ ಉಪಕಾರಿಯಾಗಿರಬೇಕುಎಂಬ ಮನೋಭಾವ ಹೊಂದುವುದು. ಆದ್ದರಿಂದಲೇ ದೇವರು ಈ ಎರಡೂ ವಿಚಾರಗಳನ್ನೂ ಮಾನವನಿಗೆ ನೀಡಿ ಅವನ ಆಂತರಿಕ ವಿಕಾಸಕ್ಕಾಗಿ ಸಂದರ್ಭ ಬಂದಾಗ ನಿರ್ಧಾರ ತೆಗೆದುಕೊಳ್ಳುವ ಒಳಗಣ್ಣನ್ನು ಆಜ್ಞಾಚಕ್ರ(ಮೆದುಳುಮೇಧಾಶಕ್ತಿ) ದಲ್ಲಿ ನೀಡಿದ್ದಾನೆ.
         (ಈ  ಸಾರಂಶವನ್ನು ಮಮತಾ ಭಾಗ್ವತ ಅವರ  ಪ್ರತೀಕ್ಷಾ ದಿಂದ ತೆಗೆದುಕೊಳ್ಳಲಾಗಿದೆ

10ನೇ ತರಗತಿ ಕನ್ನಡ - ಜೀವನದೃಷ್ಟಿ ಗದ್ಯಪಾಠ-3 ಕ್ಕೆ ಪ್ರಶ್ನೋತ್ತರ



ಗದ್ಯ ಪಾಠ ೩ ಜೀವನ ದೃಷ್ಟಿ -ಲೇಖಕರು ವಿಕೃಗೋಕಾಕ
ಅ] ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.
ಜೀವನದಲ್ಲಿ ಯಾವುದಕ್ಕೆ ಹೆಚ್ಚಿನ ಸ್ಥಾನವಿದೆ ?
  ಉ- ನಮ್ಮ ಜೀವನದಲ್ಲಿ ಅನ್ಯರ ದೃಷ್ಟಿಕೋನಕ್ಕೂ ಅನ್ಯರ ಜೀವನದಲ್ಲಿ ನಮ್ಮ ದೃಷ್ಟಿಕೋನಕ್ಕೂ ಒಂದು ಹೆಚ್ಚಿನಸ್ಥಾನವಿದೆ.
ಅಂತರ್ಜೀವಿಗೆ ಯಾವುದು ದೊಡ್ಡ ಸಮಸ್ಯೆಯಾಗುತ್ತದೆ?
  ಉ- ಅಂತರ್ಜೀವಿಗೆ ಉಳಿದವರ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಒಂದು ದೊಡ್ಡ ಸಮಸ್ಯೆಯಾಗುತ್ತದೆ .
ಅಂತರ್ಜೀವಿಯ ಶಕ್ತಿ ಹೇಗೆ ವೆಚ್ಚವಾಗುತ್ತದೆ?
  ಉ- ತನ್ನ ಮನದ ಮೊಗಸಾಲೆಯನ್ನು ಓರಣವಾಗಿಸುವುದರಲ್ಲಿಯೇ ಅಂತರ್ ಜೀವಿಯ ಎಲ್ಲ ಶಕ್ತಿಯೂವೆಚ್ಚವಾಗುತ್ತದೆ.
ಧರ್ಮಗಳು ಹಾಕಿಕೊಟ್ಟಿರುವ ರತ್ನಪಾಠ ಏನು ?
  ಉ- ಸಾಧಕನಿಗೆಅಂತರ್ಜೀವಿಗೆ ಯಾವ ತೊಂದರೆಯೂ ಆಗಬಾರದೆಂದು ಅವನನ್ನು ಸಮಾಜವೇ ನೋಡಿಕೊಳ್ಳಬೇಕೆಂಬುದೇ ಧರ್ಮಗಳು ಹಾಕಿಕೊಟ್ಟಿರುವ ಧರ್ಮಗಳು ಹಾಕಿಕೊಟ್ಟಿರುವ ರತ್ನಪಾಠ.
ಗೃಹಸ್ಥಾಶ್ರಮವು ಧನ್ಯ ಎಂದು ಹೇಳಿದವರು ಯಾರು ?
  ಉ- ಕಾಳಿದಾಸನು ಕಲ್ಪಿಸಿದ ಋಷಿ -ಅರಣ್ಯಕ ಗೃಹಸ್ಥಾಶ್ರಮವು ಧನ್ಯವೆಂದು ಹೇಳಿದ್ದಾನೆ.

ಆ] ಮೂರು -ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.
ಅಂತರ್ಜೀವಿಗೆ ಸುಲಭವಾಗಿ ರಕ್ತಗತವಾಗದ ಸಂಗತಿ ಯಾವುದು ?
  ಉ- ಅಂತರ್ಜೀವಿಗೆ ಉಳಿದವರ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಒಂದು ದೊಡ್ಡ ಸಮಸ್ಯೆಯಾಗುತ್ತದೆತನ್ನಯೋಗಕ್ಷೇಮವನ್ನು ಭಗವಂತನ ಮೇಲೆ ಹೊರಿಸಲು ಕಲ್ಪನೆಯು ಧ್ಯೇಯಗಳ ಜಗತ್ತಿನಲ್ಲಿ ಹೊಳೆಯು ವುದು ಸುಲಭವಾಗಿರಕ್ತಗತವಾಗು ವುದಿಲ್ಲ.
ಕಲೋಪಾಸಕನ ಕರ್ತವ್ಯವೇನು ?
  ಉ- ಕಲೋಪಾಸಕನೂ ಒಬ್ಬ ವ್ಯಕ್ತಿ .ಸಮಾಜದಮನು ಕು ಲದ-ಒಂದು ಘಟಕಕಲಾಸೇವೆಯನ್ನು ಸಲ್ಲಿಸು ವುದಲ್ಲದೆ ಪರಾಂತಃಕರಣ ಪ್ರವೇಶಿಯಾಗಿ ಜನತೆಯ ಮನವನ್ನೂ ,ಅಂತಃಕರಣವನ್ನೂ ಅವನು ತಿದ್ದಬಹು ದು ಆದರೆ ಯಾವ ವ್ಯಕ್ತಿಗಳೊಡನೆ ಅವನ ಸಂಬಂಧ ಬರುವುದೋ ಅವರ ಅಂತಃಕರಣವನ್ನು ನೋಯಿಸದಂತೆ ತನ್ನನ್ನು ಅಲಕ್ಷಿಸಿಯಾದರೂ ಉಳಿದವರ ಹಿತಚಿಂತನೆ ಹಾಗೂ ಹಿತಸಾಧನೆಯಲ್ಲಿ ತೊಡಗುವುದು ಎಲ್ಲ ವ್ಯಕ್ತಿಗಳಂತೆ ಅವನ ಕರ್ತವ್ಯವೂ ಆಗಿದೆ.
ಸಾಧಕನ ಯೋಗಕ್ಷೇಮವನ್ನು ಸಮಾಜ ಹೇಗೆ ನಿರ್ವಹಿಸುತ್ತಿತ್ತು ?
  ಉ- ಸಾಧಕನಿಗೆ,ಅಂತರ್ಜೀವಿಗೆ ಯಾವ ತೊಂದರೆಯೂ ಆಗಬಾರದೆಂದು ಎಲ್ಲ ಧರ್ಮಗಳೂ ಅವನನ್ನು ಸಮಾಜವೇನೋಡಿಕೊಳ್ಳಬೇಕೆಂದು ಹೇಳಿವೆಧರ್ಮಶಾಲೆಗಳುವಿಹಾರಗಳುಅನ್ನಛತ್ರಗಳು -ಇವು ಏರ್ಪಟ್ಟಿರುವುದು ಇಂಥವರಿಗಾಗಿ ಹಾಗೂ ನಿರ್ಗತಿಕರಿಗಾಗಿಅನೇಕ ದೇವಸ್ಥಾನಗಳಲ್ಲಿಯೂಮಠಗಳಲ್ಲಿಯೂ ಇಂಥ ಏರ್ಪಾಟಿದೆಇಂಥಸಾಧಕರನ್ನು ಮನೆಯಲ್ಲಿಟ್ಟುಕೊಂಡು ಅವರ ಯೋಗಕ್ಷೇಮವನ್ನು ನೋಡಿಕೊಂಡವರೂ ಉಂಟುಹೀಗೆ ಸಮಾಜವು ಸಾಧಕನ ಯೋಗಕ್ಷೇಮವನ್ನು ನಿರ್ವಹಿಸುತ್ತಿತ್ತು .
ಸಹಾನುಭೂತಿಗಾಗಿ ಇರಬೇಕಾದ ಎರಡು ಕಣ್ಣುಗಳು ಯಾವುವು ?
  ಉ- ಸಹಾನುಭೂ ತಿಗಾಗಿ ಇರಬೇಕಾದ ಎರಡು ಕಣ್ಣುಗಳು ಯಾವಾಗಲೂ ತೆರೆದಿರ ಬೇಕಾಗುತ್ತದೆಅವುಗಳೆಂದರೆ -ಒಂದು ತನ್ನಿಂದ ಹೆರವರಿಗೆ ಯಾವ ತೊಂದರೆಯೂ ಮಾನಸಿಕ ವ್ಯಥೆಯೂ ಆಗದಂತೆ ಎಚ್ಚರ ಪಡುವ ಕಣ್ಣು;ಇನ್ನೊಂದು ತನ್ನ ಅಳವಿನಲ್ಲಿ ಹೆರವರ ಐಹಿಕಮಾನಸಿಕ ಇಲ್ಲವೆ ಆತ್ಮಿಕ ಹಿತಚಿಂತನೆ ಎಲ್ಲೆಲ್ಲಿ ಸಾಧ್ಯ ಎಂದು ಸದಾಅಭ್ಯಸಿಸುವ ಕಣ್ಣು .
ಇ] ಸಂದರ್ಭದೊಂದಿಗೆ ವಿವರಿಸಿ.
. "ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣಮಕ್ಕು "
  ಉ-  ಮೇಲಿನ ವಾಕ್ಯವನ್ನು ವಿ.ಕೃಗೋಕಾಕರು ಬರೆದ ಜೀವನ ದೃಷ್ಟಿ ಎನ್ನುವ ಗದ್ಯಪಾಠದಿಂದ ಆಯ್ದು ಕೊಳ್ಳಲಾಗಿದೆ.
 ಮಾತನ್ನು ಸರ್ವಜ್ಞ ಕವಿ ಹೇಳಿದ್ದಾನೆ.
ಸಂದರ್ಭ: '' ಆತ್ಮಾನಂ ಸರ್ವ ಭೂತೇಷುಸರ್ವ ಭೂ ತಾನಿಚಾತ್ಮನಿಎಂದು ಗೀತೆಯಲ್ಲಿ ಹೇಳಿದೆಇದನ್ನೇಸರ್ವಜ್ಞನು ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು ಎಂದಿದ್ದಾನೆಉಳಿದವರ ಕಣ್ಣಿನಲ್ಲಿ ಹೊಕ್ಕು ಅವರುನಮ್ಮನ್ನು ಯಾವ ದೃಷ್ಟಿಯಿಂದ ಕಾಣುವರೋ ಆ ದೃಷ್ಟಿಯಿಂದ ನಮ್ಮನ್ನು ನಾವು ಕಂಡು ಕೊಳ್ಳಬೇಕು ಎಂದು ರ್ನ್ಸ್ಕವಿ ಹೇಳಿದ್ದಾನೆಆದ್ದರಿಂದ ನಮ್ಮ ಜೀವನದಲ್ಲಿ ಅನ್ಯರ ದೃಷ್ಟಿಕೋನಕ್ಕೂಅನ್ಯರ ಜೀವನದಲ್ಲಿ ನಮ್ಮ ದೃಷ್ಟಿಕೋನಕ್ಕೂಒಂದು ಹೆಚ್ಚಿನ ಸ್ಥಾನವಿದೆ ಎಂದು ಲೇಖಕರು ವಿವರಿಸು ವಾಗ ಸರ್ವಜ್ಞನ ಮಾತಿನ ಉದಾಹರಣೆ ನೀಡಿದ್ದಾರೆ.
. ''ತನ್ನ ಗು೦ಗಿನಲ್ಲಿದ್ದ ಈ ಅಂತರಜೀವಿಗೆ ಪರರ ಹಂಗೆಲ್ಲಿ" ?
  ಉ-  ಮೇಲಿನ ವಾಕ್ಯವನ್ನು ವಿ.ಕೃಗೋಕಾಕರು ಬರೆದ ಜೀವನ ದೃಷ್ಟಿ’ ಎನ್ನುವ ಗದ್ಯಪಾಠದಿಂದ ಆಯ್ದು ಕೊಳ್ಳಲಾಗಿದೆ.
 ಮಾತನ್ನು ಲೇಖಕರು ಅಂತರ್ಜೀವಿಯ ಬಗ್ಗೆ ಹೇಳಿದ್ದಾರೆ.
ಸಂದರ್ಭಅಂತರ್ಜೀವಿಯು ಸಾಹಿತ್ಯಕ ದೃಷ್ಟಿಯಿಂದ ಪರಾಂತಃಕರಣವನ್ನು ಪ್ರವೇಶಿಸಿ ಅದನ್ನು ತಿಳಿದುಕೊಳ್ಳಬಲ್ಲ.ಆದರೆ ಉಳಿದ ಹೃದಯಗಳ ಆಸೆಯನ್ನು ಅಭ್ಯಸಿಸಿ ಅವುಗಳನ್ನು ಕಳೆಯಲು ಹವಣಿಸುವುದು ಅವನ ಸಹಜ ಸಿದ್ಧಿಯಾಚೆಗಿನ ಮಾತುಏಕೆಂದರೆ ತನ್ನ ಮನದ ಮೊಗಸಾಲೆಯನ್ನು ಓರಣವಾಗಿಸುವುದರಲ್ಲೇ ಅವನ ಎಲ್ಲ ಶಕ್ತಿಯೂವ್ಯಯವಾಗುತ್ತಿರುತ್ತದೆತನ್ನ ಅಂತರಂಗದ ಭವ್ಯತೆಯು ಅವನನ್ನು ಕರೆಯುತ್ತಿರುತ್ತದೆ ಎಂದು ವಿವರಿಸುವಾಗ ಲೇಖಕರುಮೇಲಿನಂತೆ ಹೇಳಿದ್ದಾರೆ.
. ''ಕಲೋಪಾಸಕನಿಗೆ ಸಮಾಜದಲ್ಲಿ ಯಾವ ಹೊಣೆಯೂ ಇರಬಾರದು ".
  ಉ-  ಮೇಲಿನ ವಾಕ್ಯವನ್ನು ವಿ.ಕೃಗೋಕಾಕರು ಬರೆದ 'ಜೀವನ ದೃಷ್ಟಿ ಎನ್ನುವ ಗದ್ಯಪಾಠದಿಂದ ಆಯ್ದು ಕೊಳ್ಳಲಾಗಿದೆ.
 ಮಾತನ್ನು ಹಿರಿಯ ಸಾಹಿತಿಯೊಬ್ಬರು ಹೇಳಿದ್ದಾರೆ.
ಕಲೋಪಾಸಕನಲ್ಲಿ ಸಮಾಜದ ಕಲ್ಯಾಣವನ್ನು ಪೋಷಿಸುವ ಶಕ್ತಿಯು ಇರುತ್ತದೆಆದ್ದರಿಂದ ಸಮಾಜದಲ್ಲಿ ಅವನಿಗೆ ಯಾವ ಹೊಣೆಯೂ ಇರಬಾರದುಬದಲಾಗಿ ಸಮಾಜವೇ ಅವನನ್ನು ಪೋಷಿಸುವ ಹೊಣೆಯನ್ನು ಹೊರಬೇಕುಅವನುಎಲ್ಲ ಕಡೆ ಹೋದಾಗ ಅವನು ಕಲೋಪಾಸಕನೆಂದು ತಿಳಿದವರು ಅವನ ಅವಶ್ಯಕತೆಗಳನ್ನು ಪೂರೈಸಬೇಕು ಎಂದುಹಿರಿಯ ಸಾಹಿತಿಯೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ ಎಂದು ವಿವರಿಸುವಾಗ ಮೇಲಿನ ಮಾತು ಬಂದಿದೆ.
. "ದಾತೃವಿನ ಮನವನ್ನು ಹತ್ತು ಸಲ ಪರೀಕ್ಷಿಸಿ ದಾನವನ್ನು ಸ್ವೀಕರಿಸಬೇಕು
  ಉ-  ಮೇಲಿನ ವಾಕ್ಯವನ್ನು ವಿ.ಕೃಗೋಕಾಕರು ಬರೆದ 'ಜೀವನ ದೃಷ್ಟಿಎನ್ನುವ ಗದ್ಯಪಾಠದಿಂದ ಆಯ್ದು ಕೊಳ್ಳಲಾಗಿದೆ.
ಈ ಮಾತನ್ನು ಲೇಖಕರು ಅಂತರ್ಜೀವಿಯು ದಾನ ಪಡೆಯುವಾಗ ವಹಿಸಬೇಕಾದ ಎಚ್ಚರಿಕೆಯನ್ನು ಕುರಿತು ಹೇಳಿದ್ದಾರೆ.
ಸಂದರ್ಭಸಾಧಕನಿಗೆ ಅಂತರ್ಜೀವಿಗೆ ಯಾವ ತೊಂದರೆಯೂ ಆಗಬಾರದೆಂದು ಎಲ್ಲ ಧರ್ಮಗಳೂ ಅವನನ್ನು ಸಮಾಜವೇ ನೋಡಿಕೊಳ್ಳಬೇಕೆಂದು ಹೇಳಿವೆಇದು ಸಮಾಜದ ಕರ್ತವ್ಯವಾದರೆ ಸಾಧಕನಿಗೂ ತನ್ನದೇ ಕರ್ತವ್ಯವಿದೆ.ಇನ್ನೊಬ್ಬರಿಗೆ ಅವನು ಹೊರೆಯಾಗಬಾರದುದಾತೃವಿನ ಮನವನ್ನು ಹತ್ತು ಸಲ ಪರೀಕ್ಷಿಸಿ ದಾನವನ್ನು ಸ್ವೀಕರಿಸಬೇಕು.ಕೇಳಿ ದೊರಕಿಸಿಕೊಂಡ ಸಾಮಗ್ರಿ-ಸೌಕರ್ಯಗಳ ಮೇಲೆ ನಿಂತ ಸಾಧನೆ-ತಪಸ್ಸುಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ ಅದಕ್ಕೆ ಸ್ವಯಂಪೂರ್ಣತೆ ಇಲ್ಲ ಎಂದು ವಿವರಿಸುವಾಗ ಈ ಮಾತು ಬಂದಿದೆ.
.''ಜೀವನ ರಥಕ್ಕೆ ಒಗ್ಗಾಲಿಯ ಭೀತಿ ಇದೆ.”
  ಉ-  ಮೇಲಿನ ವಾಕ್ಯವನ್ನು ವಿ.ಕೃಗೋಕಾಕರು ಬರೆದ 'ಜೀವನ ದೃಷ್ಟಿಎನ್ನುವ ಗದ್ಯಪಾಠದಿಂದ ಆಯ್ದು ಕೊಳ್ಳಲಾಗಿದೆ.
ಈ ಮಾತನ್ನು ಲೇಖಕರು ಹೇಳಿದ್ದಾರೆ.
ಸಂದರ್ಭಸಾಮಾಜಿಕ ಪುನರ್ಘಟನೆಯಲ್ಲಿ ರಶ್ಯದ ಸಮತಾವಾದವೂ ಭಾರತದ ಆಧ್ಯಾತ್ಮವಾದವೂ ರೂಪುಗೊಂಡುಬೆರೆಯಬೇಕಾಗಿದ್ದಂತೆ ಇಂದಿನ ಓರ್ವ ವ್ಯಕ್ತಿಯ ಜೀವನದಲ್ಲಿ ಆಂತರಿಕ ದೃಷ್ಟಿಯ ಹಾಗು ಅನ್ಯರ ಹಿತದೃಷ್ಟಿಗಳ ಪ್ರಜ್ಙೆಯಸಮ್ಮಿಲನವಾಗಬೇಕಿದೆರಸವೇ ಜೀವನರಸದ ಸೂಕ್ಷ್ಮತೆ ವಿಶಾಲತೆಗಳ ವ್ಯತ್ಯಯರಹಿತ ವಿಕಾಸವೇ ವ್ಯಕ್ತಿಜೀವನ.ಸಮರಸವೇ ಸಹಜೀವನಬರೀ ಸ್ವಾನುಭೂತಿಯಿಂದ ಸಾಗುವ ಜೀವನ ರಥಕ್ಕೆ ಒಗ್ಗಾಲಿಯ ಭೀತಿ ಇದೆ.ಸಹಾನುಭೂತಿಯೂ ಅದರ ಜೋಡಣೆಗೆ ಅವಶ್ಯವಾದುದು ಎಂಬುದು ಲೇಖಕರ ಅಭಿಪ್ರಾಯವಾಗಿದೆ.
ಈ] ಹೊಂದಿಸಿ ಬರೆಯಿರಿ. (ಬರೆದಿದೆ.)
ಕಲೋಪಾಸಕ          -        ಗುಣಸಂಧಿ
ವಿನಾಯಕ             -        ವಿ.ಕೃ.ಗೋಕಾಕ್
ಅಂತರಂಗ             -        ಬಹಿರಂಗ
ದೂರದ ಗುಡ್ಡ          -        ಕಣ್ಣಿಗೆ ನುಣ್ಣಗೆ
ಆರಣ್ಯಕ                -        ಋಷಿ
ಉ] ಕೊಟ್ಟಿರುವ ಸೂಚನೆಯಂತೆ ಉತ್ತರಿಸಿ.
ಕಲ್ಪನೆಯು ಧ್ಯೇಯಗಳ ಜಗತ್ತಿನಲ್ಲಿ ಹೊಳೆಯುತ್ತದೆ. (ಭವಿಷ್ಯತ್ ಕಾಲಕ್ಕೆ ಪರಿವರ್ತಿಸಿ )
  ಉತ್ತರಕಲ್ಪನೆಯು ಧ್ಯೇಯಗಳ ಜಗತ್ತಿನಲ್ಲಿ ಹೊಳೆಯುವುದು .
ಕಲ್ಯಾಣವನ್ನು ಪೋಷಿಸುವ ಒಂದು ಶಕ್ತಿಯು ಅವನಲ್ಲಿರುವುದು. (ವರ್ತಮಾನಕಾಲಕ್ಕೆ ಪರಿವರ್ತಿಸಿ.)
  ಉತ್ತರಕಲ್ಯಾಣವನ್ನು ಪೋಷಿಸುವ ಒಂದು ಶಕ್ತಿಯು ಅವನಲ್ಲಿರುತ್ತದೆ.
ಅವನು ಹೆಚ್ಚಾಗಿ ಸಮಾಜದ ಮಧ್ಯದಲ್ಲಿಯೇ ಬಾಳುತ್ತಾನೆ. (ಭೂತಕಾಲಕ್ಕೆ ಪರಿವರ್ತಿಸಿ)
  ಉತ್ತರಅವನು ಹೆಚ್ಚಾಗಿ ಸಮಾಜದ ಮಧ್ಯದಲ್ಲಿಯೇ ಬಾಳಿದನು.
ಊ] ಕೆಳಗಿನ ಪ್ರಶ್ನೆಗಳಿಗೆ ಎಂಟು -ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
 ಜೀವನ ದೃಷ್ಟಿ ಗದ್ಯದಲ್ಲಿ ಅಂತರ್ಜೀವಿಯ ವ್ಯಕ್ತಿತ್ವ ಹೇಗೆ ವರ್ಣಿತ ವಾಗಿದೆ ?
  ಉತ್ತರಅಂತರ್ಜೀವಿಗೆ ಉಳಿದವರ ಯೋಗಕ್ಷೇಮವನ್ನು ನೋಡಿಕೊಳ್ಲುವುದು ಒಂದು ದೊಡ್ಡ ಸಮಸ್ಯೆಯಾಗುತ್ತದೆ.ತನ್ನ ಯೋಗಕ್ಷೇಮವನ್ನೇ ಭಗವಂತನ ಮೇಲೆ ಹೊರಿಸಲು ಕಲ್ಪನೆಯು ಧ್ಯೇಯಗಳ ಜಗತ್ತಿನಲ್ಲಿ ಹೊಳೆಯುವುದುಸುಲಭವಾಗಿ ರಕ್ತಗತವಾಗುವುದಿಲ್ಲಉಳಿದವರನ್ನು ಪ್ರೀತಿಯಿಂದ ಅವನು ಕಾಣಬಲ್ಲತನ್ನಿಂದ ಆದಷ್ಟು ಯಾರಿಗೂತೊಂದರೆಯಾಗಬಾರದೆಂದು ಅವನು ಎಚ್ಚರಪಡಬಲ್ಲಸಾಹಿತ್ಯಕ ದೃಷ್ಟಿಯಿಂದ ಪರಾಂತಃಕರಣವನ್ನು ಪ್ರವೇಶಿಸಿ ಅದನ್ನು ತಿಳಿದುಕೊಳ್ಳಲೂ ಬಲ್ಲಆದರೆ ಉಳಿದ ಹೃದಯಗಳ ಆಸೆಗಳನ್ನು ತಾನಾಗಿಯೇ ಅಭ್ಯಸಿಸಿ ಅವುಗಳನ್ನುಕಳೆಯಲು ಹವಣಿಸುವುದು ಅವನ ಸಹಜ ಸಿದ್ಧಿಯಾಚೆಗಿನ ಮಾತುಏಕೆಂದರೆ ತನ್ನ ಮನದ ಮೊಗಸಾಲೆಯನ್ನುಓರಣವಾಗಿಸುವುದರಲ್ಲಿಯೇ ಅವನ ಎಲ್ಲ ಶಕ್ತಿಯೂ ವೆಚ್ಚವಾಗುತ್ತಿರುತ್ತದೆತನ್ನ ಅಂತರಂಗದ ಭವ್ಯತೆಯು ಅವನನ್ನುಕರೆಯುತ್ತಿರುತ್ತದೆ ಗುಂಗಿನಲ್ಲಿದ್ದ ಅಂತರ್ಜೀವಿಗೆ ಪರರ ಹಂಗಿಲ್ಲಹೀಗೆ ಜೀವನ ದೃಷ್ಟಿ ಗದ್ಯದಲ್ಲಿ ಅಂತರ್ಜೀವಿಯ ವ್ಯಕ್ತಿತ್ವ ವರ್ಣಿತವಾಗಿದೆ.
. ಸಮಾಜದಲ್ಲಿ ಕಲೋಪಾಸಕನ ಮಹತ್ವವನ್ನು ಲೇಖಕರು ಹೇಗೆ ವಿಶ್ಲೇಷಿಸಿದ್ದಾರೆ?
  ಉತ್ತರಕಲೋಪಾಸಕನೂ ಒಬ್ಬ ವ್ಯಕ್ತಿಸಮಾಜದ ಮನು ಕುಲದ ಒಂದು ಘಟಕಮುಖ್ಯವಾಗಿಕಲೋಪಾಸಕನೆಂದು ಕಲಾಸೇವೆಯನ್ನು ಸಲ್ಲಿಸುವುದಲ್ಲದೆ ಓರ್ವ ವ್ಯಕ್ತಿಯೆಂದು ಅವನ ವ್ಯಕ್ತಿತ್ವ ವಿಕಾಸವೂಕಾಲನಿಯತಿಗನು ಸರಿಸಿ ಆಗಬೇಕುಪರಾಂತಃಕರಣಪ್ರವೇಶಿಯಾಗಿ ಜನತೆಯ ಮನವನ್ನೂ ಅಂತಃಕರಣವನ್ನೂಅವನು ತಿದ್ದಬಹುದುಆದರೆ ಯಾವ ವ್ಯಕ್ತಿಗಳೊಡನೆ ಅವನ ಸಂಬಂಧ ಬರುವುದೋ ಅವರ ಅಂತಃಕರಣವನ್ನುನೋಯಿಸದಂತೆ ತನ್ನನ್ನು ಅಲಕ್ಷಿಸಿಯಾದರೂ ಉಳಿದವರ ಹಿತಚಿಂತನೆ ಹಾಗು ಹಿತ ಸಾಧನೆಯಲ್ಲಿ ತೊಡಗುವುದು ಎಲ್ಲ ವ್ಯಕ್ತಿಗಳಂತೆ ಅವನ ಕರ್ತವ್ಯವೂ ಆಗಿದೆಅವನು ಯೋಗಸ್ಥನೂಗೃಹಸ್ಥನೂ ಕೂಡಿಯೇ ಆಗಿ ಸಮಾಜದಲ್ಲಿಬಾಳಬೇಕಿದೆಸಮ್ಯಕ್ ದರ್ಶನದ ಸಮತೂಕವನ್ನು ಅವನು ಪಡೆದಿರಬೇಕು.
logoblog

Thanks for reading

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *