ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ಜಿಎಸ್‌ಟಿ ದರಗಳಲ್ಲಿ ಇನ್ನಷ್ಟು ಕಡಿತ ನಿರೀಕ್ಷೆ | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Tuesday, September 25, 2018

ಜಿಎಸ್‌ಟಿ ದರಗಳಲ್ಲಿ ಇನ್ನಷ್ಟು ಕಡಿತ ನಿರೀಕ್ಷೆ

  Pundalik       Tuesday, September 25, 2018

ಈ ವಾರಾಂತ್ಯದಲ್ಲಿ ನಡೆಯಲಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ ಸಭೆಯಲ್ಲಿ ಶೇ 28ರಷ್ಟು ತೆರಿಗೆ ದರ ವ್ಯಾಪ್ತಿಯಿಂದ ಇನ್ನಷ್ಟು ಸರಕುಗಳನ್ನು ಕೈಬಿಡುವ ನಿರೀಕ್ಷೆ ಇದೆ.

ಇದೇ 28ರಂದು ಮಂಡಳಿಯ 30ನೆ ಸಭೆ ನಡೆಯಲಿದೆ. ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ವಿಡಿಯೊ ಸಂವಾದದ ಮೂಲಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಗರಿಷ್ಠ ಮಟ್ಟದ ಶೇ 28ರ ತೆರಿಗೆ ದರಗಳ ವ್ಯಾಪ್ತಿಯಲ್ಲಿ ಇರುವ ಸರಕುಗಳ ಸಂಖ್ಯೆಯನ್ನು ಕಡಿಮೆ ಮಾಡುವ ಸಾಧ್ಯತೆ ಇದೆ.
ವಿಲಾಸಿ ಮತ್ತು ಆರೋಗ್ಯಕ್ಕೆ ಹಾನಿಕರ ಎಂದು ಪರಿಭಾವಿಸಲಾದ ಸರಕುಗಳನ್ನು ಹೊರತುಪಡಿಸಿ ಉಳಿದೆಲ್ಲ ಸರಕುಗಳನ್ನು ಈ ದರ ಪಟ್ಟಿಯಿಂದ ಹಂತ ಹಂತವಾಗಿ ಕೈಬಿಡುವುದಾಗಿ ಜೇಟ್ಲಿ ಈ ಮೊದಲೇ ಭರವಸೆ ನೀಡಿದ್ದಾರೆ.
ಶೇ 28ರ ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿಯಲಿರುವ ಸರಕುಗಳ ಪಟ್ಟಿಯಲ್ಲಿ ಸಿಮೆಂಟ್‌, ವಾಹನಗಳ ಕೆಲ ಬಿಡಿಭಾಗಗಳು, ಡಿಜಿಟಲ್‌ ಕ್ಯಾಮೆರಾ, ಟೆಲಿವಿಷನ್‌ಗಳು ಸೇರಿವೆ ಎಂದು ಮೂಲಗಳು ತಿಳಿಸಿವೆ. ಇವುಗಳನ್ನು ಶೇ 18 ಅಥವಾ ಶೇ 12ರ ತೆರಿಗೆ ದರಗಳ ಸಾಲಿಗೆ ಸೇರ್ಪಡೆ ಮಾಡುವ ಚಿಂತನೆ ಇದೆ.
ಕಟ್ಟಡ ನಿರ್ಮಾಣ ವಲಯದ ಸರಕುಗಳ ಪೈಕಿ ಸಿಮೆಂಟ್‌ ಮಾತ್ರ ಈಗ ಶೇ 28ರ ತೆರಿಗೆ ದರದ ವ್ಯಾಪ್ತಿಯಲ್ಲಿ ಇದೆ. ಗರಿಷ್ಠ ತೆರಿಗೆ ದರದ ವ್ಯಾಪ್ತಿಯಿಂದ ಸಿಮೆಂಟ್‌ ಕೈಬಿಡುವುದರಿಂದ ಕಟ್ಟಡ ನಿರ್ಮಾಣ ವಲಯದ ಚಟುವಟಿಕೆಗಳು ವೇಗ ಪಡೆಯಲಿವೆ.
ಜಿಎಸ್‌ಟಿ ಜಾರಿಗೆ ಬಂದ ನಂತರದ ಇದುವರೆಗಿನ ಅವಧಿಯಲ್ಲಿ ಜಿಎಸ್‌ಟಿ ಮಂಡಳಿಯು ಶೇ 28ರ ದರದ ವ್ಯಾಪ್ತಿಯಲ್ಲಿದ್ದ 191 ಸರಕುಗಳ ಮೇಲಿನ ತೆರಿಗೆ ಹೊರೆ ತಗ್ಗಿಸಿದೆ. ಆರಂಭದಲ್ಲಿ 226 ಸರಕುಗಳು ಈ ದರದ ವ್ಯಾಪ್ತಿಯಲ್ಲಿ ಇದ್ದವು.
ತೆರಿಗೆ ಕಡಿತದಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಈಗಾಗಲೇ ₹ 70 ಸಾವಿರ ಕೋಟಿಗಳಷ್ಟು ನಷ್ಟ ಉಂಟಾಗಿದೆ. ತೆರಿಗೆ ಕಡಿತದಿಂದ ಗ್ರಾಹಕರ ಮೇಲಿನ ಹೊರೆ ಕಡಿಮೆಯಾಗಿ, ಖರೀದಿ ಸಾಮರ್ಥ್ಯ ಹೆಚ್ಚಳಗೊಂಡು ಆರ್ಥಿಕತೆಗೆ ಚೇತರಿಕೆ ಸಿಗಲಿದೆ ಎನ್ನುವುದು ಸರ್ಕಾರದ ನಿಲುವಾಗಿದೆ.
ಪ್ರತಿ ತಿಂಗಳೂ ₹ 1 ಲಕ್ಷ ಕೋಟಿಯಷ್ಟು ತೆರಿಗೆ ವರಮಾನ ಸಂಗ್ರಹಿಸಲು ಬಜೆಟ್‌ನಲ್ಲಿ ಅಂದಾಜಿಸಲಾಗಿದೆ. ಆದರೆ, ಏಪ್ರಿಲ್‌ ತಿಂಗಳು ಹೊರತುಪಡಿಸಿದರೆ ಉಳಿದ ಅವಧಿಯಲ್ಲಿ ವರಮಾನ ಸಂಗ್ರಹವು ನಿಗದಿತ ಗುರಿ ತಲುಪಿಲ್ಲ.
ಸಿಮೆಂಟ್‌, ವಾಹನ ಬಿಡಿಭಾಗಗಳ ಜತೆಗೆ, ಟೈರ್‌, ವಿಲಾಸಿ ಕಾರ್, ವಿಮಾನ, ತಂಪುಪಾನೀಯ, ತಂಬಾಕು, ಸಿಗರೇಟ್‌, ಪಾನ್‌ ಮಸಾಲಾಗಳು ಈ ತೆರಿಗೆ ವ್ಯಾಪ್ತಿಯಲ್ಲಿ ಇವೆ.



Friends, If you like this post,kindly comment below the post and do share your Response, (Thanks for Reading....)
logoblog

Thanks for reading ಜಿಎಸ್‌ಟಿ ದರಗಳಲ್ಲಿ ಇನ್ನಷ್ಟು ಕಡಿತ ನಿರೀಕ್ಷೆ

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *